Saturday, July 5, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ದಕ್ಷ

ಬುಲೆಟ್ ಸವಾರಿ-14: ಕೊಲೆಗಡುಕ ವೈದ್ಯ ವಿದ್ಯಾರ್ಥಿಗಳು

February 23, 2018
in ದಕ್ಷ
0 0
0
Share on facebookShare on TwitterWhatsapp
Read - 2 minutes

1990

ಕೆಲವೊಮ್ಮೆ ಯಾವುದೇ ಸುಳಿವು ಬಿಡದೆ ಹೋದರೂ ಕೊಲೆಗಾರರು ಸಿಕ್ಕಿ ಬೀಳುತ್ತಾರೆ. ಕೊಲೆಗಾರರು ನಮ್ಮ ಕಣ್ಣೆದುರಿಗೇ ಇದ್ದರೂ ಬೇಗ ಬಲೆಗೆ ಬೀಳುವುದಿಲ್ಲ. ಪಂಜಾಬ್‌ನ ಪ್ರಖ್ಯಾತ ವೈದ್ಯರೊಬ್ಬರು ಬೆಂಗಳೂರಿನಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಂದ ದಾರುಣವಾಗಿ ಕೊಲೆಯಾದ ಘಟನೆ ಇದಕ್ಕೊಂದು ಉದಾಹರಣೆ. ಕುತೂಹಲದ ಸಂಗತಿ ಏನೆಂದರೆ, ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರ ಖಾಸಾ ಮೊಮ್ಮಗ ಹಂತಕರ ನಡುವೆಯೇ ಇದ್ದ! ಕೊಲಡ ನಡೆದಿದ್ದು ಆತನದೇ ಕಾರಿನಲ್ಲಿ!!

ಅವತ್ತು ನಾನು ಯಾವುದೋ ಪ್ರಕರಣದ ಮಾಹಿತಿ ನೀಡಲು ಕ್ರೈಂ ಡಿಸಿಪಿ ಕಚೇರಿಗೆ ಹೋಗಿದ್ದೆದ. ಡಿಸಿಪಿ ಎದುರು ಹೆಂಗಸರೊಬ್ಬರು ಬಿಕ್ಕಳಿಸುತ್ತಿದ್ದುದು ಕಂಡು ಬಂತು. ನಹಾನು ಕುತೂಹಲದಿಂದ ‘ಏನಂತೆ ಸಾರ್ ಇವರ ಪ್ರಾಬ್ಲಂ,’ ಎಂದೆ. ಆಗ ಡಿಸಿಪಿಯವರು ‘ಇವರ ಗಂಡ ಡಾ.ಪ್ಯಾರಾ ಸಿಂಗ್ ಎಂಬುವರು ಮಗನನ್ನು ಮೆಡಿಕಲ್ ಕಾಲೇಜಿಗೆ ಸೇರಿಸಲು ಪಂಜಾಬ್‌ನಿಂದ ಬೆಂಗಳೂರಿಗೆ ನಿಗೂಢವಾಗಿ ನಾಪತ್ತೆಯಾಗಿದ್ದಾರಂತಲ್ಲ,’ ಎಂದರು. ನನಗೆ ತಕ್ಷಣ, ದಾವಣಗೆರೆ ಬಳಿ ಸರ್ದಾಜಿಯೊಬ್ಬರ ಮೃತ ದೇಹ ಪತ್ತೆಯಾದ ಸುದ್ದಿ ಪತ್ರಿಕೆಯಲ್ಲಿ ಬಂದಿದ್ದು ಫ್ಲ್ಯಾಷ್ ಆಯಿತು. ಅವರಿಗೆ ಆ ವಿಷಯ ತಿಳಿಸಿದೆ. ಅಲ್ಲಿಂದ ತನಿಖೆ ವೇಗ ಪಡೆದುಕೊಂಡಿತು. ಹಂತಕರ ಪತ್ತೆಗೆ ಹಲವಾರು ಪೊಲೀಸ್ ತಂಡಗಳನ್ನು ರಚಿಸಿ, ಕೊನೆಗೆ ಕೊಲೆಗಡುಕರು ನನ್ನ ಕೈಗೇ ಸಿಕ್ಕಿಬಿದ್ದರು.

ಡಾ.ಪ್ಯಾರಾ ಸಿಂಗ್ ಅಮೃತಸರದಲ್ಲಿ ದೊಡ್ಡ ಕ್ಲಿನಿಕ್ ನಡೆಸುತ್ತಿದ್ದರು. ಅವರ ಪತ್ನಿಯೂ ವೈದ್ಯೆಯಾಗಿದ್ದರು. ಮಗನಿಗೆ ಪ್ರತಿಷ್ಠಿತ ಮೆಡಿಕಲ್ ಕಾಲೇಜೊಂದರಲ್ಲಿ ಸೀಟು ಕಾಲೇಜಿಗೆ ಡೊನೆಷನ್ ತುಂಬಲೆಂದು 2 ಲಕ್ಷ 30 ಸಾವಿರ ರೂ. ತೆಗೆದುಕೊಂಡು 1990ರ ಜೂನ್ 14ರಂದು ಬೆಂಗಳೂರಿಗೆ ಆಗಮಿಸಿ ಹೋಟೆಲ್ ರಾಜ್‌ಮಹಲ್‌ನಲ್ಲಿ ಉಳಿದುಕೊಂಡಿದ್ದರು. ಪಂಜಾಬ್‌ನಲ್ಲಿಯೇ ಇದ್ದ ಅವರ ಆಪ್ತಮಿತ್ರ ಡಾ|ರಾಮ್ ಲುಬಿಯಾ ಸುಂದರ್ ಎಂಬುವರ ಮಗ ಚಂದನ್ ಸಿಂಗ್ ಆದಾಗಲೇ ಆ ಕಾಲೇಜಿನಲ್ಲಿ ಓದುತ್ತಿದ್ದ. ಹಣ ಕಟ್ಟಲು ತಮ್ಮ ಮಗನ ನೆರವು ಪಡೆಯುವಂತೆ ಸುಂದರ್ ತಿಳಿಸಿದ್ದರು. ಅದರಂತೆ ಪ್ಯಾರಾ ಸಿಂಗ್ ಅವರು ಚಂದನ್‌ನನ್ನು ಸಂಪರ್ಕಿಸಿದರು. ಆತ, ಮರುದಿನ ಬೆಳಗ್ಗೆ ಕರೆದುಕೊಂಡು ಹೋಗುತ್ತೇನೆ ಎಂದ.

ಹೋಟೆಲ್ ರೂಮ್‌ನಲ್ಲಿ ಪ್ಯಾರಾ ಸಿಂಗ್, ತಮ್ಮ ಮಗನ ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಿದ್ದರೆ… ಆತ್ತ ಚಂದನ್ ಸಿಂಗ್, ಅವರ ಕೊಲೆ ಮಾಡಿ ಡೊನೆಷನ್ ಹಣ ಲಪಟಾಯಿಸಲು ಸಂಚು ರೂಪಿಸುತ್ತಿದ್ದ. ಮರುದಿನ ಬೆಳಗ್ಗೆ ಚಂದನ್ ಹೋಟೆಲ್ ಬಳಿ ಬಂದು ಅವರನ್ನು ತನ್ನ ಕಾರಿನಲ್ಲಿ ಕೂರಿಸಿಕೊಂಡು ಹರಟ. ಆ ಕಾರು ಕಾಲೇಜಿನ ಕಡೆ ಹೋಗುವ ಬದಲು, ಆ ದಿನಗಳಲ್ಲಿ ನಿರ್ಜನ ಪ್ರದೇಶವಾಗಿದ್ದ ಕೋರಮಂಗಲದ ಕಡೆಗೆ ಸಾಗಿತು. ಕಾರಿನ ಸೀಟಿನಲ್ಲಿ ಇನ್ನೂ ಇಬ್ಬರು ವಿದ್ಯಾರ್ಥಿಗಳಿದ್ದರು. ಅವರು-ಸಿರಿಯಾ ಮೂಲಕ ಓರಾಬಿ ಅಲಿ ಹುಸೇನ್ ಬಕ್ರಿ ಮತ್ತು ಅಮ್ಜದ್ ಅಲಿ ಹುಸೇನ್ ಬಕ್ರಿ ಸಹೋದರರು. ಆ ಇಬ್ಬರು ಆಗರ್ಭ ಶ್ರೀಮಂತರಾಗಿದ್ದರು. ಹಾಸ್ಟೆಲ್ ಬದಲಿಗೆ ಅವರು, ಪಂಚತಾರಾ ಹೋಟೆಲ್ ಒಂದರಲ್ಲಿ ರೂಮ್ ಮಾಡಿಕೊಂಡಿದ್ದರು! ಕಾರು ಚಲಿಸುತ್ತಿರುವಂತೆಯೇ ಅವರಿಬ್ಬರು ಹಿಂದಿನಿಂದ ಪ್ಯಾರಾ ಸಿಂಗ್ ಅವರ ಕುತ್ತಿಗೆಗೆ ಹಗ್ಗ ಬಿಗಿದರು. ‘ಗೆರೊಟ್ಟೆ’ ಎಂದು ಕರೆಯಲಾಗುವ ಈ ಮರ್ಡರ್ ಸ್ಟೈಲ್ ಆ ದಿನಗಳ ಸಿನಿಮಾಗಳಲ್ಲಿ  88 ಕುಪ್ರಸಿದ್ಧವಾಗಿತ್ತು. ಈ ದಾಳಿಯಿಂದ ಕಂಗೆಟ್ಟ ಸಿಂಗ್ ತಪ್ಪಿಸಿಕೊಳ್ಳಲು ಚಡಪಡಿಸಿದರು. ಆದರೆ ಕೊನೆಗೂ ಸೋತು ಕೊನೆಯುಸಿರೆಳೆದರು.

ದಾವಣಗೆರೆಗೆ ಹೋಗಿ ಅಲ್ಲಿನ ಡ್ಯಾಮ್‌ವೊಂದರ ಬಳಿ ಹೆಣ ಎಸೆಯಲು ಪ್ರಯತ್ನಿಸಿದರಾದರೂ ಜನ ಸಂಚಾರ ಹೆಚ್ಚಿದ್ದ ಕಾರಣ ಸಾಧ್ಯವಾಗಲಿಲ್ಲ. ಕೊನೆಗೆ, ಶಾಮನೂರು ಕೆರೆಗೆ ಶವ ಎಸೆದು ಬಿಟ್ಟರು. ಈ ದೃಶ್ಯವನ್ನು ದೂರದಿಂದ ನೋಡಿದ ಕೆಲವು ರೈತರು ಕಾರಿನ ಬಳಿ ಓಡಿ ಬರುವಷ್ಟರಲ್ಲಿ ಇವರು ಪರಾರಿಯಾಗಿದ್ದರು. ಆದರೆ ಅಲ್ಲಿನ ಜನ ಎಸೆದ ಕಲ್ಲೇಟಿಗೆ ಕಾರಿನ ಹಿಂದಿನ ಗಾಜು ಜಖಂಗೊಂಡಿತು.

ಸಿಂಗ್ ದೂರವಾಣಿ ಕರೆಗೆ ಸ್ಪಂದಿಸದೆ ಇದ್ದಾಗ ಅವರ ಕುಟುಂಬದವರು ಗಾಬರಿಗೊಂಡು ಬೆಂಗಳೂರಿಗೆ ಬಂದರು. ಚಂದನ್‌ನನ್ನು ವಿಚಾರಿಸಿದರೆ, ತಾನು ಅಂದು ಬೆಳಿಗ್ಗೆ ಹೋಟೆಲ್‌ಗೆ ಹೋಗಿದ್ದಾಗ ಅವರು ಅಲ್ಲಿರಲೇ ಇಲ್ಲ ಎಂದ. ಅಷ್ಟೇ ಅಲ್ಲ. ಅವರನ್ನು ಹುಡುಕಲು ಆ ಕುಟುಂಬಕ್ಕೆ ಸಹಾಯ ಮಾಡುವಂತೆ ನಟಿಸಿದ. ಹಾಗಾಗಿ ಆತನ ಬಗ್ಗೆ ಯಾರಿಗೂ ಅನುಮಾನವೇ ಬರಲಿಲ್ಲ. ದಾವಣಗೆರೆಯ ಪೊಲೀಸ್ ತಂಡ ಆತನ ವಿಚಾರಣೆ ನಡೆಸಿ ಹೋಯಿತು. ಬೆಂಗಳೂರಿನ ವಿಶೇಷ ತನಿಖಾ ತಂಡವೂ ವಿಚಾರಿಸಿ, ಆತ ಎಂದು ನಿರ್ಧರಿಸಿತು. ಹಾಗಾಗಿ ತನಿಖೆ ಬೇರೆ ದಿಕ್ಕಿನಲ್ಲಿ ಸಾಗತೊಡಗಿತು.

ಈ ನಡುವೆ ನನ್ನ ಠಾಣೆ ವ್ಯಾಪ್ತಿಯ ಚರ್ಚ್ ಸ್ಟ್ರೀಟ್‌ನ ರಸ್ತೆಯೊಂದರಲ್ಲಿ ಬಿಟ್ಟು ಹೋಗಿದ್ದ ಕಾರೊಂದು ಗಮನಕ್ಕೆ ಬಂತು.
(ಮುಂದುವರೆಯುವುದು)

Tags: Bangalore PoliceBullet SavariDakshaDavanagereKalpa NewsMedical StudentsTiger BB Ashok Kumar
Previous Post

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-7

Next Post

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-8

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಇದೊಂದು ಜಗತ್ತು: ಕಾಂಬೋಡಿಯಾದ ಲ್ಯಾಂಡ್‌ಮೈನ್‌ಗಳು-8

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ | ರನ್ಯಾ ರಾವ್‌ ಆಸ್ತಿ ಮುಟ್ಟುಗೋಲು

July 5, 2025

ಗುರುರಾಯರ ಸನ್ನಿಧಿಯಲ್ಲಿ ಅವನಿ ಗಾಯನ ಸೇವೆ

July 5, 2025

President Droupadi Murmu Flags Off 134th Durand Cup Trophies

July 4, 2025

ಚಿಲ್ಲರೆ ರಾಜಕಾರಣದ ಅಗತ್ಯ ನನಗಿಲ್ಲ… ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೀಗೆ ಬರೆದಿದ್ದೇಕೆ?

July 4, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ | ರನ್ಯಾ ರಾವ್‌ ಆಸ್ತಿ ಮುಟ್ಟುಗೋಲು

July 5, 2025

ಗುರುರಾಯರ ಸನ್ನಿಧಿಯಲ್ಲಿ ಅವನಿ ಗಾಯನ ಸೇವೆ

July 5, 2025

President Droupadi Murmu Flags Off 134th Durand Cup Trophies

July 4, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!