ಇಂದಿರಾ ಫುಡ್ಸ್ ನ Indira Foods ಹೊಸ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದು ಇಂದಿರಾ ಫುಡ್ಸ್ ನಿರ್ದೇಶಕ ವಿಜಯ್ ಸಿ. ತಿಳಿಸಿದರು.
ಅವರು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಎಫ್ಎಂಸಿಜಿ ಮಾರುಕಟ್ಟೆಯನ್ನು ಎದುರಿಸಲು ಸ್ಥಳೀಯ ಬ್ರ್ಯಾಂಡ್ ಇಂದಿರಾ ಫುಡ್ಸ್ ಹೊಸ ರಸಂ ಪೇಸ್ಟ್ ಉತ್ಪನ್ನ ಶ್ರೇಣಿಯನ್ನು ಪರಿಚಯಿಸಿದ ಮೊದಲ ಮತ್ತು ಏಕೈಕ ಕಂಪನಿಯಾಗಿದೆ. ಇದು ಕಂಪನಿಯ ಪ್ರಮುಖ ಬ್ರ್ಯಾಂಡ್ಗಳ ವೈವಿಧ್ಯತೆಯನ್ನು ಹೆಚ್ಚಿಸಲಿದೆ ಎಂದು ತಿಳಿಸಿದರು.
ರೆಡಿ ಟು ಈಟ್ ರಾಗಿ ಉತ್ಪನ್ನಗಳು, ವಿವಿಧ ಪೇಸ್ಟ್ಗಳು ಮತ್ತು ಭಾರತೀಯ ನೈಸರ್ಗಿಕ ಮಸಾಲೆಗಳನ್ನು ಬಳಸಿ, ಯಾವುದೇ ಅಡಿಕ್ಟಿವ್ಗಳನ್ನು ಹಾಕದೆ ತಯಾರಿಸಿದ ಆಹಾರೋತ್ಪನ್ನಗಳಿಗೆ ಹೆಸರುವಾಸಿಯಾದ ಸ್ವದೇಶಿ ಕಂಪನಿಯಾದ ಇಂದಿರಾ ಫುಡ್ಸ್, ತನ್ನ ಮಹತ್ವಾಕಾಂಕ್ಷೆಯ ವಿಸ್ತರಣಾ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ ಎಂದರು.
ಇಂದಿರಾ ಫುಡ್ಸ್ 100% ನೈಸರ್ಗಿಕ ಟೊಮೆಟೊ ಪೇಸ್ಟ್ ಮತ್ತು ದಪ್ಪ ಮತ್ತು ರುಚಿಕರವಾದ ಕೆಚಪ್ ಅನ್ನು ಸ್ಪೌಟ್ ಪೌಚ್ ಗಳಲ್ಲಿ ಪರಿಚಯಿಸಿದ ಮೊದಲ ಮತ್ತು ಏಕೈಕ ಕಂಪನಿಯಾಗಿದೆ. ಕಂಪನಿಯು ಪ್ರಸ್ತುತ ತನ್ನ ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರಾಟ ಮಾಡುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ರಾಜ್ಯಗಳಿಗೆ ವಿಸ್ತರಿಸಲು ಯೋಜಿಸಿದೆ ಎಂದರು.
ಇಂದಿರಾ ಫುಡ್ಸ್ನ ಅಧ್ಯಕ್ಷೆ ಇಂದಿರಾ ಮಾತನಾಡಿ, ಇಂದಿರಾ ಫುಡ್ಸ್ 250 ಜನರಿಗೆ ಉದ್ಯೋಗ ನೀಡಿದೆ ಮತ್ತು ತನ್ನ ವಿಸ್ತರಣಾ ಯೋಜನೆಗಳ ಭಾಗವಾಗಿ ಮುಂದಿನ 1 ವರ್ಷದಲ್ಲಿ ಇನ್ನೂ 100 ಜನರನ್ನು ಸೇರಿಸುವ ಗುರಿಯನ್ನು ಹೊಂದಿದೆ ಎಂದರು.
ಎಫ್ಐಸಿಸಿಐ ಕರ್ನಾಟಕ ರಾಜ್ಯ ಮಂಡಳಿಯ ಅಧ್ಯಕ್ಷ ಒತ್ತು ಇಂದಿರಾ ಫುಡ್ಸ್ನ ಸಲಹೆಗಾರ ಉಲ್ಲಾಸ್ ಕಾಮತ್ ಅವರು ಇಂದಿರಾ ರವರ ಸಾಧನೆಯ ಬಗ್ಗೆ ಮಾತನಾಡುತ್ತ ತಮ್ಮಬ್ರ್ಯಾಂಡ್ನ ವಿಸ್ತರಣೆಯ ಬಗ್ಗೆ ಇರುವ ಕಾಳಜಿಯನ್ನು ಪ್ರಶಂಸಿಸಿದರು.
ನಟ ಮತ್ತು ಇಂದಿರಾ ಫುಡ್ಸ್ನ ಬ್ರ್ಯಾಂಡ್ ಅಂಬಾಸಿಡರ್ ಸತೀಶ್ ನೀನಾಸಂ ಮಾತನಾಡಿ, ನಾವೀನ್ಯತೆ ಮತ್ತು ಸಮಗ್ರತೆಯ ಶ್ರೀಮಂತ ಪರಂಪರೆಯನ್ನು ಹೊಂದಿರುವ ಭಾರತದ ಅತ್ಯಂತ ಸಾಂಪ್ರದಾಯಿಕ ಕಂಪನಿಗಳಲ್ಲಿ ಒಂದಾದ ಇಂದಿರಾ ಫುಡ್ಸ್ನೊಂದಿಗೆ ಸಂಬಂಧ ಹೊಂದಲು ನನಗೆ ಸಂತಸವಾಗುತ್ತಿದೆ ಎಂದರು.
Discussion about this post