ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಿ ವೈಭವದಿಂದ ಮೆರೆಯುತ್ತಿರುವ ಬಾಲರಾಮ Ayodhye Bala Rama ವಿಗ್ರಹ ಕಣ್ಣನ್ನು ಕೆತ್ತಿದ ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯ ಚಿತ್ರಗಳನ್ನು ಶಿಲ್ಪಿ ಅರುಣ್ ಯೋಗಿರಾಜ್ Arun Yogiraj ಹಂಚಿಕೊಂಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್’ನಲ್ಲಿ ಫೋಟೋ ಹಂಚಿಕೊಂಡಿರುವ ಅವರು, ಅಯೋಧ್ಯೆ ಬಾಲರಾಮನ ಕಣ್ಣುಗಳನ್ನು ಕೆತ್ತಿದ ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯ Silver Hammer-Gold Chisel ಚಿತ್ರಗಳನ್ನು ಹಂಚಿಕೊಳ್ಳಬೇಕು ಎಂದು ಬಯಸಿ, ಎಲ್ಲರಿಗೂ ತೋರಿಸುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Also read: ನೂರು ಎಫ್ಐಆರ್ಗಳನ್ನು ದಾಖಲಿಸಿದರೂ ದೇಶಭಕ್ತನಾದ ನಾನು ಹೆದರುವುದಿಲ್ಲ: ಈಶ್ವರಪ್ಪ ಗುಡುಗು
ನಿಯಮದಂತೆ ನೇತ್ರೋನ್ಮಿಲನ ಮುಹೂರ್ತದಲ್ಲೇ ಬಾಲರಾಮ ಕಣ್ಣನ್ನು ಕೆತ್ತನೆ ಮಾಡಬೇಕಿತ್ತು. ಇದರ ನಿಯಮದಂತೆ ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆಯನ್ನು ಟ್ರಸ್ಟ್ ಕಡೆಯಿಂದ ಮಾಡಿಕೊಡಲಾಗಿತ್ತು. ಅದರಿಂದಲೇ ನಿಗದಿತ ಮುಹೂರ್ತದಲ್ಲಿ ಬಾಲರಾಮನ ಕಣ್ಣನ್ನು ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post