ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಾನು ಯಾಕೆ ಮೋದಿಯವರನ್ನು ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಒತ್ತಾಯಿಸುತ್ತೇನೆ ಅಂದರೆ ದೇಶದ ಹಿತಕ್ಕಾಗಿ. ದೇಶದ ಹಿತ ಬಯಸಿದ ಪ್ರಧಾನ ಮಂತ್ರಿಗಳೆಂದರೆ ಶಾಸ್ತ್ರೀ ಜೀ, ಅಟಲ್ ಜೀ ಮಾತ್ರ. ಈಗ ಅವರಿಗಿಂತಲೂ ಬಲಿಷ್ಟರು ನರೇಂದ್ರ ಮೋದಿಯವರು. ಅವರ ಪ್ರತಿಯೊಂದು ಹೆಜ್ಜೆಗಳೂ ದೇಶದ ಹಿತಕ್ಕಾಗಿಯೇ ಇವೆ.
ಮೋದಿಯವರಿಗೆ ನಡೆಯುವ ಚಂದ್ರ ದಶೆಯಲ್ಲಿ ಶುಕ್ರ ಭುಕ್ತಿ ಕಾಲ.5.5.2021 ರ ವರೆಗೆ ಈ ಭುಕ್ತಿ ನಡೆಯಲಿದೆ. ಈ ಭುಕ್ತಿ ಕಾರಕ ಶುಕ್ರನ ಚತುರ್ಥ ಕೇಂದ್ರದಲ್ಲಿ ಕುಜನು ಸರ್ಪ ದ್ರೇಕ್ಕಾಣ(ಭುಜಂಗ ದ್ರೇಕ್ಕಾಣ) ದಲ್ಲಿದ್ದು ಶುಕ್ರನ ಬಲವನ್ನು ಹೀರುತ್ತಾನೆ. ಅಂದರೆ absorb ಮಾಡುತ್ತಾನೆ. ಆಗ ಶುಕ್ರನ ಬಲ(defence) ಕಡಿಮೆಯಾಗುತ್ತದೆ. ಅಂದರೆ ಶರೀರದಲ್ಲಿ ಕಾರ್ಬೋಹೈಡ್ರೇಟ್ ಉತ್ಪತ್ತಿಯಲ್ಲಿ ವ್ಯತ್ಯಯ ಉಂಟಾಗಿ ತಲೆ ಸುತ್ತುಬಂದಂತಾಗುತ್ತದೆ. totally body imbalance ಎಂದು ಕರೆಯಬಹುದು. ಇದಕ್ಕೆಲ್ಲ ವೈದ್ಯಕೀಯ ಚಿಕಿತ್ಸೆ ಇದ್ದರೂ ಅದರ ಧಾರಣಾ ಶಕ್ತಿಗೆ ದೇವತಾ ದರ್ಶನದಿಂದ ಅನುಗ್ರಹ ಬೇಕಾಗುತ್ತದೆ. ಇಲ್ಲಿ ಸುಬ್ರಹ್ಮಣ್ಯನೇ ಆಗಬೇಕು ಯಾಕೆ? ಅಂದರೆ ವೃಶ್ಚಿಕದ ಭುಜಂಗ ದ್ರೇಕ್ಕಾಣದಲ್ಲಿ ಕುಜನು ಪೂರ್ಣ ಸುಬ್ರಹ್ಮಣ್ಯ ಸ್ವರೂಪಿ. ಅಲ್ಲದೆ ಕುಜನು ಬಾಲ್ಯಾವಸ್ಥೆಯಲ್ಲಿ( 0°) ಇರುತ್ತಾನೆ. ಆದರೆ ಸ್ವಕ್ಷೇತ್ರ ಸ್ಥಾನ ಬಲ ಇರುವುದರಿಂದ ಅವನ ಕಿರಣಗಳಿಗನುಗುಣವಾದ ಸಂಕರ್ಷಣ ಶಕ್ತಿ ಸ್ವರೂಪದ ಸುಬ್ರಹ್ಮಣ್ಯದ ದರ್ಶನಾನುಗ್ರಹ ಬೇಕಾಗುತ್ತದೆ. ಕೆಲವೊಮ್ಮೆ ನಮ್ಮ ಸ್ವಾಸ್ಥ್ಯ ರಕ್ಷಣೆಗಾಗಿ ಬೇರೆ ಬೇರೆ ಆಯಾಮಗಳಲ್ಲಿ ನೋಡಬೇಕಾಗುತ್ತದೆ. ಮುಖ್ಯವಾದದ್ದು ದೇವತಾನುಗ್ರಹ.
ಯಾವುದೇ ದಶೆ ಭುಕ್ತಿ ಕಾಲದ ಗ್ರಹನ ಚತುರ್ಥ ಸ್ಥಾನ ನೋಡಬೇಕು. ಇಲ್ಲಿ ಶುಕ್ರನು ಚತುರ್ಥ ಮುಕ್ಕಾಲು ದೃಷ್ಟಿ,ಕುಜನು ದಶಮದ ಉಪಚಯದಲ್ಲಿ(ಕಾಲು ದೃಷ್ಟಿ) ಪರಸ್ಪರ ರಷ್ಮಿ ವಿನಿಮಯ ಮಾಡಿಕೊಳ್ಳುತ್ತಾರೆ. ಆಗ ಅದು ದೇಹದ ಮೇಲೆ ಪರಿಣಾಮ ಬೀರಿ, ವ್ಯವಹಾರದ ಮೇಲೂ ತೊಂದರೆಯಾಗುತ್ತದೆ. ಆಗ ನಾವು ಕೃತಕ ಬಲ ಪಡೆಯಬೇಕಾಗುತ್ತದೆ. ಹೇಗೆ ಔಷದೋಪಚಾರದಿಂದ ಪಡೆಯುತ್ತೇವೆಯೋ ಹಾಗೆ.
ಇಂತಹ ಬಲ ಪಡೆದುಕೊಂಡಾಗ ಉತ್ಸಾಹ ಕುಗ್ಗುವುದಿಲ್ಲ. ಇಲ್ಲವಾದರೆ ‘ಎಷ್ಟು ಮಾಡಿದರೂ ಇಷ್ಟೇಯ’ ಎಂಬ ಮನಸ್ಸು ಬಂದು ಬಿಡುತ್ತದೆ. ಆಗ ನಮ್ಮ ಸಾಧನೆ ವ್ಯರ್ಥವಾಗುತ್ತದೆ. ‘ಧೈರ್ಯಂ ಸರ್ವತ್ರ ಸಾಧನಂ ‘ ಎಂಬಂತೆ ಮೋದಿಯವರಲ್ಲಿ ಧೈರ್ಯ ಇದ್ದರೂ ಕಾರ್ಯ ಭಂಗವಾದಾಗ ನೊಂದುಕೊಳ್ಳುವ ಪ್ರಸಂಗವೂ ಇದೆ. ಯಾಕೆಂದರೆ ಅವರ ಜಾತಕದಲ್ಲಿ ಏಕಾದಶ ಸ್ಥಾನದಲ್ಲಿ ಕೇತು ಇದ್ದು ಉತ್ಸಾಹ ಕುಗ್ಗಿಸುವ ಕೆಲಸ ಮಾಡುತ್ತಾನೆ. ಆ ಉತ್ಸಾಹ ಹೆಚ್ಚಿಸಿಕೊಳ್ಳಲು ಹುತ್ತಗಳಿರುವ ಸಾನ್ನಿಧ್ಯ,ಗುಹಾ ಸಾನ್ನಿಧ್ಯಗಳ ದರ್ಶನ ಅಗತ್ಯ. ಕೇತುವು ಅಷ್ಟಮಾಧಿಪತಿ ಜತೆಗಿರುವುದರಿಂದ negative thought ಬರುವ ಸಾಧ್ಯತೆಗಳಿವೆ. ರವಿಯ ಜತೆ ಇರುವುದರಿಂದ ಕೆಲಸ ಕಾರ್ಯ ತಲ್ಲೀನತೆಯೂ, ಕರ್ಮದಲ್ಲಿ ತೊಂದರೆಗಳೂ ಬರುತ್ತವೆ.
ಕೇವಲ ಮೋದಿಯವರೊಬ್ಬರೇ ಬುದ್ಧಿವಂತರಾಗಿ ದಕ್ಷರಾದರೆ ಸಾಲದು. ಅವರ ಜತೆಗಿರುವವರೂ ಮೋದಿಯವರ ಸಾಧನೆಗಳನ್ನು implement ಮಾಡಿದರೆ ಉತ್ಸಾಹ ಹೆಚ್ಚುತ್ತದೆ. ಉತ್ತರ ಪ್ರದೇಶದ ಆದಿತ್ಯನಾಥ ಯೋಗಿ, ಕರ್ನಾಟಕದ ಯಡ್ಯೂರಪ್ಪನವರು ಸಾಧನೆಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಅತ್ಯಂತ ಸಮರ್ಥರು. ಹಾಗಾಗಿ ಎಲ್ಲವೂ ಸರಿಯಾಗಲು ಕುಕ್ಕೇ ಸುಬ್ರಹ್ಮಣ್ಯನ ದರ್ಶನ ಮಾಡಲೇಬೇಕು.
ಇನ್ನೊಂದು ಮುಖ್ಯ ವಿಚಾರವಿದೆ. 2020 ಜನವರಿ ಬಳಿಕ ಶನಿ ಮಕರದಲ್ಲಿ ನೀಗಡ(ಶೃಂಕಲ, ಬಂಧನ) ದ್ರೇಕ್ಕಾಣದಲ್ಲಿ ಅಂದರೆ ಮೊದಲ ಹತ್ತು ಡಿಗ್ರಿಯಲ್ಲಿ ಸಂಚರಿಸುವಾಗ, ಇಷ್ಟರವರೆಗೆ ಹಾರಾಟ ಮಾಡಿ ಲೂಟಿ ಮಾಡಿದ ಪ್ರಮುಖರ ಬಂಧನವನ್ನು ಸೂಚಿಸುತ್ತದೆ. ಇಂತಹ ಶುಭ ಕೆಲಸ ಮಾಡುವವರಿಗೂ ಧೈರ್ಯವೂ ಬೇಕು, ತಾಳ್ಮೆ ಸಂಯಮವೂ ಬೇಕು, ಕಾರ್ಯ ವಿಘ್ನವಾಗದಂತೆ ನೋಡಿಕೊಳ್ಳುವ ಚತುರತೆಯೂ ಬೇಕು. ಇಂತಹ ಶಕ್ತಿ ನೀಡುವವನೇ ಸುರಸೈನ್ಯ ನಾಥನಾದಂತಹ ಸೇನಾನಿ ಸುಬ್ರಹ್ಮಣ್ಯ ಮಾತ್ರ.

Get in Touch With Us: info@kalpa.news Whatsapp: 9481252093
















