ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟ ಸುಮನ್ Actor Suman ಇಂದು ಬೆಳಗ್ಗೆ ಅಪ್ಪು ಸಮಾಧಿಗೆ ಭೇಟಿ ನೀಡಿ, ಫೋಟೋ ಕಂಡು ಭಾವುಕರಾದರು. ಇನ್ನು ಇಂದು ಪುನೀತ್ ಜನ್ಮದಿನ ನಿಮಿತ್ತ ಸೋಷಿಯಲ್ ಮೀಡಿಯಾಗಳಲ್ಲಿ ರಾಜಕಾರಣಿಗಳು ಸೇರಿದಂತೆ ಅನೇಕರು ಮಾಧ್ಯಮಗಳಲ್ಲಿ ಶುಭಾಶಯ ತಿಳಿಸಿದ್ದಾರೆ.
ಗಂಧಧಗುಡಿ ಎಂಬ ಕಿರೀಟಕ್ಕೆ ಮುಕುಟಮಣಿಯಾದ ಅಜಾತಶತ್ರು ದಿ. ಪುನೀತ್ ರಾಜಕುಮಾರ್ Puneeth Rajkumar ಅವರ ಜನ್ಮದಿನದಂದು ಅವರನ್ನು ಸ್ಮರಿಸಿ ನನ್ನ ಗೌರವ ಮತ್ತು ಪ್ರೀತಿಯ ನಮನ ಸಲ್ಲಿಸಲು ಇಚ್ಛಿಸುತ್ತೇನೆ. ಅಪ್ರತಿಮ ನಟನಾಗಿ, ಮಾದರಿ ಮನುಷ್ಯನಾಗಿ ಸಾರ್ಥಕ ಬಾಳು ಬದುಕಿದ ಅವರು ಕನ್ನಡಿಗರ ಹೃದಯದಲ್ಲಿ ಅಜರಾಮರರಾಗಿ ಉಳಿಯಲಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ PM H D Devegowda ಟ್ವೀಟ್ ಮಾಡಿದ್ದಾರೆ.
ಗಂಧಧಗುಡಿ ಎಂಬ ಕಿರೀಟಕ್ಕೆ ಮುಕುಟಮಣಿಯಾದ ಅಜಾತಶತ್ರು ದಿ।। ಶ್ರೀ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಅವರನ್ನು ಸ್ಮರಿಸಿ ನನ್ನ ಗೌರವ ಮತ್ತು ಪ್ರೀತಿಯ ನಮನ ಸಲ್ಲಿಸಲು ಇಚ್ಛಿಸುತ್ತೇನೆ. ಅಪ್ರತಿಮ ನಟನಾಗಿ, ಮಾದರಿ ಮನುಷ್ಯನಾಗಿ ಸಾರ್ಥಕ ಬಾಳು ಬದುಕಿದ ಅವರು ಕನ್ನಡಿಗರ ಹೃದಯದಲ್ಲಿ ಅಜರಾಮರರಾಗಿ ಉಳಿಯಲಿದ್ದಾರೆ. pic.twitter.com/YAg79nCXxS
— H D Devegowda (@H_D_Devegowda) March 17, 2022
ಅಪ್ರತಿಮ, ಸಹೃದಯಿ ಕಲಾವಿದ ಪುನೀತ್: ಸಂಸದ ರಾಘವೇಂದ್ರ
ನಾಡಿನ ಪ್ರೀತಿ ಗಳಿಸಿದ್ದ ಅಪ್ರತಿಮ, ಸಹೃದಯಿ ಕಲಾವಿದ, ಕನ್ನಡಿಗರ ಕಣ್ಮಣಿ, ಡಾ. ರಾಜ್ ಕುಟುಂಬದ ಕುಡಿ, ಚಿಕ್ಕ ವಯಸ್ಸಿನಲ್ಲಿಯೇ ಅಪಾರವಾದದ್ದನ್ನು ಸಾಧಿಸಿ, ಅಕಾಲಿಕವಾಗಿ ನಮ್ಮನ್ನಗಲಿದ ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ MP Raghavendra ತಿಳಿಸಿದ್ದಾರೆ.
Also read: ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್! ಪುನೀತ್ ಕನಸಿನ ಗಂಧದಗುಡಿ ಫಸ್ಟ್ ಲುಕ್ ರಿವೀಲ್
ಕನ್ನಡ ಚಿತ್ರರಂಗದ ಹೆಮ್ಮೆಯ ನಾಯಕ ನಟ, ಅಭಿಮಾನಿಗಳ ಪ್ರೀತಿಯ “ಅಪ್ಪು”, ಪವರ್ ಸ್ಟಾರ್, ಕರ್ನಾಟಕ ರತ್ನ ದಿವಂಗತ ಡಾ.ಪುನೀತ್ ರಾಜ್ ಕುಮಾರ್ ಅವರ ಜನ್ಮಜಯಂತಿಯಂದು ಆ ಸಾಧಕ ಚೇತನಕ್ಕೆ ಅಭಿಮಾನಪೂರ್ವಕ ನಮನಗಳು. ಅವರು ನಾಡಿಗೆ ನೀಡಿದ ಅನನ್ಯ ಸೇವೆಯನ್ನು ನಾವೆಲ್ಲರೂ ಸ್ಮರಿಸೋಣ. #PuneethRajkumar pic.twitter.com/75fY37S4g0
— B Y Raghavendra (@BYRBJP) March 17, 2022
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳು, ವಿವಿಧ ರಾಜಕೀಯ ನಾಯಕರು, ಸಚಿವರುಗಳು, ಚಿತ್ರರಂಗದ ಕಲಾವಿದರು, ಸೆಲೆಬ್ರಿಟಿಗಳು ಇಂದು ಅಪ್ಪು ಅವರ ಸಿನಿಮಾ, ಸಾಮಾಜಿಕ ಕಾರ್ಯಗಳನ್ನು ನೆನೆಸಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post