No Result
View All Result
Kotak | creating fresh opportunities for SMEs
English Articles

Growth Is No Longer Just a Bengaluru Story: Kotak

by kalpa News
July 24, 2026
0

Kalpa Media House  | Bangaluru | Karnataka, one of India's most vibrant SME markets, is home to more than 8.5...

Read moreDetails
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
  • Advertise With Us
  • Grievances
  • About Us
  • Contact Us
Friday, July 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಪಿತೃಕಾರ್ಯ ಮಾಡದಿದ್ದರೆ ಎಂತಹ ಶಾಪವಿದೆ? ಯಾರದ್ದೆಲ್ಲಾ ಋಣಗಳಿರುತ್ತವೆ ಗೊತ್ತಾ?

ತಜ್ಞ ಪುರೋಹಿತರ ಅನುಕ್ರಮಣಿಕೆ ಅಗತ್ಯ

kalpa News by kalpa News
September 23, 2019
in Army
0
ಪಿತೃಕಾರ್ಯ ಮಾಡದಿದ್ದರೆ ಎಂತಹ ಶಾಪವಿದೆ? ಯಾರದ್ದೆಲ್ಲಾ ಋಣಗಳಿರುತ್ತವೆ ಗೊತ್ತಾ?
Share on FacebookShare on TwitterShare on WhatsApp

ಪಿತೃ ಪಕ್ಷ ಬಂತೆಂದರೆ ಕಾಗೆಗಳದ್ದೇ ನೆನಪಾಗುವುದು. ಕನ್ಯಾ ಮಾಸದ ಬಹುಳವು ಪಿತೃಪಕ್ಷ ಮಹಾಲಯ ಶ್ರಾದ್ಧದ ಪಕ್ಷ. ರವಿ ಚಂದ್ರರು ಬಹಳ ಹತ್ತಿರ ಬರುವ ಇದೊಂದು ಖಗೋಳ ನಿಯಮ. ರವಿಚಂದ್ರರ ಮದ್ಯೆ ಇರುವ ಅವಕಾಶ, ಆಕಾಶ (space spectrum) ಸ್ವರ್ಗ ಲೋಕವಾಗುತ್ತದೆ. ಗತಿಸಿದವರು ಕಾಯ ಬಿಟ್ಟು ಊರ್ಧ್ವ ಲೋಕ ಪ್ರಯಾಣ ಮಾಡುತ್ತಾರೆ. ಇದರಲ್ಲಿ ಬೇರೆ ಬೇರೆ ಯಾನ ಮಾರ್ಗಗಳಿವೆ. ಇಲ್ಲಿ ಪಿತೃಯಾನ ಮಾರ್ಗ ವಿಶೇಷವನ್ನು ತಿಳಿಸುತ್ತಿದ್ದೇನೆ.

ಮನುಷ್ಯನ ಮೃತಿಯ ನಂತರ ನಮ್ಮ ವೇದೋಕ್ತ ಸಂಪ್ರದಾಯಾನುಸಾರ ಔರ್ಧ್ವ ದೈಹಿಕ ಸಂಸ್ಕಾರಗಳಾಗಬೇಕು. ಇದರಲ್ಲಿ ಅಗ್ನಿ ದಗ್ಧ ಮತ್ತು ಅನಗ್ನಿದಗ್ಧ ಎಂಬ ಎರಡು ರೂಪಗಳಿವೆ. ಅಂದರೆ ದಹನ ಅಥವಾ ದಫನ ಕ್ರಿಯೆ. ಸುಮನೆ ಕಳೇಬರವನ್ನು ಸುಟ್ಟರೆ, ಹೂತರೆ ಕೇವಲ dispose ಆಗುತ್ತದೆಯಷ್ಟೆ. ಅದಕ್ಕೆ ಸಂಬಂಧಿಸಿದ ಸಂಸ್ಕಾರ ಕ್ರಿಯೆಗಳ ಮೂಲಕ ಗತಿಸಿದ ಕಾಯಗಳಿಗೆ ವ್ಯವಸ್ಥೆ ಆಗಬೇಕು.

ಲೌಕಿಕಾಗ್ನಿಯಲ್ಲಿ ದಹಿಸಿದ ನಂತರ ದಶದಿನಗಳಲ್ಲಿ ತರ್ಪಣಾದಿಗಳು ನಡೆಯಬೇಕು. ಹತ್ತನೇ ದಿನ ಧರ್ಮೋದಕ, ಹನ್ನೊಂದನೆಯ ದಿನ ವೃಷಸರ್ಗ ಹೋಮದ ಮೂಲಕ ಏಕೋದ್ಧಿಷ್ಟ ಶ್ರಾದ್ಧ, ಹನ್ನೆರಡನೆಯ ದಿನ ಸಪಿಂಡೀಕರಣಾದಿಗಳು ನಡೆಯುತ್ತದೆ. ಈ ಮಧ್ಯ ಮೃತನ ಯಾನದ ಪ್ರೀತ್ಯರ್ಥ ದಾನ ಕರ್ಮಾದಿಗಳು ಇವೆ. ಹದಿಮೂರನೆಯ ದಿನ ವೈಕುಂಠ ಸಮಾರಾಧನೆ ಮಾಡಿ ಮಂತ್ರಾಕ್ಷತೆ ನಡೆಯುತ್ತದೆ. ಇಲ್ಲಿಗೆ ಗತಿಸಿದವರ ಮೊದಲ ಹಂತದ ಯಾನ ಪ್ರಕ್ರಿಯೆ ಮುಗಿಯುತ್ತದೆ.

ನಂತರ 27, 30, 40 ನೆಯ ದಿನಗಳಲ್ಲಿ ಪಿಂಡ ಪ್ರಧಾನ ಸಹಿತ ಮಾಸಿಕಗಳು ನಡೆದು, ನಂತರ ಪ್ರತೀ ತಿಂಗಳೂ ಮಾಸಿಕ ಶ್ರಾದ್ಧ ನಡೆಯುತ್ತದೆ. ಗತಿಸಿದ ಒಂದು ವರ್ಷ ಪೂರ್ಣವಾಗುವಾಗ ಮೃತರ ಉದ್ಧಿಷ್ಯ ವರ್ಷಾಂತಿಕ ನಡೆಯುತ್ತದೆ. ಪಿತೃಗಳ ಒಂದು ದಿವಸ ನಮಗೆ ಒಂದು ವರ್ಷ ಲೆಕ್ಕಾಚಾರ. ಇಷ್ಟು ಸಂಸ್ಕಾರ ನಡೆದ ಬಳಿಕ ಸಾಂವತ್ಸರಿಕ ಶ್ರಾದ್ಧ ಮಾಡಬೇಕು. ಇದರ ಜತೆಗೆ ಈ ಕನ್ಯಾಮಾಸದ ಬಹುಳ ಪಕ್ಷದಲ್ಲಿ ಮಹಾಲಯ ಶ್ರಾದ್ಧವನ್ನು ಮಾಡುತ್ತಾರೆ.

ಯಾರು ಮಾಡಬೇಕು:
ಲೆಕ್ಕ ಪ್ರಕಾರದಲ್ಲಿ ಅರ್ಹತೆಯುಳ್ಳವರು ಪ್ರತಿಯೊಬ್ಬರೂ ಮಾಡಬೇಕು. ಅದು ಸಾಧ್ಯವಾದರೆ ತಾಯಿ ಬದಲಾದ ಹಾಗೆ ಆ ವ್ಯಕ್ತಿಯು ಮಾಡಲೇ ಬೇಕು. ಅಂದರೆ ಒಂದು ತಾಯಿಯಲ್ಲಿ ನಾಲ್ಕು ಗಂಡು ಮಕ್ಕಳಿದ್ದರೆ ಒಬ್ಬ ಮಾಡಿದರೂ ಉಭಯ ಕುಲ ಪಿತೃಗಳಿಗೆ ತೃಪ್ತಿಯಾಗುತ್ತದೆ. ಆ ಮಕ್ಕಳ ಮಕ್ಕಳ ಕಾಲಕ್ಕಾಗುವಾಗ ಮಾತೃ ವರ್ಗ ಬೇರೆಯಾಗುತ್ತದೆ. ಹಾಗಾಗಿ ಆ ಮೊದಲ ನಾಲ್ಕು ಗಂಡು ಮಕ್ಕಳ ಸಂತತಿಯವರಿಗೆ ಉಭಯ ಕುಲಗಳು ಬೇರೆ ಬೇರೆ ಆಗಿರುವುದರಿಂದ ಅವರು ಬೇರೆ ಬೇರೆಯಾಗಿ ಮಾಡಬೇಕಾಗುತ್ತದೆ. ಆಗ ಸ್ವರ್ಗ ಸೇರಿದ ಪ್ರತಿಯೊಂದು ಪಿತೃಗಳಿಗೆ ತೃಪ್ತಿಯಾಗುತ್ತದೆ.

ಎಲ್ಲಿರುವರು ಪಿತೃಗಳು:
ಇಲ್ಲಿ ಮೂರು ಸ್ಥರಗಳಿವೆ. ವಸು-ರುದ್ರ-ಆದಿತ್ಯ ಎಂಬ ಮೂರು ಪಿತೃ ಪೀಠಗಳಿವೆ. ಆದಿತ್ಯದ ನಂತರ ಸ್ವರ್ಗ ಲೋಕ. ಸ್ವರ್ಗ ಲೋಕದ ಸುಖ ಅನುಭವಿಸಿದ ನಂತರ ಮರ್ತ್ಯ ಲೋಕದಲ್ಲಿ ಜನನವಾಗುವ ಕಾರಣಕ್ಕಾಗಿ, ಉತ್ತಮ ಆಯುರೋಗ್ಯ ಪೂರ್ಣ ಕಾಯ ಲಭಿಸಲಿ ಎಂದೇ ಮಾಡುವ ಶ್ರಾದ್ಧ ಕರ್ಮವಿದು. ಗತಿಸಿದ ಪಿತೃಗಳು ಇನ್ಯಾವುದೋ ಕುಟುಂಬದಲ್ಲೋ, ಅನ್ಯ ಜಾತಿಯಲ್ಲೋ, ಅನ್ಯ ಕೋಮಿನಲ್ಲೋ ಜನಿಸುವುದಿಲ್ಲ. ಅವರು ಮತ್ತೆ ಅದೇ ಕುಟುಂಬದಲ್ಲೇ ಹುಟ್ಟುತ್ತಾರೆ. ಅದಕ್ಕಾಗಿಯೇ ಇಷ್ಟೆಲ್ಲ ಸಂಸ್ಕಾರ ಮಾರ್ಗಗಳು.

ಯಾರು ಪಿತೃ ಕಾರ್ಯ ಮಾಡುವುದಿಲ್ಲವೋ ಅವರು ಪಿತೃ ಶಾಪಕ್ಕೊಳಗಾಗಿ, ಹೇಳಲಾಗದಂತಹ ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಶಾಸ್ತ್ರ ವಚನ.‘ತಸ್ಮತ್ ಶಾಸ್ತ್ರ ಪ್ರಮಾಣೇಶು’ ಎಂಬಂತೆ ನಮಗೆ ಅದು ಹೌದೋ ಅಲ್ಲವೋ, ಸತ್ಯವೋ ಸುಳ್ಳೋ ಎಂದು ವಿಮರ್ಷೆ ಮಾಡುವ ಅಧಿಕಾರವಿಲ್ಲ. ಯಾಕೆಂದರೆ ಋಷಿ ಮುನಿ ಪ್ರಾಜ್ಞರು ಏನೆಲ್ಲಾ ಸಂಶೋಧನೆ ಮಾಡಬೇಕೋ ಅದನ್ನೆಲ್ಲ ಮಾಡಿ ಶಾಸ್ತ್ರ ಮಾಡಿದ್ದಾರೆ. ಇನ್ನೇನೂ ಸಂಶೋಧನೆಗೆ ಉಳಿದಿಲ್ಲ. ಇನ್ನೇನಾದರೂ ಈ ಬಗ್ಗೆ ಹೇಳಬೇಕು ಎಂದರೆ ಅದು ಕುಹಕ ಮಾತ್ರ ಅಥವಾ ಪಾಷಂಡೀ ವಾದ ಮಾತ್ರ.

