ಗಣರಾಜ್ಯೋತ್ಸವ
ಹೌದು ಹೀಗೊಂದು ಅಚ್ಚರಿಯ ಪ್ರಶ್ನೆಯೊಂದು ನಮ್ಮೊಳಗೆ ನಾವೇ ಹಾಕಿಕೊಳ್ಳುವುದು ಉತ್ತಮ. ಸುಮಾರು 70 ವರ್ಷಗಳು ಕಳೆಯುತ್ತಾ ಬರುತ್ತಿವೆ ಭರತ ಖಂಡ ಹಲವಾರು ರಾಜ ಮನೆತನಗಳು ಆಳಿವೆ.
ಹೊರ ದೇಶಗಳು ಭಾರತವನ್ನು ದೋಚಿವೆ ನಂತರದಲ್ಲಿ ಬರುಡಾದ ಭಾರತ ಮಾತೆಯ ಒಡಲಲ್ಲಿ ಇಂದು ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ.
ಅಂದು ಬಿಡಿ ಭಾರತವನ್ನು ಈ ಮಟ್ಟಿಗೆ ತನ್ನ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುವಲ್ಲಿ ವಿವೇಕಾನಂದರು, ಪರಮಹಂಸರು, ಶಂಕರಾಚಾರ್ಯರು, ಮದ್ವರು, ರಾಮಾನುಜರು, ಭಗತ್ ಸಿಂಗ್, ಇಂತಹ ಮಹಾನ್ ಹೋರಾಟಗಾರರು ಶ್ರಮಿಸಿದ್ದರಿಂದ ಭರತ ಭೂಮಿಯ ಪವಿತ್ರತೆಯು ಇನ್ನು ಉಳಿದಿದೆ.
ವಿಶ್ವಮಟ್ಟದಲ್ಲಿ ಭರತ ಭೂಮಿಗೆ ಹೆಸರನ್ನು ತಂದು ಕೊಟ್ಟ ಇವರನ್ನು ನಾವುಗಳು ನೆನೆಯುತ್ತಿವ! ಇಲ್ಲ ಪ್ರತಿಶತ ಪ್ರಮಾಣ ತುಂಬಾ ಕಡಿಮೆ ಇದೆ.
ಈಗಂತೂ ಭಾರತ ದೇಶದಲ್ಲಿ ರಾಜಕೀಯದ ಚಂದುರಂಗ ಆಟವನ್ನು ನೋಡುತ್ತಿರುವ ಅಪ್ಪಟ ದೇಶ ಭಕ್ತರಿಗೆ ಈ ದೇಶ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಎಂಬ ಚಿಂತೆ ಆವರಿಸಿದೆ, ಒಂದೆಡೆ ಭಾರತದ ಬಹುಸಂಖ್ಯಾತ ಎಂದು ಎನಿಸಿಕೊಂಡಿರುವ ಹಿಂದೂ ಗಳು ಪಚ್ಚಿಮ ಬಂಗಾಳ, ಕೇರಳ, ಹೈದರಾಬಾದ್, ಕಾಶ್ಮೀರ ಪ್ರಾಂತ್ಯಗಳಲ್ಲಿ ಮನೆಯಲ್ಲಿ ದೇವರಿಗೆ ಪೂಜೆಯನ್ನು ಮಾಡುವುದೇ ಕಷ್ಟವಾಗಿ ಹೋಗಿದ್ದು ಇದು ಹೀಗೆ ಮುಂದುವರೆದು ಬಹುಸಂಖ್ಯಾತರು ಒಂದಾಗದೆ ಹೋದಲ್ಲಿ ಅನಿವಾರ್ಯವಾಗಿ ಮತಾಂತರವಾಗಿ ನಮ್ಮ ಹೆಣ್ಣು ಮಕ್ಕಳ ಅತ್ಯಾಚಾರವನ್ನು ನಡುರಸ್ತೆಯಲ್ಲಿ ಮಾಡುವುದನ್ನು ನಿಂತು ನೋಡುವುದನ್ನು ಬಿಟ್ಟು ಅದನ್ನು ತಡೆಯಲು ನಮಗೆ ಸಾಧ್ಯವಾಗುವುದಿಲ್ಲ.
ನಮ್ಮ ಈ ಗಣರಾಜ್ಯದಲ್ಲಿ ನಿಜವಾದ ಆಚರಣೆ ಸಾಧ್ಯವಾಗುತ್ತಿದೆಯ ಖಂಡಿತ ಇಲ್ಲ…!!
ದೇಶ ಪ್ರೇಮ ಬೆಳೆಸಿಕೊಳ್ಳುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ, ವಿದ್ಯಾರ್ಥಿಗಳ ತಲೆಗೆ ದೇಶ ವಿರೋದವನ್ನೇ ತುಂಬುವಲ್ಲಿ ಯಶಸ್ವಿಯಾಗುತ್ತಿದ್ದಾರೆ ಎಡಪಂಥೀಯ ರಾಕ್ಷಸರು, ಇದರಿಂದ ಮಕ್ಕಳ ಭವಿಷ್ಯಕ್ಕೆ ಮಾರಕವಾಗುತ್ತಿದೆ, ವಿದ್ಯಾರ್ಥಿಗಳಲ್ಲಿ ಗಣನೀಯವಾಗಿ ದೇವರ ಬಗ್ಗೆ, ಸಂಸ್ಕೃತಿಯ ಬಗ್ಗೆ, ದೇಶದ ಬಗ್ಗೆ, ಅಭಿಮಾನವನ್ನೇ ಕುಗ್ಗಿಸುವ ಇಂತಹ ಕೆಲವು ವಿಷಸರ್ಪಗಳು ಕಾರಣವಾಗುತ್ತಿದ್ದಾರೆ.
ಸ್ವಾರ್ಥತೆಯ ಬದುಕು!
ಹೌದು ಸ್ವತಂತ್ರ ಸಿಕ್ಕ ದಿನಗಳಿಂದ ದೇಶದ ಪ್ರಜೆಗಳು ತಾವಾಯಿತು ತಮ್ಮ ಕುಟುಂಬವಾಯಿತು ಎಂದು ಜೀವಿಸುತ್ತಿದ್ದರೆ ಮಕ್ಕಳ ಬಗ್ಗೆ ನಿರ್ಲಕ್ಷ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಇದೆ. ಈ ಕಾರಣಗಳಿಂದ ಸಮಾಜದಲ್ಲಿ ಬೆರೆಯುತ್ತಿರುವ ಜನರ ಸಂಖ್ಯೆ ಕಡಿಮೆಯಾಗಿದ್ದು ಕೆಲವೇ ವರ್ಷಗಳಲ್ಲಿ ರಾಜಕೀಯ ಮೇಲಾಟದಿಂದ ಇಲ್ಲಿನ ಸಂಸ್ಕೃತಿ ಸಂಸ್ಕಾರಕ್ಕೆ ದೊಡ್ಡ ಹೊಡೆತ ಬೀಳುವುದಂತೂ ಖಂಡಿತ, ಒಬ್ಬರ ಕೈಯಲ್ಲಿ ಭಾರತ ದೇಶವನ್ನು ವಿಶ್ವಗುರುವನ್ನಾಗಿ ಮಾಡಲು ಖಂಡಿತ ಸಾಧ್ಯವಿಲ್ಲ ಎಲ್ಲರೂ ಕೈಜೋಡಿಸಿದರಷ್ಟೇ ಸಾಧ್ಯ, ಇಂತಹ ದಿನಗಳಲ್ಲಿ ಸನಾತನ ಧರ್ಮವನ್ನು ಮಕ್ಕಳಿಗೆ ವೈಜ್ಞಾನಿಕವಾಗಿ ಚಿಕ್ಕ ವಯಸ್ಸಿನಲ್ಲಿ ರೂಢಿಸಿದರೆ ದೇಶದ ಸಂಸ್ಕೃತಿ ಸಂಸ್ಕಾರಕ್ಕೆ ಒಳ್ಳೆಯ ಅರ್ಥ ಒಳ್ಳೆಯ ತಳಹದಿ ಸಿಗುತ್ತದೆ. ಸಿಕ್ಕಿರುವ ಸ್ವಾತಂತ್ಯ್ರ ದಿನಕ್ಕೆ ಗಣರಾಜ್ಯೋತ್ಸವಕ್ಕೆ ಅರ್ಥ ದೊರೆಯುತ್ತದೆ.
ದೇಶದ ಸಂಸ್ಕೃತಿಯ ಬಗ್ಗೆ, ಆಚರಣೆಯ ಬಗ್ಗೆ, ಹೋರಾಟ ಗಾರ ಬಗ್ಗೆ ಅರಿತು ಭರತ ಖಂಡವನು ವಿಶ್ವಗುರು ಸ್ಥಾನದಲ್ಲಿ ನಿಲ್ಲಿಸಲು ಎಲ್ಲರೂ ನಿಸ್ವಾರ್ಥತೆಯ ಮನೋಭಾವನೆಯಿಂದ ಶ್ರಮಿಸಬೇಕಾಗಿದೆ..
ವಂದೇ ಮಾತರಂ
ಲೇಖನ: ಭಾನುಪ್ರಕಾಶ್ ಆಚಾರ್ಯ, ಭದ್ರಾವತಿ
Discussion about this post