No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Friday, August 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸತ್ಯಸಂಕಲ್ಪ ತೀರ್ಥರ ನಂಬಿ ಬದುಕಿರೋ

ಮೈಸೂರಿನಲ್ಲಿ ಯತಿಗಳ 180ನೇ ಆರಾಧನೋತ್ಸವ ಇಂದು ಸಂಪನ್ನ | ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ನೇತೃತ್ವ

kalpa News by kalpa News
July 13, 2022
in Special Articles
0
ಸತ್ಯಸಂಕಲ್ಪ ತೀರ್ಥರ ನಂಬಿ ಬದುಕಿರೋ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ವಿಶೇಷ ಲೇಖನ  |       

ಭಕ್ತಕೋಟಿಗೆ ಆರೋಗ್ಯ ನೀಡುವ ಶ್ರೀ ಧನ್ವಂತರಿ ದೇವರ ಅತಿ ದೊಡ್ಡ ಮೂರ್ತಿಗೆ ನಿತ್ಯವೂ ಸೇವೆ ನಡೆಯುವ ಕ್ಷೇತ್ರವಾಗಿ ಮೈಸೂರು ಗುರುತಿಸಿಕೊಂಡಿದೆ. ಇದು ಸತ್ಯ. ಈ ಧನ್ವಂತರಿ ದೇವ ಪ್ರತಿಷ್ಠಾಪನೆಗೊಂಡಿರುವುದು ಮೈಸೂರಿನ ಅಗ್ರಹಾರದ ಉತ್ತರಾದಿ ಮಠದಲ್ಲಿ Mysore Uttaradhi Mutt. ಎರಡು ಪುರಾತನ ಮೂಲ ವೃಂದಾವನವಿರುವ ಪವಿತ್ರ ತಾಣದಲ್ಲಿ ಧನ್ವಂತರಿ ನೆಲೆ ಇರುವುದು ಭಕ್ತಗಣದ ಯೋಗಾಯೋಗ.

ಕೈಯಲ್ಲಿ ಅಮೃತ ಕಲಶ ಹಿಡಿದು ಕ್ಷೀರ ಸಮುದ್ರ ಮಥನ ಕಾಲದಲ್ಲಿ ಮಹಾವಿಷ್ಣು ಧನ್ವಂತರಿ ಅವತಾರ ತಾಳಿದ ಎಂದು ಪುರಾಣಗಳು ವರ್ಣಿಸಿವೆ. ಧನ್ವಂತರಿಯನ್ನು ನಿತ್ಯ ಪ್ರಾರ್ಥಿಸಿದರೆ ದೇಹ ಮತ್ತು ಮನಸ್ಸು ಚೈತನ್ಯಪೂರ್ಣವಾಗುತ್ತವೆ ಎನ್ನುತ್ತದೆ ಧನ್ವಂತರಿ ಸುಪ್ರಭಾತ. ಈತ ವಿಶ್ವದ ಮೊದಲ ವೈದ್ಯ. ಆಯುರ್ವೇದದ ಹರಿಕಾರನೂ ಹೌದು.

ದ್ವೈತಮತ ಸಿದ್ಧಾಂತಿ ಶ್ರೀಮಧ್ವರು ತಂತ್ರಸಾರ ಸಂಗ್ರಹದಲ್ಲಿ ವರ್ಣಿಸಿದಂತೆ ಏಕಶಿಲಾ ಮೂರ್ತಿಯನ್ನು ಮೈಸೂರಿನಲ್ಲಿ ಪ್ರತಿಷ್ಠಾಪಿಸಬೇಕೆಂದು ಶ್ರೀ ಸತ್ಯಾತ್ಮತೀರ್ಥರು ಮಾಡಿದ ಸಂಕಲ್ಪ 2021ರ ಜೂನ್ 20ರಂದು ನೆರವೇರಿತು. ಜ್ಯೇಷ್ಠ ಶುಕ್ಲದಶಮಿ ಪುಣ್ಯದಿನದಂದು ಪ್ರಾಣಪ್ರತಿಷ್ಠೆ ಮಾಡುವ ಸಂದರ್ಭ `ವಿಶ್ವಕ್ಕೆ ಅಂಟಿದ ಮಹಾಮಾರಿ ಕರೋನಾ ನಿರ್ಮೂಲನೆಯಾಗಲಿ’ ಎಂದು ಶ್ರೀಗಳು ಮಾಡಿದ ಪ್ರಾರ್ಥನೆ ಶೀಘ್ರ ಫಲಿಸಿದ್ದೂ ಗಮನಾರ್ಹ. ೮ ಅಡಿ ಎತ್ತರದ ಏಕಶಿಲಾಮೂರ್ತಿ ಒಂದು ಕೈಯಲ್ಲಿ ಅಮೃತ ಕಲಶ, ಇನ್ನೊಂದು ಕೈಯಲ್ಲಿ ಅಭಯಪ್ರದನಾಗಿ ಪದ್ಮಾಸನದಲ್ಲಿ ಆಸೀನವಾಗಿರುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೌಭಾಗ್ಯ.

