ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನೆರೆ ಹಾವಳಿಯಿಂದ ಹಾನಿಯಾದ ಮನೆಗಳ ದುರಸ್ತಿಯ ಪರಿಹಾರ ಕುರಿತಂತೆ ಇರುವ ಗೊಂದಲ ನಿವಾರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ DSArun ಮನವಿ ಮಾಡಿದ್ದಾರೆ.
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಮನವಿ ಮಾಡಿದ ಅರುಣ್ ಅವರು, ವಿವಿಧ ವಸತಿ ಯೋಜನೆ ಅಡಿಯಲ್ಲಿ ಬಾಕಿ ಇರುವ ಮನೆಗಳ ಬಿಲ್ಲುಗಳ ಪಾವತಿಯ ಕುರಿತಾಗಿ ಚರ್ಚೆ ನಡೆಸಿದರು.
ನೆರೆಹಾವಳಿಗೆ ಸಂಬಂಧಿಸಿದಂತೆ ಮಳೆಯಿಂದ ಹನಿಯಾದ ಮನೆಗಳ ದುರಸ್ತಿ ಹಾಗೂ ಪುನರ್ ನಿರ್ಮಾಣ ಮಾಡುವುದರಲ್ಲಿ ಇರುವ ಗೊಂದಲಗಳ ಪರಿಹಾರಕ್ಕೆ, ಹಾಗೂ ಫಲಾನುಭವಿಗಳಿಗೆ ಸರ್ಕಾರದಿಂದ ದೊರಕಬೇಕೆರುವ ಸೌಲಭ್ಯಗಳ ಕುರಿತು ಲೋಪ ದೋಷಗಳನ್ನು ಸರಿಪಡಿಸುವಂತೆ ವಿವರ ನೀಡಿದರು.
Also read: ಡೂಪ್ಲಿಕೇಟ್ ಸಿಎಂ ಸಲಹೆ ಮೇರೆಗೆ ಸಿಎಸ್’ಆರ್ ಕಥೆ ಕಟ್ಟಿದ ಸಿಎಂ: ಎಚ್’ಡಿಕೆ ಆರೋಪ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post