ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಅವರ ಸ್ವತಂತ್ರ ಸ್ಪರ್ಧೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಅನುಕೂಲವೇ ಆಗಲಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ B K Sangameshwar ಹೇಳಿದ್ದಾರೆ.
ಕಾರೇಹಳ್ಳಿ ಬಳಿಯಲ್ಲಿ ಗೀತಾ ಶಿವರಾಜಕುಮಾರ್ Geetha Shivarajkumar ಅವರನ್ನು ಸ್ವಾಗತಿಸಿದ ವೇಳೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇರುವ ಮತಗಳು ನಮಗೆ ಗಟ್ಟಿಯಾಗಿವೆ. ಇದೇ ವೇಳೆ ಈಶ್ವರಪ್ಪ ಅವರ ಸ್ವತಂತ್ರ ಸ್ಪರ್ಧೆಯಿಂದ ಬಿಜೆಪಿ ಮತಗಳು ವಿಭಜನೆಯಾಗಿ ನಮ್ಮ ಪಕ್ಷಕ್ಕೇ ಅನುಕೂಲವಾಗುತ್ತದೆ ಎಂದರು.
Also read: ಚುನಾವಣೆಯಲ್ಲಿ ಗೆದ್ದು ಬಿಜೆಪಿ ಸೇರುತ್ತೇನೆ | ಈಶ್ವರಪ್ಪ ವಿಶ್ವಾಸ
ಪ್ರತಿಬಾರಿ ಲೋಕಸಭಾ ಚುನಾವಣೆಯಲ್ಲಿ Lok Sabha Election ಭದ್ರಾವತಿಯಿಂದ ಬಿಜೆಪಿಗೆ ಲೀಡ್ ಸಿಗುತ್ತದೆ ಎಂಬುದು ಈಗ ನಡೆಯಲ್ಲ. ಈ ಬಾರಿ ಎಲ್ಲವೂ ತಲೆಕೆಳಗಾಗಿ, ನಮ್ಮ ಕ್ಷೇತ್ರದಲ್ಲಿ ಬಿಜೆಪಿಗೆ ಲೀಡ್ ಸಿಗುವುದಿಲ್ಲ. ಕಾಂಗ್ರೆಸ್ ಪಕ್ಷದ ಗೀತಾ ಶಿವರಾಜಕುಮಾರ್ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post