ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರಿನ #Mysore ಕೆ.ಆರ್. ಪುರಂನ ಶ್ರೀ ವ್ಯಾಸತೀರ್ಥ ವಿದ್ಯಾಪೀಠದಲ್ಲಿ ಬಲಿಪಾಡ್ಯ ಆಚರಣೆ ಸಡಗರ ಸಂಭ್ರಮದಿಂದ ನೆರವೇರಿತು.
ಮುಂಜಾನೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸುಪ್ರಭಾತ ಸೇವೆಯಿಂದ ಅರಂಭಗೊಂಡ ವೇದ- ಮಂತ್ರ ಘೋಷ, ಪಾರಾಯಣದಿಂದ ಆರಂಭಗೊಂಡ ಚಟುವಟಿಕೆಗಳಲ್ಲಿ ಹಿರಿಯ ವಿದ್ವಾಂಸರೂ ಪಾಲ್ಗೊಂಡಿದ್ದರು.

ತುಳಸಿ ಸಂಕೀರ್ತನೆ
ಮಂಗಳವಾರ ಸಂಜೆ ವಿದ್ಯಾಪೀಠದ ವಿದ್ಯಾರ್ಥಿಗಳ ಸಮ್ಮುಖ ತುಳಸಿ ಸಂಕೀರ್ತನೆ ನಡೆಯಿತು. ಕೃಷ್ಣನ ಕುರಿತಾದ ಗೀತೆಗಳನ್ನು ಹಾಡುತ್ತಾ ತುಳಸಿ ಬೃಂದಾವನದ ಸುತ್ತ ವಿದ್ಯಾರ್ಥಿಗಳು, ಭಕ್ತರು ಮತ್ತು ವಿದ್ಯಾಶ್ರೀಶ ತೀರ್ಥರು ಪ್ರದಕ್ಷಿಣೆ ಹಾಕಿ, ಗಾಯನ-ನರ್ತನ ಸೇವೆ ಸಲ್ಲಿಸಿದ್ದು ಬಹು ವಿಶೇಷವಾಗಿತ್ತು. (ಮುಂದಿನ 15 ದಿನಗಳ ಕಾಲ, ಉತ್ಥಾನ ದ್ವಾದಶಿವರೆಗೆ ನಿತ್ಯವೂ ಸಂಜೆ ತುಳಸಿ ಸಂಕೀರ್ತನೆ ಸೇವೆ ನಡೆಯಲಿದೆ).

ಗೋವರ್ಧನ ಪ್ರತಿಪದೆ ಅಂಗವಾಗಿ ಮಠದ ಆವರಣದಲ್ಲಿ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಬಲೀಂದ್ರ ಪೂಜೆ ನೆರವೇರಿಸಿದರು. ಈ ಸಂದರ್ಭ ವಾಮನ ಅವತಾರವನ್ನು ಆವಾಹನೆ ಮಾಡಿ, ನೈವೇದ್ಯ ಸಮರ್ಪಿಸಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ಸಂಕೇತವಾಗಿ ದೊಂದಿಗಳನ್ನು ಬೆಳಗಿಸಲಾಯಿತು.
ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಲಕ್ಷ್ಮೀದೇವಿ ನೆಲೆಸಲಿ. ಜ್ಞಾನ ಬೆಳಗಲಿ ಎಂಬುದರ ಸಂಕೇತವಾಗಿ ನೂರಾರು ದೀಪಗಳನ್ನು ಬೆಳಗಲಾಯಿತು. ಯುವ ಕಲಾವಿದರ ಗಾಯನ ಗಮನ ಸೆಳೆಯಿತು. ವರುಣಾಚಾರ್ಯರು ಬಲೀಂದ್ರ ಪೂಜೆಯ ವಿಧಿ, ವಿಧಾನ ನೆರವೇರಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post