ಬೆಂಗಳೂರು: ಕಳೆದ ವಾರ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಿಆರ್’ಪಿಎಫ್’ನ ಯೋಧರು ಹತ್ಯೆಯಾಗಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮಿಸಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಜಮ್ಮು ಕಾಶ್ಮೀರದ ಗ್ರಾಮದ ಹ್ಯಾರಿಸ್ ಮಂಜೂರ್ ಸೊಪೋರೆ ಗ್ರಾಮದ ಗೌಹಾರ್ ಮುಷ್ತಾಕ್, ಹಾಗೂ ಕುಪ್ವಾರಾ ಗ್ರಾಮದ ಜಾಹೀರ್ ಮುಕ್ ಬುಲ್ ಎನ್ನುವವರನ್ನು ನಗರದ ಹೊರವಲಯದ ಸೂರ್ಯ ನಗರದಲ್ಲಿ ಬಂಧಿಸಲಾಗಿದೆ.
ಮೂವರು ಆರೋಪಿಗಳನ್ನು ಬೆಂಗಳೂರು ಹೊರವಲಯದ ಮರಸೂರು ಗೇಟ್ ಬಳಿಯಿರುವ ಸ್ಪೂರ್ತಿ ಎಂಬ ಖಾಸಗಿ ಕಾಲೇಜಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇದೇ ಕಾಲೇಜಿನಲ್ಲಿ ಪಶ್ಚಿಮ ಬಂಗಾಳ ಮೂಲದ ಕೌಶಿಕ್ ದೆಬ್ ನಾಥ್ ಕೂಡಾ ವ್ಯಾಸಂಗ ಮಾಡುತ್ತಿದ್ದಾನೆ.
ಪುಲ್ವಾಮಾದಲ್ಲಿ ನಡೆದ ಹತ್ಯೆಯನ್ನು ವಿರೋಧಿಸಿ ಕೌಶಿಕ್ ಹುತಾತ್ಮ ಯೋಧರ ಕುರಿತು ಪೋಟೋವನ್ನು ಸಾಮಾಜಿಕ ಜಾಲತಾಣ ಫೇಸ್’ಬುಕ್ ನಲ್ಲಿ ಹಾಕಿದ್ದರು. ಈ ಪೋಸ್ಟ್ ನೋಡಿದ ಮೂವರು ಆರೋಪಿಗಳು ಯೋಧರ ಕುರಿತ ಅವಹೇಳನಕಾರಿ ಹೇಳಿಕೆ ನೀಡಿದರಲ್ಲದೇ, ದೆಬ್ ನಾಥ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಗಾಯಾಳು ಹೇಳಿಕೆ ಹಾಗೂ ಫೇಸ್ ಬುಕ್ ಸ್ಟೇಟಸ್ ಆಧಾರದ ಮೇಲೆ ಆರೋಪಿಗಳ ವಿರುದ್ಧ 1967ರ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ಸೈನಿಕರ ವಿರುದ್ಧ ಅವಹೇನಕಾರಿ ಹೇಳಿಕೆ ಹಾಗೂ ಪಾಕಿಸ್ತಾನ ಪರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದನ್ನು ಮೂವರು ಆರೋಪಿಗಳನ್ನು ವಿಚಾರಣೆ ವೇಳೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Discussion about this post