No Result
View All Result
Bengaluru Banaswadi MEMU Shed GM Inspection
English Articles

SWR : GM Reviews MEMU Operations and Infrastructure at Banaswadi

by kalpa News
September 12, 2026
0

Kalpa Media House  |  Bengaluru  | South Western Railway (SWR) General Manager P. Ananth conducted a detailed review of MEMU...

Read moreDetails
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
  • Advertise With Us
  • Grievances
  • About Us
  • Contact Us
Saturday, September 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕರಾವಳಿಗರ ಕನಸಿನ ಕಲೆ ಯಕ್ಷಗಾನದ ಕೂಸು ‘ಶ್ವೇತಾ ಪೂಜಾರಿ’

kalpa News by kalpa News
June 17, 2019
in Special Articles
0
ಕರಾವಳಿಗರ ಕನಸಿನ ಕಲೆ ಯಕ್ಷಗಾನದ ಕೂಸು ‘ಶ್ವೇತಾ ಪೂಜಾರಿ’
Share on FacebookShare on TwitterShare on WhatsApp

ಕರಾವಳಿಯಲ್ಲಿ ಮನೆಮಾತಾಗಿರುವ ಕಲಾವಿದೆ ಶ್ವೇತಾ ಪೂಜಾರಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಆರಂಭದಲ್ಲಿಯೇ ಶುಭ ಕೋರುವ ಮೂಲಕ ಇವರ ಹುಟ್ಟು ಹಬ್ಬದ ಈ ಶುಭದಿನದಂದು, ಯಕ್ಷಗಾನ ಲೋಕದ ಯುವ ಮಹಿಳಾ ಪ್ರತಿಭೆಯಾದ ಇವರ ಕಿರು ಪರಿಚಯ ಮಾಡಲು ಬಯಸುತ್ತೇನೆ.


ಯಕ್ಷಗಾನ ಕರಾವಳಿ ಕನ್ನಡಿಗರ ಕನಸಿನ ಕಲೆ. ಯಕ್ಷಗಾನ ಕಡಲ ಮಕ್ಕಳ ಕಲ್ಪನೆಯ ಕೂಸು. ಕನ್ನಡದ ಕಂಪು ಇಂಪುಗಳನ್ನು ಕಡಲಾಚೆಗೆ ಪಸರಿಸಿದ ಪರಮ ಶ್ರೇಷ್ಟ ಕಲೆ ಯಕ್ಷಗಾನ. ಕರಾವಳಿ ಭಾಗದಲ್ಲಿ ಯಕ್ಷಗಾನ ಕಲೆ ಜನ ಮಾನಸದಲ್ಲಿ ಒಂದು ಮನೋರಂಜನಾ ಕಲೆಯಾಗದೆ ಜೀವನ ಸಂದೇಶವನ್ನು ತಿಳಿಸುವ ಮಹೋನ್ನತ ಕಲೆ ಎಂದರೆ ತಪ್ಪಾಗಲಾರದು.


ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ತಲಾ ತಲಾಂತರಗಳಿಂದಲು ಯಕ್ಷಗಾನ ಗಂಡುಕಲೆಯೆಂದು ಪ್ರಸಿದ್ಧಿ ಗಳಿಸಿದೆ. ಆದರೆ ಈಗ ಪುರುಷರಷ್ಟೇ ಮಹಿಳೆಯರು ಕೂಡ ಯಕ್ಷಗಾನದಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿರುವುದು ಗಮನಾರ್ಹ ವಿಷಯ. ಮಂಗಳೂರಿನ ಸಮೀಪದ ಮಲ್ಲೂರಿನ ನಿವಾಸಿಗಳಾದ ಶೀನಾ ಪೂಜಾರಿ ಮತ್ತು ಶಾಂತ ದಂಪತಿಗಳ ಪುತ್ರಿ ಶ್ವೇತಾ ಪೂಜಾರಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲ ಹೊತ್ತ ಯುವ ಕಲಾವಿದೆ. ಶ್ವೇತಾ ತಾವು 10ನೆಯ ತರಗತಿ ಇರುವಾಗ ಮೊದಲ ಬಾರಿ ಯಕ್ಷಗಾನದಲ್ಲಿ ಗೆಜ್ಜೆಕಟ್ಟಿ ರಂಗಪ್ರವೇಶ ಮಾಡಿದರು.


ದೇವದಾಸ್ ಅರ್ಕುಲ ಎನ್ನುವವರಿಂದ ಯಕ್ಷಗಾನದ ಹೆಜ್ಜೆ ಕಲಿತು, ಸತೀಶ್ ಮಡಿವಾಳ ಕಾರ್ಕಳ ಇವರಿಂದ ಅಭಿನಯ ನಾಟ್ಯವನ್ನು ಅಭ್ಯಾಸ ಮಾಡಿ, ರಕ್ಷಿತ್ ಶೆಟ್ಟಿ ಪಡ್ರೆ ಇವರ ಮಾರ್ಗದರ್ಶನದಲ್ಲಿ ರೂಪುಗೊಂಡ ಕಲಾವಿದೆ ಶ್ವೇತಾ ಪೂಜಾರಿ. ಯಕ್ಷಗಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬೇಕು ಯಕ್ಷಾಗಾನಕ್ಕೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಉದ್ದೇಶವನ್ನು ಹೊತ್ತು ಬೆಳೆಯುತ್ತಿರುವ ಮಹಿಳಾ ಪ್ರತಿಭೆ ಶ್ವೇತಾ ಪೂಜಾರಿ.


ಒಂದು ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಶ್ವೇತಾ ತಮ್ಮ ವೃತ್ತಿಯ ಜೊತೆಗೆ ಶ್ರೀ ಸುಬ್ರಹ್ಮಣ್ಯ ಯಕ್ಷನಾಟ್ಯ ಕಲಾ ಕೇಂದ್ರ ತಕಧಿಮಿ ತಂಡ ಗುರುಪುರ ಕೈಕಂಬ ಇದರ ಸದಸ್ಯೆಯಾಗಿ ಯಕ್ಷಗಾನ ಪ್ರದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಲಕ್ಷ್ಮೀ, ದೇವಿ, ವಿಷ್ಣು, ದೇವೇಂದ್ರ, ಈಶ್ವರ ಹೀಗೆ ಹಲವಾರು ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಶ್ವೇತಾ ಅವರಿಗೆ ಸುದರ್ಶನ ವಿಜಯ ಪ್ರಸಂಗದಲ್ಲಿ ನಿರ್ವಹಿಸದ ಲಕ್ಷ್ಮಿಯ ಪಾತ್ರ ಅತೀ ಹೆಚ್ಚು ಜನಪ್ರಿಯತೆಯನ್ನು ತಂದು ಕೊಟ್ಟಿತು.


ಪ್ರಾರಂಭದಲ್ಲಿ ಶ್ವೇತಾ ಅವರಿಗೆ ಅವರ ತಂದೆ ತಾಯಿ ಯಕ್ಷಗಾನಕ್ಕೆ ಹೋಗುವುದಕ್ಕೆ ಬೆಂಬಲವನ್ನು ನೀಡಲಿಲ್ಲ. ಆದರೆ ಶ್ವೇತಾ ಒಂದೆರಡು ಪ್ರದರ್ಶನದಲ್ಲೇ ತಮ್ಮ ನೃತ್ಯ ಹಾಗೂ ಅಭಿನಯದ ಮೂಲಕ ಜನರನ್ನು ಆಕರ್ಷಿಸತೊಡಗಿದರು. ಮಗಳ ಕಲಾ ಪ್ರೇಮದ ಬಗ್ಗೆ ಊರಿನ ಜನರು ಹೆಮ್ಮೆಯಿಂದ ಮಾತನಾಡುವುದನ್ನು ನೋಡಿ ಶ್ವೇತಾ ಅವರ ತಂದೆ ಮಗಳ ಯಕ್ಷಗಾನ ಹವ್ಯಾಸಕ್ಕೆ ಬೆಂಬಲವನ್ನು ನೀಡುತ್ತಾರೆ. ಶ್ವೇತಾ ತಮ್ಮ ಮನೆಯ ಸಮೀಪದಲ್ಲಿ ಎಲ್ಲೇ ಯಕ್ಷಗಾನ ಕಾರ್ಯಕ್ರಮ ನಡೆಯುತ್ತಿದ್ದರೂ ಇಡೀ ರಾತ್ರಿ ನಿದ್ದೆಬಿಟ್ಟು ಯಕ್ಷಗಾನವನ್ನು ವೀಕ್ಷಿಸಿ ನಾನು ಕೂಡ ಅವರಂತೆ ನಟಿಸಬೇಕು ಎಂದು ಕನಸು ಕಾಣುತ್ತಾ ಪರಿಶ್ರಮ ಪಟ್ಟು ಬೆಳೆದ ಹುಡುಗಿ.


ಹೀಗೆ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಯ ಅಂಬೆಗಾಲಿಡುತ್ತಿರುವ ಕುಮಾರಿ ಶ್ವೇತಾ ಪೂಜಾರಿ ಇವರಿಗೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮಾಡಿ ಗೌರವಿಸಲಾಗಿದೆ. ಯಕ್ಷಗಾನದಲ್ಲಿ ನಾನು ಮಾಡಿರುವ ಸಾಧನೆ ಕೇವಲ ಹತ್ತು ಶೇಕಡಾ ಅಷ್ಟೇ, ಇನ್ನು ತೊಂಬತ್ತು ಶೇಕಡಾ ಸಾಧನೆ ಮಾಡಲು ಬಾಕಿಯಿದೆ ಎನ್ನುವುದು ಶ್ವೇತಾ ಅವರ ಮನದಾಳದ ಮಾತುಗಳು.


ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಯುವ ಮಹಿಳಾ ಪ್ರತಿಭೆ ಶ್ವೇತಾ ಪೂಜಾರಿ ಅವರು ಇವತ್ತು ತಮ್ಮ ಹುಟ್ಟು ಹಬ್ಬವನ್ನು ಆಚರಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸುವುದರೊಂದಿಗೆ ನಿಮ್ಮ ಮುಂದಿನ ಜೀವನ ಸುಖವಾಗಿರಲಿ ಎಂದು ಆಶಿಸುತ್ತೇನೆ.


ಯುವ ಜನತೆ ಯಕ್ಷಗಾನ ಕ್ಷೇತ್ರದಿಂದ ವಿಮುಖರಾಗುತ್ತಿರುವ ಹೊತ್ತಿನಲ್ಲಿ ಯಕ್ಷಗಾನ ರಂಗಕ್ಕೆ ಸ್ವಇಚ್ಛೆಯಿಂದ ಬಂದು ಯಕ್ಷರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ನಿಮ್ಮ ಮೇಲೆ ಯಕ್ಷಮಾತೆಯ ಆಶೀರ್ವಾದ ಸದಾ ಇರಲಿ ಎಂದು ಕಲಾಭಿಮಾನಿಗಳ ಪರವಾಗಿ ವಿನಂತಿಸುತ್ತೇನೆ.

ಲೇಖನ: ಗೌರೀಷ್ ಆವರ್ಸೆ
ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Tags: birthdayCoastal ArticleKannada ArticleShweta PoojarySpecial Articlewoman's talentYakshaganaಕರಾವಳಿಮಹಿಳಾ ಪ್ರತಿಭೆಯಕ್ಷಗಾನಯಕ್ಷನಾಟ್ಯಯಕ್ಷಮಾತೆಶ್ವೇತಾ ಪೂಜಾರಿ
Share365Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ: ಬಿಎಸ್‌ವೈ-ಬಿವೈಆರ್ ಕ್ಷೇತ್ರಕ್ಕೆ ಬಾರದಂತೆ ನಿರ್ಬಂಧಕ್ಕೆ ಅಪ್ಪಾಜಿ ನಿರ್ಧಾರ

Next Post

ಪಾಕ್ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಜಯಕ್ಕೆ ದೇಶದಲ್ಲಿ ಸಂಭ್ರಮ

kalpa News

kalpa News

Next Post
ಪಾಕ್ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಜಯಕ್ಕೆ ದೇಶದಲ್ಲಿ ಸಂಭ್ರಮ

ಪಾಕ್ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಜಯಕ್ಕೆ ದೇಶದಲ್ಲಿ ಸಂಭ್ರಮ

Leave a Reply Cancel reply

Your email address will not be published. Required fields are marked *

No Result
View All Result
Bengaluru Banaswadi MEMU Shed GM Inspection
English Articles

SWR : GM Reviews MEMU Operations and Infrastructure at Banaswadi

by kalpa News
September 12, 2026
0

Kalpa Media House  |  Bengaluru  | South Western Railway (SWR) General Manager P. Ananth conducted a detailed review of MEMU...

Read moreDetails
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL