ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ #AirIndia ವಿಮಾನ ಲ್ಯಾಂಡಿಂಗ್ ವೇಳೆ ಅದರ ಹಿಂಭಾಗ(ಬಾಲ) ರನ್ ವೇಗೆ ಅಪ್ಪಳಿಸಿದ್ದು, ಸ್ವಲ್ಪದರಲ್ಲಿ ದೊಡ್ಡ ಅನಾಹುತವೊಂದು ತಪ್ಪಿ, ಪ್ರಯಾಣಿಕರು ಎಲ್ಲರೂ ಸುರಕ್ಷಿತವಾಗಿದ್ದಾರೆ.
ಈ ಕುರಿತಂತೆ ವರದಿಯಾಗಿದ್ದು, ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ 181 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ರನ್ ವೇನಲ್ಲಿ #Runway ಇಳಿಯುವ ವೇಳೆ ಅದರ ಹಿಂಭಾಗ ಅಪ್ಪಳಿಸಿದೆ. ಆದರೂ, ಪೈಲೆಟ್’ನ ಸಕಾಲಿಕ ಸಮರ್ಪಕ ನಿಯಂತ್ರಣದಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
Also Read>> ಅಪರಿಚಿತ ವ್ಯಕ್ತಿಗಳ ಗುಂಡಿನ ದಾಳಿ | ಪುಲ್ವಾಮ ದಾಳಿ ಮಾಸ್ಟರ್ ಮೈಂಡ್ ಫಿನೀಶ್
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ವರದಿಯಾಗಿಸದೆ. ಮುನ್ನೆಚ್ಚರಿಕಾ ಕ್ರಮವಾಗಿ, #Flight ವಿಮಾನವನ್ನು ತಾತ್ಕಾಲಿಕವಾಗಿ ಸೇವೆಯಿಂದ ಹಿಂಪಡೆದು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ.
ಮೂಲಗಳ ಪ್ರಕಾರ, ವಿಮಾನವು ರನ್ವೇ ಸಮೀಪಿಸುವಾಗ ವೇಕ್ ಟರ್ಬ್ಯುಲೆನ್ಸ್ ಸಮಸ್ಯೆಯನ್ನು ಎದುರಿಸಿರಬಹುದು. ಇದರಿಂದ ಲ್ಯಾಂಡಿಂಗ್ ವೇಳೆ ಸಮತೋಲನ ವ್ಯತ್ಯಯಗೊಂಡು ಬಾಲ ಭಾಗ ನೆಲಕ್ಕೆ ತಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಘಟನೆಯ ನಂತರ, ವಿಮಾನವನ್ನು ತಕ್ಷಣ ಸೇವೆಯಿಂದ ಹಿಂತೆಗೆದು ವಿವರವಾದ ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಡಿಜಿಸಿಎ ತನಿಖೆ ಆರಂಭಿಸಿದ್ದು, ರನ್ ವೇ ಸಂಪರ್ಕಕ್ಕೆ ಕಾರಣವಾದ ನಿಖರ ಕಾರಣಗಳನ್ನು ಪತ್ತೆಹಚ್ಚಲಾಗುತ್ತಿದೆ.
Also Read>> ಜೂನ್ 1 | ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ | ಎಲ್ಲಿಯವರೆಗೂ ಶಿಕ್ಷಣ ಸಿಗಲಿದೆ?
ಮೂಲಗಳ ಪ್ರಕಾರ, ತನಿಖೆ ಪೂರ್ಣಗೊಳ್ಳುವವರೆಗೆ ವಿಮಾನವನ್ನು ನಿರ್ವಹಿಸಿದ್ದ ಪೈಲಟ್’ಗಳನ್ನು ತಾತ್ಕಾಲಿಕವಾಗಿ ಹಾರಾಟ ಕರ್ತವ್ಯಗಳಿಂದ ದೂರವಿರಿಸಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಲ್ಯಾಂಡಿಂಗ್ ಸಮಯದಲ್ಲಿ ವೇಕ್ ಟರ್ಬುಲೆನ್ಸ್ (ಮುಂದಿನ ವಿಮಾನದಿಂದ ಉಂಟಾಗುವ ಗಾಳಿಯ ಅಲೆಗಳು) ಈ ಘಟನೆಯ ಪ್ರಮುಖ ಕಾರಣವಾಗಿರಬಹುದು. ವಿಮಾನ ಇಳಿಯಲು ಕೆಲವೇ ಕ್ಷಣಗಳ ಮೊದಲು ಸರಕು ವಿಮಾನ ಟೇಕ್ ಆಫ್ ಆಗಿದ್ದು, ಅದರ ಪರಿಣಾಮವಾಗಿ ಉಂಟಾದ ಗಾಳಿ ಅಸ್ಥಿರತೆ ಒಳಬರುವ ಏರ್ ಬಸ್ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಘಟನೆಯ ಪರಿಣಾಮವಾಗಿ, ಬೆಂಗಳೂರಿನಿಂದ ದೆಹಲಿಗೆ ಹಿಂತಿರುಗುವ ಏರ್ ಇಂಡಿಯಾ ವಿಮಾನ ಎಐ2652 ಸೇವೆಯನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳು ಮಾಡಲಾಗುತ್ತಿದ್ದು, ಮರು ಬುಕ್ಕಿಂಗ್ ಹಾಗೂ ನೆರವು ನೀಡಲಾಗುತ್ತಿದೆ.
ಏರ್ ಇಂಡಿಯಾ ಈ ಘಟನೆಗೆ ವಿಷಾದ ವ್ಯಕ್ತಪಡಿಸಿ, ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ತಮ್ಮ ಪ್ರಮುಖ ಆದ್ಯತೆ ಎಂದು ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಶಿವಮೊಗ್ಗ | 5,000 ಬಿಪಿಎಲ್ ಕಾರ್ಡ್ ರದ್ದು | ಆಹಾರ ಸಚಿವರಿಗೆ ಕಾಂಗ್ರೆಸ್ ಮುಖಂಡ ಚೇತನ್ ಮನವಿಗಳೇನು?


















