Wednesday, June 18, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಮಹಾಬಲ ಪಾತ್ರ ಪ್ರಪಂಚದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

August 9, 2019
in Special Articles
0 0
0
Share on facebookShare on TwitterWhatsapp
Read - 3 minutes

ನಾನು ನನ್ನ ಬಾಲ್ಯದಲ್ಲಿ ಅತಿಹೆಚ್ಚು ಕೃಷ್ಣಾರ್ಜುನ ಜೋಡಿಗಳನ್ನು ನೋಡಿದ್ದು ಶಿವರಾಮ ಹೆಗಡೆ – ಮಹಾಬಲ ಹೆಗಡೆಯವರದು. ಆಗೆಲ್ಲ ಶಿವರಾಮ ಹೆಗಡೆಯವರ ಅರ್ಜುನ, ಮಹಾಬಲರ ಕೃಷ್ಣ. ಮುಂದಿನ ಹಂತದಲ್ಲಿ ಮಹಾಬಲರ ಅರ್ಜುನ, ಶಂಭು ಹೆಗಡೆಯವರ ಕೃಷ್ಣ. ಕುಮಾರ ಮಹಾಬಲರಾಗಿರುವತನಕವೂ ಮಹಾಬಲರದು ಕೃಷ್ಣನ ಪಾತ್ರವೇ ಜಾಸ್ತಿ. ನಾನು ಶಿವರಾಮ- ಮಹಾಬಲರ ನೂರಾರು ಜೋಡಿ ಪಾತ್ರಗಳನ್ನು ಕಂಡವನು.

ಕಂಸವಧೆಯಲ್ಲಿ ಕಂಸ – ಕೃಷ್ಣ, ಗಯ ಚರಿತ್ರೆ ಅಥವಾ ಕೃಷ್ಣಾರ್ಜುನ ಕಾಳಗದಲ್ಲಿ ಅರ್ಜುನ- ಕೃಷ್ಣ, ಕೃಷ್ಣ ಸಂಧಾನದಲ್ಲಿ ಕೌರವ – ಕೃಷ್ಣ, ಮಾಗಧ ವಧೆಯಲ್ಲಿ ಮಾಗಧ- ಕೃಷ್ಣ, ಸುಭದ್ರಾ ಕಲ್ಯಾಣದಲ್ಲಿ ಬಲರಾಮ – ಕೃಷ್ಣ, ಹೀಗೆ ಹಲವು ಪ್ರಸಂಗಗಳಲ್ಲಿ ಈ ಜೋಡಿ ಹೆಸರು ಗಳಿಸಿದ್ದು, ಜನಪ್ರಿಯವಾದದ್ದು.

ಆಗೆಲ್ಲ ಮಹಾಬಲರಿಗೆ ನೃತ್ಯದ ಕಡೆಗೆ ಹೆಚ್ಚು ಒಲವಿತ್ತು. ಕೃಷ್ಣ ಇರಲಿ, ಸುಧನ್ವನಿರಲಿ, ಬಭ್ರುವಾಹನ, ವೃಷಕೇತುವಿರಲಿ ಕುಣಿದು ಹುಡಿ ಹಾರಿಸುತ್ತಿದ್ದರು. ಮೂಡಕಣಿ ನಾರಾಯಣ ಹೆಗಡೆಯವರಲ್ಲಿ ನೃತ್ಯಾಭಿನಯವನ್ನು ವಿಶೇಷವಾಗಿ ಅಭ್ಯಸಿಸಿದ ಮಹಾಬಲರು ಹಲವು ಅಪರೂಪದ ನೃತ್ಯಗಳನ್ನು ಪ್ರದರ್ಶಿಸಬಲ್ಲವರಾಗಿದ್ದರು. ಅಂತಹ ಕೆಲವನ್ನು ನೋಡುವ ಅದೃಷ್ಟ ನನ್ನದಾಗಿತ್ತು. ವಿಶೇಷವಾಗಿ ಕೃಷ್ಣ ಮತ್ತು ಸುಧನ್ವ ಪಾತ್ರಗಳಲ್ಲಿ ಅವರ ನೃತ್ಯವೈಭವನ್ನು ಕಾಣಬಹುದಾಗಿತ್ತು. ಅವರಲ್ಲಿ ಕೆಲ ವಿಶಿಷ್ಟ ರಾಗತಾಳ ಹೆಜ್ಜೆಗಳ ಸಂಗ್ರಹ ಇದ್ದರೂ ಅದು ಹೊರಗೆ ಬರುತ್ತಿದ್ದುದು ಯಾವಾಗಲೋ ಒಮ್ಮೆಯಾಗಿತ್ತು.

ಅವರೇ ಹೇಳುವ ಹಾಗೆ- ನನಗೆ ಯಕ್ಷಗಾನ ನೃತ್ಯದ ಹಲವು ಹಳೆಯ ಪ್ರಕಾರಗಳು ಗೊತ್ತು. ಆ ನೃತ್ಯಗಳನ್ನು ರಂಗಕ್ಕೆ ತಂದರೆ ಇಂದಿನ ಭಾಗವತರು ತಾಳ ಹಾಕಲಾರರು. ಮೃದಂಗ ಬಾರಿಸುವವರು ಸುಮ್ಮನೇ ಕುಳಿತಾರು. ಈ ದೃಷ್ಟಿಯಿಂದ ಇಂದಿನ ಯಕ್ಷಗಾನ ರಂಗಕ್ಕೆ ನಾನು ಯಾರು ಎನ್ನುವದೇ ಗೊತ್ತಿಲ್ಲ
ಇದು ಅವರ ಅಹಂ ಅಲ್ಲ, ಆತ್ಮವಿಶ್ವಾಸದ ಮಾತು. ಅಷ್ಟೊಂದು ಆಳವಾಗಿ ಅವರು ಯಕ್ಷಗಾನದ ಎಲ್ಲ ಅಂಗೋಪಾಂಗಗಳ ಅಭ್ಯಾಸ ಮಾಡಿದವರಾಗಿದ್ದರು. ಅನೇಕ ಸಲ ಅವರ ಮಾತುಗಳು ನಮ್ಮ ಇತರ ಕಲಾವಿದರಿಗೆ ಅಪ್ರಿಯವೆನಿಸುತ್ತಿದ್ದವು. ಆದರೆ ಅವರು ಎಲ್ಲರಿಗೂ ಪ್ರಿಯವಾಗಲೆಂದು ಸುಳ್ಳು ಹೇಳುತ್ತಿರಲಿಲ್ಲ. ಕಲೆ ಮತ್ತು ಕಲಾವಿದರ ಹಿತವನ್ನು ಬಯಸಿಯೇ ಅವರು ಅಪ್ರಿಯ ಸತ್ಯವನ್ನು ಹೇಳುತ್ತಿದ್ದುದು.

ಕೃಷ್ಣಾರ್ಜುನ ಕಾಳಗದಲ್ಲಿ ಅರ್ಜುನನಿಗಿದ್ದಷ್ಟು ಮಹತ್ವ ಕೃಷ್ಣನಿಗಿಲ್ಲವಾದರೂ ಮಹಾಬಲರು ತಮ್ಮ ನೃತ್ಯಾಭಿನಯ, ವಾಕ್ ಸಾಮರ್ಥ್ಯದಿಂದ ಆ ಪಾತ್ರಕ್ಕೆ ಮಹತ್ವ ತಂದುಕೊಡುತ್ತಿದ್ದರು. ಶಿವರಾಮ ಹೆಗಡೆಯವರಂತಹ ಅಭಿಜಾತ ಕಲಾವಿದರ ಎದುರು ತಮ್ಮ ಅಸ್ತಿತ್ವವನ್ನು ಕಾಣಿಸಿಕೊಳ್ಳುವದು ಅಷ್ಟು ಸುಲಭವಲ್ಲ. ಕೃಷ್ಣನ ಪಾತ್ರಕ್ಕೆ ಆ ಕಾಲದಲ್ಲಿ ಬಹಳ ಪ್ರಸಿದ್ಧರಾಗಿದ್ದ ಮೂಡಕಣಿ ನಾರಾಯಣ ಹೆಗಡೆಯವರೇ ಮಹಾಬಲರಿಗೂ ಸ್ಫೂರ್ತಿ ಮತ್ತು ಪ್ರೇರಣೆ. ಒಂದು ರೀತಿಯಲ್ಲಿ ಅವರ ಶಿಷ್ಯರೂ ಹೌದು.

ಮಹಾಬಲರ ಮೇಲೆ ಕುಮಾರವ್ಯಾಸ ಭಾರತ , ಜೈಮಿನಿ ಭಾರತಗಳ ಪ್ರಭಾವವೂ ಬಹಳ ಆಳವಾಗಿ ಬಿದ್ದಿದ್ದರಿಂದ ಕೃಷ್ಣನ ವ್ಯಕ್ತಿತ್ವವನ್ನು ಹಲವು ಮಗ್ಗುಲುಗಳಿಂದ ನೋಡಬಲ್ಲವರಾಗಿದ್ದರು. ಮೂಲತಃ ಯಕ್ಷಗಾನದಲ್ಲಿ ಶ್ರೀ ಕೃಷ್ಣನ ಪಾತ್ರನೃತ್ಯಾಭಿನಯಗಳಿಗೆ ಧಾರಾಳ ಅವಕಾಶವನ್ನು ನೀಡುವಂತಹದು. ಅದರೊಡನೆಯೇ ತಮ್ಮ ಮಾತುಗಾರಿಕೆ, ಹಾಡುಗಾರಿಕೆಗಳ ಬಲವನ್ನೂ ಹೊಂದಿದ್ದ ಮಹಾಬಲರು ಶ್ರೀಕೃಷ್ಣನ ಪಾತ್ರಕ್ಕೆ ಹೇಳಿ ಮಾಡಿಸಿದವರಾಗಿದ್ದರು ಎಂದರೂ ನಡೆದೀತು.

ಮಹಾಬಲರು ಕೃಷ್ಣಾರ್ಜುನಕಾಳಗ, ಕೃಷ್ಣಸಂಧಾನ, ಭೀಷ್ಮಪರ್ವ, ಮಾಗಧ ವಧೆ, ಸುಭದ್ರಾ ಕಲ್ಯಾಣ, ಕಂಸವಧೆ, ಶ್ರೀಕೃಷ್ಣ ವಿವಾಹ, ಜಾಂಬವತಿ ಪರಿಣಯ, ಮೊದಲಾದ ಪ್ರಸಂಗಗಳಲ್ಲೆಲ್ಲ ಕೃಷ್ಣನಾಗಿ ಅಭಿನಯಿಸಿದವರು.

ಮಹಾಬಲರು ಶಿವರಾಮ ಹೆಗಡೆಯವರ ಪಾತ್ರಗಳಲ್ಲಿ ಹೆಚ್ಚು ಮೆಚ್ಚಿಕೊಂಡಿದ್ದು ಮಾಗಧನ ಪಾತ್ರ. ಆ ಮಾಗಧನಿಗೆದುರಾಗಿ ಕೃಷ್ಣನ ಪಾತ್ರ ನಿರ್ವಹಿಸಲು ಎಂಟೆದೆಯೇ ಬೇಕು. ತಮ್ಮ ಹದಿನಾಲ್ಕನೆಯ ವಯಸ್ಸಿನಿಂದಲೇ ಶಿವರಾಮ ಹೆಗಡೆಯವರ ಎದುರು ಪಾತ್ರ ನಿರ್ವಹಿಸುತ್ತ ಬಂದ ಮಹಾಬಲರು ಯಾವ ಪಾತ್ರವನ್ನು ಬೇಕಾದರೂ ನಿರ್ವಹಿಸಬಲ್ಲ ಸಮರ್ಥರು. ಚಾಣಾಕ್ಷಮತಿ ಕೃಷ್ಣನಾಗಿ ಅವರು ಮಾಗಧನಿಗೆ ಸರಿಸಮನಾಗಿ ಕಾಣಿಸಿಕೊಳ್ಳುತ್ತಾರೆ.

ಮಹಾಬಲರ ಕೃಷ್ಣ ವಿಷಯಲಂಪಟನಲ್ಲ. ಆತ ಮುತ್ಸದ್ದಿ. ಬುದ್ಧಿವಂತ. ಸಂದರ್ಭಕ್ಕೆ ತಕ್ಕಂತೆ ಚತುರೋಪಾಯ ಮಾಡಬಲ್ಲ ಚತುರ.

ಸುಭದ್ರಾ ಕಲ್ಯಾಣದಲ್ಲಿ ಬಲರಾಮನೊಂದಿಗೆ ಕೃಷ್ಣ ನಡೆಸುವ ಸಂಭಾಷಣೆ ಹುಡುಗಾಟಿಗೆ, ಲಘು ಹಾಸ್ಯದೊಂದಿಗೆ ಕೂಡಿದ್ದರೂ ಅದು ಕೆಳಮಟ್ಟಕ್ಕೆ ಬರದಂತೆ ನೋಡಿಕೊಳ್ಳುವದು ವಿಶೇಷ. ಶಿವರಾಮ ಹೆಗಡೆ- ಮಹಾಬಲರ ಬಲರಾಮ – ಕೃಷ್ಣರ ಜೋಡಿಯ ಹಾಗೆಯೇ ಮಹಾಬಲ – ಶಂಭು ಹೆಗಡೆಯವರ ಬಲರಾಮ – ಕೃಷ್ಣರ ಜೋಡಿಯೂ ತುಂಬ ಜನಪ್ರಿಯ.

ಲೇಖನ: ಲಕ್ಷ್ಮೀನಾರಾಯಣ ಶಾಸ್ತ್ರಿ, ನಾಜಗಾರ, ಬೆಳಗಾವಿ

(ಮುಂದಿನದು – ಅರ್ಜುನ)

Tags: Kannada ArticleKeremane Shambu HegdeMahabala Paatra PrapanchaYakshaganaಕೃಷ್ಣಾರ್ಜುನಕೆರೆಮನೆ ಶಂಭು ಹೆಗಡೆಮಹಾಬಲ ಪಾತ್ರ ಪ್ರಪಂಚಮಹಾಬಲ ಹೆಗಡೆಯಕ್ಷಗಾನ ನೃತ್ಯಶಿವರಾಮ ಹೆಗಡೆ
Previous Post

ಶ್ರೀ ಮಹಾಲಕ್ಷ್ಮಿಯ ಮಹೋನ್ನತಿ: ಲಕ್ಷ್ಮಿಯ ಆವಾಸ ಸ್ಥಾನಗಳಾವುವು ಗೊತ್ತಾ?

Next Post

ನೆರೆ ಹಾನಿಯಿಂದ ರಕ್ಷಿಸಲು ಶ್ರೀರಾಮದೇವರ ಮೊರೆ ಹೋದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ನೆರೆ ಹಾನಿಯಿಂದ ರಕ್ಷಿಸಲು ಶ್ರೀರಾಮದೇವರ ಮೊರೆ ಹೋದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025

“ಎಡಗೈಯೇ ಅಪಘಾತಕ್ಕೆ ಕಾರಣ” ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ: ನಿರ್ಮಾಪಕ ರಾಜೇಶ್ ಕೀಳಂಬಿ ಸಂತಸ

June 18, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

File Image

ಬಿಜೆಪಿ ನಾಯಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

June 18, 2025

ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ: ಸಚಿವ ದಿನೇಶ್ ಗುಂಡೂರಾವ್

June 18, 2025

ವಿದ್ಯುತ್ ಪ್ರಸರಣ ಇಲಾಖೆಯಲ್ಲಿ ಖಾಲಿ ಇರುವ 35000 ಸಾವಿರ ಹುದ್ದೆಗಳ ಭರ್ತಿ: ಸಿಎಂ

June 18, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!