ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಿಳೆಯರು ಸಾಮಾಜಿಕ ಬದ್ಧತೆ ಹಾಗೂ ಸ್ವಾಸ್ತ್ಯ ಕುರಿತು ಸ್ವಯಂ ರಕ್ಷಣಾ ಕೌಶಲ್ಯವನ್ನು ಅಳವಡಿಸಿಕೊಳ್ಳುವಂತೆ ಪಿಇಎಸ್ ಟ್ರಸ್ಟ್ನ ಜಂಟಿಕಾರ್ಯದರ್ಶಿ ಎಸ್.ವೈ. ಅರುಣಾದೇವಿ ಕರೆ ನೀಡಿದರು.
ಪಿಇಎಸ್ಐಟಿಎಂನ ಮಹಿಳಾ ಸಬಲೀಕರಣ ಘಟಕ ಹಾಗೂ ಸಿವಿಲ್ ವಿಭಾಗದ ಜಂಟಿ ಸಹಭಾಗಿತ್ವದಲ್ಲಿ ನಡೆದ ಮಹಿಳೆಯರಿಗಾಗಿ ಒಂದು ದಿನದ ಸ್ವಯಂ ರಕ್ಷಣಾ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಗೂ ಇದೇ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ಘಟಕದ ಲಾಂಛನವನ್ನು ಬಿಡುಗಡೆಗೊಳಿಸಿದರು.

Also read: ಪೊಲೀಸ್ ತನಿಖೆಯಿಂದ ಚಂದ್ರಶೇಖರ್ ಸಾವಿನ ಸತ್ಯ ಬಯಲಾಗಲಿದೆ: ಸಂಸದ ರಾಘವೇಂದ್ರಪೊಲೀಸ್ ತನಿಖೆಯಿಂದ ಚಂದ್ರಶೇಖರ್ ಸಾವಿನ ಸತ್ಯ ಬಯಲಾಗಲಿದೆ: ಸಂಸದ ರಾಘವೇಂದ್ರ
ಕಾಲೇಜಿನ ಆಡಳಿತಾಧಿಕಾರಿಗಳಾದ ಡಾ. ಆರ್. ನಾಗರಾಜ ಮಾತನಾಡಿ, ಮಹಿಳೆಯರು ಶೈಕ್ಷಣಿಕ ಪ್ರಾಮುಖ್ಯತೆಯನ್ನು ಪಡೆದಿದ್ದೇ ಆದಲ್ಲಿ ಸಬಲೀಕರಣದತ್ತ ಸಾಗಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಎಂ.ಎನ್. ಹಿರೇಮಠ್, ಸಹ ಪ್ರಾಧ್ಯಾಪಕಿ ವಾಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.












Discussion about this post