No Result
View All Result
Kotak | creating fresh opportunities for SMEs
English Articles

Growth Is No Longer Just a Bengaluru Story: Kotak

by kalpa News
July 24, 2026
0

Kalpa Media House  | Bangaluru | Karnataka, one of India's most vibrant SME markets, is home to more than 8.5...

Read moreDetails
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
  • Advertise With Us
  • Grievances
  • About Us
  • Contact Us
Friday, July 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ. ಮೈತ್ರೇಯಿ ಆದಿತ್ಯಪ್ರಸಾದ್

Kishora Deepika | ಹದಿಹರೆಯದ ಮಕ್ಕಳ ಶಿಕ್ಷಕರು, ಪೋಷಕರಿಗೆ ಮಾರ್ಗದರ್ಶಿ

kalpa News by kalpa News
July 24, 2026
in ಡಾ. ಮೈತ್ರೇಯಿ ಆದಿತ್ಯಪ್ರಸಾದ್
0
Kishora Deepika
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |
Mythreyi Aditya Prasad

ಹದಿಹರೆಯದ ಮಕ್ಕಳ ಶಿಕ್ಷಕರಿಗೆ ಪೋಷಕರಿಗೆ ಮಾರ್ಗದರ್ಶಿಯಾಗಬಲ್ಲ ಕಿಶೋರ ದೀಪಿಕಾ(Kishora Deepika) ಎಂಬ ಪುಸ್ತಕವೊಂದನ್ನು ಶ್ರೀಮತಿ ಎಚ್ಎಂ ರುಕ್ಮಿಣಿ ನಾಯಕ್ ಹಾಗೂ ಉಪಸಂಪಾದಕರಾಗಿ ಉಷಾ ನಟೇಶ್ ಕಾಸರವಳ್ಳಿ ಇವರು ಸಂಪಾದಿಸಿದ್ದಾರೆ.

ಹದಿ ಹರೆಯ (ಸುಮಾರು 13–19 ವರ್ಷ) ವ್ಯಕ್ತಿಯ ಜೀವನದ ಅತ್ಯಂತ ಸೂಕ್ಷ್ಮ ಹಾಗೂ ನಿರ್ಣಾಯಕ ಹಂತವಾಗಿದೆ. ಈ ಅವಧಿಯಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳು ವೇಗವಾಗಿ ನಡೆಯುತ್ತವೆ. ಈ ಕಾರಣದಿಂದ ಮಕ್ಕಳು ಮಾತ್ರವಲ್ಲ, ಅವರ ಶಿಕ್ಷಕರು ಮತ್ತು ಪೋಷಕರೂ ಅನೇಕ ಸವಾಲುಗಳನ್ನು ಎದುರಿಸುತ್ತಾರೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ವ್ಯಸನ. ಓದಿನ ಬಗ್ಗೆ ಆಸಕ್ತಿ ಕಡಿಮೆಯಾಗುವುದು ಮತ್ತು ಅಂಕಗಳ ಬಗೆಗಿನ ಆತಂಕ. ಸ್ನೇಹಿತರ ಪ್ರಭಾವದಿಂದ ಕೆಟ್ಟ ಅಭ್ಯಾಸಗಳಿಗೆ ಒಳಗಾಗುವ ಭಯ. ಪೋಷಕರ ಮಾತನ್ನು ಕೇಳದಿರುವುದು, ಪ್ರತಿಯೊಂದು ವಿಷಯದಲ್ಲೂ ವಾದಿಸುವುದು. ಮಾನಸಿಕ ಒತ್ತಡ, ಖಿನ್ನತೆ, ಆತ್ಮವಿಶ್ವಾಸದ ಕೊರತೆ ಮೊದಲಾದ ಸಮಸ್ಯೆಗಳನ್ನು ಪೋಷಕರು ಎದುರಿಸುತ್ತಿದ್ದಾರೆ.