ಯಾವ ಯಾವ ಪಿತೃಗಳು ಮತ್ತು ಪಿತೃ ಲೋಕ?
ಮೊದಲನೆಯದ್ದು ಪಿತೃ
ಎರಡನೆಯದ್ದು ಪಿತಾಮಹ
ಮೂರನೆಯದ್ದು ಪ್ರಪಿತಾಮಹ.
ಅದೇ ರೀತಿ ಮಾತುಃ ಮಾತಾಮಹಿ, ಪ್ರಪಿತಾಮಹಿ ಇರುತ್ತಾರೆ. ಅಲ್ಲದೆ ಮಹಾಲಯ ಶ್ರಾದ್ಧದಲ್ಲಿ ಉಭಯ ಕುಲ ಪಿತೃಗಳೆಂದರೆ ತಾಯಿಯ ಭಾಗ.
ಮಾತಸ್ಯ ಪಿತು ಪಿತಾಮಹ ಪ್ರಪಿತಾಮಹ; ಮಾತಸ್ಯ ಮಾತು ಮಾತಾಮಹಿ ಪ್ರಪಿತಾಮಹಿ ಬರುತ್ತಾರೆ. ಇನ್ನೇನಾದರೂ ಉಳಿದಿದ್ದರೆ ಜ್ಯೇಷ್ಠಾದಿ ಕನಿಷ್ಠಾದಿ ಉಭಯ ಕುಲ ಪಿತೃ ದೇವತೆಗಳ ಒಂದು ಕ್ಷೇತ್ರಕ್ಕೂ ಪಿಂಡ ಪ್ರಧಾನವಾಗುತ್ತದೆ. ಇಷ್ಟಲ್ಲದೆ ಬಂಧುಗಳು, ರಕ್ತ ಸಂಬಂಧಿಗಳಿಗೂ ಪಿಂಡ ಇಡಬೇಕು. ಸೋದರ ಮಾವ, ಅತ್ತೆ, ಜ್ಯೇಷ್ಟ ಕನಿಷ್ಟ ಪಿತೃಗಳು, ಜ್ಯೇಷ್ಟ ಕನಿಷ್ಟ ಮಾತೃ ವರ್ಗಗಳಿಗೂ ಮಹಾಲಯದಲ್ಲಿ ಪಿಂಡ ಪ್ರಧಾನ ಆಗುತ್ತದೆ.

