ಹಿಂದಿನ ಕಾಲದಲ್ಲಿ ಹೊಟ್ಟೆಗೆ ಹಿಟ್ಟು ಇಲ್ಲದೆ ಹೋದರೆ ಅಂದು ಉಪವಾಸ. ಎರಡು ಹೊತ್ತು ಊಟ ಮಾಡಿ ಒಂದು ಹೊತ್ತು ನೀರು ಅಥವಾ ಗಂಜಿ ಕೂಡಿದು ಉಪವಾಸ ಇರುವುದು ಕೇಳಿದ್ದೇನೆ.
ಆದರೆ ಈಗ ಎಲ್ಲಾರೂ ಸೇರಿ ಏನಾದರೊಂದು ಬೇಡಿಕೆ ಇಟ್ಟು ಉಪವಾಸ ಮಾಡುವುದೆ ಜಾಸ್ತಿ ಆಗಿಬಿಟ್ಟಿದೆ. ಈ ಉಪವಾಸ ಯಾಕೆ ಹೆೀಗೆ ಮಾಡಬೇಕು ನನಗೆ ಗೊತ್ತಿಲ್ಲ. ನನ್ನ ಅಮ್ಮ ನನಗೆ ಹೇಳಿದ ಆ ಒಂದು ಮಾತು ನೆನಪಿಗೆ ಬರುತ್ತದೆ. ಮಗ ಗುರುವಾರ ಮಾಂಸ ತಿನ್ನಬೇಡ. ಹಾಗೆ ಆ ದಿನ ತಿನ್ನಬೇಡ, ಈ ದಿನ ತಿನ್ನಬೇಡ ಅಂತ ದೇವರ ಹೆಸರಲ್ಲಿ ಉಪವಾಸ ಮಾಡುವುದಕ್ಕೆ ಹೇಳಿದಳು.
ಅದಕ್ಕೆ ನನ್ನ ಉತ್ತರ ಇಷ್ಟೆ ಎಲ್ಲಾ ದಿನ ಉಪವಾಸ ಇರು ಅಂತ ಹೇಳುವ ಬದಲು ಸಸ್ಯಹಾರಿ ಆಗು ಅಂತ ಹೇಳು.
ಅದಕ್ಕೆ ಅಮ್ಮ ಆಯ್ತು ಬಿಡು ದೇವರ ಕೆಲಸ ಮನೆಯಲ್ಲಿ ಇರುವಾಗ ಆದರೂ ಉಪವಾಸ ಇರು ಅಂತ ಹೇಳಿದಳು ಅಮ್ಮ.
ಹಾಗೂ ಅಮ್ಮ ಪ್ರತಿ ಗುರುವಾರ ಉಪವಾಸ ಇರುತ್ತಿದ್ದಲು. ಆದರೆ ಅಂದೇ ನಾನು ಹುಟ್ಟಿದ್ದು. ಹಾಗೆ ನನ್ನ ಹುಟ್ಟುಹಬ್ಬದ ದಿನ ಎಲ್ಲರೂ ಸಡಗರ ಸಂಭ್ರಮ ದಾರಿಯಲ್ಲಿ ಹೋಗುವ ಸ್ವಾಮಿ ಒಬ್ಬರು ಅಮ್ಮನ ಕರೆದು ಮನೆಯಲ್ಲಿ ಏನು ವಿಶೇಷ ಅಂತ ಕೇಳಿದರು. ಅಮ್ಮ ನನ್ನ ಮಗನ ಹುಟ್ಟುಹಬ್ಬದ ಎಂದಳು. ಆದರೆ ಮಗನ ಹುಟ್ಟುಹಬ್ಬದ ದಿನ ನಿಮ್ಮ ಮುಖ ಯಾಕೆ ಬಾಡಿದೆ. ಅಮ್ಮ ಇವತ್ತು ಗುರುವಾರ ಉಪವಾಸ ಅದಕ್ಕೆ.
ಸ್ವಾಮೀಜಿ ಮಗನ ಹುಟ್ಟುಹಬ್ಬದ ದಿನ ಯಾರಾದರೂ ಉಪವಾಸ ಇದ್ದರೆ ನಿಮ್ಮ ಮಗನಿಗೆ ಒಳ್ಳೆಯದು ಆಗಲ್ಲ. ಇವಾಗ ಯಾವ ಉಪವಾಸ ಮಾಡುವುದು ಇಲ್ಲ ನನ್ನ ಅಮ್ಮ.
ನನಗಾಗಿ ಅಷ್ಟು ದಿನ ಕಾಪಾಡಿಕೊಂಡು ಬಂದ ಉಪವಾಸ ಈ ಮಗನಿಗೆ ಒಳ್ಳೆಯದು ಆಗಲ್ಲಿ ಅಂತ ಉಪವಾಸ ಬಿಟ್ಟಿದ್ದು ಕೇಳಿ ಕಣ್ಣು ತುಂಬಿ ಬಂತು ಕಣ್ಣೀರು.
-ಚಂದ್ರಶೇಖರ ಶೆಟ್ಟಿ ಕೊಡ್ಲಾಡಿ
Discussion about this post