ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೆಜಿಎಫ್ ಸಿನಿಮಾ ವೀಕ್ಷಿಸಿ ಹಿಂತಿರುತ್ತಿದ್ದ ವೇಳೆ ಸಂಭವಿಸಿದ ಭೀಕರ ಬೈಕ್ ಅಪಘಾತದಲ್ಲಿ ಓರ್ವ ಸಾವನ್ನಪ್ಪಿ, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
Also Read: ಸಂತೋಷ್ ಪ್ರಕರಣಕ್ಕೆ ಟ್ವಿಸ್ಟ್: ಬೆಳಗಾವಿ ಜಿಪಂ ಮಾಜಿ ಅಧ್ಯಕ್ಷೆ ಪತ್ರದ ಫೋರ್ಜರಿ ಸಂಬಂಧ ದೂರು ದಾಖಲು
ಎನ್ ಆರ್ ಪುರದ ಶಿವಕುಮಾರ್ ಹಾಗೂ ಮನೋಜ್ ಕುಮಾರ್ ಅವರುಗಳು ಸಿನಿಮಾ ವೀಕ್ಷಿಸಿ ನಿನ್ನೆ ತಡರಾತ್ರಿ ಹಿಂತಿರುಗುತ್ತಿದ್ದ ವೇಳೆ ಭದ್ರಾವತಿ ತಾಲೂಕಿನ ಉಂಬ್ಳೇಬೈಲ್ ಬಳಿಯಲ್ಲಿ ನಿಯಂತ್ರಣ ತಪ್ಪಿ ಬೈಕ್ ಹಳ್ಳದಲ್ಲಿ ವೇಗವಾಗಿ ಬಿದ್ದಿದೆ.
ಬಿದ್ದ ರಭಸಕ್ಕೆ ತೀವ್ರವಾಗಿ ತಲೆಗೆ ಪೆಟ್ಟು ಬಿದ್ದು, ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮನೋಜ್ ಕುಮಾರ್ ತೊಡೆಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
Also Read: ದರ್ಗಾ ನವೀಕರಣದ ವೇಳೆ ದೇವಾಲಯದ ಕುರುಹು ಪತ್ತೆ? ಕಾಮಗಾರಿಗೆ ತಹಶೀಲ್ದಾರ್ ಬ್ರೇಕ್?
ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post