No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Friday, March 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಈಗಲಾದರೂ ಹಿಂದೂ ಸಮಾಜ, ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಸಂಸದ ತೇಜಸ್ವಿ ಸೂರ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 28, 2022
in ಬೆಂಗಳೂರು ನಗರ
0
ಈಗಲಾದರೂ ಹಿಂದೂ ಸಮಾಜ, ಸರ್ಕಾರ ಎಚ್ಚೆತ್ತುಕೊಳ್ಳಬೇಕು: ಸಂಸದ ತೇಜಸ್ವಿ ಸೂರ್ಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  |       

ಅಂದು ಶಿವಮೊಗ್ಗದ ಹರ್ಷ, ಇಂದು ಬೆಳ್ಳಾರೆಯ ಪ್ರವೀಣ್. ಈಗಲಾದರೂ ಹಿಂದೂ ಸಮಾಜ ಹಾಗೂ ಸರ್ಕಾರದ ಮಟ್ಟದಲ್ಲಿ ಎಚ್ಚೆತ್ತುಕೊಳ್ಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ MP Tejaswi Surya ಹೇಳಿದ್ದಾರೆ.

ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿನ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರುವಿನ ಭೀಕರ ಹತ್ಯೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪತ್ರ ಬರೆದಿರುವ ಅವರು, ತಮ್ಮ ಆಕ್ರೋಶವನ್ನು ಅಕ್ಷರದ ರೂಪದಲ್ಲಿ ಹೊರ ಹಾಕಿದ್ದಾರೆ.
ತೇಜಸ್ವಿ ಸೂರ್ಯ ಅವರ ಬಹಿರಂಗ ಪತ್ರದ ಯಥಾವತ್ ಇಲ್ಲಿದೆ:
ಅತ್ಯಂತ ದುಖಃ, ಬೇಸರ ಹಾಗೂ ನೋವಿನಿಂದ ಇದನ್ನು ಬರೆಯುತ್ತಿದ್ದೇನೆ.
ಬಿಜೆಪಿ ಯುವ ಮೋರ್ಚಾದ ನನ್ನ ಸಹೋದರ ಪ್ರವೀಣ್ ನೆಟ್ಟಾರು ರವರ ಬರ್ಬರ ಹತ್ಯೆಯನ್ನು ಖಂಡಿಸಿ, ಅವರ ಆತ್ಮಕ್ಕೆ ಸದ್ಗತಿ ಕೋರಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬ ಸದಸ್ಯರ ಜೊತೆ ಈಗಷ್ಟೇ ಮಾತನಾಡಿ ಸಾಂತ್ವನ ತಿಳಿಸಿದ್ದೇನೆ. ದೇಶದ ಸಮಸ್ತ ಬಿಜೆಪಿ ಕಾರ್ಯಕರ್ತರ ಕುಟುಂಬ, ಪ್ರವೀಣ್ ರವರ ಕುಟುಂಬದ ಜೊತೆ ನಿಲ್ಲಲಿದೆ. ಹರ್ಷ & ಪ್ರವೀಣ್‌ ನೆಟ್ಟಾರು ರವರ ಪ್ರಕರಣವನ್ನು U.A.P.A ಕಾಯ್ದೆಯ ವ್ಯಾಪ್ತಿಯಡಿಯಲ್ಲಿ ತಂದು ಸಮಗ್ರ ತನಿಖೆ ನಡೆಸುವಂತೆ ನಾನು ಮುಖ್ಯಮಂತ್ರಿಯವರಲ್ಲಿ ಕೋರುತ್ತೇನೆ.

