ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಬೆಂಗಳೂರು |
ರಾಜ್ಯ ವಿಧಾನಸಭಾ ಚುನಾವಣೆಗೆ Karnataka Assembly Election ನಾಮಪತ್ರ ಸಲ್ಲಿಕೆಗೆ 2-3 ದಿನಗಳಿರುವ ವೇಳೆಯಲ್ಲಿ ಅಳೆದೂ ತೂಗಿ, ಭಾರೀ ಲೆಕ್ಕಾಚಾರ ಹಾಕಿ ಅಂತಿಮವಾಗಿ ಬಿಜೆಪಿ ತನ್ನ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಗುಜರಾತ್ ರಾಜ್ಯದಲ್ಲಿ ಮಾಡಿದ್ದ ಪ್ರಯೋಗವನ್ನೇ ಕರ್ನಾಟಕದಲ್ಲೂ ಸಹ ಅನುಸರಿಸಿರುವ ಬಿಜೆಪಿ ವರಿಷ್ಠರು ಹಲವು ಹಾಲಿ ಶಾಸಕರಿಗೆ ಕೋಕ್ ನೀಡಿದ್ದು, ಹೊಸ ಮುಖಗಳಿಗೆ ಮಣೆ ಹಾಕಿದೆ. ಇದೇ ವೇಳೆ 35 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಬಾಕಿ ಉಳಿಸಿಕೊಂಡಿದೆ.
LIVE : ಸುದ್ದಿಗೋಷ್ಠಿ – ಬಿಜೆಪಿ ಕೇಂದ್ರ ಕಚೇರಿ, ದೆಹಲಿ. https://t.co/NzCdNoD5ly
— BJP Karnataka (@BJP4Karnataka) April 11, 2023
ಈ ಕುರಿತಂತೆ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಕರ್ನಾಟಕ ವಿಧಾನಸಭಾ ಚುನಾವಣೆಗೆ 31 ಜಿಲ್ಲೆಗಳ 25 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಪ್ರಜಾಸತ್ತಾತ್ಮಕ ಆಧಾರದಲ್ಲಿ ಹೆಸರುಗಳನ್ನು ಅಂತಿಮಗೊಳಿಸಿದ್ದೇವೆ ಎಂದರು.
ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೂ ತಜ್ಞರ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದೇವೆ. ಅಲ್ಲದೇ ರಾಜ್ಯದಾದ್ಯಂತ ಪದಾಧಿಕಾರಿಗಳ ಅಭಿಪ್ರಾಯವನ್ನೂ ಸಹ ಸಂಗ್ರಹ ಮಾಡಿದ್ದೇವೆ. 4-5 ಬಾರಿ ಬೆಂಗಳೂರಿನಲ್ಲಿ ಸಭೆ ನಡೆಸಿ, ಕೇಂದ್ರಕ್ಕೆ ಶಿಫಾರಸ್ಸು ಬಂದಿತ್ತು. ಇವುಗಳನ್ನು ಅಳೆದು ತೂಗಿ ಅಂತಿಮವಾಗಿ 189 ಮಂದಿಯ ಹೆಸರನ್ನು ಅಂತಿಮ ಮಾಡಿದ್ದೇವೆ. ಹೊಸ ಪೀಳಿಗೆಯನ್ನು ವಿಧಾನಸಭೆ ಸಭೆಯಲ್ಲಿ ನೋಡುವ ಪ್ರಯತ್ನ ಬಿಜೆಪಿ ಮಾಡಿದೆ. ಯುವ, ಹೊಸತನ, ಹೊಸ ಯೋಚನೆ, ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭ್ಯರ್ಥಿಗಳ ಆಯ್ಕೆಯಾಗಿದೆ ಎಂದರು.
