Wednesday, June 25, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

‘ನನ್ನ ಗೋಪಾಲ’, `ರಾವಣ ದರ್ಶನಂ’ ನಾಟಕಗಳು | ಗೆದ್ದ ಹೊಂಗಿರಣ | ಮನಸೋತ ಪ್ರೇಕ್ಷಕ

January 12, 2025
in Special Articles
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ಮೊನ್ನೆ ಮೊನ್ನೆಯಷ್ಟೇ ಕುವೆಂಪು ನಾಟಕಗಳನ್ನು ಹೊಂಗಿರಣೋತ್ಸವ-10ರಲ್ಲಿ ನೋಡಿ ಬಂದ ಮೇಲೆ ನಾ ನೋಡಿದ ಎರಡು ನಾಟಕಗಳ ಕುರಿತಾಗಿ ಬರೆಯಬೇಕೆಂದು ಈ ಲೇಖನ ಆರಂಭಿಸಿದೆ.

ಎಲ್ಲೋ ಹೊರಟಿದ್ದ ನನಗೆ ಅಂದು ನೆನಪಾದದ್ದು ಸುವರ್ಣ ಸಾಂಸ್ಕೃತಿಕ ಭವನದ ‘ನನ್ನ ಗೋಪಾಲ’ ನಾಟಕ. ಈ ನಾಟಕ ಕುವೆಂಪುರವರು ಬರೆದಿರುವ ಎರಡನೇ ಮಕ್ಕಳ ನಾಟಕ. ಒಂಟಿಯಾದ ಹೆಣ್ಣು ಮಗಳು ಶ್ರೀ ಕೃಷ್ಣನನ್ನು ಪೂಜಿಸುತ್ತಾ ಪ್ರತಿಕ್ಷಣ ಅವನನ್ನೇ ನೆನೆಯುತ್ತಾ ದಿನ ಕಳೆಯುತ್ತಾ ಇರುವಾಗ ಆಕೆಯ ಒಬ್ಬನೇ ಮಗ ಗೋಪಾಲ ಶಾಲೆಗೆ ಹೋಗಬೇಕಾಗಿ ಬರುತ್ತದೆ.

ಕಾಡಿನ ದಾರಿಯಲ್ಲಿ ಒಬ್ಬನೇ ಹೇಗೆ ಹೋಗುವುದು ಭಯವಾಗುತ್ತದೆ ಎಂದು ತಾಯಿಗೆ ಕೇಳಿದಾಗ ಅವಳು ಕಾಡಿನಲ್ಲಿ ಗೋಪಾಲನೂ ಸಹ ಇರುತ್ತಾನೆ ಅವನು ನಿಮ್ಮ ಅಣ್ಣ ಎಂದು ತಾಯಿ ಹೇಳಿ ಕಳುಹಿಸುತ್ತಾಳೆ. ಗೋಪಾಲನನ್ನು ಬರುವವರೆಗೂ ಬಿಡದೆ ಕರೆದು ಮಾತಾಡಿಸಿ ಪ್ರತಿನಿತ್ಯ ಅವನೊಂದಿಗೆ ಸ್ವಲ್ಪ ಆಟವಾಡಿಯೇ ಶಾಲೆಗೆ ಹೋಗುವುದು ಆ ಮಗುವಿಗೆ ರೂಢಿಯಾಗುತ್ತದೆ. ಹೀಗಿರಲು ಒಮ್ಮೆ ಗುರುಗಳಿಗೆ ತಮ್ಮ ಮನೆಯಲ್ಲಿನ ಪೂಜೆಗೆ ಏನಾದರೂ ಗುರುದಕ್ಷಿಣೆಯಾಗಿ ತನ್ನಿ ಎಂದಾಗ ಗೋಪಾಲನನ್ನು ಹೊರತುಪಡಿಸಿ ಉಳಿದೆಲ್ಲ ಮಕ್ಕಳು ಸಿರಿವಂತರೆ ಆಗಿರುತ್ತಾರೆ ಹಾಗಾಗಿ ಆಯ್ತೆಂದು ಒಪ್ಪಿ ಬೆಲೆಬಾಳುವ ವಸ್ತುಗಳನ್ನೇ ಗುರುಗಳಿಗೆ ದಕ್ಷಿಣೆಯಾಗಿ ತರುತ್ತಾರೆ.

Also Read>> ಶಿವಮೊಗ್ಗ | ಜಿಲ್ಲಾ ಲಿಪಿಕ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಟಿ. ಪ್ರಕಾಶ್ ಅವಿರೋಧ ಆಯ್ಕೆ

ಗೋಪಾಲ ತಾಯಿಯ ಬಳಿ ಗುರುದಕ್ಷಿಣೆ ಸಲುವಾಗಿ ಕೇಳಿದಾಗ ಅವನು ಕಾಡಿನಲ್ಲಿರುವ ಅಣ್ಣ ಗೋಪಾಲನ ಬಳಿ ಕೇಳಬೇಕೆಂದು ಹೇಳಿ ಕಳುಹಿಸುತ್ತಾಳೆ. ಹೀಗೆ ಸಾಗುವ ಕಥೆ ಮಕ್ಕಳ ನಿರ್ಮಲ ಮನಸ್ಸು ಮುಗ್ಧತೆ ಅದಕ್ಕೆ ದೇವರು ಒಲಿಯುವ ರೀತಿಯನ್ನು ಬಹು ಸುಂದರವಾಗಿ ಕಟ್ಟಿಕೊಟ್ಟಿದೆ.
ಈ ಕಥಾ ಹಂದರವನ್ನೇ ಬಹಳ ಚೆನ್ನಾಗಿ ನಿರ್ದೇಶಕರಾದ ಡಾ. ಸಾಸ್ವೆಹಳ್ಳಿ, ಸತೀಶ್ ರವರು ಶಿವಮೊಗ್ಗದ ವಿವಿಧ ಶಾಲೆಯ ಮಕ್ಕಳನ್ನು ಸೇರಿಸಿ ನಾಟಕವಾಗಿಸಿದ್ದಾರೆ. ಅದಕ್ಕೆ ಪೂರಕವಾದ ರಂಗ ಸಜ್ಜಿಕೆ ಹಾಗೂ ಗಣೇಶ್ ಎಲ್ಲೋರ್ ಅವರ ಸಂಗೀತ. ಅದರಂತೆಯೇ ತನ್ಮಯಿ ಹಾಗೂ ಅನನ್ಯ ಕೂಡ ಹಾಡಿದರು. ನನಗೆ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಪಾತ್ರವೆಂದರೆ ಗೋಪಾಲನಾಗಿ ಅಭಿನಯಿಸಿದ ಕುಮಾರಸ್ವಾಮಿಯದು. ಅವನು ಮಾತನಾಡುತ್ತಿದ್ದ ರೀತಿ, ಅವನಲ್ಲಿದ್ದ ಮುಗ್ಧತೆ ಅವನ ಅಭಿನಯಕ್ಕೆ ಕಳೆಗಟ್ಟುವಂತಿತ್ತು.

ಇನ್ನು ಲಿಪಿತ ಕೂಡ ಕೃಷ್ಣನಾಗಿ ಮುದ್ದಾಗಿ ಅಭಿನಯಿಸಿದಳು. ಉಳಿದಂತೆ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶಾಲೆಯ ಸನ್ನಿವೇಶವಂತೂ 20 ವರ್ಷ ಹಿಂದೆ ಹೋದಂತಾಯ್ತು. ಒಟ್ಟಾರೆಯಾಗಿ ಒಂದು ಸುಂದರ ಮನೋಲ್ಲಾಸ ಆಯ್ತೆಂದರೆ ತಪ್ಪಾಗಲಾರದು.

Also Read>> ಮನುಷ್ಯರಲ್ಲ ರಾಕ್ಷಸರು | 3 ಹಸುಗಳ ಕೆಚ್ಚಲು ಕೊಯ್ದ ಪಾಪಿಗಳು | ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

ಮರುದಿನದ ನಾಟಕ ಕುವೆಂಪುರವರ ರಾಮಾಯಣ ದರ್ಶನಂ ಕೃತಿ ಆಧಾರಿತ `ರಾವಣ ದರ್ಶನಂ’. ಇದನ್ನು ರಂಗ ಪಠ್ಯವಾಗಿ ಡಾ.ರಾಜಪ್ಪ ದಳವಾಯಿ ಹಾಗೂ ಡಾ. ಸಾಸ್ವೆಹಳ್ಳಿ ಸತೀಶ್ ರವರು ಚೆನ್ನಾಗಿಯೇ ರೂಪಿಸಿದ್ದಾರೆ. ಹೆಣ್ತನದ ಭೋಗ ಜೀವನದಲ್ಲಿ ಬಿದ್ದಿದ್ದ ರಾವಣನನ್ನು ಮೇಲೆತ್ತಿ ರಾಮ ಜೀವನಕ್ಕೆ ತಿರುಗಿಸುವ ಉದ್ದಾರಕ ಶಕ್ತಿಯಾಗಿ ಸೀತೆ ಅವನ ಜೀವನ ಪ್ರವೇಶಿಸಿರುವುದನ್ನು ಭವ್ಯವಾಗಿ ಚಿತ್ರಿಸಲಾಗಿದೆ.

