Monday, June 9, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಶಿವಮೊಗ್ಗ ಸೊರಬ

ನಾಡಿನ ಜೀವಸಂಕುಲಗಳನ್ನು ರಕ್ಷಿಸಲು ಹಲವು ಯೋಜನೆಗಳ ಅನುಷ್ಟಾನ : ಅನಂತಹೆಗಡೆ ಅಶಿಸರ

January 20, 2022
in ಸೊರಬ
0 0
0
Share on facebookShare on TwitterWhatsapp
Read - 3 minutes

ಕಲ್ಪ ಮೀಡಿಯಾ ಹೌಸ್   |  ಸೊರಬ  |

ಕರ್ನಾಟಕ ಜೀವವೈವಿಧ್ಯ ಮಂಡಳಿಯು ನಾಡಿನ ನೆಲ-ಜಲ ಸೇರಿದಂತೆ ಸಕಲ ಜೈವಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಉದ್ದೇಶದ ಸಾಂವಿಧಾನಿಕ ಸಂಸ್ಥೆ. ರಾಷ್ಟ್ರಮಟ್ಟದಲ್ಲಿ ಜಾರಿಗೆ ಬಂದಿರುವ ಜೀವವೈವಿಧ್ಯ ಕಾಯ್ದೆಯ ಅನ್ವಯ 2003ರ ಅಗಸ್ಟ್ ಒಂದರಿಂದ ಕಾರ್ಯಾರಂಭ ಮಾಡಿದ ರಾಜ್ಯ ಸರ್ಕಾರದ ಸಂಸ್ಥೆಯಿದು. ರಾಜ್ಯದ ಕಾಡು-ಕಣಿವೆ, ಕೃಷಿಭೂಮಿ-ಗೋಮಾಳ, ನದಿ-ಕೆರೆಗಳು, ಸಮುದ್ರ ಸೇರಿದಂತೆ ಎಲ್ಲೆಡೆ ಇರುವ ಅಸಂಖ್ಯ ಬಗೆಯ ಸಸ್ಯ ಹಾಗೂ ಪ್ರಾಣಿ ಸಂಕುಲಗಳು ಮತ್ತು ಅವುಗಳ ತಳಿವೈವಿಧ್ಯವನ್ನು ಸಂರಕ್ಷಿಸುವ ಯೋಜನೆಗಳನ್ನು ವಿವಿಧ ಇಲಾಖೆಗಳ ಸಹಯೋದೊಂದಿಗೆ ರೂಪಿಸುವ ಹೊಣೆ ಮಂಡಳಿಯದು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ನಿಕಟಪೂರ್ವ ಅಧ್ಯಕ್ಷ ಅನಂತಹೆಗಡೆ ಅಶಿಸರ ತಿಳಿಸಿದರು.

ತಾಲ್ಲೂಕು ಬಿಳಾಗಿ ಸಾಲುಮರದ ತಿಮ್ಮಕ್ಕ ವೃಕ್ಷೆಧ್ಯಾನದಲ್ಲಿ ನಡೆದ ತಾಲ್ಲೂಕು ಜೀವವೈವಿಧ್ಯ ಕಾರ್ಯಕ್ರಮಗಳಿಗೆ ಚಾಲನೆ ಮತ್ತು ಜೀವವೈವಿಧ್ಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಡಿನ ಜೀವಸಂಕುಲಗಳನ್ನು ರಕ್ಷಿಸುವ ಮತ್ತು ಅವುಗಳನ್ನು ಮಿತವಾಗಿ ಬಳಸುವ ಕುರಿತಂತೆ ಹಂತ ಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ನೀತಿ ನಿರೂಪಣೆಯಿಂದ ತೊಡಗಿ, ಇಲಾಖೆಗಳ ಜೊತೆ ಸೇರಿ ಯೋಜನೆಗಳನ್ನು ರೂಪಿಸುವುದು, ಇಲಾಖೆಗಳ ಜಿಲ್ಲಾಮಟ್ಟದ ವಿಭಾಗಗಳ ಸಹಯೋಗದಲ್ಲಿ ಅನುಷ್ಟಾನಗೊಳಿಸುವದು, ತಳಮಟ್ಟದಲ್ಲಿ ಪಂಚಾಯತ ರಾಜ್ ಸಂಸ್ಥೆಗಳು ಸೇರಿದಂತೆ ಜಸಮೂದಾಯದ ಸಹಭಾಗಿತ್ವದೊಂದಿಗೆ ಜೀವವೈವಿಧ್ಯ ಸಂರಕ್ಷಣೆ ಯೋಜನೆಗಳನ್ನು ಕಾರ್ಯಗತಗೊಳಿಸಿವದು. ಈ ಎಲ್ಲ ನಿಟ್ಟಿನಲ್ಲಿ ಮಂಡಳಿಯ ಚಟುವಟಿಕೆಗಳು ಸಾಗಿವೆ ಎಂದರು.

ತಾಲ್ಲೂಕು ರಾಜ್ಯವೇ ಗಮನಿಸುವಂಥ ಸಂಪದ್ಭರಿತ ವನ ಸಂಪತ್ತನ್ನೊಳಗೊಂಡ ಪ್ರದೇಶವಾಗಿದ್ದು, ಕರ್ನಾಟಕ ಜೀವವೈವಿಧ್ಯ ಮಂಡಳಿ ಹಾಗೂ ತಾಲ್ಲೂಕು ಪಂಚಾಯತ್, ತಾಲ್ಲೂಕು ಜೀವವೈವಿಧ್ಯ ಸಮಿತಿ ಗ್ರಾಮಪಂಚಾಯತ್ ಜೀವವೈವಿಧ್ಯ ಸಮಿತಿ, ಅರಣ್ಯ ಇಲಾಖೆಗಳ ಮೂಲಕ ಈಗಾಗಲೆ ತಾಲೂಕಿನ ಅನೇಕ ಕಡೆ ಅರಣ್ಯ, ಪರಿಸರ ರಕ್ಷಣೆ ಕಾರ್ಯ ಚಟುವಟಿಕೆಯನ್ನ ನಡೆಸಿದ್ದು, ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ, ಮಹಿಳೆಯರಿಗೆ ಜೀವ ವೈವಿಧ್ಯತೆ, ಪರಿಸರ, ಅರಣ್ಯಗಳ ಮಹತ್ವವನ್ನು ತಿಳಿಸಲು ಮುಂದಾಗಿದೆ ಎಂದರು.

ಮುಂದೆ ತಾಲ್ಲೂಕಿನ ಅತಿ ಅಗತ್ಯ, ಅವಶ್ಯ ಜೀವವೈವಿಧ್ಯ ತಾಣಗಳನ್ನಾಗಿಸುವ ನಿಟ್ಟಿನಲ್ಲಿ, ಅರಣ್ಯ ಸಂರಕ್ಷಣೆಯಲ್ಲಿ ಆಸಕ್ತಿ ವಹಿಸಿದ್ದು, ತಾಲ್ಲೂಕಿನ ಹಲವು ಊರುಗಳಲ್ಲಿ ಕೈಗೊಂಡಿರುವ ವಿಸ್ತಾರವಾದ ದೇವರಕಾಡು ಸಂರಕ್ಷಣೆ ಮತ್ತು ಕೆರೆ ಸಂರಕ್ಷಣೆಯ ಜೊತೆಗೆ ಸ್ಥಳೀಯ ರೈತರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ಇವರೆಲ್ಲರನ್ನು ಜೊತೆಯಾಗಿಸಿಕೊಂಡು, ಅಡವಿಜೇನು, ಔಷಧಿ ಗಿಡಮೂಲಿಕೆ, ದೇವರಕಾಕಾಡು, ಕೆರೆಗಳು, ಗೋಮಾಳ ಇವೆಲ್ಲವುಗಳ ಸಂರಕ್ಷಣೆ ವಿಷಯದಲ್ಲಿ ವ್ಯಾಪಕ ಜನಜಾಗೃತಿ ಅಭಿಯಾನ ಹಾಗೂ ತಳಮಟ್ಟದ ಸಂರಕ್ಷಣಾ ಕಾರ್ಯಗಳನ್ನು ಕೈಗೊಂಡಿವೆ. ಗುಡವಿ ಪಕ್ಷಿಧಾಮ, ಚಂದ್ರಗುತ್ತಿ ಬೆಟ್ಟ ಸಂರಕ್ಷಣೆಯಂಥ ಅನನ್ಯ ಕಾರ್ಯಯೋಜನೆಗಳಿಗೆ ಚಾಲನೆ ನೀಡಿದೆ ಎಂದರು.

ಬಿಳಾಗಿ ಕೆರೆ ದೇಶವಿದೇಶದ ಪಕ್ಷಿಗಳ ವಲಸೆ ಪ್ರಕ್ರಿಯೆಗೆ ನೆರವಾಗಿದ್ದು, ಅದರ ರಕ್ಷಣೆ ಸಾರ್ವಜನಿಕರ ಕರ್ತವ್ಯ. ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕೆರೆಯ ರಕ್ಷಣೆಗೆ ಮುಂದಾಗಿದ್ದು ಶ್ಲಾಘನೀಯ. ಜಲನಿರ್ವಹಣೆಯತ್ತ ಆಡಳಿತಗಳ ಜೊತೆಗೆ ಸಾರ್ವಜನಿಕರು ಕೈಜೋಡಿಸಿ ನೀರು ಕಾಯ್ದುಕೊಳ್ಳಬೇಕು. ಸೊರಬ ಪಟ್ಟಣದಲ್ಲಿ ಹರಿಯುತ್ತಿರುವ ದಂಡಾವತಿ ನದಿ ಮಲೀನವಾಗಿದ್ದು, ಸ್ಥಳೀಯ ಆಡಳಿತ ಇದರ ಸ್ವಚ್ಛತೆ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಇದೇ ಉಧ್ಯಾನವನದ ಪಕ್ಕದಲ್ಲಿರುವ ಕೆರೆಗೆ ರಕ್ಷಿತ ಜೀವವೈವಿಧ್ಯ ಕೆರೆ ಘೋಷಣೆ ಮಾಡಿ ನಾಮಫಲಕ ಅನಾವರಣ, ವೃಕ್ಷೆಧ್ಯಾನದಲ್ಲಿ ಅಶೋಕ ವೃಕ್ಷಾರೋಪಣೆ, ತಾಲ್ಲೂಕು ಜೀವವೈವಿಧ್ಯ ನಿರ್ವಹಣೆ, ಯೋಜನೆ ಕುರಿತಾದ ವರದಿ ಬಿಡುಗಡೆಗೊಳಿಸಿದರು. ಈವರೆಗೆ ತಾಲ್ಲೂಕಿನ ಜೀವವೈವಿಧ್ಯ ಸಮತೋಲನಕ್ಕೆ ಪೂರಕವಾಗಿ ನಿಸ್ಪೃಹ ಸೇವೆ ಸಲ್ಲಿಸುತ್ತ ಬಂದಿರುವ ದೇಸಿ ಭತ್ತ ತಳಿ ಪೋಷಕ ಸಂಪಗೋಡು ವೃಷಭಕುಮಾರ್, ದೇಸಿ ಆಲೆಮನೆ ನಿರ್ವಾಹಕ ಕಾನುಗೋಡು ಕೃಷ್ಣಮೂರ್ತಿ, ಸಾವಯವ ಕೃಷಿಕ ಕುಪ್ಪೆ ಛತ್ರಪತಿ, ಜೇನು ಪೋಷಕ ವಿಘ್ನೇಶ್ ತಲಕಾಲುಕೊಪ್ಪ, ಜೀವವೈವಿಧ್ಯ ಪೋಷಕ ಶಾಲೆ ಕಮರೂರು ಮುಖ್ಯ ಶಿಕ್ಷಕ ಪಂಚಾಕ್ಷರಿ ಇವರುಗಳಿಗೆ ಸನ್ಮಾನಿಸಲಾಯಿತು.

