ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದುರ್ಗಿಗುಡಿಯ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವ ಭೌಮರ 354ನೇ ಆರಾಧನಾ ಮಹೋತ್ಸವವು #Shri Raghavendra Swamy Aradhana Mahothsava ವಿಶೇಷವಾಗಿ ಆಗಸ್ಟ್ 10 ರಿಂದ 12ರ ವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಆ.10ರಂದು ಭಾನುವಾರ ಪೂರ್ವಾರಾಧನೆ, ಆ.11ರ ಸೋಮವಾರ ಶ್ರೀಗುರುಗಳ ಪುಣ್ಯದಿನ, ಆ.12ರ ಮಂಗಳವಾರದಂದು ಬೆಳಿಗ್ಗೆ 11ಕ್ಕೆ ಮಹಾ ರಥೋತ್ಸವ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ ವಿಶೇಷ ಅಭಿಷೇಕ, ಸರ್ವಸೇವೆ, ಪೂಜೆ ಹಾಗೂ ಸಂಜೆ ರಜತ ರಥೋತ್ಸವ, ಉಯ್ಯಾಲೆ ಸೇವೆ ಜೊತೆಗೆ ಪ್ರಸಾದ ವಿನಿಯೋಗ ಇರುತ್ತದೆ.

ನಗರದ ಎಲ್ಲಾ ಭಕ್ತರು ಶ್ರದ್ಧಾಭಕ್ತಿ ಮತ್ತು ಸೇವಾ ರೂಪಗಳಿಂದ ಶ್ರೀ ಗುರುರಾಯರ ಆರಾಧನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಸೇವಾ ಸಮಿತಿ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post