No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Sunday, August 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಹರಿಹರದಲ್ಲಿ ಲಾಕ್ ಡೌನ್ ವಿಚಾರಕ್ಕಾಗಿ ಕೊರೋನಾ ತಂದ ಜಗಳ!

kalpa News by kalpa News
July 19, 2020
in Small Bytes, ದಾವಣಗೆರೆ
0
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಹರಿಹರ: ಚೀನಾದಲ್ಲಿ ಜನ್ಮ ತಾಳಿದ ಕೊರೋನಾ ವೈರಸ್ ಇಡೀ ವಿಶ್ವದಾದ್ಯಂತ ಅನೇಕ ಅವಾಂತರಗಳನ್ನು ಸೃಷ್ಟಿ ಮಾಡುತ್ತಿದ್ದು, ಭಾರತದಲ್ಲೂ ಈ ವೈರಸ್ಸಿನ ಅವಾಂತರಗಳು ಒಂದೆರಡಲ್ಲ.

ಹೇಳಿ ಕೇಳಿ ಕೊರೋನಾ ಚೀನಾ ರಾಷ್ಟ್ರದ ವೈರಸ್, ಚೀನಾ ರಾಷ್ಟ್ರದಂತೆ ಈ ವೈರಸ್ ದೇಶದ ಜನರ ಜನರ ನಡುವೆ ಅನೇಕ ವೈಮನಸ್ಸುಗಳನ್ನು ಸೃಷ್ಟಿ ಮಾಡುತ್ತಿದೆ.

ದೇಶದಲ್ಲಿ ಕೊರೋನಾ ವೈರಸ್ ನಿಯಂತ್ರಣ ಮಾಡುವ ಉದ್ದೇಶದಿಂದ ಕಳೆದ ಮೂರು ತಿಂಗಳು ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಅಂದು ಲಾಕ್ ಡೌನ್ ಘೋಷಣೆ ಮಾಡಿದ್ದ ಪರಿಣಾಮವೋ ಏನೋ ವೈರಸ್ ನಿಯಂತ್ರಣದಲ್ಲಿತ್ತು.

ಲಾಕ್ ಡೌನ್ ತೆರವುಗೊಳಿಸಿದ್ದೇ ತಡ ಒಂದಕ್ಕೆ ಎರಡು ಪಟ್ಟು ವೈರಸ್ ಹರಡುವಿಕೆಯ ಪ್ರಮಾಣ ಏರತೊಡಗಿತ್ತು. ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೂ ವೈರಸ್ ಹರಡಿತ್ತು. ವಿಧಿಯಿಲ್ಲದೇ ನಗರ ಪ್ರದೇಶಗಳನ್ನು ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡುವ ನಿರ್ಧಾರಕ್ಕೆ ಸ್ಥಳೀಯ ತಾಲೂಕು ಆಡಳಿತ ಬರಬೇಕಾಯಿತು.

ಅದರಂತೆ ಹರಿಹರ ತಾಲೂಕು ಆಡಳಿತವು ಸಹ ಕೊರೋನಾ ನಿಯಂತ್ರಿಸುವ ಉದ್ದೇಶದಿಂದ ನಗರ ಪ್ರದೇಶದಲ್ಲಿ ಮಧ್ಯಾಹ್ನ ಎರಡು ಗಂಟೆಯ ನಂತರ ನಗರದ ವರ್ತಕರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡುವಂತೆ ಸ್ಥಳೀಯ ಶಾಸಕ ಎಸ್ ರಾಮಪ್ಪನವರ ನೇತೃತ್ವದಲ್ಲಿ ಕಳೆದ ತಿಂಗಳು ತೀರ್ಮಾನಿಸಿ ಹರಿಹರ ನಗರವನ್ನು ಲಾಕ್ ಡೌನ್ ಮಾಡಲಾಯಿತು.

ಕಳೆದ ವಾರ ಹರಿಹರದ ಮಾಜಿ ಶಾಸಕ ಬಿ.ಪಿ. ಹರೀಶ್ ನೇತೃತ್ವದಲ್ಲಿ ಸ್ಥಳೀಯ ತಾಲೂಕಾಡಳಿತ ಮತ್ತೊಮ್ಮೆ ನಗರದ ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಭೆ ನಡೆಸಿತ್ತು. ಅಂದಿನ ಸಭೆಯಲ್ಲಿ ಸಹ ನಗರದ ಕೆಲವು ವರ್ತಕರು ಉಪಸ್ಥಿತರಿದ್ದರು. ಅಂದಿನ ಸಭೆಯ ನಿರ್ಣಯದಂತೆ ವರ್ತಕರ ಹಿತದೃಷ್ಟಿಯಿಂದ ಲಾಕ್ ಡೌನ್ ಅನ್ನು ಮಧ್ಯಾಹ್ನದ ಬದಲು ರಾತ್ರಿ ಎಂಟು ಗಂಟೆಯ ನಂತರ ಮಾಡುವಂತೆ ಮಾಜಿ ಶಾಸಕರು ತೀರ್ಮಾನಿಸಿದರೂ, ತಾಲೂಕಾಡಳಿತ ನಿರ್ಣಯಿಸಿತ್ತು.

ಮಾಜಿ ಶಾಸಕರ ನೇತೃತ್ವದಲ್ಲಿ ತಾಲೂಕಾಡಳಿತ ಮತ್ತೊಮ್ಮೆ ಸಭೆ ಸೇರಿ ರಾತ್ರಿ ಎಂಟು ಗಂಟೆಯ ನಂತರ ಲಾಕ್ ಡೌನ್ ಸಮಯ ನಿಗದಿಪಡಿಸಿದ್ದು ಸ್ಥಳೀಯ ಹಾಲಿ ಶಾಸಕ ಎಸ್. ರಾಮಪ್ಪ ಹಾಗೂ ಅವರ ಬೆಂಬಲಿಗರನ್ನು ಕೆರಳಿಸಿತ್ತು.


ಕಳೆದ ನಾಲ್ಕು ದಿನಗಳ ಹಿಂದೆ ನಗರದ ವಿಶ್ರಾಂತಿ ಗೃಹದಲ್ಲಿ ಶಾಸಕರ ನೇತೃತ್ವದಲ್ಲಿ ಕೆಲವು ವರ್ತಕರ ಸಮ್ಮುಖದಲ್ಲಿ ನಗರದಲ್ಲಿ ಲಾಕ್ ಡೌನ್ ವಿಧಿಸುವ ತೀರ್ಮಾನದ ಸಭೆಯನ್ನು ನಡೆಸಿದರು.

ಶಾಸಕರ ನೇತೃತ್ವದಲ್ಲಿ ನಗರದ ವಿಶ್ರಾಂತಿ ಗೃಹದಲ್ಲಿ ಸಭೆ ನಡೆಸಿದ ಮಾಹಿತಿ ತಾಲೂಕು ಆಡಳಿತಕ್ಕೆ ಬಂದ ಕಾರಣ ಇಂದು ಮತ್ತೊಮ್ಮೆ ನಗರದ ಎಸ್’ಜೆವಿಪಿ ಕಾಲೇಜು ಸಭಾಂಗಣದಲ್ಲಿ ಹಾಲಿ ಮಾಜಿ ಶಾಸಕರ ನೇತೃತ್ವದಲ್ಲಿ ನಗರದ ವರ್ತಕರ ಸಮ್ಮುಖದಲ್ಲಿ ತಾಲೂಕು ಆಡಳಿತ ಇಂದು ಸಭೆ ನಡೆಸಿತು.

ಇಂದಿನ ಸಭೆಯಲ್ಲಿ ನಗರ ಪ್ರದೇಶದಲ್ಲಿ ಲಾಕ್ ಡೌನ್ ಘೋಷಣೆಯ ಸಮಯ ನಿಗದಿಪಡಿಸುವ ವಿಚಾರದಲ್ಲಿ ಹಾಲಿ ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.


ಹಾಲಿ ಮಾಜಿ ಶಾಸಕರ ನಡುವಿನ ಮಾತಿನ ಚಕಮಕಿಯಲ್ಲಿ ತಾಲೂಕು ಆಡಳಿತ, ನಗರಸಭೆ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಮೂಕ ವಿಸ್ಮಿತರಾಗಿ ನೋಡುತ್ತಿರುವ ದೃಶ್ಯ ಕಂಡು ಬಂದಿತು.

ಮಾತಿನ ಚಕಮಕಿ ಇನ್ನೇನು ವಿಕೋಪಕ್ಕೆ ಹೋಗುತ್ತದೆ ಎನ್ನುವಷ್ಟರಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಹಾಲಿ ಮಾಜಿ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ನಂತರ ಮಾತನಾಡಿದ ನಗರ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ. ಕೊರೋನಾ ವೈರಸ್ ನಿಯಂತ್ರಣ ವಿಚಾರದಲ್ಲಿ ಲಾಕ್ ಡೌನ್ ವಿಧಿಸುವ ಸಂಬಂಧದ ಸಭೆಯಲ್ಲಿ ವರ್ತಕರ ಹಿತ ಕಾಪಾಡಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಅನಾಗರಿಕರಂತೆ ನಾಗರಿಕರ ಸಮ್ಮುಖದಲ್ಲಿ ವರ್ತಿಸುವುದು ಶೋಭೆ ತರುವಂಥದ್ದಲ್ಲ. ಈಗಾಗಲೇ ಕೊರೋನಾ ವೈರಸ್ ಹರಡುವಿಕೆಯ ವೇಗ ಹೆಚ್ಚಾಗಿದೆ ಜನರ ಪ್ರಾಣ ಕಾಪಾಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ನಾಯಕರು, ಸಾರ್ವಜನಿಕರು, ತಾಳ್ಮೆಯಿಂದ ವರ್ತಿಸಿ ಎಲ್ಲರಿಗೂ ಅನುಕೂಲಕರವಾಗುವ ಸಮಯವನ್ನು ನಿಗದಿಪಡಿಸಬೇಕು ಎಂದು ಹೇಳಿದರು.


ಈ ಕುರಿತು ನಡೆದ ಸಭೆಯಲ್ಲಿ ’ಕೊರೋನಾ ತಂದ ಜಗಳ’ದಿಂದ ರಾಜಕೀಯ ಪ್ರತಿಷ್ಠೆಗಾಗಿ ಮಾತಿನ ಚಕಮಕಿ ನಡೆಸಿರುವುದು ನಾಗರಿಕ ಸಮಾಜ ಒಪ್ಪುವಂಥದ್ದಲ್ಲ.

ಸಂಕಷ್ಟದ ಪರಿಸ್ಥಿತಿಯ ಸಂದರ್ಭದಲ್ಲಿ ಆಳುವಂಥ ಸರಕಾರಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಕೈಜೋಡಿಸಬೇಕು. ಜನರ ಜೀವ, ಜೀವನ ಎರಡು ಕಾಪಾಡಬೇಕು ಅದು ಎಲ್ಲರ ಕರ್ತವ್ಯವೂ ಹೌದು.

ಯಾರು ಏನೇ ಮಾತಿನ ಚಕಮಕಿ ನಡೆಸಲಿ ಸಾರ್ವಜನಿಕರಾದ ನಾವು ಕೊರೋನಾ ನಿಯಂತ್ರಣದ ವಿಚಾರವಾಗಿ ಜಗಳವಾಡದೆ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್‌ ಬಳಸಿ ನಮ್ಮ ನಂಬಿದ ಕುಟುಂಬವನ್ನು ರಕ್ಷಣೆ ಮಾಡೋಣ, ಆ ನಿಟ್ಟಿನಲ್ಲಿ ಆಳುವಂಥ ಸರ್ಕಾರದ ಜೊತೆ ಕೈ ಜೋಡಿಸೋಣ, ಸಾಗೋಣ, ಸ್ವಯಂ ಪ್ರೇರಿತ ಲಾಕ್ ಡೌನ್ ಹಾಕಿಕೊಳ್ಳೋಣ ಎಂಬುದೇ ನಮ್ಮ ಮಾಧ್ಯಮದ ಕಳಕಳಿಯಾಗಿದೆ.

(ವರದಿ: ಪ್ರಕಾಶ ಮಂದಾರ)

Get In Touch With Us info@kalpa.news Whatsapp: 9481252093

Tags: Bayalu Seeme NewsCorona VirusDavanagereHariharaKannada News WebsiteLatest News Kannadaಕೊರೋನಾ ವೈರಸ್ಹರಿಹರ
Share203Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಜಾಗ್ರತೆ ವಹಿಸದಿದ್ದಲ್ಲಿ ಭಾರೀ ಅನಾಹುತ ಕಾದಿದೆ, ಅರಿತುಕೊಳ್ಳಿ: ಚಳ್ಳಕೆರೆ ಪಿಎಸ್’ಐ ಎಚ್ಚರಿಕೆ

Next Post

ಹಿರಿಯ ಪೋಷಕ ನಟಿ ಶಾಂತಮ್ಮ ವಿಧಿವಶ

kalpa News

kalpa News

Next Post
ಹಿರಿಯ ಪೋಷಕ ನಟಿ ಶಾಂತಮ್ಮ ವಿಧಿವಶ

ಹಿರಿಯ ಪೋಷಕ ನಟಿ ಶಾಂತಮ್ಮ ವಿಧಿವಶ

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL