No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
  • Advertise With Us
  • Grievances
  • About Us
  • Contact Us
Wednesday, September 16, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ದಾಸಸಾಹಿತ್ಯದ ದೀಪವನ್ನು ಬೆಳಗಿಸಿ ಹರಿಪಾದ ಸೇರಿದ ಶ್ರೀ ಅಪ್ಪಣ್ಣಾಚಾರ್ಯರು

ಭೌತಿಕವಾಗಿ ನಮ್ಮಿಂದ ದೂರವಾದರೂ ದಾಸಪರಂಪರೆಯಲ್ಲಿ ಅಜರಾಮರರು

kalpa News by kalpa News
September 16, 2026
in Special Articles
0
Appanacharya Who Lit The Lamp Of Dasa Sahitya
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ​ವಿಶೇಷ ಲೇಖನ  | 

ಚಿಕ್ಕಂದಿನಿಂದಲೇ ಗುರುಜಗನ್ನಾಥದಾಸರ ಮನೆಯಲ್ಲಿ ಬೆಳೆದು, ದಾಸಸಾಹಿತ್ಯದ (Dasa Sahitya) ವಾತಾವರಣದಲ್ಲಿಯೇ ಸಂಸ್ಕಾರ ಪಡೆದ ಅಪ್ಪಣ್ಣಾಚಾರ್ಯರು (Appanacharya) ಹರಿದಾಸಸಾಹಿತ್ಯದ ಆಳವಾದ ಅಧ್ಯಯನವನ್ನು ಕೈಗೊಂಡರು. ದಾಸರ ಪದಗಳು ಅವರಿಗೆ ಕೇವಲ ಸಾಹಿತ್ಯವಾಗಿರಲಿಲ್ಲ; ಅವು ಜೀವನದರ್ಶನ, ಭಕ್ತಿಮಾರ್ಗ ಮತ್ತು ಸಮಾಜಸಂಸ್ಕರಣೆಯ ಜೀವಂತ ದಾಖಲೆಗಳಾಗಿದ್ದವು.

“ಕೋಸಿಗಿ ಮುತ್ಯಾವರು” ಎಂದು ಪ್ರಸಿದ್ಧರಾದ, ಗತಶತಮಾನದಲ್ಲಿ ದಾಸಪರಂಪರೆಯ ದಿವ್ಯಜ್ಯೋತಿಯನ್ನು ಬೆಳಗಿದ, ಶ್ರೀ ರಾಯರ ಪರಮಭಕ್ತರಾದ ಶ್ರೀಗುರುಜಗನ್ನಾಥದಾಸರಾಯರ ಶಿಷ್ಯಪರಂಪರೆಯಲ್ಲಿ ಬಂದ ಮಹನೀಯರಲ್ಲಿ ಕೌತಾಳದ ಶ್ರೀ ಕರಣಂ ನರಸಿಂಗರಾಯರು ಪ್ರಮುಖರು. ಹೊರನೋಟಕ್ಕೆ ಲೌಕಿಕರಂತೆ ಗೋಚರಿಸಿದರೂ, ಬೂದಿಮುಚ್ಚಿದ ಕೆಂಡದಂತೆ ಅಂತರಂಗದಲ್ಲಿ ಸಾಧನೆಯನ್ನು ಬೆಳಗಿಸಿಕೊಂಡಿದ್ದ ಗುಪ್ತ ಸಾಧಕರು ಅವರು.

ಶ್ರೀ ಗುರುಜಗನ್ನಾಥದಾಸವರ್ಯರ ಪ್ರಥಮ ಶಿಷ್ಯರಾದ ಶ್ರೀ ಕರಣಂ ಹನುಮಂತರಾಯರು—ಅಂಕಿತನಾಮ ವರದವಿಠಲದಾಸರು—ಶ್ರೀ ಮುತ್ಯಾವರನ್ನು ಭಕ್ತಿಪೂರ್ವಕವಾಗಿ, ಆದರಾಭಿಮಾನಗಳಿಂದ ಕೌತಾಳಕ್ಕೆ ಬರಮಾಡಿಕೊಂಡು, ಅವರ ಸೇವೆಯನ್ನೇ ತಮ್ಮ ಜೀವನದ ಪರಮ ಗುರಿಯನ್ನಾಗಿ ಮಾಡಿಕೊಂಡು ಬಾಳಿದವರು. ಶ್ರೀ ಮುತ್ಯಾವರಿಂದ ಅಪಮೃತ್ಯು ಪರಿಹಾರ ಹಾಗೂ ಅಂಕಿತಾನುಗ್ರಹವನ್ನು ಪಡೆದ ಭಾಗ್ಯಶಾಲಿಗಳೂ ಹೌದು.

ವರದವಿಠಲದಾಸರ ವಂಶವೇ ಗುರುಜಗನ್ನಾಥದಾಸರ ಸೇವೆಗೆ ಸಮರ್ಪಿತವಾಗಿತ್ತು. ಶ್ರೀಗುರುಜಗನ್ನಾಥದಾಸರನ್ನು ಪರಿಪರಿಯಾಗಿ ಸೇವಿಸಿ ಧನ್ಯರಾದ ವರದವಿಠಲದಾಸರು, ಕೊನೆಗೆ ಶ್ರೀ ಮುತ್ಯಾವರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಪುಣ್ಯಭಾಗ್ಯವನ್ನೂ ಪಡೆದರು. ಅಂತಹ ಪುಣ್ಯಶಾಲಿಗಳಾದ ಶ್ರೀ ವರದವಿಠಲದಾಸರಾಯರು ಮತ್ತು ಕುಂ.ಸೌ. ಅಡಿವೆಮ್ಮನವರ ಪುತ್ರರತ್ನವೇ ಶ್ರೀ ಕರಣಂ ನರಸಿಂಗರಾಯರು.
dk shivakumar led karnataka government 100 days celebrationಅನುವಂಶಿಕವಾಗಿ ಕೌತಾಳ ಗ್ರಾಮದ ಗ್ರಾಮಾಧಿಕಾರಿಯಾಗಿದ್ದ ಅವರು ಅನೇಕ ಭೂಮಿಸ್ವಾಸ್ಥ್ಯಗಳ ಒಡೆಯರಾಗಿದ್ದರು. ಆದರೆ ಐಹಿಕ ಸಂಪತ್ತು ಅವರ ಬದುಕಿನ ಅಂತಿಮ ಗುರಿಯಾಗಿರಲಿಲ್ಲ. ತಂದೆ-ತಾಯಿಯ ಸಂಸ್ಕಾರ, ಆಶೀರ್ವಾದ ಮತ್ತು ದಾಸಪರಂಪರೆಯ ಭಕ್ತಿಯ ಬಲದಿಂದ ಶ್ರೀಗುರು ಜಗನ್ನಾಥದಾಸವರ್ಯರ ಸೇವೆಯನ್ನು ಶ್ರದ್ಧಾಭಕ್ತಿಗಳಿಂದ ಮುಂದುವರಿಸಿದರು.

ತಮಗೆ ಜನಿಸಿದ ಮಕ್ಕಳಲ್ಲಿ ಒಬ್ಬ ಮಗನನ್ನು ಹರಿದಾಸರ ಸೇವೆಗಾಗಿಯೇ ಸಮರ್ಪಿಸಬೇಕೆಂಬ ಪವಿತ್ರ ಸಂಕಲ್ಪವನ್ನು ಹೊಂದಿ, ಶ್ರೀಗುರು ಜಗನ್ನಾಥದಾಸರ ಮೊಮ್ಮಗರಾದ ಶ್ರೀ ಕೋಸಿಗಿ ಗುರುರಾಜಾಚಾರ್ಯರಿಗೆ ಆ ಮಗುವನ್ನು ಒಪ್ಪಿಸಿದರು. ಆ ಮೂಲಕ ಗುರುಪರಂಪರೆಯ ಸೇವಾವಾಹಿನಿ ಮುಂದುವರಿಯಲು ಕಾರಣರಾದರು. ಆ ಮಗುವೇ ಶ್ರೀ ಅಪ್ಪಣ್ಣಾಚಾರ್ಯ ಕೌತಾಳಂನವರು.

Appanacharya | ಚಿಕ್ಕಂದಿನಿಂದಲೇ ದಾಸಸಾಹಿತ್ಯದ ಅಧ್ಯಯನ

ಚಿಕ್ಕಂದಿನಿಂದಲೇ ಗುರುಜಗನ್ನಾಥದಾಸರ ಮನೆಯಲ್ಲಿ ಬೆಳೆದು, ದಾಸಸಾಹಿತ್ಯದ ವಾತಾವರಣದಲ್ಲಿಯೇ ಸಂಸ್ಕಾರ ಪಡೆದ ಅಪ್ಪಣ್ಣಾಚಾರ್ಯರು, ಹರಿದಾಸಸಾಹಿತ್ಯದ ಆಳವಾದ ಅಧ್ಯಯನವನ್ನು ಕೈಗೊಂಡರು. ದಾಸರ ಪದಗಳು ಅವರಿಗೆ ಕೇವಲ ಸಾಹಿತ್ಯವಾಗಿರಲಿಲ್ಲ; ಅವು ಜೀವನದರ್ಶನ, ಭಕ್ತಿಮಾರ್ಗ ಮತ್ತು ಸಮಾಜಸಂಸ್ಕರಣೆಯ ಜೀವಂತ ದಾಖಲೆಗಳಾಗಿದ್ದವು.

ಅವರ ವಿಶಿಷ್ಟ ಅಧ್ಯಯನ, ಸಂಶೋಧನೆ ಮತ್ತು ಸಂಘಟನಾ ಸಾಮರ್ಥ್ಯದಿಂದಾಗಿ ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್‌ನಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುವ ಅವಕಾಶ ದೊರೆಯಿತು. ಅಲ್ಲಿಂದ ಅವರು ದಾಸಸಾಹಿತ್ಯವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಮಹತ್ತರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.PES Shivamogga

ದೇಶದ ವಿವಿಧ ಭಾಗಗಳಲ್ಲಿ ಭಜನ ಸಂಘಗಳನ್ನು ಸಂಘಟಿಸುವುದು, ಶ್ರೀನಿವಾಸ ಕಲ್ಯಾಣ, ತಿರುಮಲೆಯ ಮೆಟ್ಟಿಲೋತ್ಸವ ಮೊದಲಾದ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು, ಹರಿದಾಸರ ಸಾಹಿತ್ಯ ಮತ್ತು ಜೀವನಚರಿತ್ರೆಗಳನ್ನು ಜನರಿಗೆ ಪರಿಚಯಿಸುವುದು—ಹೀಗೆ ಅವರ ಸೇವೆಯ ವ್ಯಾಪ್ತಿ ವಿಸ್ತಾರಗೊಂಡಿತು.

ಅನೇಕ ಅಪ್ರಕಟಿತ ಹರಿದಾಸ ಕೃತಿಗಳು ಹಾಗೂ ಹರಿದಾಸರ ಮಹಿತ ಚರಿತ್ರೆಗಳು ಜನಸಾಮಾನ್ಯರ ಕೈಸೇರುವಂತಾಗಲು ದಾಸಸಾಹಿತ್ಯ ಪ್ರಾಜೆಕ್ಟಿನ ಮೂಲಕ ಅವರು ಸಲ್ಲಿಸಿದ ಸೇವೆ ವಿಶೇಷವಾಗಿ ಸ್ಮರಣೀಯ. ಮರೆಯಾಗುತ್ತಿದ್ದ ಕೃತಿಗಳನ್ನು ಬೆಳಕಿಗೆ ತರುವುದು, ದಾಸರ ಸಂದೇಶವನ್ನು ಹೊಸ ತಲೆಮಾರಿಗೆ ತಲುಪಿಸುವುದು ಮತ್ತು ಭಜನಾ ಪರಂಪರೆಗೆ ಹೊಸ ಚೈತನ್ಯ ತುಂಬುವುದು ಅವರ ಕಾರ್ಯದ ಪ್ರಮುಖ ಆಯಾಮಗಳಾಗಿದ್ದವು.

Also Read>> ಕನ್ನಡಕ್ಕೆ ಮತ್ತೊಂದು ಗೌರವ | ಹಿರಿಯ ನಟ ಅನಂತನಾಗ್’ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಪ್ರಸ್ತುತ ಮಂತ್ರಾಲಯದ ದಾಸಸಾಹಿತ್ಯ ಪ್ರಾಜೆಕ್ಟ್‌ನಲ್ಲಿಯೂ ಅವರು ಹರಿದಾಸಸಾಹಿತ್ಯದ ವಿಶೇಷ ಸೇವೆಯನ್ನು ಮುಂದುವರಿಸಿದ್ದರು. ಮಂತ್ರಾಲಯದ ಶ್ರೀಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಅಧುನಾ ಪೀಠಾಧಿಪತಿಗಳಾದ ಶ್ರೀಶ್ರೀಮತ್ಸುಬುಧೇಂದ್ರತೀರ್ಥ ಗುರುವರ್ಯರ ಆದೇಶಾನುಸಾರ, ಅಪರೂಪದ ಹಾಗೂ ವಿನೂತನ ದಾಸಸಾಹಿತ್ಯ ಮ್ಯೂಸಿಯಂ ರೂಪಿಸುವ ಕಾರ್ಯದಲ್ಲಿಯೂ ಶ್ರೀ ಅಪ್ಪಣ್ಣಾಚಾರ್ಯರ ಪಾತ್ರ ಮಹತ್ವದ್ದಾಗಿತ್ತು.

ಅವರ ವ್ಯಕ್ತಿತ್ವದಲ್ಲಿ ಪಾಂಡಿತ್ಯದ ಗಂಭೀರತೆ ಇದ್ದರೂ, ನಡವಳಿಕೆಯಲ್ಲಿ ಸರಳತೆ; ಸಾಧನೆಯ ಆಳವಿದ್ದರೂ, ಮಾತಿನಲ್ಲಿ ಆತ್ಮೀಯತೆ; ದಾಸಸಾಹಿತ್ಯದ ಅಪಾರ ಜ್ಞಾನವಿದ್ದರೂ, ಅದನ್ನು ತನ್ನ ವೈಯಕ್ತಿಕ ಕೀರ್ತಿಗಾಗಿ ಬಳಸಿಕೊಳ್ಳದ ಸೇವಾಭಾವ—ಇವು ಅವರನ್ನು ವಿಶಿಷ್ಟರನ್ನಾಗಿಸಿದ ಗುಣಗಳು.

ಸದಾ ಹಸನ್ಮುಖರಾಗಿದ್ದ ಅವರು ದಾಸಸಾಹಿತ್ಯದ ವಿಶಾಲ ಲೋಕದಲ್ಲಿ ಅಪಾರ ಪಾಂಡಿತ್ಯವನ್ನು ಗಳಿಸಿದ್ದರು. ಆದರೆ ಆ ಪಾಂಡಿತ್ಯವನ್ನು ತಮ್ಮದಾಗಿ ಇಟ್ಟುಕೊಳ್ಳದೆ, ಸಮಾಜದೊಂದಿಗೆ ಹಂಚಿಕೊಂಡರು. ಹರಿದಾಸರ ಕೃತಿಗಳಲ್ಲಿದ್ದ ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಜೀವನಮೌಲ್ಯಗಳು ಜನಮನವನ್ನು ತಲುಪಬೇಕು ಎಂಬುದು ಅವರ ನಿರಂತರ ಕಾಳಜಿಯಾಗಿತ್ತು.

ಶ್ರೀ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾದ ಇಂತಹ ಸೇವಾನಿಷ್ಠ, ಸರಳ, ಸಜ್ಜನ ಹಾಗೂ ಪಾಂಡಿತ್ಯಪೂರ್ಣ ವ್ಯಕ್ತಿತ್ವದ ಶ್ರೀ ಅಪ್ಪಣ್ಣಾಚಾರ್ಯರು ಭೌತಿಕವಾಗಿ ನಮ್ಮ ನಡುವೆ ಇಲ್ಲ ಎಂಬುದು ದಾಸಸಾಹಿತ್ಯಾಭಿಮಾನಿಗಳಿಗೆ ತುಂಬಲಾರದ ನಷ್ಟ.

ಆದರೆ ದೇಹದ ಅಸ್ತಿತ್ವಕ್ಕೆ ಅಂತ್ಯವಿದೆ; ಸಾಧನೆಯಿಂದ ನಿರ್ಮಿಸಿದ ಪರಂಪರೆಗೆ ಅಂತ್ಯವಿಲ್ಲ. ಅವರು ಉಳಿಸಿ ಹೋದ ದಾಸಸಾಹಿತ್ಯದ ಸೇವೆ, ಬೆಳಕಿಗೆ ತಂದ ಕೃತಿಗಳು, ಸಂಘಟಿಸಿದ ಭಜನಾ ಪರಂಪರೆ, ರೂಪಿಸಿದ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಮುಂದಿನ ಪೀಳಿಗೆಗೆ ಬಿತ್ತಿದ ದಾಸತತ್ತ್ವದ ಬೀಜಗಳು ಅವರನ್ನು ನಿರಂತರವಾಗಿ ಸ್ಮರಿಸುವಂತೆ ಮಾಡುತ್ತವೆ.

“ನ ಹನ್ಯತೇ ಹನ್ಯಮಾನೇ ಶರೀರೇ” ಎಂಬ ಗೀತಾವಾಕ್ಯದಂತೆ, ದೇಹವು ನಶ್ವರವಾದರೂ ಸತ್ಕಾರ್ಯದಿಂದ ಬದುಕಿದವರ ಕೀರ್ತಿ ಮತ್ತು ಸೇವೆಯ ಪರಂಪರೆ ನಶಿಸುವುದಿಲ್ಲ.

ದಾಸಸಾಹಿತ್ಯದ ಸೇವೆಯನ್ನು ಜೀವನದ ವ್ರತವನ್ನಾಗಿ ಮಾಡಿಕೊಂಡು, ಗುರುಪರಂಪರೆಯ ಋಣವನ್ನು ಸೇವೆಯ ಮೂಲಕ ತೀರಿಸಿದ ಶ್ರೀ ಅಪ್ಪಣ್ಣಾಚಾರ್ಯರು ನಿಜಕ್ಕೂ ಧನ್ಯಜೀವಿಗಳು.

ಭೌತಿಕವಾಗಿ ನಮ್ಮನ್ನು ಅಗಲಿದರೂ, ದಾಸಸಾಹಿತ್ಯಾಭಿಮಾನಿಗಳ ಹೃದಯಗಳಲ್ಲಿ, ಹರಿದಾಸರ ಕೀರ್ತನೆಗಳ ನಾದದಲ್ಲಿ, ಭಜನಾ ಮಂದಿರಗಳ ಭಕ್ತಿಸ್ಪಂದನದಲ್ಲಿ ಹಾಗೂ ಗುರುಪರಂಪರೆಯ ಸ್ಮರಣೆಯಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.

ಆತ್ಮೀಯ ಹಿರಿಯ ಪುಣ್ಯಜೀವಿಯಾದ ಶ್ರೀ ಅಪ್ಪಣ್ಣಾಚಾರ್ಯರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ. ಅವರ ಕುಟುಂಬದವರು, ಬಂಧುಗಳು, ಶಿಷ್ಯರು ಹಾಗೂ ಅಪಾರ ದಾಸಸಾಹಿತ್ಯಾಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ. ಅವರ ಪವಿತ್ರ ಸ್ಮೃತಿಗೆ ಭಕ್ತಿಪೂರ್ವಕ ಅಶ್ರುನಮನಗಳು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news  
Kalpa News Advertising Disclaimer

Tags: AppanacharyaDasa Sahityaಅಪ್ಪಣ್ಣಾಚಾರ್ಯದಾಸಸಾಹಿತ್ಯಮಂತ್ರಾಲಯಶ್ರೀ ಗುರುಜಗನ್ನಾಥದಾಸವರ್ಯ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಸೈಲ್-ವಿಐಎಸ್‌ಪಿಯಲ್ಲಿ ಇಂಜಿನಿಯರ್ಸ್ ದಿನಾಚರಣೆ: ಸರ್ ಎಂ. ವಿಶ್ವೇಶ್ವರಯ್ಯರಿಗೆ ಗೌರವ ನಮನ

Next Post

ಕ್ರೈಸ್ಟ್‌ಕಿಂಗ್‌ ಶಾಲೆಯ ಬಾಲಕಿಯರ ಬ್ಯಾಡ್ಮಿಂಟನ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

kalpa News

kalpa News

Next Post
karkala christking school girls badminton team selected

ಕ್ರೈಸ್ಟ್‌ಕಿಂಗ್‌ ಶಾಲೆಯ ಬಾಲಕಿಯರ ಬ್ಯಾಡ್ಮಿಂಟನ್ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

No Result
View All Result
Sparsh Hospital Sarjapur Bengaluru 1st Anniversary
English Articles

SPARSH Hospital Sarjapur Celebrates 1st Anniversary, Expands Advanced Healthcare Access

by kalpa News
September 16, 2026
0

Kalpa Media House  |  ​Bengaluru  | As Sarjapur and the larger South East Bengaluru corridor continue to expand rapidly, the...

Read moreDetails
Hero Motocorp Glamour x Integrated ABS

Hero Motocorp Launches Glamour x With Integrated-ABS

September 12, 2026
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL