ಶಿವಮೊಗ್ಗ: ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂಬುದನ್ನು ಶಿವಮೊಗ್ಗದ ಹಿರಿಯ ನಾಗರಿಕ ದೇಶಕ್ಕೇ ಸಾರಿ ಹೇಳಿದ್ದಾರೆ.
90 ವರ್ಷ ವಯಸ್ಸಿನ ಹಿರಿಯ ನಾಗರಿಕ ರಾಮಕೃಷ್ಣಪ್ಪನವರು ಅನಾರೋಗ್ಯದಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮತದಾನದ ಹಿನ್ನೆಲೆಯಲ್ಲಿ ತಮ್ಮ ಮತ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು ಎಂಬ ಕಾರಣದಿಂದ ಆಂಬುಲೆನ್ಸ್’ನ ಸ್ಟೆಚರ್’ನಲ್ಲಿ ಆಗಮಿಸಿ ಮತ ಚಲಾವಣೆ ಮಾಡಿದರು.
ವೆಂಕಟೇಶ ನಗರದ 9ನೆಯ ವಾರ್ಡ್ ಮತಗಟ್ಟೆ ಸಂಖ್ಯೆ 280 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಂಬುಲೆನ್ಸ್’ನಲ್ಲಿ ಆಗಮಿಸಿದ ಅವರು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಿದರು.
ಪಾಲಿಕೆಯ ಸದಸ್ಯ ನಾಗರಾಜ್ ಕಂಕಾರಿ ಹಾಗೂ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಆರ್. ಕಿರಣ್ ಸಹಾಯ ಮಾಡಿದರು.
Discussion about this post