ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಕಲೋಪಕಲ್ಪಿತ ಆರೋಪಗಳನ್ನು ಬರಗೂರು ರಾಮಚಂದ್ರಪ್ಪ Baraguru Ramachandrappa ಮಾಡಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ Minister BC Nagesh ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಠ್ಯಪುಸ್ತಕ ಬರಗೂರು ರಾಮಚಂದ್ರಪ್ಪ ಸೇರಿ ಇತರರ ಆರೋಪ ಮಾಡಿರುವಂತೆ ಯಾವುದೇ ಪಠ್ಯವನ್ನು ಪುಸ್ತಕದಿಂದ ತೆಗೆದಿಲ್ಲ. ಪ್ರಮುಖವಾಗಿ ನಾರಾಯಣ ಗುರು, ಟಿಪ್ಪು, ಭಗತ್ ಸಿಂಗ್ ಸೇರಿದಂತೆ ಯಾರದ್ದೇ ಪಾಠವನ್ನು ತೆಗೆದಿಲ್ಲ. ಆದರೆ, ಕೆಲವು ತಪ್ಪುಗಳನ್ನು ಪರಿಷ್ಕರಣೆ ಮಾಡಲಾಗಿದೆ ಎಂದಿದ್ದಾರೆ.
ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಕಿಡಿ ಕಾರಿದ ಸಚಿವರು, ಇವರುಗಳು ಸುಳ್ಳನ್ನೇ ಸಾವಿರ ಸಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಇವರು ವಿರೋಧ ವ್ಯಕ್ತಪಡಿಸಿದ ನಂತರ ನಾವು ಯಾವುದೇ ಬದಲಾವಣೆ ಮಾಡಿಲ್ಲ. ಪಠ್ಯಪುಸ್ತಕ ಮುದ್ರಣಕ್ಕೆ ಹೋಗಿ ಎಷ್ಟೋ ದಿನಗಳಾಗಿದೆ. ಇವರಂತೆ ನಾವು ಸೇಡಿನ ರಾಜಕಾರಣ ಮಾಡುವುದಿಲ್ಲ ಎಂದು ಟೀಕಿಸಿದ್ದಾರೆ.
ಏರುತಿಹುದು, ಹಾರುತಿಹುದು ಪದ್ಯವನ್ನು ಬರಗೂರು ಅವರ ಪಠ್ಯದಿಂದ ತೆಗೆದಿದ್ದರು. ಯಾಕೆ ಬಾವುಟ ಹಾರಿದರೆ ಇವರಿಗೆ ತೊಂದರೆಯಾ? ನಮ್ಮಲ್ಲೇನು ಪಾಕಿಸ್ಥಾನದ ಬಾವುಟ ಹಾರಬೇಕಿತ್ತಾ ಎಂದು ಕುಟುಕಿದರು.
ಪಿಯುಸಿ ಪಠ್ಯ ಸಮಿತಿಯಲ್ಲಿ ಚಕ್ರತೀರ್ಥ ಇದ್ದರೆ ತಪ್ಪೇನ್ರಿ?
ಇನ್ನು ಪಿಯುಸಿ ಪಠ್ಯಪುಸ್ತಕ ಸಮತಿಯಲ್ಲೂ ಸಹ ರೋಹಿತ್ ಚಕ್ರತೀರ್ಥ ಇರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ಅವರ ಇದ್ದರೆ ತಪ್ಪೇನ್ರಿ ಎಂದು ಪ್ರಶ್ನಿಸಿದ್ದಾರೆ.
ಚಕ್ರತೀರ್ಥ ಅವರು ಪ್ರೊಫೆಸರ್ ಆಗಿದ್ದವರು. ಐಐಟಿ ಹಾಗೂ ಸಿಇಟಿಗೆ ಅವರು ಪಾಠ ಮಾಡಿದ ಅನುಭವ ಹೊಂದಿದ್ದಾರೆ. ಅವರು ಪಠ್ಯಪುಸ್ತಕ ಸಮಿತಿಯಲ್ಲಿ ಇದ್ದರೆ ತಪ್ಪೇನು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post