ಕಲ್ಪ ಮೀಡಿಯಾ ಹೌಸ್ | ಸೊರಬ |
ಮೊದಲಿನಿಂದಲೂ ರಾಜಕೀಯವಾಗಿ, ಸಾಂಸ್ಕೃತಿಕ, ಕಲಾಸಂಸ್ಕೃತಿಗೆ ಹೆಸರಾದ ಸೊರಬದಲ್ಲಿ ಇಂದಿಗೂ ಗುಡಿಗಾರಿಕೆ ಕಲೆ ಜೀವಂತವಾಗಿ ಉಳಿದಿದೆ ಎನ್ನಲು ಈ ಕಲಾಕೃತಿ ಪ್ರಸ್ತುತ ನಮ್ಮೆದುರಿಗಿದೆ ಎಂದು ದೊಡ್ಡಬಳ್ಳಾಪುರ ದೇವಾಂಗ ಸಮಾಜದ ಅಧ್ಯಕ್ಷ ಎಂ.ಜಿ. ಶ್ರೀನಿವಾಸ ಹರ್ಷ ವ್ಯಕ್ತಪಡಿಸಿದರು.
ದೊಡ್ಡಬಳ್ಳಾಪುರದ ದೇವಾಂಗ ಮಂಡಲಿಯವರು ಪಟ್ಟಣದ ಗುಡಿಗಾರ ಸಂತೋಷ್, ನಾಗರಾಜ್ ಅಂಬಾರಿ, ಚೇತನ ಜಿ.ತ್ಯಾವಗೋಡ್ ತಂಡದವರಿಗೆ ಬೃಹತ್ ಪ್ರಮಾಣದ ಧ್ವಜಸ್ತಂಭವನ್ನು ರಚಿಸಲು ಹೇಳಿದ್ದು, ಸಿದ್ಧವಾದ ಸ್ತಂಭವನ್ನು ವೀಕ್ಷಿಸಿ ಸ್ತಂಭ ಕುಂಭ ಪೂಜೆ ಸಲ್ಲಿಸಿ ಮಾತನಾಡಿದರು.
ಈ ಸ್ತಂಭವನ್ನು ದೊಡ್ಡಬಳ್ಳಾಪುರದ ಪ್ರಾಚೀನ ಗುಡಿಯಾದ ರಾಮಲಿಂಗ ಚೌಡೇಶ್ವರಿ ದೇಗುಲಕ್ಕಾಗಿ ರಚಿಸಿದ್ದು ಹಿಂದೆ ಇದ್ದ ಧ್ವಜಸ್ತಂಭ ಶಿಥಿಲವಾಗಿತ್ತು. ಹಾಗಾಗಿ ನಾವು ಸಮಾಜದವರು ನೂತನ ಧ್ವಜ ಸ್ತಂಭ ಮಾಡಿಸಲು ನಿರ್ಣಯಿಸಿದಾಗ ಸೊರಬದಲ್ಲಿ ನಿಪುಣ ಶಿಲ್ಪಿಗಳು ಇರುವುದನ್ನ ಕೇಳಿ ಇಲ್ಲಿಗೆ ಬಂದಾಗ ಇಂತಹ ಕಲೆಯ ನೈಪುಣ್ಯ ಉಳ್ಳವರು ದೊರೆತು ಇದೀಗ ಅತ್ಯಂತ ಕಲಾತ್ಮಕ ಸ್ತಂಭವನ್ನು ರಚಿಸಿದ್ದಾರೆ. ಅವರಿಗೆ, ಈ ಕಲಾಕೃತಿಗೆ ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ ಎಂದರು.
Also read: ಈಶ್ವರಪ್ಪ ಸ್ಪರ್ಧೆ | ಶಾಸಕ ಬಿ.ಕೆ. ಸಂಗಮೇಶ್ವರ್ ಮಹತ್ವದ ಹೇಳಿಕೆ ಏನು?
ಸುಮಾರು 25 ಅಡಿಉದ್ದದ ಈ ಧ್ವಜ ಸ್ತಂಭ ಕ್ಕೆ ಒಂದೇ ಮರವನ್ನು ಬಳಸಲಾಗಿದೆ. ತೇಗದ ಮರದಿಂದ ರಚಿಸಿದ್ದು, ಒಟ್ಟ 30 ದಿನಗಳು, 90 ಕಾರ್ಮಿಕ ಸಮಯದ ಮಿತಿಯಲ್ಲಿ ರಚಿಸಲಾಗಿದೆ. ಹೊಯ್ಸಳ ಶೈಲಿಯ ಕಲೆಯನ್ನು ಬಳಸಿಕೊಂಡಿದ್ದು, ಧ್ವಜದ ವಿಷ್ಣು ಭಾಗದಲ್ಲಿ ಗಣಪತಿ, ಶಿವಪಾರ್ವತಿ, ಡಮರುಗು, ತ್ರಿಶೂಲ ಅಷ್ಟಪಟ್ಟಿ ಚಿತ್ರಣ ಪತಾಕೆ ಚಿತ್ರಣ ರಚಿಸಲಾಗಿದೆ. ಮಹೇಶ್ವರ ಭಾಗದಲ್ಲಿ ಬಳ್ಳಿ, ಹೂ ಚಿತ್ರದ ಅಲಂಕಾರ ಮಾಡಲಾಗಿದೆ. ಒಟ್ಟು ಇದರ ರಚನೆಗೆ 1,30,000 ರೂ. ಖರ್ಚು ತಗುಲಿದಂತಾಗಿದೆ ಎಂದು ಶಿಲ್ಪಿ ಸಂತೋಷಗುಡಿಗಾರ್ ಮಾಹಿತಿ ನೀಡಿದರು.
ಪುರೋಹಿತ ಪ್ರಶಾಂತ್ ಬಾಪಟ್ ದ್ವಜಸ್ತಂಭದ ಪೂಜಾವಿಧಿ ವಿಧಾನಗಳನ್ನು ನೆರವೇರಿಸಿದರು. ದೊಡ್ಡಬಳ್ಳಾಪುರ ದೇವಾಂಗ ಮಂಡಲಿಯ ಉಪಾಧ್ಯಕ್ಷ ಬಿ.ಜಿ.ಅಮರನಾಥ್, ಪಿ.ಗೋಪಾಲ್, ಕಾರ್ಯದರ್ಶಿ ಎಂ.ಜಿ.ಅಮರನಾಥ್, ಸಹ ಕಾರ್ಯದರ್ಶಿ ನಟರಾಜ್ ಯೋಗಾ, ಖಜಾಂಚಿ ಅಖಿಲೇಶ್, ಅಭಿಯಂತರ ಕೆ.ಎ.ಚೂಡಿನಾಥ್, ನಿರ್ದೇಶಕರಾದ ಮಹೇಶ್, ಕೆ.ಎಸ್.ನರೇಂದ್ರ, ಮಂಜುನಾಥ್, ನಿರ್ಮಲ, ಸುಜಾತಾ ಶ್ರೀನಿವಾಸ್ ಇನ್ನೂ ಅನೇಕರು ಆಗಮಿಸಿದ್ದರು. ಪಟ್ಟಣ ಪ್ರಮುಖರಾದ ರಾಜು ಹಿರಿಯಾವಲಿ, ನಾಗರಾಜಗುತ್ತಿ, ಕಲಾಕಾರರಾದ ಚೇತನಗೌಡ, ವಿಶ್ವನಾವುಡಾ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post