ಅನಂತ ಫಲ ಲಭ್ಯ:
ಧನ್ವಂತರಿ ದೇವರಸಹಿತ ಶ್ರೀ ಸತ್ಯಸಂಕಲ್ಪರು ಮತ್ತು ಶ್ರೀ ಸತ್ಯಸಂತುಷ್ಟ ತೀರ್ಥರ ವೃಂದಾವನ ಸನ್ನಿಧಾನಕ್ಕೆ ಪ್ರತಿನಿತ್ಯವೂ ಭಕ್ತರು 3 ಅಥವಾ 5 ಪ್ರದಕ್ಷಿಣೆ ಹಾಕುತ್ತಾರೆ. ವಾರದಲ್ಲೇ ಅವರ ಸಂಕಲ್ಪ ಸಿದ್ಧಿಸುತ್ತದೆ. ವಿವಿಧ ಕಾಯಿಲೆಗಳಿಂದ ನರಳುತ್ತಿದ್ದವರು, ತಜ್ಞರಿಂದಲೇ ವಾಸಿ ಮಾಡಲಾಗದ ವ್ಯಾಧಿಗಳಿಂದ ಬಳಲುತ್ತಿದ್ದವರು ಇಲ್ಲಿ ಬಂದು ನಮಿಸಿದ್ದರ ಫಲವಾಗಿ ಚೇತರಿಕೆಗೊಂಡಿದ್ದಾರೆ. ಪವಾಡಸದೃಶವಾಗಿ ಹಲವರು ಬದುಕುಳಿದ ಪ್ರಸಂಗಗಳೂ ಇವೆ. ಆಯುರಾರೋಗ್ಯ ಪ್ರಾಪ್ತಿಯಾಗಿ, ಹತ್ತಾರು ಕಂಟಕಗಳಿಂದ ಮುಕ್ತಿಹೊಂದಿ ಜೀವನದಲ್ಲಿ ಹೊಸ ಬೆಳಕನ್ನು ಕಂಡು ಸಂಭ್ರಮಿಸಿದವರ ಸಂಖ್ಯೆ ದೊಡ್ಡದೇ ಇದೆ. ಹೀಗೆ ಅನುಗ್ರಹೀತರಾದವರು ದೇವರಿಗೆ ಶಕ್ತ್ಯಾನುಸಾರ ಆತ್ಮಪೂರ್ವಕ ಸೇವೆಗಳನ್ನು ಸಮರ್ಪಿಸುತ್ತಾರೆಂದರೆ ಅದು ಭಕ್ತಿ ಭಾವದ ಪ್ರತೀಕವೇ ಆಗಿದೆ. ಇಲ್ಲಿ ಯಾವುದೇ ಜಾತಿ, ಮತ ತಾರತಮ್ಯವಿಲ್ಲ. ಮೇಲು- ಕೀಳು ಭೇದವಿಲ್ಲ. ಆಬಾಲವೃದ್ಧರಾಗಿ ಎಲ್ಲರೂ ಬಂದು ಸೇವೆ ಸಮರ್ಪಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಇಬ್ಬರು ಯತಿಗಳ ಸನ್ನಿಧಾನವನ್ನು ಪೂಜಿಸುವ ಯೋಗ ನನಗೆ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯವೇ ಸರಿ.
ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ಸುಧಾ ಗ್ರಂಥ ಅಧ್ಯಯನ ಪೂರ್ಣಗೊಳಿಸಿ ಈ ಸನ್ನಿಧಾನಕ್ಕೆ ವ್ಯವಸ್ಥಾಪಕನಾಗಿ ನೇಮಕಗೊಂಡಿzನೆ. ಭಕ್ತರ ವಿಭಿನ್ನ ಅನುಭವಗಳನ್ನು ಕೇಳುವ ಪುಣ್ಯವೂ ನನಗೆ ದೊರೆತಿದೆ.
| ಪಂಡಿತ ಅನಿರುದ್ಧಾಚಾರ್ಯ, ವ್ಯವಸ್ಥಾಪಕರು

