ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಫೆ.1ರಂದು ಸಂಸತ್’ನಲ್ಲಿ ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದು, ಪ್ರವಾಸೋದ್ಯಮ ಉತ್ತೇಜನ, ಪ್ರಚಾರ ಹಾಗೂ ದೇಶೀಯ ಪ್ರವಾಸೋದ್ಯಮ ಮೂಲಸೌಕರ್ಯದ ಅಭಿವೃದ್ಧಿಗಾಗಿ 3000 ಕೋಟಿ ರೂ. ಅನುದಾನ ಹಂಚಿಕೆಯನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಸವಾರು ಕಾರ್ ರೆಂಟಲ್ಸ್ ಸ್ಥಾಪಕ ಮತ್ತು ಸಿಇಒ ಗೌರವ್ ಅಗರ್ವಾಲ್ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, 2021ರ ಆರಂಭದಲ್ಲಿ ಡೆಲ್ಟಾ ವೇರಿಯಂಟ್ ಜಗತ್ತನ್ನು ಅಪ್ಪಳಿಸಿದರೂ, ಪ್ರಯಾಣ ಮತ್ತು ಪ್ರವಾಸೋದ್ಯಮ ಉದ್ಯಮವು ದ್ವಿತೀಯಾರ್ಧದಲ್ಲಿ ಬಲವಾದ ಪುನರಾರಂಭಕ್ಕೆ ಸಾಕ್ಷಿಯಾಗಿದೆ. ಆದರೂ, ಬೆಳವಣಿಗೆಯನ್ನು ಹೆಚ್ಚಿಸಲು ಸರ್ಕಾರದ ಬೆಂಬಲವು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. 2020-21 ರ ಸಂಖ್ಯೆಗಳಿಗೆ ಹೋಲಿಸಿದರೆ 2021-22 ರಲ್ಲಿ ಪ್ರವಾಸೋದ್ಯಮ ಬಜೆಟ್ ಸಚಿವಾಲಯದ ಬಜೆಟ್ ಅನ್ನು ಶೇ.19ರಷ್ಟು ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಇಂದು, ಜಾಗತಿಕ ಒಮೈಕ್ರಾನ್’ನ ಭಯದೊಂದಿಗೆ, ಈ ವಲಯದ ಪರಿಸ್ಥಿತಿಯು 2021ರ ಪುನರಾವರ್ತನೆಯ ಹತ್ತಿರದಲ್ಲಿದೆ. ಈ ವರ್ಷ ಅಂತಾರಾಷ್ಟ್ರೀಯ ಪ್ರಯಾಣವನ್ನು ಹೆಚ್ಚಾಗಿ ನಿರ್ಬಂಧಿಸಲಾಗಿದೆ. ಆದರೂ, ಸಾಂಕ್ರಾಮಿಕ ರೋಗದ ನಂತರ ಉಂಟಾದ ಭಾರಿ ನಷ್ಟವನ್ನು ಪುನರುಜ್ಜೀವನಗೊಳಿಸಲು ಮತ್ತು ಮರುಪಡೆಯಲು ದೇಶೀಯ ಆತಿಥ್ಯ ವಲಯಕ್ಕೆ ಇದು ಸೂಕ್ತ ಅವಕಾಶವಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಸ್ತುತ ಈ ರೀತಿಯ ತೊಂದರೆಗೀಡಾದ ವಲಯಕ್ಕೆ ಸುಧಾರಣೆ ಜೀವನಕ್ಕಾಗಿ ಸರ್ಕಾರದ ತೀರ್ಮಾನ/ಯೋಜನೆ/ಪಾತ್ರ ನಿರ್ಣಾಯಕವಾಗಿದೆ. ಉದ್ಯಮ ಹೂಡಿಕೆಗಳು, ತೆರಿಗೆ ಪರಿಹಾರ ಮತ್ತು 2022 ರಲ್ಲಿ ವರ್ಧಿತ ಮೂಲಸೌಕರ್ಯಕ್ಕಾಗಿ ವಿಸ್ತೃತ ಬಜೆಟ್ ಹಂಚಿಕೆಗಳನ್ನು ಉದ್ಯಮವು ಎದುರು ನೋಡುತ್ತಿದೆ. ಪ್ರವಾಸೋದ್ಯಮ ಉತ್ತೇಜನ ಮತ್ತು ಪ್ರಚಾರಕ್ಕಾಗಿ ಮತ್ತು ದೇಶೀಯ ಪ್ರವಾಸೋದ್ಯಮ ಮೂಲಸೌಕರ್ಯದ ಅಭಿವೃದ್ಧಿಗಾಗಿ 3000 ಕೋಟಿ ರೂ.ಗಳ ಬಜೆಟ್ ಹಂಚಿಕೆಯನ್ನು ನಾವು ನಿರೀಕ್ಷಿಸುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post