ಹಾಗೆಯೇ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಏಕಾಗ್ರತೆಯ ಕೊರತೆ, ತರಗತಿಯಲ್ಲಿ ಮೊಬೈಲ್ ಬಳಸುವುದರಿಂದ ಅವರ ಗಮನ ಬೇರೆಡೆ ಹೋಗುವುದು, ವಿದ್ಯಾರ್ಥಿಗಳ ವಿಭಿನ್ನ ಹಿನ್ನೆಲೆ ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಬೋಧಿಸುವ ಸವಾಲು. ಪೋಷಕರ ಹೆಚ್ಚಿನ ನಿರೀಕ್ಷೆಗಳು ಮತ್ತು ಒತ್ತಡ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ ಸಹಾಯ ಮಾಡುವ ಅಗತ್ಯ.ಪರೀಕ್ಷಾ ಫಲಿತಾಂಶಗಳ ಒತ್ತಡ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ಬೆಳೆಸುವುದು ಶಿಕ್ಷಕರ ಸವಾಲಾಗಿದೆ. ಇದಕ್ಕೆ ಪರಿಹಾರವಾಗಿ ಮಕ್ಕಳೊಂದಿಗೆ ಪ್ರೀತಿಯಿಂದ, ಮುಕ್ತವಾಗಿ ಮತ್ತು ವಿಶ್ವಾಸದಿಂದ ಸಂವಾದ ನಡೆಸಬೇಕು.

ಶಿಕ್ಷಕರು ಮತ್ತು ಪೋಷಕರು ನಿರಂತರ ಸಂಪರ್ಕದಲ್ಲಿದ್ದು ಮಗುವಿನ ಬೆಳವಣಿಗೆಯನ್ನು ಗಮನಿಸಬೇಕು.

Also Read>> ಸಮಾಜದ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಎಐ ಪರಿಹಾರಗಳನ್ನು ರೂಪಿಸಿ: ರುದ್ರೇಗೌಡ ಕರೆ

ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು; ಇತರರೊಂದಿಗೆ ಹೋಲಿಕೆ ಮಾಡಬಾರದು.

ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಗೆ ಸಮಂಜಸವಾದ ನಿಯಮಗಳನ್ನು ರೂಪಿಸಬೇಕು.

ಕ್ರೀಡೆ, ಯೋಗ, ಧ್ಯಾನ, ಸಂಗೀತ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು.

ನೈತಿಕ ಮೌಲ್ಯಗಳು, ಸಂಸ್ಕಾರ ಮತ್ತು ಜವಾಬ್ದಾರಿಯ ಅರಿವನ್ನು ಬಾಲ್ಯದಿಂದ ಈಲೇ ಬೆಳೆಸಬೇಕು.

ಹದಿ ಹರೆಯದ ಮಕ್ಕಳಿಗೆ ತಂದೆ ತಾಯಿಗಳು ಶಿಕ್ಷಕರೂ ಆಗಬೇಕು ಹಾಗೆ ಶಿಕ್ಷಕರು ಪೋಷಕರ ಸ್ಥಾನವನ್ನೂ ನಿಭಾಯಿಸಬೇಕು. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ನೀಡಿದರೆ ಅವರ ಬಾಳು ಹಸನಾಗುತ್ತದೆ. ಏಕೆಂದರೆ ಅದಕ್ಕೆ ಅಂತಹ ಮಾಂತ್ರಿಕ ಶಕ್ತಿ ಇದೆ. ಸರಿಯಾದ ಮಾರ್ಗದರ್ಶನ ದೊರೆಯದ ಮಕ್ಕಳು ಸಮಾಜ ಘಾತುಕ ಶಕ್ತಿಗಳಾಗಿ ಹೊರಹೊಮ್ಮಬಹುದು.

