ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೇರಳ ಮೂಲದ ಪ್ರತಿಷ್ಟಿತ ‘ನಾಗಾರ್ಜುನ ಆಯುರ್ವೇದ ಕಂಪನಿ’ಯ ’ಹರ್ಬಲ್ ಕಾನ್ಸ್’ನ್’ಟ್ರೇಟ್ ಲಿಮಿಟೆಡ್ (ಎನ್ಎಚ್ಸಿಎಲ್) ಹೊಸ ಗಿಡಮೂಲಿಕೆ ಆಧಾರಿತ ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ ಕರ್ನಾಟಕದಲ್ಲಿಯೂ ತನ್ನ ವ್ಯಾಪಾರ ವಹಿವಾಟು ಗಳನ್ನು ವಿಸ್ತರಿಸುವ ಯೋಜನೆಗಳನ್ನು ಕೈಗೊಂಡಿದೆ.
ಸಂಸ್ಥೆಯ ಉಪಾಧ್ಯಕ್ಷ ಆರ್. ರಮೇಶ್ ಚಂದ್ರ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಆರೋಗ್ಯವೃದ್ಧಿ ಉತ್ಪನ್ನಗಳ ಮಾರುಕಟ್ಟೆ ಗಮನಾರ್ಹ ಪ್ರಮಾಣದಲ್ಲಿ ಬೆಳೆಯುತ್ತಿದೆ. ಗಿಡಮೂಲಿಕೆ ಮತ್ತು ಆಯುರ್ವೇದ ಉತ್ಪನ್ನಗಳ ಬಗೆಗೆ ಗ್ರಾಹಕರಲ್ಲಿ ಹೆಚ್ಚು ಜಾಗೃತಿ ಇದ್ದು ಈ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಹಾಗಾಗಿ ನಾವು ಮನೆಯಲ್ಲೇ ಅಭಿವೃದ್ಧಿಪಡಿಸಿದ ಹೊಸ ಉತ್ಪನ್ನಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್’ನಲ್ಲಿ ಈ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಉತ್ಪಾದಕ ಘಟಕಗಳು ವಿಶೇಷ ಆರೋಗ್ಯ ಉತ್ಪನ್ನಗಳು, ಆರೋಗ್ಯದಾಯಕ ಪೇಯಗಳು, ಗಿಡಮೂಲಿಕೆ ಚಹಾಗಳು, ಏಕ ಗಿಡಮೂಲಿಕೆ ಔಷಧಿಗಳು, ಮಸಾಜ್ ಎಣ್ಣೆಗಳು ಮತ್ತು ಗಿಡಮೂಲಿಕೆಗಳಿಂದ ತಯಾರಾದ ಸ್ನಾನದ ಸಾಬೂನುಗಳು ಸೇರಿದಂತೆ ವೈಯಕ್ತಿಕ ಆರೈಕೆಯ ವಿಶೇಷ ಉತ್ಪನ್ನಗಳನ್ನು ಪ್ರಸ್ತುತ ಪಡಿಸುತ್ತಿದೆ.
Get in Touch With Us info@kalpa.news Whatsapp: 9481252093
Discussion about this post