No Result
View All Result
AESL Launches Victory Batch at Rs 99 to support students appearing for RE-NEET
English Articles

AESL Launches Victory Batch at Rs 99 to support students appearing for RE-NEET

by ಕಲ್ಪ ನ್ಯೂಸ್
May 13, 2026
0

Kalpa Media House  |  New Delhi  | To support students who will appear for the RE-NEET exam following the cancellation...

Read moreDetails
Why The Hell Did You Make Manya Surve a Hero?: Sanjay Gupta Opens Up on Underworld Threats

Why The Hell Did You Make Manya Surve a Hero?: Sanjay Gupta Opens Up on Underworld Threats

May 13, 2026
Amazon Expands Health Coverage for 90,000 Delivery Associates across India

Amazon Expands Health Coverage for 90,000 Delivery Associates across India

May 12, 2026
IBM and Yotta Announce Plans to Deliver Agentic AI Platform for Indian Enterprises

IBM and Yotta Announce Plans to Deliver Agentic AI Platform for Indian Enterprises

May 9, 2026
ಸಮವಸ್ತ್ರದೊಳಗಿನ ಅಪ್ಪಟ ಚಿನ್ನ | ಶ್ರೀ ಜಯಕರ ಐರೋಡಿ ಎಂಬ ಮಾನವೀಯತೆಯ ಮಹಾದನಿ

Pure Gold Within the Uniform: Jayakara Airody, The Great Voice of Humanity

May 9, 2026
  • Advertise With Us
  • Grievances
  • About Us
  • Contact Us
Wednesday, May 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಸಚಿನ್ ಪಾರ್ಶ್ವನಾಥ್

ವಿದ್ಯುತ್ ಸಹ ಇಲ್ಲದ ಮಲೆನಾಡು ಕುಗ್ರಾಮದ ಈ ಮಹಿಳೆ ಕನಸಿಗಾಗಿಯೇ ಬದುಕಿ ಸಾಧಸಿದ ಕಥೆ ಇದು

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 19, 2020
in ಸಚಿನ್ ಪಾರ್ಶ್ವನಾಥ್
0
ವಿದ್ಯುತ್ ಸಹ ಇಲ್ಲದ ಮಲೆನಾಡು ಕುಗ್ರಾಮದ ಈ ಮಹಿಳೆ ಕನಸಿಗಾಗಿಯೇ ಬದುಕಿ ಸಾಧಸಿದ ಕಥೆ ಇದು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಇದೊಂದು ಕನಸಿಗಾಗಿಯೇ ಬದುಕಿದ ಮಹಿಳೆಯ ಕಥೆ. ನಿಜಕ್ಕೂ ಇದು ಕಥೆಯಲ್ಲ, ದಂತಕಥೆ. ಅಲ್ಲೊಂದು ಅದ್ಭುತ ಕನಸಿತ್ತು, ಅದರಲ್ಲಿ ಖುಷಿಯಿತ್ತು, ನೋವಿತ್ತು, ನಲಿವಿತ್ತು, ಬವಣೆಗಳನ್ನು ಮೀರಿ ನಿರ್ದಾಕ್ಷಿಣ್ಯವಾಗಿ ಅಂದುಕೊಂಡಿದ್ದು ಸಾಧಿಸುವ ಛಲವಿತ್ತು. ಗೊತ್ತಿರಲಿ ಅವರ ಬಳಿ ಆಗುವುದಿಲ್ಲ ಎನ್ನಲು ಕಾರಣಗಳ ಸಾಲೇ ಇತ್ತು. ಆದರೆ ತಮ್ಮಿಂದ ಆಗುತ್ತದೆ ಎನ್ನಲು ಇದ್ದಿದ್ದು ಆ ಆತ್ಮವಿಶ್ವಾಸ ಒಂದೇ. ಮನೆಯಿಂದ ಎಷ್ಟೋ ದೂರ ಇರುವ ಶಾಲೆ, ಅದರಲ್ಲೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅದರಲ್ಲೂ ಏಕೋಪಾಧ್ಯಾಯ ಶಾಲೆ.

ಶಾಲೆಯ ಅಂಗಳದಿ ಬೀಳುವ ಕಸದಿಂದ ಹಿಡಿದು, ಅಡಿಗೆ ಮನೆಯಲ್ಲಿ ಬೀಳುವ ಅಕ್ಕಿಯ ತನಕ, ಒಂದನೆಯ ತರಗತಿಗೆ ಬರುವ ಅಳುವ ಕಂದನಿಂದ ಹಿಡಿದು, ಪ್ರತಿ ತಿಂಗಳೂ ಎಡತಾಕುವ ಸಭೆಗಳ ತನಕ ಪ್ರತಿಯೊಂದರಲ್ಲೂ ಭಾಗವಹಿಸಿ ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿದವರು. ಸರ್ಕಾರಿ ಕನ್ನಡ ಶಾಲೆಗಳ ಉಳಿವು ತೀರಾ ಅಂಚಿಗೆ ಬಂದು ನಿಂತಿದೆ. ಅಲ್ಲದೆ ಶೈಕ್ಷಣಿಕೇತರ ಕೆಲಸಗಳೇ ಅಧಿಕವಾಗಿವೆ. ಅದೆಲ್ಲವನ್ನೂ ಶಾಲೆಯ ಏಕ ಶಿಕ್ಷಕಿಯಾಗಿ ನಿಭಾಯಿಸಿದ್ದಾರೆ. ಕುಟುಂಬದ ಜವಾಬ್ದಾರಿ, ಶಾಲೆಯ ಜವಾಬ್ದಾರಿ ಜೊತೆಯಲ್ಲಿ ಪುಟ್ಟ ಕಂದ, ಮನೆಯಿಂದ ದೂರದಲ್ಲಿ ವಾಸ. ಇದೆಲ್ಲಾ ಜವಬ್ದಾರಿಗಳ ನಡುವೆ ಓದು, ಅದು ನಿರಂತರವಾದ ಓದು. ಯಾವ ಯಶಸ್ಸಿಗೆ ಲಕ್ಷ ಲಕ್ಷ ರೂಪಾಯಿಗಳ ವ್ಯಯಿಸಿ ದೂರದ ತರಬೇತಿ ಕೇಂದ್ರಗಳ ಎದುರುಗೊಳ್ಳುತ್ತಾರೋ ಅದನ್ನು ಸವಿತಾರವರು ನಮ್ಮ ನಡುವೆಯೇ ನಿಂತು ಪಡೆದಿದ್ದಾರೆ. ಕೊನೆಯ ಕ್ಷಣದ ತನಕವೂ ಜೊತೆಗೆ ನಿಂತದ್ದು ಪತಿ ನವೀನ್.


ಮದುವೆಯ ನಂತರ ಹೆಚ್ಚಿನ ಗಂಡಂದಿರು ತಮ್ಮ ಹೆಂಡತಿಯರ ಆಸೆಗಳನ್ನು ಬದಿಗೊತ್ತಿ ಬಿಡುತ್ತಾರೆ. ಅಡಿಗೆ ಮನೆ, ಸಂಸಾರವೇ ಪ್ರಪಂಚವಾಗುವ ಈ ಕಾಲದಲ್ಲಿ ಇಷ್ಟು ದೊಡ್ಡ ಕನಸಿಗೆ ಬೆಂಗಾವಲಾಗಿ ನಿಂತ ನವೀನರ ಮನಸ್ಸು ದೊಡ್ಡದು. ಯಶಸ್ಸಿನ ಏಣಿಯ ಕಟ್ಟಿ ನಿಲ್ಲಿಸಲು ಪರಿಶ್ರಮದ ಕಾಣಿಕೆ ನೀಡಬೇಕಾಗುತ್ತದೆ. ಅದಕ್ಕೆ ತೆರೆಮರೆಯ ಬೆಂಬಲವೂ ಬೇಕು. ಆತ್ಮವಿಶ್ವಾಸ ತುಂಬುತ್ತಾ, ಸವಿತಾರೊಂದಿಗೆ ತೆರಳುತ್ತಾ ಇಂದಿನ ಖುಷಿಗೆ ಅವರು ಕಾರಣರಾಗಿ ನಿಲ್ಲುತ್ತಾರೆ.

