ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ #Shri Raghavendra Swamy Mutt ಶ್ರೀ ಸುಜಯೀoದ್ರ ತೀರ್ಥ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವ ವಿದ್ಯುಕ್ತವಾಗಿ ಜರುಗಿತು ಎಂದು ನಂದಕಿಶೋರಾಚಾರ್ಯರು ತಿಳಿಸಿದರು.
ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ #Shri Subudhendra Tirtha ಆದೇಶ ದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ108 ಶ್ರೀ ಸುಜಯೀoದ್ರ ತೀರ್ಥ ಶ್ರೀಪಾದಂಗಳವರ “ಆರಾಧನಾ” ಮಹೋತ್ಸವ ಪ್ರಯುಕ್ತ ವಿಶೇಷ ಉತ್ಸವಗಳು ಮತ್ತು ವಿದ್ವಾಂಸರಾದ ವಿದ್ವಾನ್ ಗಯಾ ರಾಮಾಚಾರ್ಯರಿಂದ ಪ್ರವಚನ, ಭಜನಾ ಮಂಡಳಿಯಿಂದ ಶ್ರೀ ಹರಿ ಭಜನೆ ಕಾರ್ಯಕ್ರಮ ನಡೆಯಿತು.
Also read: ದರ್ಶನವಾದ ಪ್ರದರ್ಶನ | ವಿಶಿಷ್ಟ ಶೈಲಿಯಿಂದಲೇ ಜನರ ಮನರಂಜಿಸಿದ ಯಕ್ಷಗಾನ
ಸನ್ನಿಧಿಗೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು ಈ ಸಂದರ್ಭದಲ್ಲಿ ನೂರಾರು ಭಕ್ತರು ಈ ಆರಾಧನಾ ಉತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post