ವೃಂದಾವನ ಕ್ಷೇತ್ರವೂ ಹೌದು:
ಆಚಾರ್ಯ ಮಧ್ವರ ನೇರಪರಂಪರೆಯ ಶ್ರೀ ಸತ್ಯಸಂಕಲ್ಪ ತೀರ್ಥರು ಮತ್ತು ಶ್ರೀ ಸತ್ಯಸಂತುಷ್ಟತೀರ್ಥರ ಮೂಲ ವೃಂದಾವನಗಳು ಇಲ್ಲಿವೆ. 1830 ರಿಂದ 1842ರ ವರೆಗೆ ಶ್ರೀ ಮಧ್ವರ ಮಹಾ ಪರಂಪರೆಯ ವೇದಾಂತ ಸಾಮ್ರಾಜ್ಯವನ್ನಾಳಿದ ಸತ್ಯಸಂಕಲ್ಪ ತೀರ್ಥರು
(ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ತೀರ್ಥರ ಶಿಷ್ಯರು) ದೇಶದೆಲ್ಲೆಡೆ ದಿಗ್ವಿಜಯ ಮಾಡಿ, ಹಲವು ಗ್ರಂಥಗಳನ್ನು ರಚಿಸಿದ ನಂತರ ಮೈಸೂರಿಗೆ ಆಗಮಿಸಿದರು. ಮಹಾಜ್ಞಾನಿಗಳೂ ಆಗಿದ್ದ ಅವರು 12 ವರ್ಷ ಕಾಲ ಜಾತಿ ಮತ ಸಂಕೋಲೆ ಮೀರಿ ಸಕಲರಿಗೂ ಅನ್ನದಾನ ಮಾಡಿದ ಮಹಾತ್ಮರು.(ಅವರ ಆಶೀರ್ವಾದದ ಫಲವಾಗಿ ಇಂದಿಗೂ ಮಠದಲ್ಲಿ ನೂರಾರು ಜನರಿಗೆ ಅನ್ನದಾನ ಸೇವೆ ನಡೆಯುತ್ತಿದೆ).

Also read: ವಿಐಎಸ್‌ಎಲ್’ನಲ್ಲಿ ಐಕಾನಿಕ್ ವೀಕ್ ಆಚರಣೆ: ಕಾರ್ಖಾನೆಗೆ ಭೇಟಿ ನೀಡಿ ಸಂಭ್ರಮಿಸಿದ ವಿದ್ಯಾರ್ಥಿಗಳು

ಮೈಸೂರಿನ ಅರಮನೆಯಲ್ಲಿ 10ನೇ ಚಾಮರಾಜ ಒಡೆಯರ್ ಪ್ರಾರ್ಥನೆಯಂತೆ ಸತ್ಯ ಸಂಕಲ್ಪರು ಮೂಲ ರಾಮದೇವರ ಪೂಜೆಯನ್ನು ವೈಭವದಿಂದ ನೆರವೇರಿಸಿದರು. ರಾಜರಿಗೆ ಧರ್ಮೋಪದೇಶ ಮಾಡಿದರು. ಮಹಾರಾಜರೇ ಖುದ್ದಾಗಿ ನಿಂತು ಅರಮನೆ ಸಮೀಪವೇ ನಿರ್ಮಿಸಿ ಕೊಟ್ಟ ಶ್ರೀ ಮಠದಲ್ಲಿ ನೆಲೆಸಿದರು. ಶ್ರೀ ಸತ್ಯಸಂತುಷ್ಟ ತೀರ್ಥರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿ ಇಲ್ಲಿಯೇ 1842ರಲ್ಲಿ ವೃಂದಾವನಸ್ಥರಾದರು. ಶ್ರೀಗಳ ಜ್ಞಾನ ಮತ್ತು ತಪೋಬಲದ ಫಲವಾಗಿ ಸರ್ವ ಕಾಲದಲ್ಲೂ ಇವರ ವೃಂದಾವನದ ಸುತ್ತ ನೀರಿನ ಹನಿಗಳು ಬರುವುದನ್ನು ಇಂದಿಗೂ ವೀಕ್ಷಿಸಬಹುದು. ಹಾಗಾಗಿ, ಇವರು `ಗಂಗಾ ಸನ್ನಿಧಾನ ಪಾತ್ರ’ರೆಂದೇ ವಿಖ್ಯಾತರಾಗಿದ್ದಾರೆ.
ಮಹಾಮಹಿಮರು ವೃಂದಾವನ ಪ್ರವೇಶ ಮಾಡಿ 179 ವರ್ಷಗಳು ಪೂರ್ಣಗೊಂಡಿದ್ದು, ಜು.13ರಂದು 180ನೇ ಆರಾಧನೋತ್ಸವ ನಡೆಯಲಿದೆ. ಇದರ ಅಂಗವಾಗಿ ಬೆಳಗ್ಗೆ ಮೂಲ ವೃಂದಾವನಕ್ಕೆ ಶ್ರೀ ಸತ್ಯಾತ್ಮತೀರ್ಥರಿಂದ ವಿಶೇಷ ಪಂಚಾಮೃತ ಅಭಿಷೇಕ, ಅಲಂಕಾರ, ಮಹಾನೈವೇದ್ಯ ಮತ್ತು ಸಂಸ್ಥಾನ ಪ್ರತಿಮೆಗಳ ಪೂಜೆ ನೆರವೇರಲಿದೆ. ಚಾತುರ್ಮಾಸ ಅಂಗವಾಗಿ ಒಂದು ಸಾವಿರಾರು ಭಕ್ತರಿಗೆ ಶ್ರೀಗಳಿಂದ ತಪ್ತಮುದ್ರಾ ಧಾರಣೆಯೂ ಆಗಲಿದೆ ಎಂಬುದು ವಿಶೇಷ.

ವಿಶೇಷ ಸೇವಾಕಾರ್ಯಗಳು :
ಸನ್ನಿಧಾನದಲ್ಲಿ ಪ್ರತಿನಿತ್ಯವೂ ತಂತ್ರಸಾರೋಕ್ತ ಪೂಜೆಯೊಂದಿಗೆ ಭಾರತೀಯ ಸಂಪ್ರದಾಯದ ಎಲ್ಲ ಹಬ್ಬ-ಹರಿದಿನಗಳನ್ನು ಆಚರಿಸಲಾಗುತ್ತದೆ. ಪ್ರತಿ ಭಾನುವಾರ ಧನ್ವಂತರಿಗೆ ಕ್ಷೀರಾಭಿಷೇಕ, ಹೊಸ ರೇಷ್ಮೆವಸ್ತ್ರ ಸಮರ್ಪಣೆ, ಪುಷ್ಪಲಂಕಾರ, ಲೋಕ ಕಲ್ಯಾಣಕ್ಕಾಗಿ ಧನ್ವಂತರಿ ಯಾಗ, ಸಂಜೆ ರಜತ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಯುಗಾದಿ ಹಿಂದಿನ ಅಮಾವಾಸ್ಯೆ ಶ್ರೀ ಸತ್ಯಸಂತುಷ್ಟ ತೀರ್ಥರ ಆರಾಧನೆ, ರಾಮನವಮಿ ಉತ್ಸವ, ಭಾದ್ರಪದದಲ್ಲಿ 7 ದಿನ ಧನ್ವಂತರಿ ಉತ್ಸವ, ಜ್ಯೇಷ್ಠ ಶುಕ್ಲ ದಶಮಿ ಧನ್ವಂತರಿ ಪ್ರತಿಷ್ಠಾಪನೋತ್ಸವ ನಿಮಿತ್ತ 5 ದಿನಗಳ ಪಂಚರಾತ್ರೋತ್ಸವ ವಿಜೃಂಭಣೆಯಿಂದ ನೇರವೇರುತ್ತದೆ. ಭಕ್ತರು ಮೊ: 9448147459 ಸಂಪರ್ಕಿಸಬಹುದು.
– ಎ.ಆರ್. ರಘುರಾಮ ಮೈಸೂರು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Kannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadamysoreNewsinKannadaNewsKannadaಮೈಸೂರುಮೈಸೂರು ಉತ್ತರಾಧಿ ಮಠವಿಶೇಷ ಲೇಖನ
Share237Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಐಎಸ್‌ಎಲ್’ನಲ್ಲಿ ಐಕಾನಿಕ್ ವೀಕ್ ಆಚರಣೆ: ಕಾರ್ಖಾನೆಗೆ ಭೇಟಿ ನೀಡಿ ಸಂಭ್ರಮಿಸಿದ ವಿದ್ಯಾರ್ಥಿಗಳು

Next Post

ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನೆ

kalpa News

kalpa News

Next Post
ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನೆ

ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನೆ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL