ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ವತಿಯಿಂದ ಶನಿವಾರ ಫಾರ್ಮಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪೇಟೆಂಟ್ ಫೈಲಿಂಗ್ ಮತ್ತು ನಾವೀನ್ಯ ಯೋಚನೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪದವಿ ಪಡೆದು ಕಾಲೇಜಿನಿಂದ ಹೊರಬಂದ ನಂತರ ಬದುಕಿನ ನಿಜವಾದ ಅರ್ಥ ತಿಳಿಯುತ್ತದೆ. ಪ್ರತಿ ದಿನವು ಆರೋಗ್ಯ ಕ್ಷೇತ್ರ ಸವಾಲುಗಳನ್ನು ಎದರಿಸುತ್ತಿದೆ. ಅಂತಹ ಸವಾಲುಗಳಿಗೆ ನಾವೀನ್ಯತೆಯ ಪರಿಹಾರ ನೀಡಬೇಕಾಗಿದೆ. ಅಂತಹ ನಾವೀನ್ಯಯುತ ಚಿಂತನೆಗಳು ನಿಮ್ಮದಾಗಲಿ. ರೋಗಗಳ ನಿವಾರಣೆ ಮತ್ತು ಆರೈಕೆಯಲ್ಲಿ ಫಾರ್ಮಸಿಯ ನಾವೀನ್ಯಯುತ ಯೋಜನೆಗಳ ಅವಶ್ಯಕತೆಯ ಅರಿವು ಪಡೆಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
Also read: ಸಹಕಾರ ಸಂಘಗಳ ಬೆಳವಣಿಗೆಯಲ್ಲಿ ಸದಸ್ಯರ ಪಾತ್ರ ಮಹತ್ವದ್ದು: ಬಂದಗಿ ಬಸವರಾಜ ಶೇಟ್
ರಾಷ್ಟ್ರೀಯ ಶಿಕ್ಷಣ ಸಮಿತಿಯ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ಫಾರ್ಮಸಿ ಮತ್ತು ತಾಂತ್ರಿಕತೆ ಒಟ್ಟಾಗಿ ಸಂಶೋಧನೆಗಳನ್ನು ನಡೆಸಲು ಅನೇಕ ಅವಕಾಶಗಳಿವೆ. ಕಾಲೇಜುಗಳ ಸಂಶೋಧನಾ ಪ್ರಯೋಗಾಲಯಗಳು ಸಮಯದ ನಿರ್ಬಂಧವಿಲ್ಲದೆ ಕಾರ್ಯನಿರ್ವಹಿಸಬೇಕಾಗಿದ್ದು, ಸೀಮಿತತೆಯಿಂದ ಹೊರಬಂದು ವಿದ್ಯಾರ್ಥಿಗಳು ಸಂಶೋಧನಾ ಪ್ರಯೋಗಗಳಲ್ಲಿ ಮುನ್ನಡೆಯಿರಿ.
ಜಗದಾಲೆ ಇಂಡಸ್ಟ್ರೀಸ್ ನಿಯಂತ್ರಕ ವ್ಯವಹಾರಗಳ ಸಹಾಯಕ ವ್ಯವಸ್ಥಾಪಕರಾದ ಲತಾ.ಸಿ.ವಿ ಮಾತನಾಡಿದರು. ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ನಾವೀನ್ಯತೆ ಮತ್ತು ಸಂಶೋಧನೆ ಕೇಂದ್ರದ ಸಂಯೋಜಕರಾದ ಕೆ.ಎಲ್.ಅರುಣ್ ಕುಮಾರ್, ಸಿ.ಎಂ.ನೃಪತುಂಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Discussion about this post