52 ಹೊಸ ಮುಖಗಳಿಗೆ ಮನ್ನಣೆ ನೀಡಿರುವ ಬಿಜೆಪಿ, ಎಸ್’ಸಿ ವರ್ಗಕ್ಕೆ 30, ಎಸ್’ಟಿ 16, ಹಿಂದುಳಿದ ವರ್ಗಕ್ಕೆ 32, 8 ಕ್ಷೇತ್ರಗಳಲ್ಲಿ ಮಹಿಳೆಯರು, ಒಬ್ಬರು ನಿವೃತ್ತ ಐಎಎಸ್ ಅಧಿಕಾರಿ, ಒಬ್ಬರು ನಿವೃತ್ತ ಐಪಿಎಸ್ ಅಧಿಕಾರಿ, 5 ವಕೀಲರು, ಮೂವರು ಶಿಕ್ಷಣ ತಜ್ಞರು, 9 ವೈದ್ಯರು, 8 ಸಾಮಾಜಿಕ ಕಾರ್ಯಕರ್ತರು, ಮೂವರು ಶಿಕ್ಷಣ ತಜ್ಞರಿಗೆ ಟಿಕೇಟ್ ನೀಡಲಾಗಿದೆ.
ಯಾರಿಗೆ ಯಾವ ಕ್ಷೇತ್ರದಿಂದ ಟಿಕೇಟ್?
- ನಿಪ್ಪಾಣಿ : ಶಶಿಕಲಾ ಜೊಲ್ಲೆ
- ಚಿಕ್ಕೋಡಿ-ಸದಲಗಾ: ರಮೇಶ್ ಕತ್ತಿ
- ಅಥಣಿ : ಮಹೇಶ್ ಕುಮಟಳ್ಳಿ
- ಕಾಗವಾಡ : ಬಾಲಾ ಸಾಹೇಬ್ ಪಾಟೀಲ್
- ಕುಡಚಿ : ಪಿ ರಾಜೀವ್
- ರಾಯಭಾಗ : ದುಯೋಧನ್ ಐಹೊಳೆ
- ಹುಕ್ಕೇರಿ : ನಿಖಿಲ್ ಕತ್ತಿ
- ಅರಭಾವಿ : ಬಾಲಚಂದರ್ ಜಾರಕಿಹೊಳಿ
- ಗೋಕಾಕ : ರಮೇಶ್ ಜಾರಕಿಹೊಳಿ
- ಯಮಕನಮರಡಿ : ಬಸವರಾಜ್ ಹುಂಡ್ರಿ
- ಬೆಳಗಾವಿ ಉತ್ತರ : ರವಿ ಪಾಟೀಲ್
- ಬೆಳಗಾವಿ ದಕ್ಷಿಣ : ಅಭಯ್ ಪಾಟೀಲ್
- ಬೆಳಗಾವಿ ಗ್ರಾಮೀಣ : ನಾಗೇಶ್ ಮನ್ನೋಲ್ಕರ್
- ಖಾನಾಪುರ: ವಿಠ್ಠಲ್ ಹಾಲಗೇಕರ್
- ಕಿತ್ತೂರು: ಮಹಂತೇಶ್ ದೊಡ್ಡಗೌಡರ್
- ಬೈಲಹೊಂಗಲ : ಜಗದೀಶ್ ಚನ್ನಪ್ಪ
- ಸವದತ್ತಿ ಯಲ್ಲಮ್ಮ : ರತ್ನ ವಿಶ್ವನಾಥ್ ಮಮನಿ
- ರಾಮದುರ್ಗ : ಚಿಕ್ಕ ರೇವಣ್ಣ
- ಮುಧೋಳ : ಗೋವಿಂದ್ ಕಾರಜೋಳ
- ತೇರದಾಳ : ಸಿದ್ದು ಸವದಿ
- ಜಮಖಂಡಿ : ಜಗದೀಶ್ ಗುಡಗುಂಟಿ
- ಬೀಳಗಿ : ಮುರುಗೇಶ್ ನಿರಾಣಿ
- ಬದಾಮಿ : ಶಾಂತ ಗೌಡ ಪಾಟೀಲ್
- ಬಾಗಲಕೋಟೆ : ವೀರಭದ್ರಯ್ಯ
- ಹುನಗುಂದ : ದೊಡ್ಡನಗೌಡ ಪಾಟೀಲ್
- ಮುದ್ದೇಬಿಹಾಳ : ಎ ಎಸ್ ಪಾಟೀಲ್ ನಡಹಳ್ಳಿ
- ದೇವರ ಹಿಪ್ಪರಗಿ :
- ಬಸವನ ಬಾಗೇವಾಡಿ :
- ಬಬಲೇಶ್ವರ : ವಿಜುಗೌಡ ಪಾಟೀಲ್
- ವಿಜಾಪುರ ನಗರ : ಬಿ ಆರ್ ಪಾಟೀಲ್ (ಯತ್ನಾಳ್)
- ನಾಗಠಾಣ :
- ಇಂಡಿ :
- ಸಿಂದಗಿ : ರಮೇಶ್ ಬುಸನೂರ್
- ಅಫಜಲಪುರ : ಮಲ್ಲಿಕಾ ಗುತ್ತೇದಾರ್
- ಜೇವರ್ಗಿ : ಶಿವನಗೌಡ ಪಾಟೀಲ್
- ಸುರಪುರ : ನರಸಿಂಹ ನಾಯಕ್
- ಶಹಾಪುರ : ಅಮೀನ್ ರೆಡ್ಡಿ
- ಯಾದಗಿರಿ : ವೆಂಕಟ ರೆಡ್ಡಿ
- ಗುರುಮಠಕಲ್ :
- ಚಿತ್ತಾಪುರ : ಮಣಿಕಾಂತ್ ರಾಥೋಡ್
- ಸೇಡಂ :
- ಚಿಂಚೋಳಿ : ಅವಿನಾಶ್ ಜಾಧವ್
- ಕಲಬುರಗಿ ಗ್ರಾಮೀಣ : ಬಸವರಾಜ್ ಮತ್ತಿಮೂಡ್
- ಕಲಬುರಗಿ ದಕ್ಷಿಣ : ದತ್ತಾತ್ರೆಯ ಪಾಟೀಲ್
- ಕಲಬುರಗಿ ಉತ್ತರ : ಚಂದ್ರಕಾಂತ್ ಪಾಟೀಲ್
- ಆಳಂದ : ಸುಭಾಷ್ ಗುತ್ತೇಧಾರ್
- ಬಸವಕಲ್ಯಾಣ : ಶರಣು ಸಲಗಾರ್
- ಹುಮ್ನಾಬಾದ್ : ಸಿದ್ದು ಪಾಟೀಲ್
- ಬೀದರ ದಕ್ಷಿಣ : ಶೈಲೇಂದ್ರ
- ಬೀದರ :
- ಭಾಲ್ಕಿ :
- ಔರಾದ್ : ಪ್ರಭು ಚೌಹ್ಹಾಣ್
- ರಾಯಚೂರು ಗ್ರಾಮೀಣ : ತಿಪ್ಪರಾಜು ಹವಾಲ್ದಾರ್
- ರಾಯಚೂರು : ಶಿವರಾಜ್ ಪಾಟೀಲ್
- ಮಾನ್ವಿ :
- ದೇವದುರ್ಗ : ಶಿವನಗೌಡ ನಾಯಕ್
- ಲಿಂಗಸೂಗೂರು : ಮನಪ್ಪ ವಜ್ಜಲ್
- ಸಿಂಧನೂರು : ಕೆ ಕರಿಯಪ್ಪ
- ಮಸ್ಕಿ : ಪ್ರತಾಪ್ ಗೌಡ ಪಾಟೀಲ್
- ಕುಷ್ಟಗಿ : ದೊಡ್ಡನ ಗೌಡ ಪಾಟೀಲ್
- ಕನಕಗಿರಿ : ಬಸವರಾಜ್ ದಡೇಸಗೂರು
- ಗಂಗಾವತಿ :
- ಯಲಬುರ್ಗಾ : ಹಾಲಪ್ಪ ಆಚಾರ್
- ಕೊಪ್ಪಳ :
- ಶಿರಹಟ್ಟಿ : ಚಂದ್ರು ಲಮಣಿ
- ಗದಗ : ಅನಿಲ್ ಮೆಣಸಿಕಾಯ
- ರೋಣ :
- ನರಗುಂದ : ಸಿಸಿ ಪಾಟೀಲ್
- ಶಿರಹಟ್ಟಿ : ಚಂದ್ರು ಲಮಣಿ
- ನವಲಗುಂದ : ಶಂಕರ್ ಪಾಟೀಲ್ ಮನೆಕೊಪ್ಪ
- ಕುಂದಗೋಳ : ಎಂ ಆರ್ ಪಾಟೀಲ್
- ಧಾರವಾಡ : ಅಮೃತ್ ಅಯ್ಯಪ್ಪ ದೇಸಾಯಿ
- ಹುಬ್ಬಳ್ಳಿ-ಧಾರವಾಡ(E) : ಡಾ. ಕ್ರಾಂತಿ ಕಿರಣ್
- ಹುಬ್ಬಳ್ಳಿ-ಧಾರವಾಡ(C) :
- ಹುಬ್ಬಳ್ಳಿ ಧಾರವಾಡ(W) : ಅರವಿಂದ್ ಬೆಲ್ಲದ್
- ಕಲಘಟಗಿ :
- ಹಳಿಯಾಳ : ಸುನಿಲ್ ಹೆಗ್ಡೆ
- ಕಾರವಾರ : ರೂಪಾಲಿ ನಾಯಕ್
- ಕುಮಟಾ : ದಿನಕರ್ ಶೆಟ್ಟಿ
- ಭಟ್ಕಳ : ಸುನೀಲ್ ಬಾಲಿಯಾ ನಾಯಕ್
- ಶಿರಸಿ : ವಿಶ್ವೇಶ್ವರ ಹೆಗ್ಡೆ ಕಾಗೇರಿ
- ಯಲ್ಲಾಪುರ : ಶಿವರಾಮ್ ಹೆಬ್ಬಾರ್
- ಹಾನಗಲ್ :
- ಶಿಗ್ಗಾಂವಿ : ಬಸವರಾಜ್ ಬೊಮ್ಮಾಯಿ
- ಹಾವೇರಿ :
- ಬ್ಯಾಡಗಿ : ವಿರೂಪಾಕ್ಷ ಬಳ್ಳಾರಿ
- ಹಿರೇಕೇರೂರು : ಬಿಸಿ ಪಾಟೀಲ್
- ರಾಣಿಬೆನ್ನೂರು : ಅರುಣ್ ಕುಮಾರ್ ಪೂಜಾರ್
- ಹಡಗಲಿ : ಕೃಷ್ಣ ನಾಯಕ್
- ಹಗರಿಬೊಮ್ಮನಹಳ್ಳಿ :
- ವಿಜಯನಗರ : ಸಿದ್ದಾರ್ಥ್ ಸಿಂಗ್
- ಕೂಡ್ಲಿಗಿ : ಲೋಕೇಶ್ ನಾಯಕ್
- ಹರಪನಹಳ್ಳಿ :
- ಕಂಪ್ಲಿ : ಟಿ ಹೆಚ್ ಸುರೇಶ್ ಬಾಬು
- ಸಿರಗುಪ್ಪ : ಸೋಮಲಿಂಗಪ್ಪ
- ಬಳ್ಳಾರಿ : ಶ್ರೀರಾಮುಲು
- ಬಳ್ಳಾರಿ ನಗರ : ಗಾಲಿ ಸೋಮಶೇಖರ ರೆಡ್ಡಿ
- ಸಂಡೂರು : ಶಿಲ್ಪಾ ರಾಘವೇಂದ್ರ
- ಮೊಳಕಾಲ್ಮೂರು : ತಿಪ್ಪೇಸ್ವಾಮಿ
- ಚಳ್ಳಕೆರೆ : ಅನಿಲ್ ಕುಮಾರ್
- ಚಿತ್ರದುರ್ಗ : ತಿಪ್ಪರೆಡ್ಡಿ
- ಹಿರಿಯೂರು : ಪೂರ್ಣಿಮಾ ಶ್ರೀನಿವಾಸ್
- ಹೊಸದುರ್ಗ : ಲಿಂಗಮೂರ್ತಿ
- ಹೊಳಲ್ಕೆರೆ : ಚಂದ್ರಪ್ಪ
- ಜಗಳೂರು : ಎಸ್ ವಿ ರಾಮಚಂದ್ರ
- ಹರಿಹರ : ಬಿ ಪಿ ಹರೀಶ್
- ದಾವಣಗೆರೆ ಉತ್ತರ :
- ದಾವಣಗೆರೆ ದಕ್ಷಿಣ :
- ಮಾಯಕೊಂಡ :
- ಚನ್ನಗಿರಿ :
- ಹೊನ್ನಾಳಿ : ಎಂ ಪಿ ರೇಣುಕಾಚಾರ್ಯ
- ಶಿವಮೊಗ್ಗ ಗ್ರಾಮೀಣ : ಅಶೋಕ್ ನಾಯಕ್
- ಭದ್ರಾವತಿ : ಮಂಗೋಟಿ ರುದ್ರೇಶ್
- ಶಿವಮೊಗ್ಗ :
- ತೀರ್ಥಹಳ್ಳಿ : ಆರಗ ಜ್ಞಾನೇಂದ್ರ
- ಶಿಕಾರಿಪುರ : ಬಿ ವೈ ವಿಜಯೇಂದ್ರ
- ಸೊರಬ : ಕುಮಾರ್ ಬಂಗಾರಪ್ಪ
- ಸಾಗರ : ಹರತಾಳು ಹಾಲಪ್ಪ
- ಬೈಂದೂರು :
- ಕುಂದಾಪುರ : ಕಿರಣ್ ಕುಮಾರ್ ಕೊಡ್ಗಿ
- ಉಡುಪಿ : ಯಶ್ಪಾಲ್ ಸುವರ್ಣ
- ಕಾಪು : ಗುರ್ಮೆ ಸುರೇಶ್ ಶೆಟ್ಟಿ
- ಕಾರ್ಕಳ : ಸುನೀಲ್ ಕುಮಾರ್
- ಶೃಂಗೇರಿ : ಜೀವರಾಜ್
- ಮೂಡಿಗೆರೆ :
- ಚಿಕ್ಕಮಗಳೂರು : ಸಿಟಿ ರವಿ
- ತರೀಕೆರೆ : ಡಿಎಸ್ ಸುರೇಶ್
- ಕಡೂರು : ಕೆ ಎಸ್ ಪ್ರಕಾಶ್
- ಚಿಕ್ಕನಾಯಕನಹಳ್ಳಿ : ಜೆ ಸಿ ಮಾಧುಸ್ವಾಮಿ
- ತಿಪಟೂರು : ಬಿಸಿ ನಾಗೇಶ್
- ತುರುವೇಕೆರೆ : ಮಸಾಲ ಜಯರಾಮ್
- ಕುಣಿಗಲ್ : ಡಿ ಕೃಷ್ಣ ಕುಮಾರ್
- ತುಮಕೂರು ನಗರ : ಜ್ಯೋತಿಗಣೇಶ್
- ತುಮಕೂರು ಗ್ರಾಮೀಣ : ಬಿ ಸುರೇಶ್ ಗೌಡ
- ಕೊರಟಗೆರೆ : ಅನೀಲ್ ಕುಮಾರ್ (ನಿವೃತ್ತ ಐಎಎಸ್)
- ಗುಬ್ಬಿ :
- ಶಿರಾ : ರಾಜೇಶ್ ಗೌಡ
- ಪಾವಗಡ : ಕೃಷ್ಣಾ ನಾಯ್ಕ್
- ಮಧುಗಿರಿ : ಎಲ್ ಸಿ ನಾಗರಾಜ್
- ಗೌರಿಬಿದನೂರು : ಶಶಿಧರ್
- ಬಾಗೇಪಲ್ಲಿ : ಸಿ ಮುನಿರಾಜು
- ಚಿಕ್ಕಬಳ್ಳಾಪುರ : ಕೆ ಸುಧಾಕರ್
- ಶಿಡ್ಲಘಟ್ಟ :
- ಚಿಂತಾಮಣಿ : ವೇಣು ಗೋಪಾಲ್
- ಶ್ರೀನಿವಾಸಪುರ : ಗುಂಜೂರು ಶ್ರೀನಿವಾಸ್ ರೆಡ್ಡಿ
- ಮುಳಬಾಗಿಲು : ಸೀಗೇಹಳ್ಳಿ ಸುಂದರ್
- ಕೆಜಿಎಫ್ :
- ಬಂಗಾರಪೇಟೆ : ಎಂ ನಾರಾಯಣ ಸ್ವಾಮಿ
- ಕೋಲಾರ : ವರ್ತೂರು ಪ್ರಕಾಶ್
- ಮಾಲೂರು : ಕೆ ಎಸ್ ಮಂಜುನಾಥ್ ಗೌಡ
- ಯಲಹಂಕ : ಎಸ್ ಆರ್ ವಿಶ್ವನಾಥ್
- ಕೆ.ಆರ್.ಪುರಂ : ಬಿಎ ಬಸವರಾಜ್
- ಬ್ಯಾಟರಾಯನಪುರ : ತಮ್ಮೇಶ್ ಗೌಡ
- ಯಶವಂತಪುರ : ಎಸ್ ಟಿ ಸೋಮಶೇಖರ್
- ರಾಜರಾಜೇಶ್ವರಿನಗರ : ಮುನಿರತ್ನ ನಾಯ್ಡು
- ದಾಸರಹಳ್ಳಿ : ಎಸ್ ಮುನಿರಾಜು
- ಮಹಾಲಕ್ಷ್ಮಿ ಲೇಔಟ್ : ಗೋಪಾಲಯ್ಯ
- ಮಲ್ಲೇಶ್ವರಂ : ಸಿ ಎನ್ ಅಶ್ವಥ ನಾರಾಯಣ
- ಹೆಬ್ಬಾಳ :
- ಪುಲಕೇಶಿನಗರ : ಮುರಳಿ
- ಸರ್ವಜ್ಞನಗರ : ಪದ್ಮನಾಭ ರೆಡ್ಡಿ
- ಸಿ.ವಿ.ರಾಮನ್ ನಗರ : ಎಸ್ ರಘು
- ಶಿವಾಜಿನಗರ : ಎನ್ ಚಂದ್ರ
- ಶಾಂತಿನಗರ : ಶಿವಕುಮಾರ್
- ಗಾಂಧಿನಗರ : ಸಪ್ತಗಿರಿ ಗೌಡ
- ರಾಜಾಜಿನಗರ : ಸುರೇಶ್ ಕುಮಾರ್
- ಗೋವಿಂದರಾಜ ನಗರ :
- ವಿಜಯನಗರ : ಹೆಚ್ ಹವೀಂದ್ರ
- ಚಾಮರಾಜಪೇಟೆ : ಭಾಸ್ಕರ್ ರಾವ್ (ಐಪಿಎಸ್)
- ಚಿಕ್ಕಪೇಟೆ : ಉದಯ ಗರುಡಾಚಾರ್
- ಬಸವನಗುಡಿ : ರವಿ ಸುಬ್ರಹ್ಮಣ್ಯ
- ಪದ್ಮನಾಭನಗರ : ಆರ್ ಅಶೋಕ್
- ಬಿ.ಟಿ.ಎಂ.ಲೇಔಟ್ : ಶ್ರೀಧರ್ ರೆಡ್ಡಿ
- ಜಯನಗರ : ಸಿ ಕೆ ರಾಮಮೂರ್ತಿ
- ಮಹಾದೇವಪುರ :
- ಬೊಮ್ಮನಹಳ್ಳಿ : ಸತೀಶ್ ರೆಡ್ಡಿ
- ಬೆಂಗಳೂರು ದಕ್ಷಿಣ : ಎಂ ಕೃಷ್ಣಪ್ಪ
- ಆನೇಕಲ್ : ಹುಲ್ಲಳ್ಳಿ ಶ್ರೀನಿವಾಸ್
- ಹೊಸಕೋಟೆ : ಎಂಟಿಬಿ ನಾಗರಾಜ್
- ದೇವನಹಳ್ಳಿ : ಮುನಿಸಾಮಪ್ಪ
- ದೊಡ್ಡಬಳ್ಳಾಪುರ : ಧೀರಜ್ ಮುನಿರಾಜು
- ನೆಲಮಂಗಲ : ಸಪ್ತಗಿರಿ ನಾಯಕ್
- ಮಾಗಡಿ : ಶ್ರೀ ಪ್ರಸಾದ್ ಗೌಡ
- ರಾಮನಗರ : ಗೌತಮ್ ಗೌಡ
- ಕನಕಪುರ : ಆರ್ ಅಶೋಕ್
- ಚನ್ನಪಟ್ಟಣ : ಯೋಗೇಶ್ವರ್
- ಮಳವಳ್ಳಿ : ಮುನಿರಾಜು
- ಮದ್ದೂರು : ಎಸ್ ಪಿ ಸ್ವಾಮಿ
- ಮೇಲುಕೋಟೆ : ಇಂದ್ರೇಶ್ ಕುಮಾರ್
- ಮಂಡ್ಯ : ಅಶೋಕ್ ಜಯರಾಂ
- ಶ್ರೀರಂಗಪಟ್ಟಣ : ಸಚ್ಚಿದಾನಂದ
- ನಾಗಮಂಗಲ : ಸುಧಾ ಶಿವರಾಮ್
- ಕೃಷ್ಣರಾಜಪೇಟೆ : ನಾರಾಯಣ ಗೌಡ
- ಶ್ರವಣಬೆಳಗೊಳ :
- ಅರಸೀಕೆರೆ :
- ಬೇಲೂರು : ಕೆ ಸುರೇಶ್
- ಹಾಸನ : ಜೆ ಪ್ರೀತಂ ಗೌಡ
- ಹೊಳೆನರಸೀಪುರ : ದೇವರಾಜೇ ಗೌಡ
- ಅರಕಲಗೂಡು : ಯೋಗ ರಮೇಶ್
- ಸಕಲೇಶಪುರ : ಸಿಮೆಂಟ್ ಮಂಜು
- ಬೆಳ್ತಂಗಡಿ : ಹರೀಶ್ ಪೂಂಜಾ
- ಮೂಡುಬಿದಿರೆ : ಉಮಾನಾಥ್ ಕೋಟ್ಯಾನ್
- ಮಂಗಳೂರು ನಗರ ಉತ್ತರ : ಭರತ್ ಶೆಟ್ಟಿ
- ಮಂಗಳೂರು ನಗರ ದಕ್ಷಿಣ : ವೇದವ್ಯಾಸ್ ಕಾಮತ್
- ಮಂಗಳೂರು : ಸತೀಶ್ ಕಂಪಲ
- ಬಂಟ್ವಾಳ : ರಾಜೇಶ್ ನಾಯ್ಕ್
- ಪುತ್ತೂರು : ಆಶಾ ತಿಮ್ಮಪ್ಪ
- ಸುಳ್ಯ : ಭಾಗೀರಥಿ ಮುರುಳ್ಯ
- ಮಡಿಕೇರಿ : ಅಪ್ಪಚ್ಚು ರಂಜನ್
- ವಿರಾಜಪೇಟೆ : ಕೆಜಿ ಬೋಪಯ್ಯ
- ಪಿರಿಯಾಪಟ್ಟಣ : ವಿಜಯಶಂಕರ್
- ಕೃಷ್ಣರಾಜನಗರ : ವೆಂಕಟೇಶ್ ಹೊಸಳ್ಳಿ
- ಹುಣಸೂರು : ದೇವರಹಳ್ಳೀ ಸೋಮಶೇಖರ್
- ಹೆಗ್ಗಡದೇವನಕೋಟೆ :
- ನಂಜನಗೂಡು : ಹರ್ಷವರ್ಧನ್
- ಚಾಮುಂಡೇಶ್ವರಿ : ಕವಿಶೇಗೌಡ
- ಕೃಷ್ಣರಾಜ :
- ಚಾಮರಾಜ : ಎಲ್ ನಾಗೇಂದ್ರ
- ನರಸಿಂಹರಾಜ : ಸಂದೇಶ್ ಸ್ವಾಮಿ
- ವರುಣಾ : ವಿ ಸೋಮಣ್ಣ
- ಟಿ.ನರಸೀಪುರ : ಡಾ. ರೇವಣ್ಣ
- ಹನೂರು : ಪ್ರೀತಮ್ ನಾಗಪ್ಪ
- ಕೊಳ್ಳೇಗಾಲ : ಎನ್ ಮಹೇಶ್
- ಚಾಮರಾಜನಗರ : ವಿ ಸೋಮಣ್ಣ
- ಗುಂಡ್ಲುಪೇಟೆ : ಸಿಎಸ್ ನಿರಂಜನ್ ಕುಮಾರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post