ಕಳೆದ 2 ದಿನಗಳಿಂದ ನಾನು ತಿರಂಗಾ ಯಾತ್ರೆಯ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಇರುವುದರಿಂದ ಶ್ರೀನಗರದ ಲಾಲ್‌ ಚೌಕ್‌ ನಿಂದ ಕಾರ್ಗಿಲ್‌ ವರೆಗೆ ಐತಿಹಾಸಿಕ ಬೈಕ್‌ ರ್ಯಾಲಿಯಲ್ಲಿ ಪಾಲ್ಗೊಂಡಿದ್ದೆ. 1952 ರ ನಂತರ ಶ್ರೀನಗರದ ಲಾಲ್‌ ಚೌಕ್‌ ನಲ್ಲಿ ಯಾವುದೇ ರಾಜಕೀಯ ಪಕ್ಷದ ವತಿಯಿಂದ ಕಾರ್ಯಕ್ರಮಗಳು ನಡೆದಿರುವುದಿಲ್ಲ. ಬಿಜೆಪಿ ಯುವಮೋರ್ಚಾ ವತಿಯಿಂದ ದೇಶದ ವಿವಿಧ ಭಾಗಗಳ ಹುತಾತ್ಮ ಸೈನಿಕರ ಮನೆಯ ಅಂಗಳದ ಮಣ್ಣನ್ನು ಕಲಷದಲ್ಲಿ ಹೊತ್ತು ತಂದು ಕಾರ್ಗಿಲ್‌ ಯುದ್ಧ ಸ್ಮಾರಕದ ಪರಿಸರದಲ್ಲಿ ಗಿಡ ನೆಡುವ ಐತಿಹಾಸಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದೆ.
ಮಾನ್ಯ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ರಾಷ್ಟ್ರವಾದದ ಚಿಂತನೆಯ ಫಲಗಳು ಇಂದು ಕಣಿವೆ ರಾಜ್ಯದಲ್ಲಿ ಯಶಸ್ವಿಯಾಗಿ ಫಲ ಕೊಡುತ್ತಿರುವ ಹಿನ್ನೆಲೆ ಬೈಕ್‌ ರ್ಯಾಲಿಯಲ್ಲಿ ಪಾಲ್ಗೊಂಡ ಖುಷಿಯಲ್ಲಿ ಇರುವಾಗಲೇ ನನ್ನ ತವರು ರಾಜ್ಯದಿಂದ ಇಂತಹ ಭಿಕರ ಘಟನೆ ನಡೆದಿರುವುದು ನನ್ನ ಮನಸ್ಸಿಗೆ ಅತ್ಯಂತ ನೋವನ್ನುಂಟು ಮಾಡಿವೆ.

ಮಾನ್ಯ ಮುಖ್ಯಮಂತ್ರಿ, ಗೃಹಮಂತ್ರಿ ಹಾಗೂ ಪೊಲೀಸ್ ಇಲಾಖೆ ಇಂತಹ ಹತ್ಯೆಗಳನ್ನು ಕೇವಲ ಧಾರ್ಮಿಕ ಕಾರಣದ ಹತ್ಯೆ ಎಂಬುದಾಗಿ ಪರಿಗಣಿಸದೇ, ಇದರ ಹಿಂದಿರುವ ವ್ಯವಸ್ಥಿತ ಜಾಲ, ಸಂಚನ್ನು ಬಯಲಿಗೆಳೆಯುವ ಮೂಲಕ ಇದರ ಹಿಂದಿರುವ ವ್ಯವಸ್ಥಿತ ಜಾಲ,ಪ್ರಮುಖ ಸಂಘಟನೆ ಹಾಗೂ ಧಾರ್ಮಿಕ ಮೂಲಭೂತವಾದವನ್ನು ಬಿತ್ತುವ ಪ್ರಮುಖ ವ್ಯಕ್ತಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಮನವಿ ಸಲ್ಲಿಸುತ್ತೇನೆ.ಬಿಜೆಪಿ ಯುವ ಮೋರ್ಚಾದ ಸಮಸ್ತ ಕಾರ್ಯಕರ್ತರು ಪ್ರವೀಣ್ ಕುಟುಂಬದೊಂದಿಗೆ ಇರಲಿದ್ದು, ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲಾಗುವುದು.

ಶಿವಮೊಗ್ಗದ ಹರ್ಷ ಭೀಕರ ಹತ್ಯೆಯಾದಾಗಲೂ ಕೂಡ ನಾನು ಮಾನ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದನ್ನು ಈಗಲೂ ಪುನರುಚ್ಚರಿಸಲು ಬಯಸುತ್ತೇನೆ.
ಸರ್ಕಾರಕ್ಕೆ ನಾನು ಸಲ್ಲಿಸಿದ್ದ ಮನವಿಯಂತೆ,

  • ಪ್ರವೀಣ ನೆಟ್ಟಾರು & ಹರ್ಷ ರವರನ್ನು ಕೊಲೆಗೈದಿರುವ ರೀತಿ ಹಾಗೂ ಕರ್ನಾಟಕದಲ್ಲಿ ಧಾರ್ಮಿಕ ಕಾರಣಗಳಿಗಾಗಿ ನಡೆದಿರುವ ಹಿಂದೂ ಕಾರ್ಯಕರ್ತರ ಸರಣಿಹತ್ಯೆಗಳು, ಕೆಲವು ಮತಾಂಧ ಇಸ್ಲಾಮಿಕ್ ಸಂಘಟನೆಗಳ ಪೂರ್ವನಿಯೋಜಿತ ಸಂಘಟಿತ ಅಪರಾಧ (ಷಡ್ಯಂತ್ರ)ದ ಭಾಗವಾಗಿವೆ. ಇವುಗಳನ್ನು ಕೇವಲ ಸಾಮಾನ್ಯ ಹತ್ಯೆಗಳೆಂದು ಪರಿಗಣಿಸದೇ, ಭಯೋತ್ಪಾದನೆಯ ಪ್ರಕರಣಗಳೆಂದು ಪರಿಗಣಿಸಬೇಕು. ಸಾಮಾನ್ಯ ಹತ್ಯೆ ಎಂಬ ತೀರ್ಮಾನಕ್ಕೆ ಬಂದಲ್ಲಿ, ತನಿಖೆ ಹಾದಿ ತಪ್ಪುವ ಮತ್ತು ನೈಜ ಅಪರಾಧಿಗಳನ್ನು ತಪ್ಪಿತಸ್ಥರೆಂದು ಬಿಂಬಿಸಲು ಅಸಾಧ್ಯವಾಗುವ ಸಂಭವವಿದೆ.ಹರ್ಷ ರವರ ಪ್ರಕರಣವನ್ನು UAPA ಅಡಿ ಸಮಗ್ರ ತನಿಖೆಗೆ ಒಳಪಡಿಸಬೇಕು.
  • ಕರ್ನಾಟಕಕ್ಕೆ ವಿಶೇಷವಾಗಿ ಭಯೋತ್ಪಾದನಾ ನಿಗ್ರಹ ದಳದ ಅವಶ್ಯಕೆತೆ ಇದ್ದು,ಇದಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳು, ಭಯೋತ್ಪಾದನೆಯ ಸಂಬಂಧಿತ ತನಿಖೆಗೆ ಅಗತ್ಯ ಸಿಬ್ಬಂದಿ ಹಾಗೂ ಎನ್.ಐ. ಎ ನ ಸಹಯೋಗದಲ್ಲಿ ದಕ್ಷವಾಗಿ ಕಾರ್ಯನಿರ್ವಹಿಸಬಲ್ಲ ವಿಶೇಷ ದಳದ ಅಗತ್ಯತೆ ಇದೆ. ಪ್ರಸ್ತುತ ಪೊಲೀಸ್ ಪಡೆಗೆ ಇರುವ ಮಿತಿಯಲ್ಲಿ ಭಯೋತ್ಪಾದನಾ ಪ್ರಕರಣಗಳನ್ನು ನಿಭಾಯಿಸುವ ಮೂಲಭೂತ ಸೌಕರ್ಯಗಳು, ಸಂಪನ್ಮೂಲಗಳ ಕೊರತೆ ಇರುವುದರಿಂದ ಇಂತಹ ಪ್ರಕರಣಗಳಿಗೆ ವಿಶೇಷ ಪಡೆ ರಚಿಸಿ, ಮುಂಬರುವ ಬಜೆಟ್ ನಲ್ಲಿ ಇದಕ್ಕೆ ಸೂಕ್ತ ಅನುದಾನ ಒದಗಿಸಿ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ನಾನು ಒತ್ತಾಯಿಸುತ್ತೇನೆ.

  • ಕರ್ನಾಟಕ ಸರ್ಕಾರವು ಕೋಕಾ ಕಾಯ್ದೆ ಗೆ ತಿದ್ದುಪಡಿಯನ್ನು ತಂದು ಸಂಘಟಿತ ಅಪರಾಧಗಳ ಅಡಿಯಲ್ಲಿ, ದೇಶದ್ರೋಹಿ ಚಟುವಟಿಕೆಗಳು, ಹಿಂದೂ ಕಾರ್ಯಕರ್ತರ ಹತ್ಯೆಗಳಲ್ಲಿ ಭಾಗಿಯಾಗಿರುವ ಮತಾಂಧ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳುವದನ್ನು ಮುಖ್ಯ ಆದ್ಯತೆಯನ್ನಾಗಿ ಪರಿಗಣಿಸಿ, ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಘೋಷಣೆ ಮಾಡಬೇಕು.
  • ಕರ್ನಾಟಕ ಸರ್ಕಾರವು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುತ್ತಿರುವ, ಕಾನೂನು ವಿರೋಧಿ ಕಾರ್ಯಗಳಲ್ಲಿ ಪಾಲ್ಗೊಂಡು ಸಂಘಟಿತವಾಗಿ ಹಿಂದೂ ವಿರೋಧೀ ಕಾರ್ಯಗಳಲ್ಲಿ ನಿರತರಾಗಿರುವ ಸಂಘಟನೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರಕ್ಕೆ ಉತ್ತರ ಪ್ರದೇಶದ ಮಾದರಿಯಲ್ಲಿ ಸೂಕ್ತ ದಾಖಲೆಗಳ ಸಮಗ್ರ ವರದಿ ಸಲ್ಲಿಸಿ,ಸಮಾಜ ಘಾತಕ ಶಕ್ತಿಗಳ ವಿರುದ್ಧ ನ್ಯಾಯಾಂಗ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕು.
  • ಈ 4 ಅಂಶಗಳನ್ನು ಪರಿಗಣಿಸಿ, ಸಮಸ್ಯೆಗೆ ಆಮೂಲಾಗ್ರ ತರದಿದ್ದರೆ, ಪ್ರತೀ ಸಲ ಯಾವುದಾದರು ಒಬ್ಬ ವ್ಯಕ್ತಿಯ ಹತ್ಯೆಯಾದಾಗ ಖಂಡನೆ, ಉಗ್ರಶಿಕ್ಷೆಯ ಮಾತುಗಳನ್ನಾಡಿ 3 ದಿನಗಳ ನಂತರ ಯಥಾಸ್ಥಿತಿ ಹಾಗೂ ಮತ್ತೊಂದು ಬಲಿಯಾದಾಗ ಮತ್ತೆ ಇಂತಹ ಹೇಳಿಕೆಗಳನ್ನು ಪುನರುಚ್ಚರಿಸುವ ಬದಲು, ಸಮಸ್ಯೆಯ ಮೂಲಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಾದ ಅಗತ್ಯತೆಯನ್ನು ನಾನು ಸರ್ಕಾರಕ್ಕೆ ಒತ್ತಾಯಪಡಿಸುತ್ತೇನೆ.

ಇಂತಹ ಪ್ರತೀ ಘಟನೆಯ ನಂತರವಾದರೂ ಸಮಸ್ತ ಹಿಂದೂ ಸಮಾಜ ಎಚ್ಚೆತ್ತುಕೊಂಡು ಬದಲಾವಣೆಗೊಳ್ಳುವುದರೊಂದಿಗೆ ಹಾಗೂ ಅದೇ ರೀತಿ ಸರ್ಕಾರದ ಮಟ್ಟದಲ್ಲಿ ಸಾಂಸ್ಥಿಕ ಬದಲಾವಣೆಗಳನ್ನು ತರುವುದು ಕೂಡ ಪ್ರಸ್ತುತ ಸನ್ನಿವೇಶದಲ್ಲಿ ಅತ್ಯಂತ ಅವಶ್ಯಕ ಎನ್ನುವುದನ್ನು ನಾನು ಸರ್ಕಾರಕ್ಕೆ ಒತ್ತಾಯಪಡಿಸುತ್ತೇನೆ. ಈಗಲಾದರೂ ಸಮಸ್ತ ಹಿಂದೂ ಸಮಾಜ ಹಾಗೂ ಸರ್ಕಾರದ ಮಟ್ಟದಲ್ಲಿ ಎಚ್ಚೆತ್ತುಕೊಳ್ಳಲೇಬೇಕಾದ ಅಗತ್ಯತೆ ಇದೆ.

ಪ್ರವೀಣ್‌ ನೆಟ್ಟಾರು ರವರ ಆತ್ಮಕ್ಕೆ ಸದ್ಗತಿ ಕೋರುತ್ತ, ಅವರ ಕುಟುಂಬದ ಜೊತೆ ಸಮಸ್ತ ಹಿಂದೂ ಸಮಾಜ ಇದೆ ಎಂಬುದನ್ನು ನಾವೆಲ್ಲರೂ ಪ್ರಚುರಪಡಿಸುವ ಅಗತ್ಯತೆ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: BangaloreKannada News WebsiteKannadaNewsKannadaNewsLiveKannadaNewsOnlineKannadaWebsiteLatest News KannadaMP Tejaswi SuryaNewsinKannadaNewsKannadaState Newsಬೆಂಗಳೂರುಸಂಸದ ತೇಜಸ್ವಿ ಸೂರ್ಯ
Share197Tweet123Send
Previous Post

ಸೇವಾನ್ಯೂನ್ಯತೆ ಎಸಗಿದ ಸಹಾರಾ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಗೆ ಜಿಲ್ಲಾ ಗ್ರಾಹಕರ ಆಯೋಗದಿಂದ 75000ರೂ. ದಂಡ

Next Post

ಜುಲೈ 31: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ‘ವಂದೇ ಗುರು ಪರಂಪರಾಂ ತೆಲುಗು ಅನುವಾದದ ಕೃತಿ ಬಿಡುಗಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಜುಲೈ 31: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ‘ವಂದೇ ಗುರು ಪರಂಪರಾಂ ತೆಲುಗು ಅನುವಾದದ ಕೃತಿ ಬಿಡುಗಡೆ

ಜುಲೈ 31: ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ‘ವಂದೇ ಗುರು ಪರಂಪರಾಂ ತೆಲುಗು ಅನುವಾದದ ಕೃತಿ ಬಿಡುಗಡೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ವಿಐಎಸ್ ಎಲ್ ಆಸ್ಪತ್ರೆ ಅಧಿಕಾರಿ ಶಿವಮೂರ್ತಿ ನಿಧನ

ವಿಐಎಸ್ ಎಲ್ ಆಸ್ಪತ್ರೆ ಅಧಿಕಾರಿ ಶಿವಮೂರ್ತಿ ನಿಧನ

March 20, 2026
ಸ್ಥಳೀಯ ಪತ್ರಿಕೆಗಳ ಮೇಲಿನ ಗದಾಪ್ರಹಾರದ ವಿರುದ್ದ ಹೋರಾಟಕ್ಕೆ ಸಭೆ

ಸ್ಥಳೀಯ ಪತ್ರಿಕೆಗಳ ಮೇಲಿನ ಗದಾಪ್ರಹಾರದ ವಿರುದ್ದ ಹೋರಾಟಕ್ಕೆ ಸಭೆ

March 20, 2026
ಹಳೆ ಮೀಸಲಾತಿ ಅನ್ವಯವೇ ನೇಮಕಾತಿ ಒತ್ತಾಯಿಸಿ ಮಾ.24ರಂದು ಬೃಹತ್ ಪ್ರತಿಭಟನೆ

ಹಳೆ ಮೀಸಲಾತಿ ಅನ್ವಯವೇ ನೇಮಕಾತಿ ಒತ್ತಾಯಿಸಿ ಮಾ.24ರಂದು ಬೃಹತ್ ಪ್ರತಿಭಟನೆ

March 20, 2026
ಭದ್ರಾವತಿ | ಮಹಿಳೆ ಆತ್ಮಹತ್ಯೆ ಪ್ರಕರಣ | ಒಂದೇ ಕುಟುಂಬದ ಐವರಿಗೆ 3 ವರ್ಷ ಜೈಲು ಶಿಕ್ಷೆ

ದಲಿತ ವ್ಯಕ್ತಿಗೆ ಜಾತಿ ನಿಂದನೆ, ಜೀವ ಬೆದರಿಕೆ | ಭದ್ರಾವತಿಯ 6 ಮಂದಿಗೆ 2 ವರ್ಷ ಜೈಲು, ಭಾರೀ ದಂಡ

March 20, 2026
ಮಾ.24ರಿಂದ ಮೂರು ದಿನ ವ್ಯಾಪಾರ ಮೇಳ ಮತ್ತು ಪ್ರದರ್ಶನ

ಮಾ.24ರಿಂದ ಮೂರು ದಿನ ವ್ಯಾಪಾರ ಮೇಳ ಮತ್ತು ಪ್ರದರ್ಶನ

March 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL