ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-3 |

ಸಾವರ್ಕರ್ ಬಗ್ಗೆ ನಾನು ಅಧ್ಯಯನ ಮಾಡಿದ್ದು ಅವರ ವಿಷಯವಾಗಿ ಒಂದು ಪ್ರಬಂಧ ಲೇಖನ ಸ್ಪರ್ಧೆ ಇದ್ದಾಗ. ಆ ಸ್ಪರ್ಧೆಯ ನಿಮಿತ್ತವಾಗಿ ಅನೇಕ ಭಾಷಣಗಳನ್ನು, ಪ್ರವಚನಗಳನ್ನು ಕೇಳಿ, ಜೊತೆಯಲ್ಲಿ ಪುಸ್ತಕವೂ ಸಹ ಓದಿದೆ. ಆಗ ಅವರನ್ನು ಅನೇಕ ಆಯಾಮಗಳಿಂದ ಕಾಣಲು ಸಾಧ್ಯವಾಯಿತು.
ಆಂಗ್ಲರು ಸಾವರ್ಕರರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಸಮಯದಲ್ಲಿ ಅವರು ಬರೆದಿರುವ ಭಾಷಣಗಳನ್ನು ಕೂಡ ಒಂದು ಅಪರಾಧವೆಂದು ಪರಿಗಣಿಸಿದ್ದರು ಎಂದರೆ ಅವರ ಭಾಷಣಗಳು ಆಂಗ್ಲರನ್ನು ಅದೆಷ್ಟರ ಮಟ್ಟಿಗೆ ಭಯಪಡಿಸಿತ್ತು ಎನ್ನುವುದು ತಿಳಿಯುತ್ತದೆ.
ಸಾವರ್ಕರ್ ತಾತ್ವಿಕವಾಗಿ ಬಹಳ ದೃಢವಾಗಿದ್ದರು. ತಮ್ಮ ಗುರಿಯನ್ನು ಅತ್ಯಂತ ಸ್ಪಷ್ಟವಾಗಿ ಬಲ್ಲವರಾಗಿದ್ದರು. ದೇಶವನ್ನು ಪರಕೀಯರಿಂದ ಬಿಡುಗಡೆ ಮಾಡಲು ಎಂತಹ ತ್ಯಾಗ ಹಾಗೂ ಸಾಹಸಕ್ಕೂ ಸಹ ಸಿದ್ದರಿದ್ದರು ಎನ್ನುವುದು ಇಂದಿನ ಮಕ್ಕಳಿಗೆ ಮಾದರಿಯಾಗಬೇಕು.

ತಮ್ಮ ಜೀವನಪೂರ್ತಿ ಕಷ್ಟಗಳನ್ನು ಅನುಭವಿಸುತ್ತಾ, ಸ್ವಲ್ಪವೂ ಸಹ ಸುಖದ ಬಗ್ಗೆ ಚಿಂತಿಸದೇ ತಮ್ಮ ಆಸೆ, ಆಕಾಂಕ್ಷೆ, ಸೌಖ್ಯಗಳನ್ನು ತೊರೆದು ಕೇವಲ ದೇಶಕ್ಕೋಸ್ಕರ ಹಗಲಿರುಳು ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿ. ಅವರ ದೇಶಭಕ್ತಿ, ಪ್ರಾಮಾಣಿಕತೆ, ದೃಢತೆ, ಸಮರ್ಥ ವ್ಯಕ್ತಿತ್ವ ನನಗೆ ಬಹಳ ಪ್ರೇರಣಾದಾಯಕವಾಗಿದೆ ಎನ್ನುವುದು ನನ್ನ ಪಾಲಿನ ಅದೃಷ್ಠ. ಸಾವರ್ಕರರು ನನ್ನಂತೆಯೇ ಇತರರಿಗೂ ಪ್ರೇರಣೆಯಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post