ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜೆ.ಎನ್.ಎನ್.ಸಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚಿರಂತನ ಗ್ರಿನ್ ಟೆಕ್ನಾಲಜಿ ಸೆಂಟರ್ ಮತ್ತು ಬಿವಿಐ ಪ್ರೇರಣ ಶಿವಮೊಗ್ಗ ಸಹಯೋಗದಲ್ಲಿ ಏರ್ಪಡಿಸಿದ್ದ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಮತ್ತು ಮಕ್ಕಳು ಭೂಮಿಗೆ ಸಮೀಪವಾಗಿ ಗೋಚರಿಸಿದ ಗುರು, ಶುಕ್ರ, ಶನಿ ಗ್ರಹಗಳನ್ನು ಟೆಲಿಸ್ಕೊಪ್ ಮೂಲಕ ಕಣ್ತುಂಬಿಕೊಂಡರು.

ಸಹ ಪ್ರಾದ್ಯಾಪಕರಾದ ಹೆಚ್.ಕೆ.ಪ್ರದೀಪ್, ಗಿರೀಶ್ ಮಾಂತ, ಶರತ್ ಕುಮಾರ.ಎಸ್.ಆರ್, ಬಿವಿಐ ಪ್ರೇರಣ ಶಿವಮೊಗ್ಗ ಅಧ್ಯಕ್ಷರಾದ ಹರೀಶ್ ಕುಮಾರ್ ಲಾತೋರ್, ಚಿರಂತನ ಕೇಂದ್ರದ ಲೊಕೇಶ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















