ಭದ್ರಾವತಿ: ಕಲೆ ಎಲ್ಲರನ್ನು ಕರೆಯುತ್ತದೆ. ಆದರೆ ಕೆಲವಚರನ್ನು ಮಾತ್ರ ಆರಿಸಿಕೊಳ್ಳತ್ತದೆ ಎನ್ನುವುದು ಹಿರಿಯರ ಮಾತು. ಆದರೆ ಕಲೆಯನ್ನು ವೃತ್ತಿಯನ್ನಾಗಿ ಮಾಡಿಕೊಂಡು ಶುದ್ದ ಮಣ್ಣಿನ ಮೂರ್ತಿ ತಯಾರಿಕ ಪಿ.ಬಸವರಾಜ್ ಕೂಡ ಒಬ್ಬರು. ಕಲಾವಿದರ ಕುಟುಂಬಸ್ಥರು ತಲತಲಾಂತರದಿಂದ ಮಾಡಿಕೊಂಡು ಬಂದ ಮೂರ್ತಿ ವಿಗ್ರಹ ನಿರ್ಮಾಣ ಕಾರ್ಯವನ್ನು ಮುಂದುವರೆಸಿಕೊಂಡು ಬಂದವರು.
ಮೋದಕ ಪ್ರಿಯ, ವಿಘ್ನ ವಿನಾಶಕ, ಕಾರುಣ್ಯ ಮೂರ್ತಿಗಣಪ ಮನೆಮನೆಗೆ ಸೋಮವಾರ ಬರಲಿದ್ದು ಜನತೆ ಸಂಭ್ರಮದಿಂದ ಆಚರಿಸಲು ತುದಿಗಾಲಲ್ಲಿ ನಿಂತಿದ್ದಾರೆ. ದಶಕಗಳ ಹಿಂದೆ ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿದ ಗಣೇಶ ಹಬ್ಬ ಇಂದು ದೇಶದ ಬೀದಿ ಬೀದಿಗಳನ್ನಾವರಿಸಿದೆ. ನಾನಾ ಬಗೆಯ ಮೂರ್ತಿಗಳು ಕಲಾವಿದರ ಕೈಯಲ್ಲಿರಳಿ ಪ್ರತಿಷ್ಟಾಪಿಸಲ್ಪಡುತ್ತವೆ. ಈ ಸಂಭ್ರಮದ ನಡುವೆ ಕಳೆದ 30 ವರ್ಷಗಳಿಂದ ಮೋದಕ ಪ್ರಿಯನಿಗೆ ಪ್ರಿಯನಾಗಿ, ಗುರುಗಳಿಂದ ಛೀಮಾರಿಗೊಳಗಾಗಿ ಛಲ ಬಿಡದ ತ್ರಿವಿಕ್ರಮನಂತೆ ಮೂರ್ತಿರೂಪ ಕೊಡುವಲ್ಲಿ ಅಪ್ರತಿಮರಾಗಿರುವ ಬಸವರಾಜ್.
ಕೇವಲ ನಗರ ಪ್ರದೇಶಗಳಲ್ಲದೆ ಹೊರ ಜಿಲ್ಲೆಗಳಿಗೂ ಮೂರ್ತಿಗಳನ್ನು ತಯಾರಿಸಿ ಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಸವರಾಜ್ ಅತ್ಯಂತ ಕಿರಿಯ ವಯಸ್ಸಿನಲ್ಲಿ ಶ್ರದ್ಧಾಭಕ್ತಿಯಿಂದ ಮೂರ್ತಿಗಳನ್ನು ಮಾಡುವ ಕಾಯಕದಲ್ಲಿ ತೊಡಗಿದ್ದಾರೆ.
ಪರಿಸರ ಸ್ನೇಹಿ ಗಣಪ:
ಧಾರ್ಮಿಕ ಆಚರಣೆಗಳ ಹೆಸರಿಗೆ ಪರಿಸರಕ್ಕೆ ಧಕ್ಕೆಯಾಗಬಾರದೆಂದು ಹಾಗು ರಾಸಾಯನಿಕ ಮಿಶ್ರಿತ ವಿಗ್ರಹಗಳ ತಯಾರಿಕೆಗಳಿಂದ ಸಮಸ್ಯೆ ಕಾಣಬಾರದೆಂಬ ಉದ್ದೇಶಹೊತ್ತಿದ್ದಾರೆ. ನೀರಿನಲ್ಲಿಕರಗದ ರಾಸಾಯನಿಕ ಮೂರ್ತಿಗಳಿಂದ ರಾಜ್ಯದಲ್ಲಿಂದು ಕಂಟಕವಾಗಿ ಪರಿಣಿಮಿಸಿದೆ. ಸರಕಾರಗಳು ಅದರ ನಿವಾರಣೆಗಾಗಿ ನಾನಾ ಕಸರತ್ತು ಮಾಡುತ್ತಿದ್ದರು ಪ್ರಯೋಜನವಾಗದಿರುವುದು ವಿಷಾಧನೀಯ. ರಾಸಾಯನಿಕ ಬಳಕೆಯಿಂದ ಪರಿಸರದ ನೈರ್ಮಲ್ಯ ತಡೆಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತ ಸರಕಾರ ರಾಸಾಯನಿಕ ರಹಿತವಾಗಿ ಮಣ್ಣಿನಿಂದ ತಯಾರಿಸುವ ಗಣಪ ಮತ್ತಿತರೆ ವಿಗ್ರಹಗಳ ಪರಿಕರಗಳ ಚಿಂತನೆಗೆ ಮುಂದಾಗಬಹುದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಪರಿಸರ ಕಾಳಜಿಯಿಂದ ಕೇಂದ್ರ ಹಾಗು ರಾಜ್ಯ ಸರಕಾರಗಳು ಸಿನಿಮಾ ಮಂದಿರಗಳು ಸೇರಿದಂತೆ ಬೃಹತ್ ಬ್ಯಾನರ್, ದೃಶ್ಯ ಮಾಧ್ಯಮ, ಮುದ್ರಣ ಮೂಲಕ ಹೆಚ್ಚಿನ ಪ್ರಚಾರ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಇದರಿಂದ ಸ್ವಚ್ಛ ಭಾರತ್ ಆಂದೋಲನ ಆರಂಭಗೊಂಡ ನಂತರ ದೇಶದಲ್ಲಿನ ಯುವಜನತೆಯಿಂದ ಸ್ವಚ್ಛತೆಗೆ ಬಹಳಷ್ಟು ಜಾಗೃತಿ ಮೂಡುತ್ತಿದೆ. ದುರಂತವೆಂದರೆ ಸೋಮವಾರ ಆಗಮಿಸಲಿರುವ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಾಸಾಯನಿಕ ಬಳಸದೆ ಇರುವ ಕೇವಲ ಮಣ್ಣಿನಿಂದ ತಯಾರಿಕೆಗೆ ಒತ್ತು ನೀಡುವುದರಿಂದ ರಾಸಾಯನಿಕ ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧತರಲು ಸಾಧ್ಯವಾಗಬಹುದು ಎಂಬುದು ಗಣೇಶನ ಮೂರ್ತಿಗಳ ತಯಾರಿಕರ ಅಭಿಪ್ರಾಯವಾಗಿದೆ.
ಮಣ್ಣಿನ ಪದಾರ್ಥಗಳಲ್ಲದೆ ಆಧುನಿಕ ಜೀವನ ಶೈಲಿಯಲ್ಲಿ ತಯಾರಿಸಲಾಗುವ ವಿಗ್ರಹಗಳು ನೀರಿನಲ್ಲಿ ಕರಗದೆ ಅದಕ್ಕೆ ಲೇಪಿಸಿದ ರಾಸಾಯನಿಕ ನೀರಿನಲ್ಲಿ ಮಿಶ್ರಿತಗೊಂಡು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲಿರುವುದಂತು ಸತ್ಯ. ತಯಾರಿಕರಿಗೆ ಬಣ್ಣದ ಬಳಕೆ ಬದುಕಿನ ಒಂದು ಭಾಗದಂತಾಗಿದೆ ಆದರೂ, ಇದರಿಂದ ಆರೋಗ್ಯ ಸಮಸ್ಯೆ ಹಾಗೂ ಪರಿಸರಕ್ಕೆ ಮಾರಕವಾಗಿದೆ. ಪ್ರತಿವರ್ಷ ಮಾರಾಟವಾಗುತ್ತಿರುವ ರಾಸಾಯನಿಕ ಮಿಶ್ರಿತ ವಿಗ್ರಹಗಳನ್ನು ವಿಸರ್ಜನೆ ಮಾಡುತ್ತಿರುವುದರಿಂದ ನದಿ, ಹಳ್ಳ ಕೊಳ್ಳಗಳಲ್ಲಿನ ನೀರು ಅಶುದ್ದವಾಗಿ ಆರೋಗ್ಯದ ಮೇಲೆ ದುಶ್ಪರಿಣಾಮ ಬೀರುತ್ತದೆ, ಇಂತಹ ತಯಾರಿಕೆಗೆ ಸಂಬಂಧಿತ ಇಲಾಖೆಗಳು ತಡೆ ತಂದಲ್ಲಿ ಮಾತ್ರ ತಡೆಗೆ ಸಹಕರಿಸದಂತಾದಲ್ಲಿ ಪರಿಸರಕ್ಕೆ ಪೂರಕವಾಗಲಿದೆ.
ಮಣ್ಣು ಬಳಕೆಯಿಂದ ಸ್ವಚ್ಛತೆಗೆ ಕಾರಣವಾಗಿರುವ ಜೊತೆಯಲ್ಲಿ ಮಣ್ಣಿನ ವಿಗ್ರಹ ತಯಾರಿಕರ ಬದುಕು ಹಸನಾಗಲಿದೆ. ಜೊತೆಗೆ ವೃತ್ತಿಯನ್ನೇ ನಂಬಿಕೊಂಡ ಕುಟುಂಬಗಳಿಗೂ ಸಹ ನೆರವಾಗಲಿದೆ. ಇದರಿಂದ ಅತಂತ್ರ ಸ್ಥಿತಿಗೆ ಸಿಲುಕಿರುವ ಪರಿಸ್ಥಿತಿ ಕಂಡುಬರುತ್ತಿದೆ. ಇದೀಗ ವೃತ್ತಿಯನ್ನು ನಂಬಿಕೊಂಡ ಕುಟುಂಬಗಳು ನಷ್ಟದ ಹಾದಿಯಲ್ಲಿದ್ದು, ಬಹಳಷ್ಟು ಕುಟುಂಬಗಳು ಈ ವೃತ್ತಿಯನ್ನೇ ತೊರೆಯುತ್ತಿರುವ ಸ್ಥಿತಿ ಕಂಡುಬರುತ್ತಿದೆ. ಆದ್ದರಿಂದ ಮಣ್ಣಿನ ಉಪಕರಣಗಳ ಬಳಕೆ ಹೆಚ್ಚಾಗದಿದ್ದರೆ, ಮುಂದಿನ ದಿನಗಳಲ್ಲಿ ಬೇಕೆಂದರೂ ಸಿಗಲಾರದ ಸ್ಥಿತಿ ಎದುರಾಗಲಿದೆ. ಇದನ್ನು ತಡೆಗಟ್ಟಲು ರಾಸಾಯನಿಕ ಮಿಶ್ರಿತ ವಿಗ್ರಹಗಳ ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಿದೆ.
ಆದರೆ ಇದೀಗ ಬಹುತೇಕ ಬೇರೆ ಬೇರೆ ಪದಾರ್ಥಗಳ ಬಳಕೆಯ ವಸ್ತುಗಳ ಕಂಡುಬರುತ್ತಿದ್ದು, ಇದರಿಂದ ಹಲವಾರು ರೀತಿಯ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇನ್ನಾದರೂ ಜನರು ರಾಸಾಯನಿಕ ಮಣ್ಣಿನ ಉಪಕರಣಗಳ ಬಳಕೆಗೆ ಆದ್ಯತೆ ನೀಡಬೇಕಾದ ಅವಶ್ಯಕತೆ ಇದೆ. ಬಹಳಷ್ಟು ಜನ ವೃತ್ತಿ ತೊರೆಯಬಾರದು ಎಂಬ ಕಾರಣಕ್ಕಷ್ಟೇ ಕಸುಬು ಬಿಡದೆ, ಮುಂದುವರೆಸಿದ್ದಾರೆ. ಇದನ್ನೇ ನಂಬಿಕೊಂಡ ಕುಟುಂಬಗಳ ಸ್ಥಿತಿ ಹದಗೆಟ್ಟಿದೆ. ಮಣ್ಣಿನ ಉಪಕರಣಗಳು ಬಹಳಷ್ಟು ಉಪಯೋಗಕಾರಿಯಾಗಿದ್ದರೂ, ಜನರು ಅದೇಕೆ ನಿರುತ್ಸಾಹ ತೋರುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಹಳೇನಗರದ ಕುಂಬಾರ ಬೀದಿಯ ವಾಸಿ ಹಾಗು ಮಣ್ಣಿನ ಪರಿಕರಗಳ ವ್ಯಾಪಾರಿ ಪಿ.ಬಸವರಾಜ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
(ವಿಶೇಷ ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post