ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿರುವುದು ಸುದೀರ್ಘ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ಉಪಾಧ್ಯಕ್ಷ ಎಸ್. ದತ್ತಾತ್ರಿ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ದಿನ ವಿಧಾನಸಭೆಯಲ್ಲಿ ಗೋ ಹತ್ಯಾ ನಿಷೇಧ ವಿಧೇಯಕವನ್ನು ಅನುಮೋದನೆಗೊಳಿಸಿತು. ಇದೊಂದು ಮಹತ್ವವಾದ ಘಳಿಗೆ. ರಾಜ್ಯದಲ್ಲಿ ಈ ಸುದೀರ್ಘವಾದ ಹೋರಾಟಕ್ಕೆ ಜಯ ದೊರೆತಂತಾಗಿದೆ. ಗೋವಿನ ರಕ್ಷಣೆಗೆ ಇಂತಹದ್ದೊಟದು ಕಾನೂನು ಬೇಕಿತ್ತು ಎಂದರು.
ಗೋಹತ್ಯೆಯನ್ನು ಮಾಡುವ ಕಟುಕರಿಗೆ ಬೆಚ್ಚಿಬೀಳಿಸುವಂತಹ 7 ವರ್ಷ ಕಠಿಣ ಜೈಲುಶಿಕ್ಷೆ ಮತ್ತು 5 ಲಕ್ಷದವರೆಗೆ ದಂಡವನ್ನು ವಿಧಿಸುತ್ತಿರುವ ಕಾನೂನು ತಂದಿರುವುದು ಮತ್ತು ಗೋರಕ್ಷಣೆ ಮಾಡುವಂತಹ ವ್ಯಕ್ತಿಗಳಿಗೆ ಕಾನೂನು ರೀತಿಯ ಯಾವುದೇ ಕ್ರಮಗಳು ಕೈಗೊಳ್ಳುವಂತಿಲ್ಲ ಎಂಬುದು ಈ ಕಾನೂನಿನ ಅಡಿಯಲ್ಲಿರುವುದು ಹೆಚ್ಚು ಸಂತಸ ಮೂಡಿಸಿದೆ. ಇಂಥಹ ಹೇಯ ಕೃತ್ಯಗಳು ನಿಲ್ಲಲಿ. ಗೋಸಂತತಿ ಉಳಿಯಲಿ ಎಂದು ಆಶಿಸುತ್ತೇನೆ ಎಂದರು.
ಈ ವಿಧೇಯಕವನ್ನು ಅಂಗೀಕರಿಸಲು ಶ್ರಮಿಸಿದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಮತ್ತು ಪಶುಸಂಗೋಪನಾ ಸಚಿವರಾದ ಪ್ರಭು ಚೌಹಾಣ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post