ಸವಿತಾ ಅವರು ಜನಿಸಿದ್ದು ಮಲೆನಾಡಿನ ಸಾಗರ ತಾಲೂಕಿನ ಒಂದು ಪುಟ್ಟ ಹಳ್ಳಿ. ಅರಸಲು ಒಂದಷ್ಟು ಸಮಯವನ್ನು ಪಡೆಯುವ ಕಂಚಿಕೇರಿ ಗ್ರಾಮ. ತಂದೆ ರೈತರಾದ ಜಯೇಂದ್ರ ಜೈನ್, ತಾಯಿ ಪುಷ್ಪಾವತಿ. ಒಂದಿನಿತೂ ವಿದ್ಯಾಭ್ಯಾಸಕ್ಕೆ ಕೊಂಕಾಗದಂತೆ ನೋಡಿಕೊಂಡ ಶ್ರೇಯ ಅವರಿಗೆ ಸಲ್ಲಬೇಕು. ವಿಶೇಷವೆಂದರೆ ಇಂಗ್ಲೀಷ್ ಅಷ್ಟೇ ಮುಖ್ಯವಾಗಿರುವ ಈ ಕಾಲದಲ್ಲಿ ಸವಿತಾರವರು ಪ್ರತಿ ಹಂತದಲ್ಲೂ ಕನ್ನಡ ಮಾಧ್ಯಮದಲ್ಲಿಯೇ ಪಡೆದವರು. ಸಾಮರ್ಥ್ಯ ಇದ್ದಲ್ಲಿ ಅಲ್ಲಿ ಭಾಷೆಯ ಊರುಗೋಲು ಬೇಕಾಗುವುದಿಲ್ಲ. ಮತ್ತೊಂದು ವಿಷಯವೆಂದರೆ ಜಗತ್ತಿಗೆ ವಿದ್ಯುತ್ ನೀಡಿದ ಸಾಗರದವರಾದ ಇವರ ಮನೆಯಲ್ಲಿ ಪಿಯುಸಿ ಮುಗಿಯುವ ತನಕವೂ ವಿದ್ಯುತ್ ಸುಳಿವೂ ಇರಲಿಲ್ಲ. ಮೊದಲೇ ಹೇಳಿದಂತೆ ಅವರಿಗೆ ನನ್ನಿಂದ ಸಾಧ್ಯವಿಲ್ಲ ಎನ್ನಲು ಸಾವಿರ ಕಾರಣಗಳಿದ್ದವು. ಆಗುತ್ತದೆ ಎನ್ನಲು ಇದ್ದಿದ್ದು ದಿಟ್ಟ ಮನವೊಂದೇ. ಪ್ರತಿ ನಿತ್ಯ ಶಾಲೆಗೆ ತೆರಳಲು ಹನ್ನೆರಡು ಕಿಮೀ ಕಾಲ್ನಡಿಗೆಯಲ್ಲಿ ತೆರಳಬೇಕಿತ್ತು. ಪುಟ್ಟ ವಯಸ್ಸು, ದೊಡ್ಡ ಕನಸು. ಇನ್ನು ಈ ಕಿಮೀಗಳೆಲ್ಲಾ ಯಾವ ಲೆಕ್ಕ? ಹತ್ತನೆಯ ತರಗತಿ, ಪಿಯುಸಿಗಳನ್ನು ಡಿಸ್ಟಿಂಕ್ಷನ್’ನಲ್ಲಿ ತೇರ್ಗಡೆ ಮಾಡಿದ್ದು ಇವರ ಹೆಗ್ಗಳಿಕೆ.

ನಂತರ 2010ರಲ್ಲಿ ಶಿವಮೊಗ್ಗ ಜಿಲ್ಲೆಗೆ ಏಳನೆಯ ರ್ಯಾಂಕ್ ಗಳಿಸಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದರು. ಮೊದಲ ಅವಧಿಯಲ್ಲಿ ಶಿಕಾರಿಪುರ ತಾಲೂಕಿನಲ್ಲಿ 2014ರ ತನಕವೂ ಕಾರ್ಯ ನಿರ್ವಹಿಸಿದ ಅವರು ನಂತರ ಸಾಗರ ತಾಲ್ಲೂಕಿನ ಏಕೋಪಾಧ್ಯಾಯ ಶಾಲೆ ಸಾಡಗಳಲೆ ಶಾಲೆಗೆ ವರ್ಗಾವಣೆ ಹೊಂದಿದರು. ಆಗ ಅವರ ಮೇಲಿನ ಜವಾಬ್ದಾರಿ ದ್ವಿಗುಣಗೊಳ್ಳುತ್ತದೆ. ಆದರೂ ಕನಸು ಅವರನ್ನು ಸುಮ್ಮನಾಗಲು ಬಿಡಲೇ ಇಲ್ಲ. ಈ ನಡುವೆ ವೈವಾಹಿಕ ಜೀವನದಲ್ಲಿ ಕಾಲಿಟ್ಟ ಅವರು 2011ರಲ್ಲಿ ಸಾಗರ ತಾಲೂಕಿನ ಕೋಗಾರಿನ ಕೃಷಿಕ ನವೀನ್ ಕುಮಾರ್ ಅವರನ್ನು ವಿವಾಹವಾದರು. ಅದೇ ಸಂದರ್ಭದಲ್ಲಿ ಒಮ್ಮೆ ಕೆಎಎಸ್ ಪರೀಕ್ಷೆ ಬರೆದಿದ್ದ ಸವಿತಾ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಮೊದಲ ಪ್ರಯತ್ನದಲ್ಲೇ ಎನ್ನುವುದು ವಿಶೇಷ. ಯಶಸ್ಸು ಎದುರುಗೊಳ್ಳಲು ಅವರಿಗೆ ಇಷ್ಟು ಸಾಕಿತ್ತು. ತಯಾರಿ ಮಾಡಿಕೊಂಡಿರಲಿಲ್ಲ ಹಾಗಾಗಿ ಮುಖ್ಯ ಪರೀಕ್ಷೆಯಲ್ಲಿ ಹಿಂದುಳಿಯಬೇಕಾಯಿತು ಎನ್ನುತ್ತಾರೆ.
ಮೊದಲ ಯತ್ನದಲ್ಲಿ ಅಷ್ಟು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಪಡೆದವರು. ಒಂಬತ್ತು ವರ್ಷಗಳ ತಯಾರಿ ಎಂದರೆ ಹೇಗಿರಬೇಕು? ಕನಸುಗಳ ಪಕ್ಷಿ ಶ್ರಮದ ಕಾವಿಟ್ಟು ಯಶಸ್ಸಿನ ತತ್ತಿಯನ್ನು ಕಾಯ್ದಿತ್ತು. 2017 ರಲ್ಲಿ ಎರಡನೆಯ ಬಾರಿ ಪರೀಕ್ಷೆ ಎದುರಿಸಿದ ಅವರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ಆಯ್ಕೆ ಆಗಿದ್ದಾರೆ.


ಸವಿತಾರವರಿಗೆ ಸ್ಫೂರ್ತಿಯಾಗಿದ್ದವರು ನಿಟ್ಟೂರು ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿದ್ದ ಪಿ. ರಾಮ್ ಕುಮಾರ್. ಕೆಎಎಸ್ ಕನಸು ಬಿತ್ತಿ ಬೆಳೆಸಿದವರು. ಮೊದಲು ಶಿಕ್ಷಕಿಯಾಗಿ ನಂತರ ಈ ಸಾಧನೆ ಮಾಡಲು ಪ್ರೇರಣೆ ಹಾಗೂ ಅದಕ್ಕೆ ಸಂಬಂಧಿಸಿದ ಆರಂಭಿಕ ಹಂತದಲ್ಲಿ ಸಂಪೂರ್ಣ ಸಹಕಾರ ನೀಡಿದವರು. ದ್ವಿತೀಯ ಪಿಯುಸಿಗೆ ಶಿಕ್ಷಣವನ್ನೇ ಮೊಟಕುಗೊಳಿಸುವ ಸಮಯ ಬಂದಾಗ ಹಣಕಾಸಿನ ನೆರವನ್ನೂ ನೀಡಿ ಡಿಇಡಿ ಶಿಕ್ಷಕಿಯಾಗಲು ಶ್ರಮಿಸಿದವರು. ಅವರು ಬರೀ ಶಿಕ್ಷಕರಾಗಿರಲಿಲ್ಲ, ಅವರೇ ದಾರಿದೀಪವಾಗಿದ್ದರು. ಇವರೊಂದಿಗೆ ಪಿಯುಸಿ ಕಾಲೇಜಿನ ಡಾ. ಪಿ. ಶಾಂತಾರಾಮ ಪ್ರಭು (ಇಂಗ್ಲಿಷ್) ಮತ್ತು ಡಿ. ನಂಜುಂಡ (ಅರ್ಥಶಾಸ್ತ್ರ) ಇವರುಗಳ ಸಹಕಾರವೂ ದೊಡ್ಡ ಮಟ್ಟದ ಬೆಂಬಲ ನೀಡಿತ್ತು. ಮುಂದಿನ ದಿನಗಳಲ್ಲಿ ಪ್ರತಿ ಹೆಜ್ಜೆಗೂ ಜೊತೆಯಾದ ಪತಿ ನವೀನ್ ಅವರನ್ನು ಮರೆಯಲು ಸಾಧ್ಯವೇ ಇಲ್ಲ.

ಯಶಸ್ಸಿನ ಹಿನ್ನೆಲೆಯಲ್ಲಿ ಜೀವನವನ್ನು ಕುರಿತು ಕೇಳಿದಾಗ ತಾವು ಯಶಸ್ಸು ಪಡೆದೆ ಎನ್ನುವುದಕ್ಕಿಂತ ನನ್ನ ವಿಜ್ಞಾನ ಶಿಕ್ಷಕರಿಗೆ, ತಂದೆ ತಾಯಿಗೆ, ಪತಿಗೆ, ತಾವು ಕಲಿತ ಬೆಳೆದ ಊರುಗಳಿಗೆ ಅಪರಿಮಿತ ಖುಷಿ ನೀಡಿದ್ದು ಮರೆಯಲಾದ ಗಳಿಗೆ ಎನ್ನುತ್ತಾರೆ. ಈ ಸಂದರ್ಭದ ಶ್ರೇಯ ಸಂಪೂರ್ಣವಾಗಿ ಮೇಲಿನ ವ್ಯಕ್ತಿಗಳಿಗೆ ಸೇರಬೇಕು. ಸ್ವತಃ ಅನಕ್ಷರಸ್ಥರಾಗಿಯೂ ಇವರ ವಿದ್ಯಾಭ್ಯಾಸಕ್ಕೆ ತಂದೆ ತಾಯಿ ನೀಡಿದ ಕಾಳಜಿಯ ಋಣ ತೀರಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಯಶಸ್ಸಿನ ಕಿವಿಮಾತು ಕೇಳಿದಾಗ ’ಪರೀಕ್ಷೆ ಯಾವುದೇ ಇರಲಿ, ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಫಲಿತಾಂಶದ ಕುರಿತು ಗಮನ ನೀಡಲೇ ಬಾರದು. ಪ್ರಯತ್ನ ಪ್ರಾಮಾಣಿಕ ಎನಿಸಿದರೆ ಯಶಸ್ಸು ತಾನೇ ಅರಸಿ ಬರುತ್ತದೆ.’ ಸಮಯಕ್ಕೆ ಅತಿ ಹೆಚ್ಚಿನ ಗಮನ ನೀಡಬೇಕು ಎನ್ನುವುದು ಅವರ ಅಭಿಪ್ರಾಯ. ಅವರ ಬದುಕಿನ ಆಳಕ್ಕೆ ಇಳಿದರೆ ಅಲ್ಲಿ ಬರೀ ಹೋರಾಟ, ನೋವು ಮತ್ತು ಕಷ್ಟಗಳೇ ತುಂಬಿದೆ. ಆದರೆ ಕನಸ ಕಣ್ಮುಚ್ಚದಂತೆ ಕಾಪಿಟ್ಟ ಅವರು ಇಂದು ನಮ್ಮ ಮಾರ್ಗದರ್ಶಿ. ನಿಜ ಈಗ ಕಾಲ ಬದಲಾಗಿದೆ. ರಾಜನ ಮಗ ರಾಜನಾಗುವುದಿಲ್ಲ, ಯಾರಲ್ಲಿ ಸಾಮರ್ಥ್ಯ ಇದೆಯೋ ಅವನು ರಾಜನಾಗುತ್ತಾನೆ. ಅದನ್ನೇ ನಮ್ಮ ಉಪನಿಷತ್ತುಗಳಲ್ಲಿ ಹೇಳಿರುವುದು.

ನಾಭಿಷೆಕೋ ನ ಸಂಸ್ಕಾರಃ ಸಿಂಹಸ್ಯ ಕ್ರಿಯತೇ ವನೇ
ವಿಕ್ರಮಾರ್ಜಿತ ಸತ್ವಸ್ಯ ಸ್ವಯಂಮೇವ ಮೃಗೇಂದ್ರತಾ
ಸಿಂಹವನ್ನು ಯಾರೂ ಬಂದು ನೀನೇ ಕಾಡಿನ ರಾಜ ಎಂದು ಹೇಳುವುದೂ ಇಲ್ಲ ಅಥವಾ ಚುನಾಯಿಸಿ ಕಳಿಸುವುದೂ ಇಲ್ಲ. ಅದರಲ್ಲಿ ಶಕ್ತಿ ಸಾಮರ್ಥ್ಯ ಇದೆ. ಅದಕ್ಕೆ ಅದು ರಾಜ ಪದವಿಗೆ ಏರುತ್ತದೆ. ಕನಸು ಎಷ್ಟು ದೊಡ್ಡದೇ ಆಗಿರಲಿ ಅದರೊಂದಿಗೆ ಬದುಕುವುದನ್ನು ಬಿಡಗೊಡಬಾರದು. ಇದು ಭಾರತ, ಇಲ್ಲಿ ಯಾರು ಬೇಕಾದರೂ ರಾಜನಾಗಬಹುದು. ಕನಸುಗಳೂ ಕೀಳಲ್ಲ, ಕೆಲಸಗಳು ಕೀಳಲ್ಲ. ಕಾಣುವ, ಮಾಡುವ ದೊಡ್ಡ ಮನಸ್ಸು ಇರಬೇಕು ಅಷ್ಟೆ. ವಿದ್ಯುತ್ ಸಹ ಇಲ್ಲದ, ಕಾಡಿನ ಮಧ್ಯದ ಪುಟ್ಟ ಹಳ್ಳಿಯ ಸವಿತಾ ಇಂತಹ ಕನಸಿದೆ ಎಂದಾಗ ಕೆಲವರು ನಕ್ಕಿರಬಹುದು, ಕೆಲವರು ಆಡಿಕೊಂಡಿರಬಹುದು. ಅಂದು ಅವರು ಧೃತಿಗೆಟ್ಟಿದ್ದರೆ ಇಂದಿನ ಈ ಸ್ಥಾನ ಅವರಿಗೆ ಧಕ್ಕುತ್ತಿರಲಿಲ್ಲ. ಒಂದು ಮಾತಿದೆ ’ಗೆದ್ದವನಿಗೆ ಚರಿತ್ರೆಯಲ್ಲಿ ಗೆದ್ದವನು ಎಂಬ ಜಾಗವಿರುತ್ತದೆ. ಸೋತವನಿಗೂ ಇಂತಹವನೆದುರಿಗೆ ಸೆಣಸಾಡಿ ಸೋತವನು ಎಂಬ ಜಾಗವಿರುತ್ತದೆ. ಆದರೆ ನೋಡಿಕೊಂಡು ನಿಂತವನಿಗೆ, ಆಡಿಕೊಂಡು ನಕ್ಕವನಿಗೆ ಎಲ್ಲೂ ಜಾಗವಿಲ್ಲ. ಎಲ್ಲೆಲ್ಲೂ ಜಾಗವಿಲ್ಲ’. ಹಾಗೆಯೇ ಸಾಧನೆಯ ಹಾದಿ ಎಂಬುದು ಸವಿತಾರವರ ಜೀವನ. ಕನಸಿಗಿಂತ ಮೇಲೆ ಯಾರೂ ಇಲ್ಲ. ಅಂದು ಆಡಿಕೊಂಡು ನಕ್ಕವರಲ್ಲಿ ಕೆಲವರು ಇಂದು ಸವಿತಾರವರಿಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನ ಮಾಡುತ್ತಿದ್ದಾರೆ. ಧ್ಯಾನಿಸಿದೆಡೆ ಧೈರ್ಯವಾಗಿ ಧಾವಿಸಿದಾಗ ದಾರಿ ದೂರವಾಗುವದೇ ಇಲ್ಲ. ಸವಿತಾ ಅವರೇ ಹೇಳುವಂತೆ ಪ್ರಾಮಾಣಿಕ ಪ್ರಯತ್ನವೇ ನಿಮ್ಮ ಶಕ್ತಿ, ನಿಮ್ಮ ಆಸ್ತಿ. ಯಶಸ್ಸು ಬೆನ್ನಟ್ಟಿ ಬರಲಿದೆ. ತಾಯಿ ಭಾರತಿ ಸವಿತಾರನ್ನು ಹರಸಲಿ. ಸಮಾಜಕ್ಕೆ ಅವರಿಂದ ಸಮೃದ್ಧ ಸೇವೆ ಸಿಗಲಿ.


Get in Touch With Us info@kalpa.news Whatsapp: 9481252093

Tags: DreamKannadaNewsWebsiteLatestNewsKannadaLoinNitturSachin ParshwanathSagarSavithaShivamoggaSpecial ArticleTeacherಏಕೋಪಾಧ್ಯಾಯ ಶಾಲೆತಾಯಿ ಭಾರತಿನಿಟ್ಟೂರುಶಿಕಾರಿಪುರಶಿಕ್ಷಕಿಶಿವಮೊಗ್ಗಸಚಿನ್ ಪಾರ್ಶ್ವನಾಥ್ಸಾಗರಸಿಂಹ
Share221Tweet123Send
Previous Post

ನವವೃಂದಾವನಕ್ಕೆ ತಾತ್ಕಾಲಿಕ ಸೇತುವೆ, ದಶಕಗಳ ಸಮಸ್ಯೆಗೆ ತಾತ್ಕಾಲಿಕ ಪರಿಹಾರ

Next Post

ವಿಶ್ವದಾದ್ಯಂತ ಕೊರೋನಾ ವೈರಸ್’ಗೆ ಬಲಿಯಾದವರ ಸಂಖ್ಯೆ 8 ಸಾವಿರಕ್ಕೆ ಏರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ವಿಶ್ವದಾದ್ಯಂತ ಕೊರೋನಾ ವೈರಸ್’ಗೆ ಬಲಿಯಾದವರ ಸಂಖ್ಯೆ 8 ಸಾವಿರಕ್ಕೆ ಏರಿಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯಶವಂತಪುರ-ತಾಳಗುಪ್ಪ ವೀಕ್ಲಿ ಎಕ್ಸ್’ಪ್ರೆಸ್ ಇನ್ಮುಂದೆ ಪರಮ್ನೆಂಟ್ | ರೈಲು ಸಂಖ್ಯೆ ಬದಲು

May 13, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಹರಿಹರ-ಹೊಸಪೇಟೆ, ಧಾರವಾಡ-ಬೆಂಗಳೂರು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ

May 13, 2026
ಶಿವಮೊಗ್ಗ | ಸ್ವಂತ ತಮ್ಮನನ್ನೇ ಭೀಕರವಾಗಿ ಹತ್ಯೆ ಮಾಡಿದ ಅಣ್ಣ | ಕಾರಣವೇನು?

ಶಿವಮೊಗ್ಗ | ಸ್ವಂತ ತಮ್ಮನನ್ನೇ ಭೀಕರವಾಗಿ ಹತ್ಯೆ ಮಾಡಿದ ಅಣ್ಣ | ಕಾರಣವೇನು?

May 13, 2026
ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ನಿಷೇಧ, ಹಿಜಾಬ್’ಗೆ ಅವಕಾಶ | ಸರ್ಕಾರ ಆದೇಶ

ರಾಜ್ಯದ ಶಾಲಾ ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ನಿಷೇಧ, ಹಿಜಾಬ್’ಗೆ ಅವಕಾಶ | ಸರ್ಕಾರ ಆದೇಶ

May 13, 2026
ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು

ದೇಶದಲ್ಲೇ ಮೊದಲು | ಸ್ಥಳೀಯ ತಂತ್ರಜ್ಞಾನ ಆಧಾರಿತ ಸೆಮಿ ಹೈಸ್ಪೀಡ್ ರೈಲ್ವೆ ಯೋಜನೆಗೆ ಕೇಂದ್ರ ಅಸ್ತು

May 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL