Read - 2 minutesಕಲ್ಪ ಮೀಡಿಯಾ ಹೌಸ್ |
ಶಿವಮೊಗ್ಗ |
ಪ್ರತಿ ವರ್ಷದಂತೆ ಈ ವರ್ಷವೂ ಸಹ 13ನೇ ವರ್ಷದ ಅ.15ರಿಂದ 28ರವರೆಗೆ ಶರನ್ನವರಾತ್ರೋತ್ಸವವನ್ನು Sharannavaratri ವಿನೋಬನಗರದ ಶುಭಮಂಗಳ ಸಮುದಾಯ ಭವನದ ಪಕ್ಕದಲ್ಲಿರುವ ಶ್ರೀ ಶನೈಶ್ಚರ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಟ್ರಸ್ಟ್ನ ಕಾರ್ಯದರ್ಶಿ ಸ.ನಾ.ಮೂರ್ತಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ವರ್ಷದ ವಿಶೇಷವಾಗಿ ಶ್ರೀ ಮಾತಾ ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುವುದು. ಈ ವಿಶೇಷ ವಿಗ್ರಹವನ್ನು ಕೋಲ್ಕತ್ತಾದ ಖ್ಯಾತ ಶಿಲ್ಪಿ ಮಧುಸೂದನ್ ಪಾಲ್ ನಿರ್ಮಿಸಿದ್ದಾರೆ ಎಂದರು.
ಹಬ್ಬದ ಅಂಗವಾಗಿ ಪ್ರತಿದಿನ ಬೆಳಿಗ್ಗೆ ಚಂಡಿಕಾ ಯಾಗ ನಡೆಯುತ್ತದೆ. ಸಂಜೆ 5ಗಂಟೆಗೆ ಭಜನಾ ಕಾರ್ಯಕ್ರಮ, ಗೌರಿ ಕಲಾಕೇಂದ್ರದ ಮಕ್ಕಳಿಂದ ಭರತನಾಟ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅ. 15ರಂದು ದಿ.ಅ.ಪ. ರಾಮಭಟ್ಟರ ದಿವ್ಯ ಸ್ಮರಣೆಯೊಂದಿಗೆ ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ಉದ್ಘಾಟನೆಯನ್ನು ಐಎಂಎ ಕಾರ್ಯದರ್ಶಿ ಡಾ. ರಕ್ಷಾ ಯು. ರಾವ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ದೇವಾಲಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ಖ್ಯಾತ ಸಂಗೀತಗಾರ ಮಹೇಂದ್ರ ಗೋರೆ ಭಾಗವಹಿಸುವರು ಎಂದರು.
15ರಿಂದ ಪ್ರತಿದಿನ ಸಂಜೆ 6-30ಕ್ಕೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸುಗಮಸಂಗೀತ, ಭರತನಾಟ್ಯ, ಭಕ್ತಿಸಂಗೀತ, ಹರಿಕಥೆ, ದಿವ್ಯ ಸತ್ಸಂಗ, ಗಮಕವಾಚನ, ಕರ್ನಾಟಕ ಶಾಸ್ತ್ರೀಯ ಸಂಗೀತ, ಸ್ಯಾಕ್ಸೋಫೋನ್ ವಾದನ, ಪಂಚವೀಣಾವಾದನ, ಯಕ್ಷಗಾನ ತಾಳಮದ್ದಲೆ, ಗಿಟಾರ್, ವಯೋಲಿನ್, ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
Also red: ನಿತಿನ್ ಅವರಿಗೆ ಬೆಂಗಳೂರಿನ ರೇವಾ ವಿವಿ ಪಿಹೆಚ್ಡಿ ಪದವಿ ಪ್ರದಾನ
ಅ.28ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಚಂದ್ರಗ್ರಹಣ ನಿಮಿತ್ತ ಬೆಳಿಗೆ 10ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಕಥಾ ಶ್ರವಣ ಆಯೋಜಿಸಲಾಗಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಭಾಗವಹಿಸಿ ನವರಾತ್ರಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
Discussion about this post