ಕಲ್ಪ ಮೀಡಿಯಾ ಹೌಸ್ | ಸಕಲೇಶಪುರ |
ನೈರುತ್ಯ ರೈಲ್ವೆಯ #SWR ಮುಖ್ಯ ಕಚೇರಿ ಸುರಕ್ಷತಾ ತಂಡದ ವತಿಯಿಂದ ಮೈಸೂರು #Mysore ವಿಭಾಗದ ಸಕಲೇಶಪುರ-ಬಂಟ್ವಾಳ ವಿಭಾಗದಲ್ಲಿ ಹಿರಿಯ ಅಧಿಕಾರಿಗಳು ಎರಡು ದಿನಗಳ ಕಾಲ ಆಂತರಿಕ ಸುರಕ್ಷತಾ ಪರಿಶೀಲನೆ ನಡೆಸಿದರು.
ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಎಂ. ರಾಮಕೃಷ್ಣ, ಮುಖ್ಯ ಸಿಬ್ಬಂದಿ ಮತ್ತು ಸಂಚಾರ ವ್ಯವಸ್ಥಾಪಕ ಇ. ಹರಿಕೃಷ್ಣನ್, ಮುಖ್ಯ ಕಚೇರಿಯ ಇತರೆ ಸುರಕ್ಷತಾ ಅಧಿಕಾರಿಗಳು ಹಾಗೂ ಮೈಸೂರು ವಿಭಾಗದ ಎಲ್ಲಾ ಹಿರಿಯ ಅಧಿಕಾರಿಗಳು ಪರಿಶೀಲನೆ ವೇಳೆ ಪಾಲ್ಗೊಂಡಿದ್ದರು.
Also Read>> ಬೆಂಗಳೂರು ಕ್ಯಾಂಟ್ – ತೆಂಕಾಸಿ – ಸೆಂಗೋಟೈ ನಡುವೆ ವಿಶೇಷ ರೈಲು
ಏನೆಲ್ಲಾ ಪರಿಶೀಲಿಸಲಾಯ್ತು?
#RailwayLevelCrossing ಲೆವೆಲ್ ಕ್ರಾಸಿಂಗ್ ಗೇಟ್’ಗಳು, ಹಳಿ ವಕ್ರತೆಗಳು, ಸ್ವಿಚ್ ವಿಸ್ತರಣೆ ಜಾಯಿಂಟ್’ಗಳು, ಪ್ರಮುಖ ಮತ್ತು ಸಣ್ಣ ಸೇತುವೆಗಳು, ಪಾಯಿಂಟ್’ಗಳು ಮತ್ತು ಕ್ರಾಸಿಂಗ್’ಗಳು, ಪ್ರಮುಖ ಮತ್ತು ಸಣ್ಣ ನಿಲ್ದಾಣಗಳು, ಸುರಂಗ ಮಾರ್ಗಗಳು, ವೈದ್ಯಕೀಯ ಪರಿಹಾರ ವಾಹನ, ವಿದ್ಯುತ್ ಉಪಕರಣಗಳು, ಸಿಬ್ಬಂದಿ ಲಾಬಿಗಳು, ರನ್ನಿಂಗ್ ರೂಂಗಳು, ರಿಲೇ ರೂಂಗಳು ಹಾಗೂ ಟ್ರ್ಯಾಕ್ ಯಂತ್ರ ಸಿಬ್ಬಂದಿಯ ಶಿಬಿರ ಕೋಚ್’ಗಳು ಸೇರಿದಂತೆ ಸಕಲೇಶಪುರ- ಬಂಟ್ವಾಳ ವಿಭಾಗದ ವಿವಿಧ ಮಹತ್ವದ ಸ್ಥಳಗಳಲ್ಲಿ ಸಮಗ್ರ ಪರಿಶೀಲನೆ ನಡೆಸಲಾಯಿತು.
ಈ ಸುರಕ್ಷತಾ ಪರಿಶೀಲನೆಯಲ್ಲಿ ಹಳಿಗಳ ಸ್ಥಿತಿ, ಯಾರ್ಡ್ ವಿನ್ಯಾಸ, ಬ್ಯಾಟರಿ ಕೊಠಡಿಗಳು, ಸಿಗ್ನಲಿಂಗ್ ವ್ಯವಸ್ಥೆಗಳು, ನಿಲ್ದಾಣ ಪ್ಯಾನೆಲ್’ಗಳು, ಟ್ರಾಕ್ಷನ್ ಉಪಕೇಂದ್ರಗಳು, ಸೆಕ್ಷನಿಂಗ್ ಮತ್ತು ಪ್ಯಾರಲೆಲಿಂಗ್ ಪೋಸ್ಟ್’ಗಳು ಸೇರಿದಂತೆ ವಿವಿಧ ಸುರಕ್ಷತಾ ಸಂಬಂಧಿತ ವ್ಯವಸ್ಥೆಗಳು ಮತ್ತು ಸ್ಥಾಪನೆಗಳನ್ನೂ ಪರಿಶೀಲಿಸಲಾಯಿತು.
ಯಾಕಾಗಿ ಪರಿಶೀಲನೆ?
ನಿಲ್ದಾಣಗಳು ಮತ್ತು ವಿಭಾಗದ ವಿವಿಧ ಸ್ಥಳಗಳಲ್ಲಿ ನಿಗದಿತ ಸುರಕ್ಷತಾ ನಿಯಮಗಳು ಹಾಗೂ ಕಾರ್ಯಾಚರಣಾ ವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ರೈಲ್ವೆ ಕಾರ್ಯಾಚರಣೆಯಲ್ಲಿ ಸುರಕ್ಷತಾ ಮಾನದಂಡಗಳನ್ನು ಮತ್ತಷ್ಟು ಬಲಪಡಿಸುವುದು ಈ ಪರಿಶೀಲನೆಯ ಉದ್ದೇಶವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
ವಿ-ಗಾರ್ಡ್ ಸಂಸ್ಥೆಗೆ ಪ್ರತಿಷ್ಠಿತ ಐಎಂಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ 2025ರ ಗರಿ




















