ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿಶ್ವ ಪರಿಸರ ದಿನಾಚರಣೆಯ World Environment Day ಅಂಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವು South Western Railway Bangalore Division ಪ್ಲಾಗಿಂಗ್ ಕಾರ್ಯಕ್ರಮವನ್ನು Plogging Program ಯಶಸ್ವಿಯಾಗಿ ನಡೆಸಿದ್ದು, ಒಂದು ತಿಂಗಳು ಈ ಅಭಿಯಾನ ನಡೆಯಲಿದೆ.
ಮೇ 5ರಿಂದ ಜೂನ್ 5ರವರೆಗೂ ನಡೆಯಲಿರುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ರೋಟರಿ ಕ್ಲಬ್ ಮತ್ತು ಇಂಡಿಯಾ ಪ್ಲಾಗರ್ಸ್ ಆರ್ಮಿಯ ಸಹಯೋಗದಲ್ಲಿ ಕೆಎಸ್’ಆರ್ ಬೆಂಗಳೂರು ನಿಲ್ದಾಣದಿಂದ ಕೃಷ್ಣದೇವರಾಯ ಹಾಲ್ಟ್ ನಿಲ್ದಾಣದವರೆಗೆ ಹಮ್ಮಿಕೊಳ್ಳಲಾಯಿತು. ಅಭಿಯಾನದ ವೇಳೆ ಹಳಿಯ ಸುತ್ತಮುತ್ತ ಎಸೆಯಲಾಗಿದ್ದ ಕಸವನ್ನು ಸಂಗ್ರಹಿಸಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು.
ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಕುಮಾರ್ ಸಿಂಗ್, ಅಪರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಪರೀಕ್ಷಿತ್ ಮೋಹನ್ಪೂರಿಯಾ ಮತ್ತು ಪ್ರವೀಣ್ ಕಾತರಕಿ, ಹಿರಿಯ ವಿಭಾಗೀಯ ಯಾಂತ್ರಿಕ ಇಂಜಿನಿಯರ್ (ಪರಿಸರ ಮತ್ತು ಹೌಸ್ ಕೀಪಿಂಗ್) ಅಜೀಮುದ್ದೀನ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದರು.
Also read: ಗಮನಿಸಿ! ಮೇ 20ರಂದು ಶಿವಮೊಗ್ಗದಲ್ಲಿ ಯಾವುದೇ ಮೆಡಿಕಲ್ ಶಾಪ್ ಓಪನ್ ಇರಲ್ಲ | ಕಾರಣವೇನು?
ಈ ಅಭಿಯಾನದ ಮುಖ್ಯ ಉದ್ದೇಶ ಪ್ರಯಾಣಿಕರು, ಸಾರ್ವಜನಿಕರು ಹಾಗೂ ಹಳಿಯ ಅಕ್ಕಪಕ್ಕದಲ್ಲಿ ವಾಸಿಸುವ ಜನರಲ್ಲಿ ಜಾಗೃತಿ ಮೂಡಿಸುವುದು. ಹಳಿಗಳ ಮೇಲೆ ಕಸವನ್ನು ಎಸೆಯಬಾರದು ಹಾಗೂ ನಿಲ್ದಾಣ ಮತ್ತು ರೈಲ್ವೆ ಪರಿಸರವನ್ನು ಸ್ವಚ್ಛವಾಗಿರಿಸಬೇಕೆಂಬ ಸಂದೇಶವನ್ನು ಈ ಮೂಲಕ ನೀಡಲಾಯಿತು.
ಸುಮಾರು 200 ಜನರು ಈ ಪ್ಲಾಗಿಂಗ್ ಅಭಿಯಾನದಲ್ಲಿ ಭಾಗವಹಿಸಿ ಸ್ವಚ್ಛ ಮತ್ತು ಹಸಿರು ಪರಿಸರ ಕಾಪಾಡುವ ಮಹತ್ವವನ್ನು ಸಾರಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















