ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಲೆನಾಡಿನ ಸುಪ್ತ ಪ್ರತಿಭೆ ಅಜಯ್ ಕುಮಾರ್ ಶರ್ಮಾ, ಇಂಜಿನಿಯರಿಂಗ್ ಪದವೀಧರರಾದರೂ ಸಾಹಿತ್ಯ ಲೋಕದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಸರಿ ಸುಮಾರು 100ಕ್ಕೂ ಹೆಚ್ಚು ಇವರ ಸಂಶೋಧನಾ ಲೇಖನಗಳು ಪ್ರಕಟಗೊಂಡಿರುವುದು ಒಂದು ಹೆಗ್ಗಳಿಕೆಯೆ ಸರಿ.
ನಗರದ ರವೀಂದ್ರ ಕಲಾ ಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಬಿಡುಗಡೆಗೊಂಡ 40 ಕೃತಿಗಳಲ್ಲಿ ಲೇಖಕ ಅಜಯ್ ಶರ್ಮ ಅವರ ಕೆಳದಿ ಸಾಮ್ರಾಜ್ಯ, ಎಪ್ಪತ್ತರ ದಶಕದ ಶೃಂಗೇರಿ ಹಾಗೂ ಕೆಳದಿ ಅರಸರ ಬಿದನೂರು ರಾಕೆಟ್ ಎಂಬ ಮೂರು ಕೃತಿ ಲೋಕಾರ್ಪಣೆಗೊಂಡಿತು.
ಬಳಿಕ ಮಾತನಾಡಿದ ಅವರು, ಮಲೆನಾಡಿನ ಪರಿಸರ, ಮಲೆನಾಡಿನ ಅಸ್ಮಿತೆ, ಪರಂಪರೆ, ಸಂಸ್ಕೃತಿಗಳು, ಮಲೆನಾಡಿನ ರಾಜ ಮನೆತನದ ಬಗ್ಗೆ ಸಂಶೋಧನೆಯೇ ನನ್ನ ಕಾರ್ಯ ಕ್ಷೇತ್ರ ಎಂದು ತಮ್ಮ ಮನದಾಳದ ಮಾತನ್ನು ಹೇಳಿದರು.
Also read: ಕಾರ್ಕಳ: ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ
ಮೂಲತಃ ಶೃಂಗೇರಿಯವರಾದ ಅಜಯ್ ಶರ್ಮಾ ವೃತ್ತಿಯಲ್ಲಿ ಚಾರ್ಟೆಡ್ ಇಂಜಿನಿಯರ್ ಆಗಿದ್ದು, ಹಲವಾರು ವರ್ಷಗಳಿಂದ ಮಲೆನಾಡು ಮತ್ತು ಕರಾವಳಿಯಲ್ಲಿರುವ ಪುರಾತನ ದೇವಾಲಯಗಳು, ಕೋಟೆಗಳು, ಸ್ಮಾರಕಗಳು, ಸ್ಥಳೀಯ ಕಟ್ಟಡದ ವಾಸ್ತುಶೈಲಿ ಮತ್ತು ಹಿಂದಿನ ನಗರ ಯೋಜನೆಯನ್ನು ಇಂದಿನ ಎಂಜಿನಿಯರಿಂಗ್ ದೃಷ್ಟಿಕೋನದಿಂದ ಅಧ್ಯಯನ ಮಾಡುತ್ತಿದ್ದಾರೆ.
ಈ ಹಿಂದೆ ಕೆಳದಿ ಅರಸರು ಆಳಿದ ಪ್ರದೇಶವೇ ಇವರ ಅಧ್ಯಯನದ ಕ್ಷೇತ್ರ ವ್ಯಾಪ್ತಿಯಾಗಿದೆ. ಇವರು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ ಮಲೆನಾಡು ಹಾಗೂ ಕರಾವಳಿಗೆ ಸಂಬಂಧಿಸಿದ ಹೊಸ ವಿಷಯಗಳನ್ನು ಪರಿಚಯಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅಜಯ್ ಕುಮಾರ್ ಶರ್ಮಾ ಅವರು ಹಲವಾರು ರಾಜ್ಯ ಮತ್ತು ರಾಷ್ಟ್ರಮಟ್ಟದ ಇತಿಹಾಸ ಸಮ್ಮೇಳನದಲ್ಲಿ ಭಾಗವಹಿಸಿ ತಮ್ಮ ಪ್ರಬಂಧವನ್ನು ಮಂಡಿಸಿರುತ್ತಾರೆ. ಇವರು ಬರೆದ ಸಾಕಷ್ಟು ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟಣೆಗೊಂಡಿದೆ.
ಸಂದರ್ಶನ : ತೀರ್ಥಹಳ್ಳಿ ಅನಂತ ಕಲ್ಲಾಪುರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post