ಮೇಘನಾದನ ಸಾವಿನ ಸುದ್ದಿ ಕೇಳಿದ ಮಂಡೋದರಿಯ ಮರುಕ, ಅವಳನ್ನು ಸಂತೈಸುವ ರಾವಣ, ಅನಲೆಗಾಗಿ ಮಿಡಿಯುವ, ಧ್ಯಾನ ಮಾಲಿನಿಯ ಕನವರಿಕೆ, ತಾರಾಕ್ಷಿ ದೇವಿಯ ಕೂಸಾದ ವಜ್ರಾರಿಯ ಮೇಲಣ ವಾತ್ಸಲ್ಯ, ಚಂದ್ರನಖಿಯ ಮೇಲಿದ್ದ ರಾವಣನ ಪ್ರೀತಿ ಅಸದಳ. ಇನ್ನು ಲಂಕಾಲಕ್ಷ್ಮೀಯ ಬಳಿ ತನ್ನ ನೋವು ತಿಳಿಸಿ ತನ್ನಿಷ್ಟವ ಬಯಸಿ ಆಶೀರ್ವಾದ ಪಡೆಯುವ ವಿಶಿಷ್ಟ ಸನ್ನಿವೇಶ. ಅಲ್ಲಿ ತನಗೆ ಬೇಕಾದದ್ದು ಎಲ್ಲವಕ್ಕೂ ಲಂಕಾಲಕ್ಷ್ಮೀ `ತಥಾಸ್ತು’ ಎಂದಾಗ ಅಚ್ಚರಿಯಾದ ರಾವಣನಿಗೆ ಅದು ಪುನರ್ಜನ್ಮದಲ್ಲಿ ಎಂದು ಹೇಳುವುದು ವಿಶೇಷವಾಗಿದೆ. ಅಲ್ಲಿ ರಾವಣನನ್ನು ಚಂದ್ರನಖಿ ಮಹಾ ಶಿಲ್ಪಿ ಎನ್ನುತ್ತಲೇ ಅದನ್ನು ಕುವೆಂಪುರವರಿಗೂ ಸಹ ವಿಶಿಷ್ಟ ಕೃತಿ ಕೊರೆಯುವ ಮಹಾಶಿಲ್ಪಿ ಎಂಬಂತೆ ಹೋಲಿಸಿರುವುದು ಈ ನಾಟಕದ ವಿಶೇಷ. ಕೊನೆಯಲ್ಲಿ `ಪಾಪಿ ಗುದ್ದಾರಮಿಹುದೀ ಸೃಷ್ಟಿಯ ಬೃಹತ್ ವ್ಯೂಹ ರಚನೆಯೊಳ್’ ಎಂಬ ಮಾತು ಸಾರ್ಥಕವಾದ ಭಾವ ತರುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಆಡು ಭಾಷೆಯನ್ನೇ ಮಕ್ಕಳು ನೆಟ್ಟಗೆ ಆಡದೆ ಇರುವಾಗ ಹಳೆಗನ್ನಡವನ್ನು ತುಂಬಾ ಸ್ಪಷ್ಟವಾಗಿ ಉಚ್ಚಾರ ಮಾಡಿ ಮಾತನಾಡಿದ್ದಾರೆ. ಇದೊಂದು ಸವಾಲೇ ಸರಿ. ಕುವೆಂಪುರವರು ಹೇಗೆ ಬರೆದಿದ್ದಾರೋ ಅದಕ್ಕೆ ತೂಕವಾಗಿ ಮಾತಾಡಿ ಅಭಿನಯಿಸಿದ್ದಾರೆ. ಅದನ್ನು ನಾವಿಲ್ಲಿ ಶ್ಲಾಘಿಸಲೇಬೇಕು.

ಇತ್ತೀಚಿನ ದಿನಗಳಲ್ಲಿ ಎರಡು ನಿಮಿಷ ನಾಟಕ ನೋಡೋ ಸಂಯಮನೇ ಯಾರಿಗೂ ಇಲ್ಲ. ಒಂದು ಸಣ್ಣ ಗ್ಯಾಪ್’ನಲ್ಲೂ ಮೊಬೈಲ್ ನೋಡ್ಕೊಂಡಿರೋಣ ಅನ್ನೋ ಈ ಕಾಲಘಟ್ಟದಲ್ಲಿ ಹಳೆಗನ್ನಡವನ್ನು ತುಂಬಾ ಸ್ಪಷ್ಟವಾಗಿ ಮಾತಾಡಿ ಅಭಿನಯಿಸಿದ್ದಾರೆ ಅನ್ನುವುದೇ ಒಂದು ವಿಶೇಷ.
ಆಡು ಭಾಷೆಯ ಸಂಭಾಷಣೆಯಾದರೆ ಒಂದು ಡೈಲಾಗ್ ಮರೆತರು ಹೇಳಬಹುದು ಆದರೆ ಇಲ್ಲಿ ಹಾಗಲ್ಲ ಇದನ್ನ ಒಂದು ರಾಗದ ಹಾಗೆ ಅಭ್ಯಾಸ ಮಾಡಿರುತ್ತಾರೆ ಅದನ್ನ ಹಾಗೆ ಹೇಳಬೇಕು ಅದರಲ್ಲಿ ಯಾರೂ ತಪ್ಪಲಿಲ್ಲ ಎಲ್ಲರೂ ಅದನ್ನ ಸರಿಯಾಗಿಯೇ ನೆನಪಿಟ್ಟುಕೊಂಡು ಹೇಳಿದ್ದಾರೆ.

ನಾಟಕದ ವಿಷಯಕ್ಕೆ ಬಂದರೆ ಕಥಾವಸ್ತು ನೋಡಿದಾಗ ‘ರಾವಣ ದರ್ಶನಂ’ ಎಂದಾಗ ರಾವಣ ಎನ್ನುವ ಹೆಸರು ಬಂದಾಗಲೇ ಒಂದು ಅಬ್ಬರ ಇರುತ್ತೆ ಅಂತ ಜನ ಅಂದುಕೊಂಡಿರುತ್ತಾರೆ ಆದರೆ ಇಲ್ಲಿ ಅದು ಭಿನ್ನವಾಗಿತ್ತು. ನಾಟಕ ಆರಂಭವಾಗುವ ಮುನ್ನವೇ ನಿರ್ದೇಶಕರು ಬಂದು ಕಥಾ ಸಂಗತಿಯನ್ನು ಮುನ್ನುಡಿಯ ರೂಪದಲ್ಲಿ ಸ್ವಲ್ಪ ಹೇಳಿ ಹೋಗಿದ್ದು ಅದನ್ನ ಅನುಸರಿಸಿ ಅನೇಕರಿಗೆ ಕಥೆ ಅರ್ಥವಾಗುವಂತಾಯಿತು. ರಾವಣ ಎಂದಾಗ ಜನರಿಗೆ ಎಕ್ಸ್ಪೆಕ್ಟೇಶನ್ ಹೆಚ್ಚು ಇರುತ್ತೆ. ಆದರೆ ನಿರ್ದೇಶಕರು ಆಯ್ದುಕೊಂಡ ವಿಷಯಕ್ಕೆ ತಕ್ಕನಾಗಿ ಎಲ್ಲರೂ ಅಭಿನಯಿಸಿದ್ದಾರೆ. ಇಲ್ಲಿ ರಾವಣ ಎಂದಾಗ ಬರುವ ಕಲ್ಪನೆಗಳಿಗೆ ಕೆಲವೊಂದು ನೀರಸವಾಯಿತು ಎಂದರು.

ಮಕ್ಕಳ ವಿಷಯದಲ್ಲಿ ನೋಡುವುದಾದರೆ ಹಳೆಗನ್ನಡ ಶೈಲಿಯಲ್ಲಿ ಈ ನಾಟಕ ಇರುವುದು ಅವರಿಗೆ ವಾವ್ ಫ್ಯಾಕ್ಟರ್. ಕುವೆಂಪುರವರ ಉತ್ಸವಕ್ಕೆ ಬೇಕಾಗಿದ್ದ ವಾವ್ ಫ್ಯಾಕ್ಟರ್ ಎಂದರೆ ಅದರ ಭಾಷೆಯ ಸದ್ಬಳಕೆ. ಅದನ್ನು ನಿರ್ದೇಶಕರು ತಪ್ಪಿಲ್ಲದ ಹಾಗೆ ನಿರ್ವಹಿಸಿದ್ದಾರೆ. ಅಭಿನಯಿಸುವವರು ಸಹ ಜೊತೆಗೂಡಿದ್ದಾರೆ. ಮೊದಲಿನ ದೃಶ್ಯದಲ್ಲಿ ಪಾತ್ರಧಾರಿಗಳೆಲ್ಲರೂ ಬಂದು `ರಾಮಾಯಣ ದರ್ಶನಂ’ ಪುಸ್ತಕವನ್ನು ಕೈಯಲ್ಲಿಟ್ಟುಕೊಂಡು ಹೋಗಿದ್ದುದು ಸೂಚ್ಯವಾಗಿ ಕುವೆಂಪುರವರ ಪಾತ್ರಗಳನ್ನು ನಾವು ವೇದಿಕೆಗೆ ತರ್ತಾ ಇದ್ದೀವಿ ಅನ್ನೋದನ್ನ ಚೆನ್ನಾಗಿ ತೋರಿಸಿದ್ದಾರೆ.

ಅಭಿನಯದಲ್ಲಿ ಚಂದ್ರನಖಿ ತನ್ನ ಅಭಿನಯ ಹಾಗೂ ಮಾತಿನಿಂದ ಗೆದ್ದರೆ, ರಾವಣ ಲಂಕಾಲಕ್ಷ್ಮೀಯರು ಸಹ ಹಾಗೆಯೇ. ಬಹುಮುಖ್ಯವಾಗಿ ರಂಗ ಸಜ್ಜಿಕೆ, ಬೆಳಕು ಜೊತೆಗೆ ಗಣೇಶ್ ಅವರ ಸಂಗೀತ ಗೆದ್ದಿದೆ. ಎಲ್ಲದಕ್ಕೂ ಕಾರಣರಾದ ಆಯೋಜಕರಾದ ಹೊಂಗಿರಣದ ಸರ್ವರಿಗೂ ಧನ್ಯವಾದಗಳು ಸಲ್ಲಲೇಬೇಕು

(ಚಿತ್ರ ಕೃಪೆ: ಸಿದ್ಧಾರ್ಥ ಎ. ಕಶ್ಯಪ)

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

http://kalpa.news/wp-content/uploads/2024/04/VID-20240426-WA0008.mp4
Tags: DramaKannada News WebsiteKuvempuLatest News KannadaMalnadRamayana DarshanamShimogaShivamoggaShivamogga Newsಕುವೆಂಪುರಂಗ ಸಜ್ಜಿಕೆರಾಮಾಯಣ ದರ್ಶನಂರಾವಣ ದರ್ಶನಂಶಿವಮೊಗ್ಗಹೊಂಗಿರಣೋತ್ಸವ
Previous Post

ಶಿವಮೊಗ್ಗ | ಜಿಲ್ಲಾ ಲಿಪಿಕ ನೌಕರರ ಸಂಘಕ್ಕೆ ಅಧ್ಯಕ್ಷರಾಗಿ ಟಿ. ಪ್ರಕಾಶ್ ಅವಿರೋಧ ಆಯ್ಕೆ

Next Post

ಸೊರಬ | ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೆಲವು ತ್ಯಾಗ ಮಾಡಿ | ಕೃಷ್ಣಮೂರ್ತಿ ಕರೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಸೊರಬ | ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಕೆಲವು ತ್ಯಾಗ ಮಾಡಿ | ಕೃಷ್ಣಮೂರ್ತಿ ಕರೆ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025

HSVಯವರಿಗೆ ಭಾವ ನಮನ | ಸಾಹಿತ್ಯಾಸಕ್ತರ ಮನಗೆದ್ದ ಅದ್ಭುತ ಆಯೋಜನೆ

June 24, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಸಿಗಂಧೂರು ಸೇತುವೆ | ಸಂಸದ ರಾಘವೇಂದ್ರ ಕೊಟ್ರು ಮಹತ್ವದ ಅಪ್ಡೇಟ್ | ಇಲ್ಲಿದೆ ಮಾಹಿತಿ

June 25, 2025

ಬಹುಮುಖ ಪ್ರತಿಭೆ ಲಕ್ಷ್ಮೀ ಭದ್ರಾವತಿ ಅವರಿಗೆ ರಂಗಭೂಮಿ ರತ್ನ ರಾಷ್ಟ್ರ ಪ್ರಶಸ್ತಿ

June 24, 2025

ಮಹತ್ವದ ನಿರ್ಧಾರ | ರೈಲು ಪ್ರಯಾಣ ದರ ಹೆಚ್ಚಳ | ಎಷ್ಟು ಏರಿಕೆ? ಎಲ್ಲ ಪ್ರಯಾಣಕ್ಕೂ ಅನ್ವಯವೇ?

June 24, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!