ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಪೂರ್ವಜರು ಋತುಗಳಿಗೆ ತಕ್ಕಂತೆ ಹಬ್ಬಗಳನ್ನು ಆಚರಣೆಗೆ ತಂದಿದ್ದಾರೆ. ಈ ಚಳಿಗಾಲಕ್ಕೆ ದೇಹದಲ್ಲಿ ಉಷ್ಣಾಂಶ ಏರಲೆಂದು ಎಳ್ಳು, ರೋಗ ನಿರೋದಕ ಶಕ್ತಿಗೆ ಬೆಲ್ಲ ಚರ್ಮಕ್ಕೆ ಎಣ್ಣೆ ಅಂಶ ಹೆಚ್ಚಲು ಕೊಬರಿ, ಸೇಂಗ ಸೇರಿದ ಎಳ್ಳು-ಬೆಲ್ಲದ ಹಬ್ಬ ಆಚರಣೆಗೆ ತಂದಿದ್ದಾರೆ ಎಂದು ಎನ್. ಗೋಪಿನಾಥ್ ಹೇಳಿದರು.
ತಾಯಿ ಮನೆ ಅನಾಥಶ್ರಮದಲ್ಲಿ ಜೇಸಿಐ ಶಿವಮೊಗ್ಗ ಮೆಟ್ರೋ ಮತ್ತು ಜೂನಿಯರ್ ಜೆಸಿ ವಿಭಾಗ , ವಿಶ್ವಂ ಫೌಂಡೇಶನ್ ಮತ್ತು ಯೂತ್ ಹಾಸ್ಟೆಲ್ ತರುಣೋದಯ ಘಟಕ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆ, ಕಬ್ಬು ತಿನ್ನುವ ಸ್ಪರ್ಧೆ ಮುಂತಾದ ಆಟವನ್ನು ಆಡಿಸುವ ಮೂಲಕ, ಕೂಡು ಕುಟುಂಬದ ಭಾವನೆ ಬರುವಂತೆ ಮಾಡಿ, ಅವರಲ್ಲಿ ಸಂತೋಷ ಹಂಚಿಕೊಂಡಿದ್ದೀರಿ. ಇದು ತುಂಬಾ ಉಪಯುಕ್ತ ಕಾರ್ಯಕ್ರಮ ಎಂದರು.
ಸ್ವರ್ದೆಯಲ್ಲಿ ಜಯಿಸಿದ ಮಕ್ಕಳಿಗೆ ಬಹುಮಾನ ವಿತರಿಸಿದ ಛೇರ್ಮನ್ ಎಸ್.ಎಸ್. ವಾಗೇಶ್, ಯಾರಿಗೂ ಅನಾತ ಭಾವ ಬರಬಾರದು, ಇಂದು ಎಲ್ಲಾ ಇದ್ದು ಸಂಕುಚಿತ ಕುಟುಂಬಗಳಿಂದ ಸಂತೋಷ ಹಂಚಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಇಂದು ಇಲ್ಲಿ ಎಳ್ಳು ಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿ ಕೊಂಡು ಮಕ್ಕಳ ಮಂದಹಾಸ ನೋಡುವಂತಾಯಿತು ಎಂದರು.
ಸ್ವಾಮಿ ವಿವೇಕಾನಂದ ಜಯಂತಿ ಬಗ್ಗೆ ಪ್ರಸ್ಥಾಪಿಸಿದ ಜಿ. ವಿಜಯಕುಮಾರ್ ಅವರು ಬದುಕಿದ್ದು ಮುವತ್ತೊಂಬತ್ತು ವರ್ಷ ಗಳಾದರೂ, ಅವರ ಆದರ್ಶಗಳು ಅವರಾಡಿದ ನುಡಿ ಮುತ್ತುಗಳು ಇಂದಿನ ಯುವಕರಿಗೆ ದಾರಿ ದೀಪವಾಗಿದೆ, ಎಂದರು.
ಜೆಸಿಐ ಶಿವಮೊಗ್ಗ ಮೆಟ್ರೋ ಅಧ್ಯಕ್ಷರಾದ ಪ್ರಮೋದ್ ಶಾಸ್ತ್ರಿ ಸಂಕ್ರಾಂತಿ ಹಬ್ಬದ ಬಗ್ಗೆ ಸವಿಸ್ತಾರವಾಗಿ ವಿವರವನ್ನು ಮಕ್ಕಳಿಗೆ ನೀಡಿದರು. ಉಪಾಧ್ಯಕ್ಷರಾದ ಡಾ. ನೇತ್ರಾ ವಾಲಿ ಶೆಟ್ಟರ್ ಈ ಕಾರ್ಯಕ್ರಮ ಆಯೋಜಿಸಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಹರ್ಷಿತ, ಕಾರ್ಯದರ್ಶಿ ಅನುಷಾ, ಸಹ ಕಾರ್ಯದರ್ಶಿ ಉಮಾದೇವಿ, ಖಜಾಂಚಿ ಸಂತೋಷ್, ಸದಸ್ಯರಾದ ವಿಘ್ನೇಶ್ವರ ,ಪೂಜಾ, ಮಾಲ್ತೇಶ್ ದೇಶಪಾಂಡೆ ಮತ್ತು ಸ್ವಾತಿ ಕುಲಕರ್ಣಿ , ಜೂನಿಯರ್ ಜೆಸಿ ವಿಭಾಗದ ಅಧ್ಯಕ್ಷೆ ಖಶಿಶ್ ಶೆಟ್ಟಿ, ಜಯಮಾಲಾ ಶೆಟ್ಟಿ,
ಶಾಶ್ವತಿ ಮಹಿಳಾ ಸಂಘದ ಸದಸ್ಯರು ಮತ್ತು ಯೂತ್ ಹಾಸ್ಟೆಲ್ ನಿರ್ದೇಶಕಿ ಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು. ಡಾ. ನೇತ್ರ ಸ್ವಾಗತಿಸಿದರು, ವೈಹೆಚ್ ಐಎ ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post