No Result
View All Result
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್
English Articles

LinkedIn shares Bengaluru’s Top Companies for career growth in 2026

by ಕಲ್ಪ ನ್ಯೂಸ್
May 20, 2026
0

Kalpa Media House  |  India | LinkedIn, the world's largest professional network, today unveiled its 2026 Top Companies list for...

Read moreDetails
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
Marriott Bonvoy Expands ICC Partnership to Include Women’s T20 World Cup 2026

Marriott Bonvoy Expands ICC Partnership to Include Women’s T20 World Cup 2026

May 19, 2026
Indriya Launches Customer-Owned Gold Exchange Programme to Promote Responsible Gold Consumption

Indriya Launches Customer-Owned Gold Exchange Programme to Promote Responsible Gold Consumption

May 19, 2026
Ashwini Vaishnaw Flags Off Bengaluru–Mumbai Express; Announces Vande Bharat Sleeper Soon

Ashwini Vaishnaw Flags Off Bengaluru–Mumbai Express; Announces Vande Bharat Sleeper Soon

May 18, 2026
  • Advertise With Us
  • Grievances
  • About Us
  • Contact Us
Wednesday, May 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಮಕ್ಕಳ ಧ್ವನಿಗೆ ಪಾಡ್ ಕಾಸ್ಟ್ ವೇದಿಕೆ: “ಸುವಿಚಾರ” ಹರಡುತ್ತಿರುವ ಪೂರ್ಣಚೇತನ ಶಾಲೆಯ “ವಿಚಾರ”

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
September 16, 2025
in Small Bytes, ಮೈಸೂರು
0
ಮಕ್ಕಳ ಧ್ವನಿಗೆ ಪಾಡ್ ಕಾಸ್ಟ್ ವೇದಿಕೆ: “ಸುವಿಚಾರ” ಹರಡುತ್ತಿರುವ ಪೂರ್ಣಚೇತನ ಶಾಲೆಯ “ವಿಚಾರ”
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಈಗ ಎಲ್ಲೆಡೆ ಕೃತಕ ಬುದ್ಧಿಮತ್ತೆಯದ್ದೇ (AI) ಸುದ್ದಿ. ಇದು ನಮ್ಮ ಶಾಲೆಗಳನ್ನು ಕೂಡ ಪ್ರವೇಶಿಸಿವೆ. ಮಕ್ಕಳ ಮನಸ್ಸಿನಲ್ಲಿ ಕುತೂಹಲ ಮೂಡಿಸುವ ಬದಲಿಗೆ ಅವುಗಳು, ಅವರನ್ನು ತಂತ್ರಜ್ಞಾನದ ಅಡಿಯಾಳುಗಳಾಗಿ ಮಾಡುತ್ತಿವೆ ಎನ್ನುವ ಭೀತಿ ಎಲ್ಲೆಡೆ ಶುರುವಾಗಿದೆ.  ಮಕ್ಕಳನ್ನು ಮೊಬೈಲ್ ವ್ಯಸನದಿಂದ ಹೊರಗೆ ತರುವುದೇ ಪೋಷಕರ-ಶಿಕ್ಷಕರ ಅತಿ ದೊಡ್ಡ ತಲೆನೋವಾಗಿದೆ.

ಈ ಭೀತಿಯ ನಡುವೆ, ನಗರದ ಎಚ್.ಡಿ. ಕೋಟೆ ರಸ್ತೆಯಲ್ಲಿರುವ ಪೂರ್ಣ ಚೇತನ ಶಾಲೆ ತನ್ನ ಮಕ್ಕಳ ಧ್ವನಿಗೆ ಧ್ವನಿ ಸೇರಿಸಿ, ಅವರ ಕುತೂಹಲ ತಣಿಸುವ ಹೊಸ ವೇದಿಕೆಯೊಂದನ್ನು ಸೃಷ್ಟಿಸಿದೆ.

“ವಿಚಾರ” ಈ ಹೆಸರಿನ ಶಾಲೆಯ ಪಾಡ್‌ಕಾಸ್ಟ್‌ ಸರಣಿ ಈಗ ಎಲ್ಲೆಡೆ ಧ್ವನಿ ಮಾಡುತ್ತಿದೆ.  ಇಲ್ಲಿ ಮಕ್ಕಳೇ ಸಂದರ್ಶಕರು; ಅತಿಥಿಗಳಿಗೆ ಇಲ್ಲಿ ಕೃತಕ ಪ್ರಶ್ನೆಗಳ ಕಾಟವಿಲ್ಲ; ಯಾವುದೇ ಒಂದು ಅತಿರಂಜಿತ ಮಾಹಿತಿಯ ಪ್ರವಾಹವಿಲ್ಲ. ಮಕ್ಕಳು ತಮ್ಮ ಮುಗ್ದ ಪ್ರಶ್ನೆಗಳ ಮೂಲಕ ತಮ್ಮ ವಯಸ್ಸಿನ ಇತರ ಮಕ್ಕಳ ಕುತೂಹಲಕ್ಕೆ ಉತ್ತರ ಕಂಡು ಹುಡುಕುವ ಪ್ರಯತ್ನ ಮಾಡುತ್ತಾರೆ. ಪ್ರಶ್ನೆಗಳು ಸರಳ; ಅತಿಥಿಗಳ ಉತ್ತರ ಕೂಡಾ ಅಷ್ಟೇ ಸರಾಗ.

ಈ ಸನ್ನಿವೇಶವನ್ನು ಊಹಿಸಿ. ನಗರದ ಮಗುವೊಂದು ಹಿರಿಯ ಉರಗ ತಜ್ಞ ‘ಸ್ನೇಕ್ ಶ್ಯಾಮ್’ ಅವರ ಮೂಲಕ ಉರಗ ಲೋಕಕ್ಕೆ ಕೇಳುಗರನ್ನು ಕರೆದೊಯ್ಯುವ ಸನ್ನಿವೇಶ. ಹಾವುಗಳು ಎಲ್ಲಿರುತ್ತವೆ, ಹೇಗೆ ಬದುಕುತ್ತವೆ? ಅವುಗಳನ್ನು ಏಕೆ ರಕ್ಷಿಸಬೇಕು ಅನ್ನುವ ಪ್ರಶ್ನೆಗಳು ಇಲ್ಲಿ ಅತ್ಯಂತ ಸಹಜವಾಗಿ ಕೇಳುವುದು. ಮತ್ತೊಬ್ಬ ವಿರ್ದ್ಯಾರ್ಥಿ ಗಾಯಕ-ಸಂಗೀತಗಾರ ರಘು ದೀಕ್ಷಿತ್ ಅವರ ಮಾತುಗಳಿಗೆ ಕಿವಿಯಾಗಿ, ಕೇಳುಗರನ್ನು ಗಾಂಧರ್ವ ಲೋಕಕ್ಕೆ ಕೊಂಡೊಯ್ಯುವುದು. ಇನ್ನೊಂದು ಸಂಚಿಕೆಯಲ್ಲಿ, ಶ್ರೀ ದತ್ತಪೀಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಅವರನ್ನು “ದೈನಂದಿನ ಜೀವನದಲ್ಲಿ ಆಧ್ಯಾತ್ಮದ ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿ ಪ್ರಶ್ನಿಸುತ್ತಾನೆ. ಸೈಬರ್ ಯುದ್ಧ ತಜ್ಞ ವಿವೇಕ್ ಶಂಗಾರಿ “ಡಿಜಿಟಲ್ ಯುಗದ ಯುದ್ಧಗಳ ಭವಿಷ್ಯ”ವನ್ನು ವಿದ್ಯಾರ್ಥಿಗಳ ಮುಂದೆ ಹರಡುತ್ತಾರೆ.
ಇಲ್ಲಿ ಪೂರ್ಣ ಚೇತನ ಶಾಲೆಯ ತರಗತಿಯೇ ಮಕ್ಕಳ  ಸ್ಟುಡಿಯೋ. ಎರಡು ಕ್ಯಾಮೆರಾ, ಒಂದು ಮೈಕ್, ಮತ್ತು ಅದಕ್ಕಿಂತ ಮುಖ್ಯವಾಗಿ—ಮಕ್ಕಳ ಕುತೂಹಲ ಇವಿಷ್ಟು ಈ ಪಾಡ್ ಕಾಸ್ಟ್ ನ ಹಿಂದಿರುವ  ಸಂಗತಿಗಳು.

“ಪಾಡ್‌ಕಾಸ್ಟ್ ಪ್ರಪಂಚದಲ್ಲಿ  ಮಕ್ಕಳಿಗೆ   ಹೆಚ್ಚು ಅವಕಾಶ ಈಗ ಲಭ್ಯವಿಲ್ಲ  ಈ ಸವಾಲಿಗೆ ಉತ್ತರ ನಮ್ಮ ಪಾಡ್ ಕಾಸ್ಟ್. ಇಲ್ಲಿ ಮಕ್ಕಳು ತಮ್ಮ ತೆರನಾದ ಮಕ್ಕಳ ಪರವಾಗಿ ಮಕ್ಕಳಂತೆಯೇ ಪ್ರಶ್ನೆ ಕೇಳುತ್ತಾರೆ. ಸಾಮಾನ್ಯವಾಗಿ ಮಕ್ಕಳು ವಯಸ್ಕರಿಗಿಂತ ವಿಭಿನ್ನವಾಗಿ ಯೋಚಿಸುತ್ತಾರೆ. ಅವರ ಪ್ರಶ್ನೆಗಳೇ ಬೇರೆ- ಅವರು ನಿರೀಕ್ಷಿಸುವ ಉತ್ತರಗಳೇ ಬೇರೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಈ ಪಾಡ್ ಕಾಸ್ಟ್ ಸರಣಿ ಆರಂಭಿಸಿದೆವು,” ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ದರ್ಶನ ರಾಜ್ ವಿವರಿಸಿದರು.

“ನಿರೂಪಣೆಯಲ್ಲಿ ಮಕ್ಕಳ ಆಸಕ್ತಿಯ ಆಧಾರದ ಮೇಲೆ ಆಯ್ಕೆ ಮಾಡಿ, ಅವರಿಗೆ ಸಂದರ್ಶನ ತರಬೇತಿ ನೀಡಲಾಯಿತು. ಉದಾಹರಣೆಗೆ ಶ್ವಾಸಕೋಶ ತಜ್ಞ ಡಾ. ಲಕ್ಷ್ಮಿ ನರಸಿಂಹನ್ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದಾಗ, ವಿದ್ಯಾರ್ಥಿಗಳ ಕೊರೊನಾ ಕುರಿತ ಪ್ರಶ್ನೆಗಳು ವಯಸ್ಕರು ಕೇಳಿದ್ದಕ್ಕಿಂತ ತುಂಬಾ ವಿಭಿನ್ನವಾಗಿದ್ದವು. ಮಕ್ಕಳ ಭಾಷೆಯಲ್ಲಿ ತಜ್ಞ ವೈದ್ಯರೊಬ್ಬರು ಗಂಭೀರ ವಿಷಯಗಳನ್ನು ವಿವರಿಸುತ್ತಿರುವುದು ಅತ್ಯಂತ ವಿಶೇಷವಾಗಿತ್ತು.” ಎಂದು ದರ್ಶನ ರಾಜ್ ವಿವರಿಸುತ್ತಾರೆ. ಅದೇ ರೀತಿ, ದಂತ ವೈದ್ಯ ಡಾ. ರವಿ ಶಾಂತರಾಜ್ ಅವರನ್ನು ದಂತ ಆರೋಗ್ಯ ಕುರಿತಂತೆ ಮಕ್ಕಳು ಸಂದರ್ಶಿಸಿದಾಗ ಅವರು ಕೇಳಿದ ಪ್ರಶ್ನೆಗಳು ವಿಶಿಷ್ಟವಾಗಿದ್ದವು,” ಎನ್ನುತ್ತಾರೆ ಶಾಲೆಯ ಆಡಳಿತಾಧಿಕಾರಿ ಶ್ರೀಮತಿ  ಮಾಧುರ್ಯ ರಾಮಸ್ವಾಮಿ.

ಯುವ ಪಾಡ್‌ಕಾಸ್ಟರ್‌ಗಳಿಗೆ ಈ ಪ್ರಯಾಣ-ಪ್ರಯೋಗ  ಅವಕಾಶದ ಹೊಸ ಜಗತ್ತನ್ನು ತೆರೆದಿದೆ. ಪ್ರತಿಯೊಂದು ಸಂಚಿಕೆಯಲ್ಲಿ ಅವರ ಮುಗ್ದತನ, ತಪ್ಪನ್ನು ಒಪ್ಪಿಕೊಂಡು ಸರಿಪಡಿಸಿಕೊಳ್ಳುವ ಅವರ ಗುಣ ಪ್ರತಿಫಲಿತಗೊಂಡಿವೆ. ಈ ಅನುಭವವು ಅವರ ಆತ್ಮವಿಶ್ವಾಸವನ್ನು  ಇನ್ನಷ್ಟು ಹೆಚ್ಚಿಸಿದೆ. ವಿದ್ಯಾರ್ಥಿ-ನಿರೂಪಕ ಆದಿತ್ಯ ತನ್ನ ರಘು ದೀಕ್ಷಿತರೊಂದಿನ ಸಂದರ್ಶನ ತನ್ನೊಳಗೆ ಆತ್ಮವಿಶ್ವಾಸ ಮೂಡಿಸಿ, ಸಂಗೀತವನ್ನು ಗಂಭೀರವಾಗಿ ತೆಗೆದುಕೊಳ್ಳುವ ಪ್ರೇರಣೆಯಾಯಿತು ಎಂದು ಹೇಳುತ್ತಾರೆ. ಮತ್ತೊಬ್ಬ ನಿರೂಪಕಿ ಮಾನ್ವಿ, “ನಾನು ಎಂದಿಗೂ ಆಳವಾಗಿ ಯೋಚಿಸದಿದ್ದವಿಷಯಗಳ ಬಗ್ಗೆ ಪಾಡ್ ಕಾಸ್ಟ್ ನಲ್ಲಿ ತಿಳಿದುಕೊಂಡೆ,” ಎಂದು ತಿಳಿಸಿದರು.
ಈ ಮಕ್ಕಳ ಪಾಡ್ ಕಾಸ್ಟ್ ಅತಿಥಿಗಳಿಗೂ ಹೊಸ ಅನುಭವ. . “ಮಕ್ಕಳ ಪ್ರಶ್ನೆಗಳ ಹಿಂದಿನ ಮುಗ್ದತೆ ನನ್ನನ್ನು ಗಾಢವಾಗಿ ತಟ್ಟಿತು. ಹಾವುಗಳ ಜಗತ್ತನ್ನು ಮಕ್ಕಳಿಗೆ ವಿವರಿಸುವುದು ಸವಾಲಾಗಿದ್ದರೂ ಇದು ನನಗೆ ವಿಶಿಷ್ಟ ಅನುಭವ ನೀಡಿತು ಎನ್ನುತ್ತಾರೆ,” ಸ್ನೇಕ್ ಶ್ಯಾಮ್.

ಮಕ್ಕಳ ಧ್ವನಿ ಮತ್ತು ಸಂಭಾಷಣೆಗಳನ್ನು ಕೆಳಗೆ ನೀಡಿದ  ವಿಚಾರ ಪಾಡ್‌ಕ್ಯಾಸ್ಟ್ ಲಿಂಕ್ ಗಳಲ್ಲಿ ವೀಕ್ಷಿಸಿ.

Child’s Curiosity on God, Creation and life answered by Sri Datta Vijayananda Teertha Swamiji
https://youtu.be/GoaDTkgL-l8?si=zZjDmPoUaQICmvjX

War From A Line of Code? – Explained by Cyber Warfare expert Ace Hacker – Mr. Vivek Shangari
https://youtu.be/yoKY4w9UeSM?si=7X1bfoA1qUQK_5mn
State of Cyber Warfare Weapons in India – Insights by CW Expert – Mr. Vivek Shangari
https://youtu.be/yD5_SC4ENAw?si=LgQWyH7dsJd2zeaI

Secrets of the Lungs || Conversation with Pulmonologist || Dr. Lakshmi Narasimhan
https://youtu.be/7_fymMj4Ww0?si=TA2AZBht8d-9QtGE

Oral Health Demystified | A Child interacts with Dr. Ravi Shantaraj
https://youtu.be/-3Lk7zXaxEw?si=xhpzgrPDGMILM1SY

Raghu Dixit on Vchar | Microbiologist to Lungi Rockstar | Music, Identity & Inspiration
https://youtu.be/IGAQVXHyxog?si=NijpMUtO70TrC26R

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AIArtificial IntelligenceCyber WarKannada News WebsiteLatest News Kanandamysoreಕೃತಕ ಬುದ್ಧಿಮತ್ತೆಡಿಜಿಟಲ್ ಯುಗಮೈಸೂರುವಿಚಾರಶ್ರೀ ದತ್ತಪೀಠಸೈಬರ್ ಯುದ್ಧಸ್ನೇಕ್ ಶ್ಯಾಮ್
Share197Tweet123Send
Previous Post

Operation Meri Saheli | A Successful Women Safety Initiative by SWR

Next Post

ತಿರುಪತಿ-ಚಿಕ್ಕಮಗಳೂರು, ಬೀದರ್-ಬೆಂಗಳೂರು ಸೇರಿ ಹಲವು ರೈಲುಗಳು ತಡವಾಗಿ ಚಲಿಸಲಿವೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಗಮನಿಸಿ! ಈ ದಿನಗಳು ಅರಸೀಕೆರೆ-ಮೈಸೂರು, ಬೆಂಗಳೂರು-ಮೈಸೂರು ಪ್ಯಾಸೆಂಜರ್ ರೈಲುಗಳು ರದ್ದು

ತಿರುಪತಿ-ಚಿಕ್ಕಮಗಳೂರು, ಬೀದರ್-ಬೆಂಗಳೂರು ಸೇರಿ ಹಲವು ರೈಲುಗಳು ತಡವಾಗಿ ಚಲಿಸಲಿವೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

ಅಕ್ರಮ ಮರಳು ಸಾಗಣೆ ವಿರುದ್ಧ ದಾಳಿ : 150 ಟನ್‌ಗೂ ಅಧಿಕ ಮರಳು ಜಪ್ತಿ

May 20, 2026
ನೇಮಕಾತಿ ಪ್ರಕ್ರಿಯೆ ಕಠಿಣ | ತೆರೆಮರೆಯ ಪ್ರತಿಭೆಗಳನ್ನು ಹುಡುಕಲು ಎಐ ಮೊರೆ: ಲಿಂಕ್ಡ್‌ ಇನ್

LinkedIn shares Bengaluru’s Top Companies for career growth in 2026

May 20, 2026
ಕರ್ನಾಟಕಕ್ಕೆ ದೇವೇಗೌಡರ ನಿರಂತರ ಸೇವೆ ಅವಿಸ್ಮರಣೀಯ: ಸುರೇಶ್ ಋಗ್ವೇದಿ

ಕರ್ನಾಟಕಕ್ಕೆ ದೇವೇಗೌಡರ ನಿರಂತರ ಸೇವೆ ಅವಿಸ್ಮರಣೀಯ: ಸುರೇಶ್ ಋಗ್ವೇದಿ

May 20, 2026
GE Aerospace to Invest ₹100 Crore in Pune Facility, Boosting India Manufacturing

GE Aerospace to Invest ₹100 Crore in Pune Facility, Boosting India Manufacturing

May 20, 2026
ಶಿರಾಳಕೊಪ್ಪ | ರಸ್ತೆಗೆ ಮಾವಿನ ಹಣ್ಣು ಸುರಿದು ವ್ಯಾಪಾರಿಯ ಆಕ್ರೋಶ! ಕಾರಣವೇನು?

ಶಿರಾಳಕೊಪ್ಪ | ರಸ್ತೆಗೆ ಮಾವಿನ ಹಣ್ಣು ಸುರಿದು ವ್ಯಾಪಾರಿಯ ಆಕ್ರೋಶ! ಕಾರಣವೇನು?

May 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL