ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಿರ್ಮಾಪಕ ಉಮಾಪತಿ ಅವರಿಗೆ ತಿರುಗೇಟು ನೀಡಲು ಆಯೋಜಿಸಲಾಗಿದ್ದ ನಟ ದರ್ಶನ್ Actor Darshan ಅಭಿಮಾನಿಗಳ ಬೈಕ್ ರ್ಯಾಲಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದು, ರ್ಯಾಲಿ ನಡೆಯವುದು ಅನುಮಾನ ಎನ್ನಲಾಗಿದೆ.
ಬೊಮ್ಮನಹಳ್ಳಿಯಲ್ಲಿ ಬೃಹತ್ ರ್ಯಾಲಿ ನಡೆಸಿ ಒಗ್ಗಟ್ಟು ಪ್ರದರ್ಶನ ಮಾಡಲು ದರ್ಶನ್ ಅಭಿಮಾನಿಗಳು ಯೋಜಿಸಿದ್ದರು. ಬೊಮ್ಮನಹಳ್ಳಿ ಮಹಾ ಗಣಪತಿ ದೇವಸ್ಥಾನದಿಂದ ಎಚ್’ಎಸ್’ಆರ್ ಲೇಔಟ್ ಬಿಡಿಎ ಕಾಂಪ್ಲೆಕ್ಸ್’ವರೆಗೆ ರ್ಯಾಲಿ ನಡೆಯಬೇಕಿತ್ತು.
Also read: ಶಿವಮೊಗ್ಗ | ರೈಲ್ವೆ ವಿವಿಧ ಅಭಿವೃದ್ಧಿಗೆ ಪ್ರಧಾನಿ ಮೋದಿ ಚಾಲನೆ | ಜಿಲ್ಲೆಗೂ ಕೋಟಿ ಕೋಟಿ ರೂ. ಅನುದಾನ
ಉಮಾಪತಿಗೆ ತಿರುಗೇಟು ನೀಡಲು ಅವರದ್ದೇ ಕ್ಷೇತ್ರದಲ್ಲಿ ಇಂದು ಸಂಜೆ 6 ಗಂಟೆಗೆ ಡಿಬಾಸ್ ಫ್ಯಾನ್ಸ್ ರ್ಯಾಲಿ ನಡೆಸಲು ಹೊರಟಿದ್ದರು. ಉಮಾಪತಿಗೆ ಪಾಠ ಕಲಿಸಲೆಂದೇ ಒಂಟಿ ಸಲಗ’ ಹೆಸರಲ್ಲಿ ಬೃಹತ್ ರ್ಯಾಲಿ ನಡೆಸಲು ದರ್ಶನ್ ಫ್ಯಾನ್ಸ್ ತಯಾರಿ ನಡೆಸಿದ್ದರು. ಡಿಬಾಸ್ ಫ್ಯಾನ್ಸ್ ಟೀಮ್’ಗೆ D Boss ಒಂಟಿ ಸಲಗ ಎಂದು ಹೆಸರಿಟ್ಟಿದ್ದರು. ಆದರೆ, ಪೊಲೀಸರು ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ರ್ಯಾಲಿ ನಡೆಯುವುದು ಅನುಮಾನ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















