ಕಲ್ಪ ಮೀಡಿಯಾ ಹೌಸ್ | ಅಮರಾವತಿ |
ಆಂಧ್ರಪ್ರದೇಶದ ನಿರ್ಗಮಿತ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ #Jaganmohan Reddy ಅವರ ಆಡಳಿತದಲ್ಲಿ ಅಲ್ಲಿನ ರಾಜ್ಯ ಖಜಾನೆ ಖಾಲಿಯಾಗಿದೆ ಎಂದು ಹೇಳಲಾಗಿದ್ದು, ಈಗ ಅಧಿಕಾರಕ್ಕೆ ಬರಲಿರುವ ಚಂದ್ರಬಾಬು ನಾಯ್ಡು #Chandrababu Naidu ಅವರಿಗೆ ಸೂಪರ್ 6 ಭರವಸೆ ಹಾಗೂ ಯೋಜನೆಗಳ ಜಾರಿಗೆ ಸಂಕಷ್ಟ ಎದುರಾಗಿದೆ ಎಂದು ವರದಿಯಾಗಿದೆ.
ಕಳೆದ ಐದು ವರ್ಷಗಳ ಆಡಳಿತದಲ್ಲಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ತಲೆ ಬುಡವಿಲ್ಲದ ದುರಾಡಳಿತದಿಂದ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದರ ಬೆನ್ನಲ್ಲೇ, ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿ, ನಾಳೆ ಬಹುತೇಕ ಪ್ರಮಾಣವಚನ ಸ್ವೀಕರಿಸಿ, ಮುಖ್ಯಮಂತ್ರಿಯಾಗಲಿರುವ ಚಂದ್ರಬಾಬು ನಾಯ್ಡು ಅವರಿಗೆ ಹಲವು ಆಡಳಿತ ತೊಂದರೆಗಳು ಎದುರಾಗಲಿವೆ ಎಂದು ಹೇಳಲಾಗಿದೆ.
Also read: ದವಡೆ ಛಿದ್ರ, ಸಿಗರೇಟಿನಿಂದ ಸುಟ್ಟು, ರಾಡ್’ನಿಂದ ಹಲ್ಲೆ ಮಾಡಿ ಚಿತ್ರಹಿಂಸಿಸಿ ರೇಣುಕಾಸ್ವಾಮಿ ಹತ್ಯೆ?
ತಾವು ಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಪಕ್ಷದ ಮಾದರಿಯಲ್ಲಿ ಸೂಪರ್ 6 ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದ್ದ ಚಂದ್ರಬಾಬು ನಾಯ್ಡು ಅವರಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಲಿದೆ ಎನ್ನಲಾಗಿದೆ. ಅಲ್ಲದೇ ಪ್ರಮುಖವಾಗಿ ಈ ಭರವಸೆಗಳನ್ನು ಈಡೇರಿಸಲು ರಾಜ್ಯದ ಬೊಕ್ಕಸದಲ್ಲಿ ಹಣ ಇದೆಯೇ ಎಂಬ ಪ್ರಶ್ನೆ ಎದುರಾಗಿದೆ.
ನಾಯ್ಡು ನೀಡಿರುವ ಭರವಸೆ ಈಡೇರಿಕೆಗೆ ವಾರ್ಷಿಕ 1.21 ಲಕ್ಷ ಕೋಟಿ ರು. ಅಗತ್ಯವಿದೆ.
ನಾಯ್ಡು ಏನೆಲ್ಲಾ ಭರವಸೆ ನೀಡಿದ್ದರು?
- ಸಾಮಾಜಿಕ ಪಿಂಚಣಿ ಯೋಜನೆಯಡಿ ಈಗಿರುವ 3,000 ರೂ.ಗಳಿಂದ 4,000 ರೂ.ಗೆ ಹೆಚ್ಚಳ. ಏಪ್ರಿಲ್, ಮೇ ಮತ್ತು ಜೂನ್’ನ ತಲಾ 1000 ರೂ. ಹಿಂಬಾಕಿಯನ್ನೂ 65 ಲಕ್ಷ ಫಲಾನುಭವಿಗಳಿಗೆ ಪಾವತಿ.ಇದಕ್ಕಾಗಿ 4500 ಕೋಟಿ ರೂ. ಅಗತ್ಯ
- ಕರ್ನಾಟದಕ ಮಾದರಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್’ನಲ್ಲಿ ಉಚಿತ ಪ್ರಯಾಣ. ಇದಕ್ಕಾಗಿ ಆಂಧ್ರಪ್ರದೇಶ ಸಾರಿಜಗೆ ನಿಗಮಕ್ಕೆ ಮಾಸಿಕ 450-500 ಕೋಟಿ ರೂ.
- ಶಾಲೆಗೆ ಹೋಗುವ ಪ್ರತಿ ಮಗುವಿಗೆ ವಾರ್ಷಿಕ 15,000 ರೂ. ಸಹಾಯಧನ
- ಆಂಧ್ರಪ್ರದೇಶದ ಪ್ರತಿ ಮನೆಗೂ ಇಂತಿಷ್ಟು ಎಂದು ಉಚಿತ ಎಲ್’ಪಿಜಿ ಸಿಲಿಂಡರ್ ಪೂರೈಕೆ
- ರಾಜ್ಯದ ಪ್ರತಿ ರೈತನಿಗೆ ವಾರ್ಷಿಕ 20 ಸಾವಿರ ರೂ. ಸಹಾಯಧನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post