ಇಲ್ಲಿಗೇ ಋಣ ಮುಗಿಯೋದಿಲ್ಲ. ನಮಗಾಗಿ ಹೋರಾಡಿದ ಸೈನಿಕರು, ಸೇವಕರುಗಳಿಗೆಲ್ಲ ಪಿಂಡ ಇಡುತ್ತಾರೆ. ಅನ್ನದಾತ ರೈತನ ಋಣವೂ ಇರುತ್ತದೆ. ಅರಣ್ಯ ಯೋಧರು(forest) ನಗರ ಯೋಧರು(police) ಗೂ ಬೇರೆ ಬೇರೆ ಅರ್ಥದಲ್ಲಿ ಪಿಂಡ ಪ್ರಧಾನ ಇದೆ. ವಿದ್ಯುದಾಘಾತ(ಆಗ ಸಿಡಿಲು ಮಿಂಚಾದರೆ, ಈಗ ಕರೆಂಟ್ ಲೈನ್ ಮ್ಯಾನ್ ಎನ್ನಬಹುದು), ಸಿಂಹ ವ್ಯಾಘ್ರಗಳಿಂದ ಹತರಾದವರಿಗೆ, ಪ್ರಾಣಿ ಪಕ್ಷಿಗಳಿಗೆಲ್ಲ ಬಲಿ(ಒಂದು ರೀತಿಯ ಬಲಿ ಪಿಂಡ) ನೀಡುವ ಸಂಪ್ರದಾಯವಿದೆ. ಅಂದರೆ ನಾವೆಲ್ಲ ಅವರ ಋಣದಲ್ಲಿದ್ದೇವೆ ಎಂದರ್ಥ. ಅಲ್ಲದೆ ಅವರೆಲ್ಲರ ಉದ್ಧಾರದ ಜವಾಬ್ದಾರಿಗಳು ನಮಗಿದೆ ಎಂದರ್ಥ. ಇದು ಸತ್ಯವೋ ಸುಳ್ಳೋ ಎಂದು ಅಡ್ಡ ಮಾತನಾಡುವವರು, ಮೂಢನಂಬಿಕೆಯವರು ಒಂದು ಸಲ ಈ ಚಿಂತನೆ ಮಾಡಿ. ಇದೊಂದು ಕೃತಜ್ಞತೆ(gratitude) ಸಲ್ಲಿಸುವಂತಹ ಎಂಬಂತಹ ವಿಧಾನ(concept) ಆಗಿದೆ.

ನಿತ್ಯ ಶ್ರಾದ್ಧ, ಮಾಸಿಕ ಶ್ರಾದ್ಧ, ಸಾಂವತ್ಸರಿಕ ಶ್ರಾದ್ಧಗಳೆಂಬ ಮೂರು ವಿಧಗಳ ಸಮಾರೋಪವೇ ಸರ್ವಪಿತೃ ಮಹಾಲಯ ಶ್ರಾದ್ಧ. ಶ್ರಾದ್ಧದಲ್ಲೂ ಕ್ಷಣ ಕ್ರಿಯತಾಂ ಎಂಬ ಶಬ್ಧ ಪ್ರಯೋಗವಿದೆ. ಕ್ಷಣ ಕ್ಷಣಕ್ಕೂ ನಮ್ಮ ಪಿತೃಗಳು ತೃಪ್ತರಾದರೆ, ಮುಂದೆ ಅದೇ ಪಿತೃಗಳು ನಮ್ಮಲ್ಲಿ ಜನಿಸುತ್ತಾರೆ ಎಂಬ ನಂಬಿಕೆಯಲ್ಲ. ಇದು ಜನ್ಮಾನು ಜನ್ಮ ಪುನರ್ಜನ್ಮ ಸಿದ್ಧಾಂತ. ನಾವು ಈ ಸಂಸ್ಕಾರ ಮಾಡಲಿ ಬಿಡಲಿ, ಜನಿಸುವುದಂತೂ ನಿಶ್ಚಿತ. ಆದರೆ ಜನಿಸುವವರು ಉತ್ತಮ ಸಂಸ್ಕಾರಯುತರಾಗಿ, ಆಯುರಾಗ್ಯ ಪೂರ್ಣವಾಗಿರಲಿ ಎಂಬುದು ನಮ್ಮ ಉದ್ಧೇಶ. ಶ್ರಾದ್ಧ ಕೊನೆಯಲ್ಲಿ ಸ್ವರ್ಗಂ ಗಚ್ಛತು ಪಿತರಃ ಎಂಬ ಮಂತ್ರವಿದೆ ಮತ್ತೆ ಸ್ವರ್ಗಕ್ಕೆ ಹೋಗಿ ಎಂಬಾರ್ಥ.

ಕೊನೆಯದ್ದಾಗಿ ಕಾಗೆಯ ವಿಚಾರಕ್ಕೆ ಬರೋಣ. ಕಾಗೆ ನಾವಿಡುವ ವಾಯಸ ಬಲಿ(ಕೆಲವರು ಎಡೆ ಅಂತಾರೆ) ತಿನ್ನುವುದು ಪಿತೃಗಳೆಂದಲ್ಲ. ಅದು ಪಿತೃಗಳಿಗೆ ಸಲ್ಲಿಸಿದ ವಿಧಿವಿಧಾನಗಳ ಶೇಷವನ್ನು ವಾಯುತತ್ವದ ವಾಯಸಗಳು ತಿನ್ನಲಿ ಎಂದರ್ಥ. ಸುಪರ್ಣಂ ವಾಯಸಂ ಎಂದೇ ಕರೆದಿದ್ದಾರೆ. ಸುಪರ್ಣ ಎಂದರೆ ಗರುಡ ಎಂಬರ್ಥ ಇದ್ದರೂ, ಸುಪರ್ಣಂ ವಾಯಸಂ ಎಂದರೆ ಗಂಡು ಕಾಗೆ ಎಂದರ್ಥ. ಎಲೈ ವಾಯಸಗಳೇ ನಮ್ಮ ಪಿತೃಗಣ ಶೇಷವನ್ನು ನೀವೂ ತಿಂದು ತೃಪ್ತರಾಗಿ ಎಂದರ್ಥ.

ಯಾವ ಸಂಪ್ರದಾಯ ಪಿತೃಗಳಿಗೆ ತೃಪ್ತಿ ಪಡಿಸುವುದಿಲ್ಲವೋ ಅಂತವರೇ ಇಂದು ಐಸಿಸ್ ಮುಂತಾದ ಅಮಾನವೀಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗುತ್ತಾರೆ.

ಸ್ವರ್ಗಂ ಗಚ್ಛತು ಪಿತರಃ

Tags: Kannada ArticlePhysical burialPitru LokaPitru PakshaPrakash AmmannayaTraditionಜ್ಯೋರ್ತಿವಿಜ್ಞಾನಂದೈಹಿಕ ಸಂಸ್ಕಾರಪಿಂಡ ಪ್ರಧಾನಪಿತೃ ಪಕ್ಷಪಿತೃ ಲೋಕಪ್ರಕಾಶ್ ಅಮ್ಮಣ್ಣಾಯಮಹಾಲಯ ಅಮಾವಾಸ್ಯೆಮಾಸಿಕ ಶ್ರಾದ್ಧವಾಯಸ ಬಲಿಸಂಪ್ರದಾಯಸೈನಿಕರು
Share324Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಣೆಬೆನ್ನೂರಿಗೆ ಸಚಿವ ಈಶ್ವರಪ್ಪ ಪುತ್ರ ಕಾಂತೇಶ್ ಅಭ್ಯರ್ಥಿ? ಅಭಿಮಾನಿಗಳ ವ್ಯಾಪಕ ಒತ್ತಡ

Next Post

ಪಕ್ಷಮಾಸದ ಮಹತ್ವ: ಶ್ರಾದ್ಧ ಯಜ್ಞ ಎಂದರೇನು? ಅದರ ಮಹತ್ವ ತಿಳಿಯಲು ಮರೆಯದಿರಿ

kalpa News

kalpa News

Next Post
ಪಕ್ಷಮಾಸದ ಮಹತ್ವ: ಶ್ರಾದ್ಧ ಯಜ್ಞ ಎಂದರೇನು? ಅದರ ಮಹತ್ವ ತಿಳಿಯಲು ಮರೆಯದಿರಿ

ಪಕ್ಷಮಾಸದ ಮಹತ್ವ: ಶ್ರಾದ್ಧ ಯಜ್ಞ ಎಂದರೇನು? ಅದರ ಮಹತ್ವ ತಿಳಿಯಲು ಮರೆಯದಿರಿ

Leave a Reply Cancel reply

Your email address will not be published. Required fields are marked *

No Result
View All Result
Kotak | creating fresh opportunities for SMEs
English Articles

Growth Is No Longer Just a Bengaluru Story: Kotak

by kalpa News
July 24, 2026
0

Kalpa Media House  | Bangaluru | Karnataka, one of India's most vibrant SME markets, is home to more than 8.5...

Read moreDetails
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL