ನವದೆಹಲಿ: ಇಡಿಯ ದೇಶವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿ ವೀರಸ್ವರ್ಗ ಸೇರಿದ ಲ್ಯಾನ್ಸ್ ನಾಯಕರ್ ನಝೀರ್ ಅಹ್ಮದ್ ವಾನಿ ಅವರಿಗೆ ಮರಣೋತ್ತರವಾಗಿ ಅಶೋಕಚಕ್ರ ಗೌರವ ಸಮರ್ಪಣೆ ಮಾಡಲಾಗಿದೆ.
25 Nov 2018. Lance Naik Nazir Ahmad Wani while operating at #Batagund inspite of being mortally wounded personally eliminated two terrorists, prevented escape of others, facilitating elimination of six hardcore terrorists. Displayed conspicuous bravery. Awarded #AshokaChakra(P) pic.twitter.com/9Sy1FD7UfC
— ADG PI – INDIAN ARMY (@adgpi) January 25, 2019
ಗಣರಾಜ್ಯೋತ್ಸವ ಪೆರೇಡಗೂ ಮುನ್ನ ರಾಜಪಥದಲ್ಲಿ ನಡೆದ ಸಮಾರಂಭದಲ್ಲಿ ವನಿ ಅವರ ತಾಯಿ ಹಾಗೂ ಪತ್ನಿಗೆ ರಾಷ್ಟಪತಿ ರಾಮನಾಥ ಕೋವಿಂದ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.
2018ರ ನವೆಂಬರ್ ತಿಂಗಳಿನಲ್ಲಿ ಜಮ್ಮು ಕಾಶ್ಮಿರದ ಶೋಪಿಯಾನ್ ಜಿಲ್ಲೆಯಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಲಾನ್ಸ್ ನಾಯ್ಕ್ ನಝೀರ್ ಅಹ್ಮದ್ ವಾನಿ ಅಪ್ರಮಿತ ಧೈರ್ಯದಿಂದ ಮುನ್ನುಗ್ಗಿ ಆರು ಉಗ್ರರನ್ನು ಹೊಸಕಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆಯ ದಾಳಿಯಲ್ಲಿ ವಾನಿ ವೀರಸ್ವರ್ಗ ಸೇರಿದ್ದರು. ಇವರ ತ್ಯಾಗ ಹತ್ತಾರು ಸೈನಿಕರನ್ನು ಉಳಿಸಿತ್ತು.
ಮೊದಲು ಉಗ್ರನಾಗಿದ್ದ ದಕ್ಷಿಣ ಕಾಶ್ಮೀರದ ಲ್ಯಾನ್ಸ್ ನಾಯಕ್ ನಝೀರ್ ಅಹ್ಮದ್ ವಾನಿ ಮನಃ ಪರಿವರ್ತನೆ ಬಳಿಕ 2004ರಲ್ಲಿ ಸೇನೆ ಸೇರಿದ್ದರು. ಇವರ ಕರ್ತವ್ಯ ನಿಷ್ಠೆಗೆ 2007ರಲ್ಲಿ ಶೌರ್ಯ ಪ್ರಶಸ್ತಿಯನ್ನೂ ಪಡೆದಿದ್ದರು. ಆದರೆ ಕಳೆದ ವರ್ಷ ನವೆಂಬರ್ ನಲ್ಲಿ ಶೋಫಿಯಾನ್ ಜಿಲ್ಲೆಯಲ್ಲಿ ಉಗ್ರರ ಜೊತೆ ಹೋರಾಡುತ್ತಾ ತನ್ನ ಪ್ರಾಣವನ್ನು ದೇಶಕ್ಕೆ ಅರ್ಪಿಸಿದ್ದರು.
ವಾನಿ ಅಂತ್ಯ ಸಂಸ್ಕಾರದ ವೇಳೆ ಅವರ ಕುಟುಂಬಸ್ಥರನ್ನು ಮತ್ತೋರ್ವ ಯೋಧ ಸಂತೈಸುತ್ತಿರುವ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದೀಗ ಈ ವೀರ ಯೋಧನಿಗೆ ಭಾರತ ಸರ್ಕಾರ ಅಗ್ರ ಗೌರವ ನೀಡಿ ಸತ್ಕರಿಸಿದೆ.
A serving #IndianArmy officer consoling father of Lance Naik Nazir Ahmad of 34 Rashtriya Rifles, who lost his life fighting terrorists in #Shopian in Kulgam district of J&K. #IndianArmy #SalutingtheBraveheart #Braveheart @PIB_India @SpokespersonMoD pic.twitter.com/k2Yklmf1Ev
— ADG PI – INDIAN ARMY (@adgpi) November 28, 2018
Discussion about this post