No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Saturday, September 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಬೆಂಗಳೂರು ನಗರ

ಸಂಸ್ಥಾಪನೋತ್ಸವ: ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

kalpa News by kalpa News
April 7, 2021
in ಬೆಂಗಳೂರು ನಗರ
0
ಸಂಸ್ಥಾಪನೋತ್ಸವ: ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಬೆಂಗಳೂರು: ಬೇರೆಯವರನ್ನು ದ್ವೇಷಿಸುವ ಪ್ರವೃತ್ತಿ ನಮ್ಮದಲ್ಲ, ಬೇರೆಯವರಿಗೆ ಮಾರ್ಗದರ್ಶನ ಮಾಡಿಕೊಂಡು ಬಂದವರು ನಾವು. ನಮ್ಮತನವನ್ನು ಉಳಿಸಿಕೊಳ್ಳಲು ಬ್ರಾಹ್ಮಣರೆಲ್ಲರೂ ಒಗ್ಗಟ್ಟಾಗಿ ನಡೆಯಬೇಕಾಗಿದೆ ಎಂದು ಮಲೆನಾಡು ಅಭಿವೃದ್ಧಿಮಂಡಳಿಯ ಅಧ್ಯಕ್ಷ ಎಸ್. ಗುರುಮೂರ್ತಿ ಹೇಳಿದರು.

ಹವ್ಯಕ ಮಹಾಸಭೆಯಲ್ಲಿ ನಡೆದ ಸಂಸ್ಥಾಪನೋತ್ಸವ – ವಿಶೇಷ ಪ್ರಶಸ್ತಿ ಪ್ರದಾನ ಹಾಗೂ ಪಲ್ಲವ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಭಾಗವಹಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಕೇ ಹುಟ್ಟಿದ ಹವ್ಯಕ ಮಹಾಸಭೆಯು ಈ ಎತ್ತರಕ್ಕೆ ಬೆಳೆದಿದೆ. ವಿಶ್ವಮಟ್ಟದ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಿದೆ. ನಮ್ಮ ಸಮಾಜವು ನಾಡಿಗಾಗಿ ಮಾಡಿದ ಸೇವೆ ಅನನ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಹಾಗೂ ಕೋವಿಡ್ ಸಂಕಷ್ಟಕಾಲದಲ್ಲಿ ಜನತೆಗೆ ಧೈರ್ಯ ತುಂಬಿದ ಡಾ. ಕಜೆಯವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಇಡೀ ಪ್ರಪಂಚದಲ್ಲಿ ಸುಮಾರು 4 ಲಕ್ಷ ಹವ್ಯಕರಿದ್ದು, ಎಲ್ಲರೂ ವಿದ್ಯಾವಂತರು – ಪ್ರತಿಭಾವಂತರು ಇದ್ದಾರೆ. ಹವ್ಯಕ ಸಮಾಜದಲ್ಲಿ ಎಷ್ಟು ಪ್ರತಿಭಾನ್ವಿತರು ಇದ್ದಾರೆ ಎಂದು ಸಮಾಜಕ್ಕೆ ತೋರಿಸುವ ಕೆಲಸವನ್ನು ಮಹಾಸಭೆಯು ಮಾಡುತ್ತಿದೆ. ಇದನ್ನು ಕಂಡು ಅನ್ಯರು ಅನುಸರಿಸುವಂತಾಗಲಿ. ವಿದ್ವಾನ್ ಬಂದಗದ್ದೆ ನಾಗರಾಜರಂತಹವರು ಈ ಶತಮಾನದ ಏಕೈಕ ಮಹಾಕವಿಗಳು. ಅವರು ಯಾರಿಗೂ ಗೋಚರವಾಗದೆ ಇದ್ದಾರೆ. ಅಂಥ ಅನೇಕರು ಸಮಾಜದಲ್ಲಿದ್ದಾರೆ ಅವರನ್ನು ಅನ್ಯರೂ ನೋಡಲಿ ಎಂಬ ಕಾರಣದಿಂದ ದೀಪಶಿಖೆಯಾಗಿ ಈ ಕಾರ್ಯಕ್ರಮ ಎಂದರು.

ಹವ್ಯಕ ಮಹಾಸಭಾ ಎಂಬುದು ಜಾತಿಯ ಸಂಘಟನೆಯಾಗಿದ್ದರೂ, ಎಲ್ಲ ಸಮುದಾಯಗಳಿಗೆ ಪ್ರೇರಣೆನೀಡುವ ನಿಟ್ಟಿನಲ್ಲಿ ಮಹಾಸಭೆ ಸಾಗುತ್ತಿದೆ. ಕೇವಲ ಹವ್ಯಕ ಸಮಾಜಕ್ಕೆ ಸೀಮಿತವಾಗಿ ಕಾರ್ಯಕ್ರಮಗಳನ್ನು ಆಯೋಗಜಿಸದೇ, ಎಲ್ಲಾ ಸಮುದಾಯಗಳ ಉನ್ನತಿಗೆ ಕಾರ್ಯಕ್ರಮಗಳನ್ನು ತರಬೇತಿಗಳನ್ನು ನಡೆಸಲಾಗುತ್ತಿದೆ ಎಂದು ಮಹಾಸಭೆಯ ಕಾರ್ಯಗಳನ್ನು ತಿಳಿಸಿದರು.
ಸಂಪರ್ಕ ಸಾಧನಗಳೇ ದುರ್ಬಲವಾಗಿದ್ದ ಕಾಲದಲ್ಲಿ ಎಲ್ಲ ಪ್ರಾತಿನಿಧಿಕ ಪ್ರಾಂತ್ಯಗಳ ಹವ್ಯಕ ಮುಖಂಡರು ಸ್ವಾತಂತ್ರ್ಯ ಪೂರ್ವದಲ್ಲೇ ಈ ಸಂಘಟನೆಯನ್ನು ಕಟ್ಟಿದ್ದಾರೆ. ಅವರ ದೂರದರ್ಶಿತ್ವ ತುಂಬಾ ದೊಡ್ಡದು ಎಂದು ಮಹಾಸಭೆಯನ್ನು ಕಟ್ಟಿಬೆಳೆಸಿದವರನ್ನು ಸ್ಮರಿಸಿದ ಅವರು, ಗಾಯತ್ರೀ ಮಂತ್ರವು ರೋಗನಿಯಂತ್ರಣಕ್ಕಾಗಿ ಪರಿಣಾಮಕಾರಿ ಎಂಬ ಸಂಶೋಧನೆಯನ್ನು ದೇಶಮಾಡುತ್ತಿದೆ. ಅಂಥ ಮಂತ್ರದ ಆಚರಣೆಯನ್ನು ನಮ್ಮ ಸಮಾಜ ದೃಢವಾಗಿ ಹಿಡಿದಿದೆ ಎಂದು ತಿಳಿಸಿದರು.

ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಅಜಕ್ಕಳ ಗಿರೀಶ ಭಟ್ ಮಾತನಾಡಿ, ಹವ್ಯಕ ಸಮಾಜವು ದೈಹಿಕ ದುಡಿಮೆ ಮತ್ತು ಬೌದ್ಧಿಕ ಪರಿಶ್ರಮ ಎರಡರಲ್ಲೂ ಶ್ರೇಷ್ಠತೆಯನ್ನು ಹೊಂದಿದ ಸಮಾಜ. ಆ ಸಮಾಜದ ಪ್ರಾತಿನಿಧಿಕ ಸಂಸ್ಥೆ ಹವ್ಯಕ ಮಹಾಸಭೆ ಪಲ್ಲವ ಪುರಸ್ಕಾರ ಮತ್ತು ಸಾಧಕರಿಗೆ ಪ್ರಶಸ್ತಿಯನ್ನು ನೀಡಿ ಪ್ರಶಸ್ತಿಗೇ ಗೌರವ ಬರುವಂತೆ ಮಾಡಿದೆ. ಮಹಾಸಭೆಯ ವರ್ಚಸ್ಸೂ ಸಹ ಹೆಚ್ಚುತ್ತದೆ. ಸಮಯ ಶ್ರಮ ಶ್ರದ್ಧೆ ಒಟ್ಟಿಗೆ ಸೇರಿದರೆ ಇಂಥ ಸಾಧಕರು ಹುಟ್ಟುತ್ತಾರೆ. ಇನ್ನೂ ಹೆಚ್ಚು ಪ್ರತಿಭೆಗಳು ಸಾಧನೆಯಾಗಿ ಪರಿವರ್ತಿತವಾಗಲಿ ಎಂದು ಆಶಿಸಿದರು.
ಹವ್ಯಕ ವಿಭೂಷನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ, ವಿದ್ವಾನ್ ಬಂದಗದ್ದೆ ನಾಗರಾಜರು, ಈ ಪ್ರಶಸ್ತಿ ನನಗೆ ನೀಡಿದ್ದಲ್ಲ, ಇದು ಪರಂಪರೆಗೆ ಕೊಟ್ಟ ಗೌರವ. ಈ ಪರಂಪರೆ ಮುಂದುವರಿಯಬೇಕು ಎಂದು ಹೇಳಿದ ಅವರು, ಗಾಯತ್ರೀಜಪದಿಂದ ಪಾರ್ಶ್ವವಾಯು ಸಮಸ್ಯೆ ಪರಿಹಾರವಾಗಿದೆ. ಬ್ರಾಹ್ಮಣರಿಗೆ ಇದೊಂದು ಮಹತ್ ಔಷಧಿಯಾಗಿದ್ದು, ಗಾಯತ್ರಿಯ ಉಪಾಸನೆ ಸಮಾಜದಲ್ಲಿ ಹೆಚ್ಚೆಚ್ಚು ನಡೆಯುವಂತಾಗಲಿ ಎಂದು ಹಾರೈಸಿದರು.

ಹವ್ಯಕಭೂಷಣ ಸ್ವೀಕರಿಸಿದ ಕೊಂಡಕುಳಿ ರಾಮಚಂದ್ರ ಹೆಗಡೆ ಮಾತನಾಡಿ, ಸಾಹಿತಿಗೂ ಕಲಾವಿದನಿಗೂ ಆತ್ಮೀಯತೆ ಇದ್ದರೆ ಇಬ್ಬರಿಗೂ ಶ್ರೇಯಸ್ಸು. ಸಾಹಿತಿ ಬರೆದಿದದ್ದನ್ನು ಒಂದೇಬಾರಿಗೆ ಸಾವಿರಾರು ಜನರಿಗೆ ಓದಲಾಗದು. ಕಲಾವಿದನು ಅದನ್ನು ಹಲವರಿಗೆ ಉಣಬಡಿಸಬಹುದು. ಆ ನಿಟ್ಟಿನಲ್ಲಿ ಮಹಾಸಭೆ ನಮ್ಮಂತಹವರನ್ನೂ ಗುರುತಿಸಿ ಗೌರವಿಸಿದೆ. ಸರಕಾರ ಗುರುತಿಸದಿದ್ದರೂ ಮಹಾಸಭೆ ರಾಜಾಶ್ರಯ ನೀಡಿರುವುದು ಹೆಮ್ಮೆಯ ವಿಷಯ ಎಂದರು.

ಹವ್ಯಕಭೂಷಣ ಪಡೆದ ಡಾ. ಶ್ಯಾಮ ಸಿ ಭಟ್ ಮಾತನಾಡಿ, ಹವ್ಯಕ ಮಹಾಸಭೆಯ ವಿದ್ಯಾರ್ಥಿ ಪ್ರೋತ್ಸಾಹಧನ ಪಡೆದು ಓದಿದವನು ಎನ್ನಲು ನನಗೆ ಹೆಮ್ಮೆಯಾಗುತ್ತದೆ. ನನ್ನ ಸಹಾಯ ಈ ನಿಟ್ಟಿನಲ್ಲಿ ಮಾಡಲು ಸಿದ್ಧನಿದ್ದೇನೆ. ಹೆಚ್ಚೆಚ್ಚು ಜನರ ವಿದ್ಯಾರ್ಜನೆಗೆ ಸಹಾಯ ಮಾಡೋಣ. ವೈದ್ಯಕೀಯ ಉಪಕರಣಗಳ ಡ್ರಗ್ ಗಳ ಉತ್ಪಾದನೆಗೆ ಈ ಪ್ರಶಸ್ತಿಯು ಸ್ಫೂರ್ತಿಯಾಗಲಿದೆ ಎಂದರು.

ಹವ್ಯಕಶ್ರೀ ಭೂಷಿತ ವೇ. ಗಜಾನನ ಘನಪಾಠಿಗಳು ಮಾತನಾಡಿ, ಹವ್ಯಕವ್ಯಗಳನ್ನು ಅನುಷ್ಠಾನ ಇಟ್ಟುಕೊಳ್ಳುವ ಸಮಾಜ ನಮ್ಮದು ಅದು ಕೇವಲ ಹೆಸರಿಗೆ ಮಾತ್ರವಾಗದೆ ಅನ್ವರ್ಥಕವಾಗಿ ಇಡೋಣ ಎಂಬ ಕಿವಿಮಾತು ಹೇಳಿದರು.

ಕು. ಈಶಾ ಶರ್ಮಾ, ಹವಿಗನ್ನಡದಲ್ಲಿ ಮಾತನಾಡಿ, ಎಲ್ಲ ಸಾಧಕರ ಮುಂದೆ ನಾನು ಅಳಿಲಿನಂತೆ, ಚೆಸ್‌ನಲ್ಲಿ ದೇಶದ ಮಹಿಳಾ ಸಾಧಕಿಯರಲ್ಲಿ ಮೊದಲ ಸ್ಥಾನದಲ್ಲಿ ಇದ್ದೇನೆ. ಇದು ಬಹಳ ಕಷ್ಟದ ಕಲೆ ಹಾಗೂ ಆಟ ಆಗಿದೆ. ನನ್ನ ಪಾಲಕರ ಪ್ರೋತ್ಸಾಹ ಅನನ್ಯವಾಗಿದೆ ಅವರಿಗೆ ಎನ್ನ ಪ್ರಶಸ್ತಿ ಸಮರ್ಪಿತ. ಈ ಪುರಸ್ಕಾರವು ಮುಂದಿನ ಸಾಧನೆಗೆ ಪ್ರೋತ್ಸಾಹದಾಯಕ ಎಂದರು.

ಅಭ್ಯಾಯಾಗತರಾದ ಪ್ರಮೋದ ಹೆಗಡೆ ಯಲ್ಲಾಪುರ, ಮಾತನಾಡುತ್ತ, ಇಂತಹ ಕಾರ್ಯಕ್ರಮಗಳಿಂದ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ. ಹವ್ಯಕರನ್ನು ನೋಡಿ ಇತರ ಸಮಾಜವು ಕಲಿಯಬೇಕು ಅಂತಹ ಆದರ್ಶತನವನ್ನು ನಾವು ಉಳಿಸಿಕೊಳ್ಳಬೇಕು. ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥಾಪನೋತ್ಸವದ ಹಿನ್ನೆಲೆಯ ಕುರಿತು ಸಂಚಾಲಕ ಮುಗಲೋಡಿ ಕೃಷ್ಣಮೂರ್ತಿ ಮಾತನಾಡಿ, ಮಹಾಸಭೆಯನ್ನು ಸಂಸ್ಥಾಪಿಸಿದವರು ಹಾಗೂ ಕಟ್ಟಿಬೆಳೆಸಿದ ಹಿರಿಯರನ್ನು ನೆನಪಿಸಿಕೊಂಡರು ಹಾಗೂ ಆ ಕುರಿತಾದ ಕಿರುಚಿತ್ರ ಪ್ರದರ್ಶನ ನಡೆಯಿತು. ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಯಿತು.

ಯಕ್ಷ ಸಂಸ್ಕಾರ ಮಾಲಿಕೆಯಲ್ಲಿ ತರಬೇತಿ ನೀಡಿದ ತೋಟಿಮನೆ ಗಣಪತಿಯವರಿಗೆ ಮಹಾಸಭೆಯ ಗೌರವವನ್ನು ನೀಡಲಾಯಿತು. ತರಬೇತಿಯಲ್ಲಿ ಸಹಕರಿಸಿದ ಪ್ರಸನ್ನ ಹೆಗಡೆ, ಹವ್ಯಕಮಂಜು, ಸಂಚಾಲಕ ಎನ್.ಎಂ.ಹೆಗಡೆ ಅವರನ್ನೂ ನೆನಪಿಸಿಕೊಳ್ಳಲಾಯಿತು.
ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ ಸಂಪ ಸ್ವಾಗತಿಸಿದರು. ನಾರಾಯಣ ಭಟ್ಟ, ಡಾ. ಮಮತಾ, ಶ್ರೀಕಾಂತ ಹೆಗಡೆ, ವಿನಯ ಬೆಳೆಯೂರು, ವಿನಾಯಕ ಮಧ್ಯಸ್ಥ ಪ್ರಶಸ್ತಿಪತ್ರಗಳನ್ನು ವಾಚಿಸಿದರು. ಮೋಹನ ಹೆಗಡೆ ಮತ್ತು ಕೃಷ್ಣಾನಂದ ಶರ್ಮಾ ನಿರೂಪಿಸಿದರು. ಸಂಚಾಲಕರಾದ ರವಿನಾರಾಯಣ ಪಟ್ಟಾಜೆ ವಂದಸಿದರು. ಮಹಾಸಭೆಯ ಪದಾಧಿಕಾರಿಗಳು, ನಿರ್ದೇಶಕರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

Tags: BangaloreGiridhar kajeHavyaka SanghaKannada News WebsiteLatest News Kannadaಬೆಂಗಳೂರುಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ
Share249Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ತಾಳ್ಯ ಪಂಚಾಯಿತಿ ಪಿಡಿಓ ಸಿ. ಸಂದೀಪ ಕುಮಾರ್ ಎಸಿಬಿ ಬಲೆಗೆ

Next Post

6ನೆಯ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತರಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

kalpa News

kalpa News

Next Post
ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡ, ಪರಿಣಾಮ ಎದುರಿಸುತ್ತೀರಿ: ಕೈ ನಾಯಕರಿಗೆ ಸಿಎಂ ಬಿಎಸ್’ವೈ ಎಚ್ಚರಿಕೆ

6ನೆಯ ವೇತನ ಆಯೋಗದ ಶಿಫಾರಸ್ಸು ಜಾರಿಗೆ ತರಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಸ್ಪಷ್ಟನೆ

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL