ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಅಭಿವೃದ್ಧಿಗೆ ವಿದ್ಯಾವಂತ ಯುವಕರ ಪಾತ್ರ ಪ್ರಮುಖವಾಗಿದ್ದು, ತಾವು ಓದಿದ ಕಾಲೇಜು, ಪ್ರಾದ್ಯಾಪಕರನ್ನು ಎಂದಿಗೂ ಮರೆಯುವುದಿಲ್ಲ. ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಅಮೇರಿಕಾದ ವ್ಯಾಸ ಭಾರತೀ ತ್ರಿಯೋಗ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ಕೆ.ರಾಘವೇಂದ್ರ ಪೈ ಕರೆ ನೀಡಿದರು.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಬಳಗದ ವತಿಯಿಂದ ಏರ್ಪಡಿಸಿದ್ದ ಸ್ನೇಹ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜು ಹುಡುಗಾಟಿಕೆ ದಿನಗಳನ್ನು, ಸ್ನೇಹಿತರನ್ನು ಮರೆಯುವಂತೆಯೇ ಇಲ್ಲ. ಆ ದಿನಗಳೇ ಇಂದು ಶಾಸಕರಾಗಲು ಕಾರಣ, ವಿಧಾನ ಸಭೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಅಂದು ಭೋದಿಸಿದ ಪ್ರಾಧ್ಯಾಪಕರ ಸಲಹೆ ಸೂಚನೆಗಳು ಇಂದಿಗೂ ಸಹಕಾರಿಯಾಗಿದೆ.
– ಡಿ.ಎಸ್.ಅರುಣ್, ವಿಧಾನ ಪರಿಷತ್ ಶಾಸಕರು
ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಎನ್ ಸಿ ಸಿ ವಿದ್ಯಾರ್ಥಿಯಾಗಿ ದೆಹಲಿಗೆ ಹೋದಾಗ, ಅಲ್ಲಿ ಯುವ ಮಹೋತ್ಸವದಲ್ಲಿ ಯೋಗಾಸನ ಸ್ವರ್ಧೆಯಲ್ಲಿ ಭಾಗವಹಿಸಿದ್ದೆ. ಪ್ರಥಮ ಸ್ಥಾನ ದೊರೆಯಿತು. ನಂತರ ಅಂತರ ರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದೆ. ಅಲ್ಲಿಯೂ ಪ್ರಥಮ ಸ್ಥಾನ ದೊರಕಿತು. ಹೀಗೆ ನನ್ನ ಹವ್ಯಾಸ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಇಂದು ಅಮೇರಿಕದ ವ್ಯಾಸ ಭಾರತಿ ತ್ರಿಯೋಗ ವಿಶ್ವವಿದ್ಯಾಲಯದ ಇನ್ನೂರ ಐವತ್ತಾರು ಶಾಖೆಗಳ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿರುವುದಾಗಿ ಯುವ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬಿದರು.
ಯೋಗದಿಂದ ದೊರಕುವ ಪ್ರಯೋಜನ ಹಾಗೂ ಪ್ರಾತ್ಯಕ್ಷೆಕೆ ಮೂಲಕ ಹಿರಿಯ ವಿದ್ಯಾರ್ಥಿಗಳ ಮನಗೆದ್ದು, ಆರೋಗ್ಯದ ಬಗ್ಗೆ ಕೆಲವು ಮಾಹಿತಿ ನೀಡಿದರು. ತಮಗೆ ಕಾಲೇಜಿನಲ್ಲಿ ಸಿಕ್ಕ ನೆರವು ಸ್ನೇಹಿತರ ಹುಡುಗಾಟದ ದಿನಗಳನ್ನು ನೆನಪಿಸಿಕೊಂಡು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಮತ್ತೋರ್ವ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ಉದ್ಯಮಿ ಕಿಮ್ಮನೆ ಜಯರಾಂ ಮಾತನಾಡಿ, ಅಂದು ಮಾಡಿದ ಹುಡುಗಾಟಿಕೆ ಇಂದು ನೆನೆಪು ಮಾತ್ರ, ಆದರು ಖುಷಿ ಕೊಡುತ್ತದೆ. ಸ್ನೇಹಿತರು ಇಂದಿಗೂ ಜೊತೆಗಿದ್ದಾರೆ. ನನ್ನ ಊರಿಗೆ ವಿಶ್ವ ಮಟ್ಟದಲ್ಲಿ ಮನ್ನಣೆ ದೊರಕಬಹುದಾದ ಹಾಗೂ ಮತ್ತೊಬ್ಬರು ಸ್ವರ್ಧೆಗೆ ಬಾರದೆ ಇರುವ ಕೆಲಸ ಮಾಡಬೇಕೆಂದು ತಮ್ಮ ಪತ್ನಿಯೊಂದಿಗೆ ಚರ್ಚಿಸಿ ಗಾಲ್ಫಕ್ಲಬ್ ಪ್ರಾರಂಭಿಸಿದೆ. ಈಗ ಅದರ ಬಗ್ಗೆ ಪ್ರಶಂಸೆ ಸಿಕ್ಕಾಗ ಸಂತೃಪ್ತ ಭಾವ ಮೂಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರಾದ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ವಿಶ್ವ ಮಟ್ಟದಲ್ಲಿ ಎಂತೆಂಥ ಸಾಧನೆ ಮಾಡಿದ್ದಾರೆ, ಸಂತೋಷವಾಗುತ್ತದೆ. ಇಡೀ ವಿಶ್ವದಲ್ಲಿ ಸ್ವಂತಮಾಲಿಕತ್ವದ ಗಾಲ್ಫಕ್ಲಬ್ ಇರುವುದು ಇಬ್ಬರ ಬಳಿ ಒಬ್ಬರು ಬಿಲ್ ಕ್ಲಿಂಟನ್, ಮತ್ತೋರ್ವರು ನಮ್ಮೂರಿನ ಹುಡುಗ ಕಿಮ್ಮನೆ ಜಯರಾಂ, ಈತಾ ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ. ಡಾ. ರಾಘವೇಂದ್ರ ಪೈ, ಅಮೇರಿಕ ದೇಶದ ವಿಶ್ವವಿದ್ಯಾಲಯದ ಉಪಕುಲಪತಿ, ಲೆಪ್ಟಿನೆಂಟ್ ಕರ್ನಲ್ ದಿವಾಕರನಾಯ್ಡು, ಉದ್ಯಮಿ ಬಾಲಕೃಷ್ಣ, ವಿಕ್ರಂ ರವರನ್ನು ಗುರುತಿಸಿ ಇಂದು ಕರೆದು ಗೌರವಿಸಿದ್ದು ಹಾಗೂ ನಮಗೆ ಸರಿದಾರಿ ತೋರಿಸಿದ ಪ್ರಾಧ್ಯಾಪಕರನ್ನು ಕರೆದು ಸನ್ಮಾನಿಸಿರುವುದು ಬಹಳ ಸಂತೋಷ. ಇಂತಹ ಸ್ನೇಹ ಸಮ್ಮಿಲನ ಆಗಿಂದಾಗೆ ಜರುಗುತ್ತಿದ್ದರೆ ಸಿಗುವ ಸಂತೋಷ ಬೇರೆ ಯಾವುದರಿಂದಲು ಸಿಗುವುದಿಲ್ಲ. ಇಂತಹ ಸಂದರ್ಭವನ್ನು ತಾವು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಮಂಜುನಾಥ್ ಪ್ರಾರ್ಥಿಸಿದರು. ಪ್ರೊ. ಆಶಾಲತ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಅಧ್ಯಕ್ಷ ವಾಗೇಶ್ ಮಾತನಾಡಿದರು. ಮುಖ್ಯ ಅತಿಥಿಗಳನ್ನು ಕೇಶವಮೂರ್ತಿ ಪರಿಚಯಿಸಿದರು. ಘನಶ್ಯಾಮ್, ದಿಲೀಪ್ ನಾಡಿಗ್, ಸ್ಮೀತರೂಪೇಶ್, ದೇವಿಕುಮಾರ್ ನಡೆಸಿಕೊಟ್ಟರು. ರೋಟರಿ ಜಿ.ವಿಜಯಕುಮಾರ್ ಮತ್ತು ಸಮನ್ವಯಕಾಶಿ ನಿರೂಪಿಸಿದರು. ಪ್ರಾಂಶುಪಾಲೆ ಮಮತಾ, ಪ್ರಕಾಶ್ ಕುಮಾರ್ ಜೈನ್, ಸೈಯದ್ ಅಬೂತಾಹಿರ್, ಮಹೇಶ್, ನವೀನ್, ಸುನೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