ಉದ್ರಿ ಗ್ರಾಪಂ ಅಧ್ಯಕ್ಷೆ ಮನಸ್ವಿನಿ ಅಧ್ಯಕ್ಷತೆ ವಹಿಸಿದ್ದರು. ಸಾಧಕರು ಅನುಭವ ಹಂಚಿಕೊಂಡರು. ಪಿಬಿಆರ್ ಉಪಸಮಿತಿಯ ತಜ್ಞ ಶ್ರೀಪಾದ ಬಿಚ್ಚುಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರ್, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ತಾಪಂ ಪ್ರಭಾರ ಸಹಾಯಕ ನಿರ್ದೇಶಕಿ ಸೀಮಾ, ಪಿಡಿಒ ಹೋಮೇಶ್, ನಾಗೇಂದ್ರಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕ ಸೋಮಶೇಖರ್ ಮೊದಲಾದವರಿದ್ದರು.

ವರದಿ: ಮಧುರಾಮ್, ಸೊರಬ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Anantha Hegde AshisaraKannada NewsKannada News LiveKannada News OnlineKannada News WebsiteKannada WebsiteLatest News KannadaLocal NewsMalnad NewsNews in KannadaNews KannadaShimogaShivamoggaShivamogga NewsSorabaಅನಂತಹೆಗಡೆ ಅಶಿಸರಮಲೆನಾಡು_ಸುದ್ಧಿಶಿವಮೊಗ್ಗ_ನ್ಯೂಸ್ಸೊರಬ
Previous Post

ತೀರ್ಥಹಳ್ಳಿಯಲ್ಲಿ ನವರಸನಾಯಕ: ಕುಪ್ಪಳ್ಳಿಯ ಕುವೆಂಪು ನಿವಾಸಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ಹೇಳಿದ್ದೇನು?

Next Post

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ಯುವಕನ ಅಪಹರಣ: ಸಂಸದ ತಪಿರ್ ಗಾವೊ ಆರೋಪ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯಿಂದ ಯುವಕನ ಅಪಹರಣ: ಸಂಸದ ತಪಿರ್ ಗಾವೊ ಆರೋಪ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಪ್ರೊ.ಬಿ. ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರಲು ಬಿಡಬೇಡಿ: ಬಲ್ಕೀಶ್ ಬಾನು

June 9, 2025

ಎನ್‌ಐಎ ತನಿಖೆಗೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸ್ವಾಗತ

June 9, 2025

ಬೈಲಾ ಅಂಗೀಕಾರ ಹಿಂಪಡೆಯುವಂತೆ ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಆಗ್ರಹ

June 9, 2025

ಪರಿಸರ, ವಿಜ್ಞಾನ ಮಕ್ಕಳ ಬೌದ್ಧಿಕ ಮಟ್ಟ ಸುಧಾರಿಸುವಲ್ಲಿ ಸಹಕಾರಿ: ಡಾ. ಸಿದ್ಧಲಿಂಗಮೂರ್ತಿ

June 9, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಪ್ರೊ.ಬಿ. ಕೃಷ್ಣಪ್ಪನವರು ಹಚ್ಚಿದ ಹೋರಾಟದ ಹಣತೆಯನ್ನು ಆರಲು ಬಿಡಬೇಡಿ: ಬಲ್ಕೀಶ್ ಬಾನು

June 9, 2025

ಎನ್‌ಐಎ ತನಿಖೆಗೆ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ | ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಸ್ವಾಗತ

June 9, 2025

ಬೈಲಾ ಅಂಗೀಕಾರ ಹಿಂಪಡೆಯುವಂತೆ ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಆಗ್ರಹ

June 9, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!