ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ #Shri Raghavendra Swamy Mutt ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಮೇ ತಿಂಗಳ ಪ್ರತಿ ಗುರುವಾರದ ದಾಸವಾಣಿ ಕಾರ್ಯಕ್ರಮಗಳು ಈ ರೀತಿ ಇವೆ :
- ಮೇ 1-“ಹರಿದಾಸ ವೈಭವ”. ಗಾಯನ : ಕು|| ಜಿ. ಶ್ರೀರಾಗ, ಆರ್.ಎಸ್. ಪ್ರಶಾಂತ್ (ತಬಲಾ), ಮಾ|| ಆದಿತ್ಯ ರಾಮ್ (ರಿದಂ ಪ್ಯಾಡ್), ಮಾ|| ಪ್ರತೀಕ್ ಆಚಾರ್ಯ (ಕೊಳಲು).
- ಮೇ 8-“ಹರಿದಾಸ ಮಂಜರಿ”. ಗಾಯನ : ಕು|| ಎಸ್. ಶುಭಶ್ರೀ, ದೀಪಿಕಾ ಎಂ. (ಪಿಟೀಲು), ಶ್ರೀಮತಿ ಜ್ಯೋತ್ಸ್ನಾ ಹೆಬ್ಬಾರ್ (ಮೃದಂಗ).

- ಮೇ 15-“ಹರಿದಾಸ ಝೇಂಕಾರ”. ಗಾಯನ : ಕು|| ಮನಸ್ವಿ ಜಿ. ಕಶ್ಯಪ್, ಅಮಿತ್ ಶರ್ಮಾ (ಪಿಟೀಲು ), ಪ್ರಮೋದ್ ಗಬ್ಬೂರ್ (ತಬಲಾ).
- ಮೇ 22-“ಹರಿದಾಸ ನಮನ”. ಗಾಯನ : ಶ್ರೀಮತಿ ವೈಷ್ಣವಿ ಎಂ. ಕೊಪ್ಪ,ಅಮಿತ್ ಶರ್ಮಾ (ಕೀ-ಬೋರ್ಡ್), ಮಧುಸೂದನ್ ಕೊಪ್ಪ (ತಬಲಾ).
- ಮೇ 29-“ಹರಿದಾಸ ಮಂದಾರ”. ಗಾಯನ : ಕು|| ಅಭಿಜ್ಞಾ ಪಿ. ಕಶ್ಯಪ್, ಭಾರ್ಗವಿ (ಪಿಟೀಲು), ನಟರಾಜ್ (ಮೃದಂಗ).
ಕಾರ್ಯಕ್ರಮ ನಡೆಯುವ ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು-560109
ಹರಿದಾಸ ಸಾಹಿತ್ಯ ಓಘ ಮೇಘ ಮಾನ್ಯ ನೃತ್ಯ ಮಾರ್ಗ
ಬೆಂಗಳೂರು ಮಲ್ಲೇಶ್ವರದ ಲಾಸ್ಯ ವರ್ಧನ ಟ್ರಸ್ಟ್ ವತಿಯಿಂದ ಮೇ 2, ಶುಕ್ರವಾರ ಸಂಜೆ 5ಕ್ಕೆ “ಹರಿದಾಸ ಸಾಹಿತ್ಯ ಓಘ ಮೇಘ ಮಾನ್ಯ ನೃತ್ಯ ಮಾರ್ಗ” ಎಂಬ ಶೀರ್ಷಿಕೆಯಲ್ಲಿ ಗುರು ಡಾ. ಮಾಲಿನಿ ರವಿಶಂಕರ್ ಅವರ ಶಿಷ್ಯೆಯರಾದ ಕು. ಮೇಘಾ ಮತ್ತು ಕು. ಮಾನ್ಯ (ನಾಗವಾರ ಸಹೋದರಿಯರು) ಇವರುಗಳು ವಿಶೇಷವಾಗಿ ಹರಿದಾಸರ ಪದಗಳನ್ನೇ ಆಯ್ದುಕೊಂಡು ಭರತನಾಟ್ಯ ರಂಗಪ್ರವೇಶ ಮಾಡುತ್ತಿರುವುದು ಆಕರ್ಷಣೀಯ.
ಸ್ಥಳ : ಕೊಂಡಜ್ಜಿ ಬಸಪ್ಪ ಹಾಲ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, #39, ‘ಶಾಂತಿಗೃಹ’, ಪ್ಯಾಲೇಸ್ ರಸ್ತೆ, ಮಹಾರಾಣಿ ಕಾಲೇಜು ಹತ್ತಿರ, ಬೆಂಗಳೂರು-560001
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