ಹದಿ ಹರೆಯದ ಮಕ್ಕಳನ್ನು ರೂಪಿಸುವಲ್ಲಿ ಪೋಷಕರು ಮತ್ತು ಶಿಕ್ಷಕರು ಎರಡು ಕಣ್ಣುಗಳಿದ್ದಂತೆ. ಪರಸ್ಪರ ಸಹಕಾರ, ತಾಳ್ಮೆ, ಪ್ರೀತಿ ಮತ್ತು ವಿಶ್ವಾಸದಿಂದ ಮಕ್ಕಳನ್ನು ಮಾರ್ಗದರ್ಶನ ಮಾಡಿದರೆ ಅವರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜಕ್ಕೆ ಆದರ್ಶ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. “ಮಕ್ಕಳನ್ನು ಬದಲಾಯಿಸುವುದಕ್ಕಿಂತ ಅವರ ಪರಿಸರವನ್ನು ಉತ್ತಮಗೊಳಿಸುವುದು ಮುಖ್ಯ” ಎಂಬ ಅರಿವಿನಿಂದ ಶಿಕ್ಷಕರು ಮತ್ತು ಪೋಷಕರು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಹದಿ ಹರೆಯದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು.

ಮಾರ್ಗದರ್ಶಿಯಾಗಬಲ್ಲ ಕಿಶೋರ ದೀಪಿಕಾ(Kishora Deepika)

ಪ್ರಸ್ತುತ ಈ ಸ್ಥಿತಿ ಗಮನಿಸಿಯೇ ಹದಿಹರೆಯದ ಮಕ್ಕಳ ಶಿಕ್ಷಕರಿಗೆ ಪೋಷಕರಿಗೆ ಮಾರ್ಗದರ್ಶಿಯಾಗಬಲ್ಲ ಕಿಶೋರ ದೀಪಿಕಾ ಎಂಬ ಪುಸ್ತಕವೊಂದನ್ನು ಶ್ರೀಮತಿ ಎಚ್ಎಂ ರುಕ್ಮಿಣಿ ನಾಯಕ್ ಹಾಗೂ ಉಪಸಂಪಾದಕರಾಗಿ ಉಷಾ ನಟೇಶ್ ಕಾಸರವಳ್ಳಿ ಇವರು ಸಂಪಾದಿಸಿದ್ದಾರೆ. ಈ ಪುಸ್ತಕದ ಸಂಪಾದಕರೇ ಹೇಳಿರುವಂತೆ ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗದ ಇಂದಿನ ಶಿಕ್ಷಣ ಪದ್ದತಿಗೆ ಪರಿಹಾರವೆಂದರೆ ನೀತಿ ಶಿಕ್ಷಣ. ಕಥೆ, ಹಾಡು, ನಾಟಕ, ಆಟ, ನೃತ್ಯ ಇವುಗಳ ಮೂಲಕ ನೀತಿ ಶಿಕ್ಷಣ ಸರಳವೂ ಹೌದು ಪರಿಣಾಮಕಾರಿಯೂ ಹೌದು ಇದರಿಂದ ಮಕ್ಕಳ ಪೋಷಕರ ನಡುವೆ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಮಧುರ ಬಾಂಧವ್ಯ ಏರ್ಪಡುತ್ತದೆ.

ಹದಿ ಹರೆಯದ ಮಕ್ಕಳಿಗೆ ತಂದೆ ತಾಯಿಗಳು ಶಿಕ್ಷಕರೂ ಆಗಬೇಕು ಹಾಗೆ ಶಿಕ್ಷಕರು ಪೋಷಕರ ಸ್ಥಾನವನ್ನೂ ನಿಭಾಯಿಸಬೇಕು. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣ ನೀಡಿದರೆ ಅವರ ಬಾಳು ಹಸನಾಗುತ್ತದೆ. ಏಕೆಂದರೆ ಅದಕ್ಕೆ ಅಂತಹ ಮಾಂತ್ರಿಕ ಶಕ್ತಿ ಇದೆ. ಸರಿಯಾದ ಮಾರ್ಗದರ್ಶನ ದೊರೆಯದ ಮಕ್ಕಳು ಸಮಾಜ ಘಾತುಕ ಶಕ್ತಿಗಳಾಗಿ ಹೊರಹೊಮ್ಮಬಹುದು. ಈ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಲು ಉತ್ಸಾಹಿಗಳಾದ ಪೋಷಕರಿಗೆ, ಶಿಕ್ಷಕರಿಗೆ ನೆರವಾಗಲು ಇರುವುದೇ ಕಿಶೋರ ದೀಪಿಕಾ’. ಇದರಲ್ಲಿ ಹಾಡು, ಕಥೆ, ನಾಟಕ, ಆಟ, ವಿವೇಕವಾಣಿ ಎಲ್ಲವನ್ನೂ ಇದು ಒಳಗೊಂಡಿದೆ. ವಾರಕ್ಕೊಮ್ಮೆಯಾದರೂ ಇವುಗಳಲ್ಲಿರುವುದನ್ನು ಮಕ್ಕಳಿಗೆ ಆನಂದದಾಯಕವಾಗುವ ಹಾಗೆ ಕಲಿಸಬಹುದಾಗಿದೆ.

ಇಂತಹ ವಿಶೇಷ ಕೃತಿಯನ್ನು ಸಂಪಾದಿಸಿದವರಲ್ಲಿ ಪ್ರಮುಖರು ಶ್ರೀಮತಿ ಹೆಚ್ಎಂ ರುಕ್ಮಿಣಿ ನಾಯಕ್. ಸುಮಾರು 22 ವರ್ಷಗಳು ಸಂಸ್ಕೃತ, ಕನ್ನಡ ಪಾಠ ಮಾಡಿದ ಸುದೀರ್ಘ ಅನುಭವವುಳ್ಳ ಶಿಕ್ಷಕಿ ಇವರು. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇವರು ಶಿವಮೊಗ್ಗದಲ್ಲಿ ‘ಬಾಲ ಗೋಕುಲ’ದ ಸಂಚಾಲಕಿಯಾಗಿ ಬಹು ಯಶಸ್ವಿಯಾಗಿ ಅದನ್ನು ನಿಭಾಯಿಸಿದವರು.

ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗದ ಇಂದಿನ ಶಿಕ್ಷಣ ಪದ್ದತಿಗೆ ಪರಿಹಾರವೆಂದರೆ ನೀತಿ ಶಿಕ್ಷಣ. ಕಥೆ, ಹಾಡು, ನಾಟಕ, ಆಟ, ನೃತ್ಯ ಇವುಗಳ ಮೂಲಕ ನೀತಿ ಶಿಕ್ಷಣ ಸರಳವೂ ಹೌದು ಪರಿಣಾಮಕಾರಿಯೂ ಹೌದು ಇದರಿಂದ ಮಕ್ಕಳ ಪೋಷಕರ ನಡುವೆ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಮಧುರ ಬಾಂಧವ್ಯ ಏರ್ಪಡುತ್ತದೆ. -ಎಚ್ಎಂ ರುಕ್ಮಿಣಿ ನಾಯಕ್

ಅನೇಕ ಪ್ರಶಸ್ತಿಗಳಿಗೆ ಭಾಜನರಾದ ಅವರು 2012 ರಲ್ಲಿ ಶ್ರೀ ಶಾರದಾ ಓದುಗರ ವೇದಿಕೆ ಸ್ಥಾಪಿಸಿ 150 ಕನ್ನಡ ಕೃತಿಗಳನ್ನು ವಿಮರ್ಶಿಸಿದ ಹೆಗ್ಗಳಿಕೆ ಅವರದು. ನೈತಿಕ ಶಿಕ್ಷಣಕ್ಕೆ ಪೂರಕವಾದ “ಬಾಲ ಪ್ರದೀಪ” ಪುಸ್ತಕ ಅನೇಕ ಮರು ಮುದ್ರಣಗಳನ್ನು ಕಂಡ ಕೃತಿಯಾಗಿದೆ.

ಉಪಸಂಪಾದಕಿಯಾದಂತಹ ಶ್ರೀಮತಿ ಉಷಾ ನಟೇಶ್ ಕಾಸರವಳ್ಳಿಯವರು ಶಾಲಾ ಶಿಕ್ಷಕಿ, ಪ್ರಾಧ್ಯಾಪಕಿ, ನಾಟಕ, ನೃತ್ಯ, ಸಂಗೀತ, ಭಜನೆ ಇತ್ಯಾದಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೊತೆಗೆ ಅನೇಕ ವಿದ್ಯಾರ್ಥಿಗಳನ್ನೂ ತೊಡಗಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಅಡಿಪಾಯ ಹಾಕಿದವರಾಗಿದ್ದಾರೆ.

ಆಕಾಶವಾಣಿ ಕಲಾವಿದೆ, ರಂಗಕರ್ಮಿ, ಧಾರಾವಾಹಿಗಳಲ್ಲಿ ನಟನೆ ಇತ್ಯಾದಿಯಾಗಿ ಸರ್ವತೋಮುಖವಾಗಿ ತನ್ನನ್ನು ತಾನು ತೊಡಗಿಸಿಕೊಂಡ ಬಹುಮುಖ ಪ್ರತಿಭೆ.

ಇಂತಹ ತಜ್ಞರು ಸಂಪಾದಿಸಿದ “ಕಿಶೋರ ದೀಪಿಕಾ” ಕೃತಿ ಇದೇ ಬರುವ ಶನಿವಾರ ದಿನಾಂಕ 25.07.2026 ರಂದು ಲೋಕಾರ್ಪಣೆಗೊಳ್ಳಲಿದೆ.

ಸಂಸ್ಕಾರ ಭಾರತಿ ಶಿವಮೊಗ್ಗ ಹಾಗೂ ಮಂಥನ ಶಿವಮೊಗ್ಗದೊಂದಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಬಾಲಗೋಕುಲ ಶಿವಮೊಗ್ಗದ ಸಹಯೋಗದೊಂದಿಗೆ ಸಂಜೆ 5:30ಕ್ಕೆ ತಿಲಕ್ ನಗರದ “ಸನ್ ಸ್ಪೆಷಾಲಿಟಿ” ಆಸ್ಪತ್ರೆಯ “ಧನ್ವಂತರಿ” ಸಭಾಂಗಣದಲ್ಲಿ ನೆರವೇರಲಿದೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು, ಪೋಷಕರು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೋರಲಾಗಿದೆ.

ಹದಿಹರೆಯದ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎನ್ನುವುದು ಮನವಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsKalpa News Advertising DisclaimerKalahamsa Infotech private limited

Tags: Kannada NewsKishora Deepika BookMalnad ArticleMalnad NewsShimogaShivamoggaಕಿಶೋರ ದೀಪಿಕಾ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

Growth Is No Longer Just a Bengaluru Story: Kotak

Next Post

Mysore | ರಾಯರ ಮಠದಲ್ಲಿ ಜು.26ರಂದು ಉಚಿತ ಆರೋಗ್ಯ ತಪಾಸಣೆ

kalpa News

kalpa News

Next Post
Mysore free Health camp in Raghavendra Swamy Mutt

Mysore | ರಾಯರ ಮಠದಲ್ಲಿ ಜು.26ರಂದು ಉಚಿತ ಆರೋಗ್ಯ ತಪಾಸಣೆ

Leave a Reply Cancel reply

Your email address will not be published. Required fields are marked *

No Result
View All Result
Kotak | creating fresh opportunities for SMEs
English Articles

Growth Is No Longer Just a Bengaluru Story: Kotak

by kalpa News
July 24, 2026
0

Kalpa Media House  | Bangaluru | Karnataka, one of India's most vibrant SME markets, is home to more than 8.5...

Read moreDetails
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL